Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಕ್ಳೆಲ್ಲ ಜಾಣ್ರೇ ಆಗಿರ್ತಾರೆ, ಆದರೆ ಕೆಲವರ ಸ್ಕ್ರೂ...

ಸರಿಯಾದ ಆಶೀರ್ವಾದ ಸಿಗದಿದ್ದರೆ ಕೆಲವರಿಗೆ ಆಕ್ಸಿಡೆಂಟಾಗತ್ತೆ, ಚೆನ್ನಾಗಿ ಕಲಿತು, ಒಳ್ಳೆ ಕೆಲಸದಲ್ಲಿದ್ದರೂ ಮುಂದೆ ಏನೇನೋ ಆಗಿ ಹೋಗ್ತಾರೆ. ಆದರೆ, ಆಶೀರ್ವಾದ ಇರುವಂಥ ದಡ್ಡ ಶಿಖಾಮಣಿ ಕೂಡ ಭವಿಷ್ಯದಲ್ಲಿ ಮುಂದೆ ಬರ್ತಾನೆ. ಎಷ್ಟೇ ಕಲಿತಿದ್ರೂ ಮುಂದೆ ಒಳ್ಳೆ ಕೆಲಸ ಗಿಟ್ಟಿಸಿಕೊಳ್ತಾನೆ. ಅರ್ಥ ಆಯ್ದಾ?
ಅದಕ್ಕೇ ನಾನು ಹೇಳೋದೂ, ಹಿರಿಯರ ಆಶೀರ್ವಾದ ಪಡೀಬೇಕು ಅಂತಾ. ಇನ್ನೊಂದು ಮಾತು ನೆನಪಿಟ್ಕೊಳ್ಳೀ. ಮಕ್ಕಳೆಲ್ಲ ಜಾಣರೇ ಆಗಿರ್ತಾರೆ. ಆದರೆ, ಕೆಲವರ ಸ್ಕ್ರೂ ಟೈಟ್ ಆಗಿರತ್ತೆ, ಕೆಲವರ ಸ್ಕ್ರೂ ಲೂಸ್ ಆಗಿರತ್ತೆ. ಲೂಸ್ ಆದ ಸ್ಕ್ರೂವನ್ನು ಟೈಟ್ ಮಾಡುವ ಜವಾಬ್ದಾರಿ ತಂದೆ ತಾಯಿಯರದ್ದು. ಟೈಟ್ ಮಾಡಿದ್ರೆ ಉದ್ಧಾರವಾಗ್ತಾರೆ ಇಲ್ಲದಿದ್ದರೆ ಹಾಳಾಗಿ ಹೋಗ್ತಾರೆ..."
ಹೀಗೆ ಚಾನಲ್ ಒಂದರಲ್ಲಿ ಆ ಜ್ಯೋತಿಷಿಯ ಮಾತುಗಳು ಬ್ರೇಕ್ ಇಲ್ಲದಂತೆ ಓತಪ್ರೋತವಾಗಿ ಸಾಗುತ್ತಲೇ ಇತ್ತು. ಸಮಯಾಭಾವವಿದ್ದರಿಂದ ಅಲ್ಲಿಗೇ ತುಂಡಾಯಿತು. ಹಿರಿಯರ ಆಶೀರ್ವಾದ ಪಡೆಯುವ, ಗೌರವದಿಂದ ನಡೆದುಕೊಳ್ಳುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂಬ ವಿಷಯವನ್ನು ಜನರಿಗೆ ತಿಳಿಪಡಿಸುವ ಪರಿ ಹೀಗಿತ್ತು.
ಲೂಸಾಗಿದ್ದ ಸ್ಕ್ರೂ ಟೈಟ್ ಮಾಡುವ ವ್ಯಾಖ್ಯಾನ ಮಾತ್ರ ಸಖತ್ತಾಗಿತ್ತು. ಯಾರ ಸ್ಕ್ರೂ ಲೂಸಾಗಿತ್ತು ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಈ ಮಾತುಗಳನ್ನು ಯಾವ ಜ್ಯೋತಿಷಿ, ಯಾವ ಚಾನಲ್ಲಿನಲ್ಲಿ ಹೇಳಿದರು ಎಂಬುದನ್ನು ಓದುಗರೇ ಊಹಿಸಬೇಕಾಗಿ ಕಳಕಳಿಯ ಮನವಿ. ಹಾಗೆಯೆ, ಅವರು ಹೇಳಿದ ಮಾತುಗಳನ್ನು ಜಾಸ್ತಿ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದಾಗಿ ವಿನಮ್ರ ಪ್ರಾರ್ಥನೆ.



Click it and Unblock the Notifications