Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮಕ್ಳೆಲ್ಲ ಜಾಣ್ರೇ ಆಗಿರ್ತಾರೆ, ಆದರೆ ಕೆಲವರ ಸ್ಕ್ರೂ...

ಸರಿಯಾದ ಆಶೀರ್ವಾದ ಸಿಗದಿದ್ದರೆ ಕೆಲವರಿಗೆ ಆಕ್ಸಿಡೆಂಟಾಗತ್ತೆ, ಚೆನ್ನಾಗಿ ಕಲಿತು, ಒಳ್ಳೆ ಕೆಲಸದಲ್ಲಿದ್ದರೂ ಮುಂದೆ ಏನೇನೋ ಆಗಿ ಹೋಗ್ತಾರೆ. ಆದರೆ, ಆಶೀರ್ವಾದ ಇರುವಂಥ ದಡ್ಡ ಶಿಖಾಮಣಿ ಕೂಡ ಭವಿಷ್ಯದಲ್ಲಿ ಮುಂದೆ ಬರ್ತಾನೆ. ಎಷ್ಟೇ ಕಲಿತಿದ್ರೂ ಮುಂದೆ ಒಳ್ಳೆ ಕೆಲಸ ಗಿಟ್ಟಿಸಿಕೊಳ್ತಾನೆ. ಅರ್ಥ ಆಯ್ದಾ?
ಅದಕ್ಕೇ ನಾನು ಹೇಳೋದೂ, ಹಿರಿಯರ ಆಶೀರ್ವಾದ ಪಡೀಬೇಕು ಅಂತಾ. ಇನ್ನೊಂದು ಮಾತು ನೆನಪಿಟ್ಕೊಳ್ಳೀ. ಮಕ್ಕಳೆಲ್ಲ ಜಾಣರೇ ಆಗಿರ್ತಾರೆ. ಆದರೆ, ಕೆಲವರ ಸ್ಕ್ರೂ ಟೈಟ್ ಆಗಿರತ್ತೆ, ಕೆಲವರ ಸ್ಕ್ರೂ ಲೂಸ್ ಆಗಿರತ್ತೆ. ಲೂಸ್ ಆದ ಸ್ಕ್ರೂವನ್ನು ಟೈಟ್ ಮಾಡುವ ಜವಾಬ್ದಾರಿ ತಂದೆ ತಾಯಿಯರದ್ದು. ಟೈಟ್ ಮಾಡಿದ್ರೆ ಉದ್ಧಾರವಾಗ್ತಾರೆ ಇಲ್ಲದಿದ್ದರೆ ಹಾಳಾಗಿ ಹೋಗ್ತಾರೆ..."
ಹೀಗೆ ಚಾನಲ್ ಒಂದರಲ್ಲಿ ಆ ಜ್ಯೋತಿಷಿಯ ಮಾತುಗಳು ಬ್ರೇಕ್ ಇಲ್ಲದಂತೆ ಓತಪ್ರೋತವಾಗಿ ಸಾಗುತ್ತಲೇ ಇತ್ತು. ಸಮಯಾಭಾವವಿದ್ದರಿಂದ ಅಲ್ಲಿಗೇ ತುಂಡಾಯಿತು. ಹಿರಿಯರ ಆಶೀರ್ವಾದ ಪಡೆಯುವ, ಗೌರವದಿಂದ ನಡೆದುಕೊಳ್ಳುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂಬ ವಿಷಯವನ್ನು ಜನರಿಗೆ ತಿಳಿಪಡಿಸುವ ಪರಿ ಹೀಗಿತ್ತು.
ಲೂಸಾಗಿದ್ದ ಸ್ಕ್ರೂ ಟೈಟ್ ಮಾಡುವ ವ್ಯಾಖ್ಯಾನ ಮಾತ್ರ ಸಖತ್ತಾಗಿತ್ತು. ಯಾರ ಸ್ಕ್ರೂ ಲೂಸಾಗಿತ್ತು ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಈ ಮಾತುಗಳನ್ನು ಯಾವ ಜ್ಯೋತಿಷಿ, ಯಾವ ಚಾನಲ್ಲಿನಲ್ಲಿ ಹೇಳಿದರು ಎಂಬುದನ್ನು ಓದುಗರೇ ಊಹಿಸಬೇಕಾಗಿ ಕಳಕಳಿಯ ಮನವಿ. ಹಾಗೆಯೆ, ಅವರು ಹೇಳಿದ ಮಾತುಗಳನ್ನು ಜಾಸ್ತಿ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದಾಗಿ ವಿನಮ್ರ ಪ್ರಾರ್ಥನೆ.



Click it and Unblock the Notifications