Latest Updates
-
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ!
ಮಕ್ಳೆಲ್ಲ ಜಾಣ್ರೇ ಆಗಿರ್ತಾರೆ, ಆದರೆ ಕೆಲವರ ಸ್ಕ್ರೂ...

ಸರಿಯಾದ ಆಶೀರ್ವಾದ ಸಿಗದಿದ್ದರೆ ಕೆಲವರಿಗೆ ಆಕ್ಸಿಡೆಂಟಾಗತ್ತೆ, ಚೆನ್ನಾಗಿ ಕಲಿತು, ಒಳ್ಳೆ ಕೆಲಸದಲ್ಲಿದ್ದರೂ ಮುಂದೆ ಏನೇನೋ ಆಗಿ ಹೋಗ್ತಾರೆ. ಆದರೆ, ಆಶೀರ್ವಾದ ಇರುವಂಥ ದಡ್ಡ ಶಿಖಾಮಣಿ ಕೂಡ ಭವಿಷ್ಯದಲ್ಲಿ ಮುಂದೆ ಬರ್ತಾನೆ. ಎಷ್ಟೇ ಕಲಿತಿದ್ರೂ ಮುಂದೆ ಒಳ್ಳೆ ಕೆಲಸ ಗಿಟ್ಟಿಸಿಕೊಳ್ತಾನೆ. ಅರ್ಥ ಆಯ್ದಾ?
ಅದಕ್ಕೇ ನಾನು ಹೇಳೋದೂ, ಹಿರಿಯರ ಆಶೀರ್ವಾದ ಪಡೀಬೇಕು ಅಂತಾ. ಇನ್ನೊಂದು ಮಾತು ನೆನಪಿಟ್ಕೊಳ್ಳೀ. ಮಕ್ಕಳೆಲ್ಲ ಜಾಣರೇ ಆಗಿರ್ತಾರೆ. ಆದರೆ, ಕೆಲವರ ಸ್ಕ್ರೂ ಟೈಟ್ ಆಗಿರತ್ತೆ, ಕೆಲವರ ಸ್ಕ್ರೂ ಲೂಸ್ ಆಗಿರತ್ತೆ. ಲೂಸ್ ಆದ ಸ್ಕ್ರೂವನ್ನು ಟೈಟ್ ಮಾಡುವ ಜವಾಬ್ದಾರಿ ತಂದೆ ತಾಯಿಯರದ್ದು. ಟೈಟ್ ಮಾಡಿದ್ರೆ ಉದ್ಧಾರವಾಗ್ತಾರೆ ಇಲ್ಲದಿದ್ದರೆ ಹಾಳಾಗಿ ಹೋಗ್ತಾರೆ..."
ಹೀಗೆ ಚಾನಲ್ ಒಂದರಲ್ಲಿ ಆ ಜ್ಯೋತಿಷಿಯ ಮಾತುಗಳು ಬ್ರೇಕ್ ಇಲ್ಲದಂತೆ ಓತಪ್ರೋತವಾಗಿ ಸಾಗುತ್ತಲೇ ಇತ್ತು. ಸಮಯಾಭಾವವಿದ್ದರಿಂದ ಅಲ್ಲಿಗೇ ತುಂಡಾಯಿತು. ಹಿರಿಯರ ಆಶೀರ್ವಾದ ಪಡೆಯುವ, ಗೌರವದಿಂದ ನಡೆದುಕೊಳ್ಳುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂಬ ವಿಷಯವನ್ನು ಜನರಿಗೆ ತಿಳಿಪಡಿಸುವ ಪರಿ ಹೀಗಿತ್ತು.
ಲೂಸಾಗಿದ್ದ ಸ್ಕ್ರೂ ಟೈಟ್ ಮಾಡುವ ವ್ಯಾಖ್ಯಾನ ಮಾತ್ರ ಸಖತ್ತಾಗಿತ್ತು. ಯಾರ ಸ್ಕ್ರೂ ಲೂಸಾಗಿತ್ತು ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಈ ಮಾತುಗಳನ್ನು ಯಾವ ಜ್ಯೋತಿಷಿ, ಯಾವ ಚಾನಲ್ಲಿನಲ್ಲಿ ಹೇಳಿದರು ಎಂಬುದನ್ನು ಓದುಗರೇ ಊಹಿಸಬೇಕಾಗಿ ಕಳಕಳಿಯ ಮನವಿ. ಹಾಗೆಯೆ, ಅವರು ಹೇಳಿದ ಮಾತುಗಳನ್ನು ಜಾಸ್ತಿ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದಾಗಿ ವಿನಮ್ರ ಪ್ರಾರ್ಥನೆ.



Click it and Unblock the Notifications











