Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
11 ವರ್ಷ ರಹಸ್ಯ ಸಂಸಾರ: ಕೇರಳ ಜೋಡಿಯ ಇಂಟೆರೆಸ್ಟಿಂಗ್ ಪ್ರೇಮ್ ಕಹಾನಿ
ಪ್ರಪಂಚದಲ್ಲಿ ಎಂತೆಂಥ ಲವ್ ಸ್ಟೋರಿ ಇರುತ್ತೆ ಎನ್ನುವುದಕ್ಕೆ ಈ ಜೋಡಿ ಉದಾಹರಣೆ. ಇವರ ಪ್ರೇಮ ಕತೆ ಯಾವ ಸಿನಿಮಾಗಿಂತಲೂ ಕಡಿಮೆಯಿಲ್ಲ. ಪ್ರೀತಿಗೆ ಕಣ್ಣಿಲ್ಲ ಅಂತಾರೆ ಅದೇ ರೀತಿ ಸಜಿತಾ ಮತ್ತು ರೆಹಮಾನ್ ಜಾತಿ, ಮತ ನೋಡಿ ಪ್ರೀತಿಸಿಲ್ಲ, ಬದಲಿಗೆ ಪ್ರೀತಿಯನ್ನಷ್ಟೇ ಬಯಸಿ ಪ್ರೀತಿಸಿದರು. ಒಬ್ಬರನ್ನೊಬ್ಬರು ಬಿಟ್ಟಿರಲಾರಂಥ ಪ್ರೀತಿ, ಆದರೆ ಮನೆಯವರನ್ನು ಒಪ್ಪಿಸಿ ಮದುವೆಯಾಗುವುದು ಕನಸ್ಸಿನ ಮಾತಾಗಿತ್ತು. ಏಕೆಂದರೆ ಇವರಿಬ್ಬರು ಬೇರೆ-ಬೇರೆ ಧರ್ಮಕ್ಕೆ ಸೇರಿದವರು. ಮನೆಯವರಿಗೆ ಹೇಳಿದರೆ ಖಂಡಿತ ಒಪ್ಪಲ್ಲ ಎಂಬುವುದು ಗೊತ್ತಿತ್ತು.
ಇನ್ನು ದೂರ ಹೋಗಿ ಬದುಕು ಕಟ್ಟಿಕೊಳ್ಳೋಣ ಅಂದ್ರೆ ಕೈಯಲ್ಲಿ ಹಣವೂ ಇಲ್ಲ, ಹಾಗಾಗಿ ಈ ಹುಡುಗಿಯನ್ನು ತನ್ನ ಮನೆಗೇ ತಂದು ಯಾರ ಕಣ್ಣಿಗೂ ಕಾಣದಂತೆ ಇಡಲು ಯೋಚಿಸುತ್ತಾನೆ.

ಅಂತರ್ ಧರ್ಮದಲ್ಲಿ ಮೂಡಿದ ಪ್ರೇಮ ಸಂಬಂಧ
2010ರಲ್ಲಿ ಸಜಿತಾ ತನ್ನ ಮನೆ ಬಿಟ್ಟು ರೆಹಮಾನ್ ಜೊತೆಗೆ ಬರುತ್ತಾಳೆ. ಆಕೆಯ ಮನೆಯಲ್ಲಿ ಆಕೆಗೋಸ್ಕರ ಸಾಕಷ್ಟು ಹುಡುಕಾಡುತ್ತಾರೆ, ಆದರೆ ಎಲ್ಲಿಯೂ ಕಾಣ ಸಿಗದಿದ್ದಾಗ ಯಾರ ಜೊತೆಯೋ ಓಡಿ ಹೋಗಿದ್ದಾಳೆ ಎಂದು ಭಾವಿಸುತ್ತಾರೆ.
ಇತ್ತ ರೆಹಮಾನ್ ಆಕೆಯನ್ನು ತನ್ನ ಮನೆಗೆ ರಹಸ್ಯವಾಗಿ ಕರೆದುಕೊಂಡು ತನ್ನ ಕೋಣೆಯಲ್ಲಿರಿಸುತ್ತಾನೆ. ಅಲ್ಲಿಂದ 11 ವರ್ಷ ಅವಳು ಅದೇ ಕೋಣೆಯಲ್ಲಿ ಅವನ ಜೊತೆ ಕಳೆದಿದ್ದಾಳೆ. ಆದರೆ ಮನೆಯವರಿಗೆ ವಿಷಯನೇ ಗೊತ್ತಾಗಿಲ್ಲ. ರಾತ್ರಿ ಎಲ್ಲರು ಮಲಗಿದ ಮೇಲೆ ಅಥವಾ ಮನೆಯವರೆಲ್ಲಾ ಕೆಲಸಕ್ಕೆ ಹೋದ ಮೇಲೆ ಹೊರ ಬಂದು ಸ್ನಾನ ಇತ್ಯಾದಿಗಳನ್ನು ಮುಗಿಸಿ ಕೋಣೆಗೆ ಹಿಂತಿರುಗುತ್ತಿದ್ದಳು. ಆಕೆಯ ಬಟ್ಟೆಗಳನ್ನು ಕೋಣೆಯೊಳಗೇ ಒಣಗಿಸುತ್ತಿದ್ದಳು. ಆಕೆಗೆ ಕೋಣೆಯೊಳಗೆ ಒಂದು ಟಿವಿ ಕೂಡ ಇರಿಸಿದ್ದ.

11 ವರ್ಷ ರಹಸ್ಯ ಸಂಸಾರ
ಆದರೆ 11 ವರ್ಷ ಆ ಮನೆಯಲ್ಲಿ ಯಾರಿಗೂ ಒಂದಿಷ್ಟೂ ಸುಳಿವು ನೀಡದಂತೆ ಈ ಜೋಡಿ ಬದುಕಿತ್ತು. ರೆಹಮಾನ್ ಮೊದಲೇ ಸಿಡುಕಿನ ಸ್ವಭಾವ, ಅಲ್ಲದೆ ತನ್ನ ಕೋಣೆಗೆ ಯಾರನ್ನೂ ಬರಲು ಬಿಡುತ್ತಿರಲಿಲ್ಲ, ಇದರಿಂದ ಅಪ್ಪ-ಅಮ್ಮ, ಅಣ್ಣ ಆ ಕೋಣೆ ಕಡೆಗೆ ಹೋಗುತ್ತಿರಲಿಲ್ಲ. ಊಟವನ್ನು ತನ್ನ ಕೋಣೆಗೇ ಕೊಂಡೊಯ್ಯುದ್ದು ತಿನ್ನುತ್ತಿದ್ದ.
ಸಜಿತಾ ಬಳಿಯೂ ಯಾವ ಕಾರಣಕ್ಕೂ ಹೊರಗಡೆ ಬರಬಾರದೆಂದು ತಾಕೀತು ಮಾಡಿದ್ದ, ಇದರಿಂದಾಗಿ ಆಕೆಯೂ ಕಾಣಿಸಿಕೊಂಡಿರಲಿಲ್ಲ, ತನ್ನ ಮನೆ ರೆಹಮಾನ್ ಮನೆಯ ಸಮೀಪವೇ ಇರುವುದರಿಂದ ಒಂದೆರಡು ಬಾರಿ ತಾಯಿಯನ್ನು ಕಿಟಕಿಯಿಂದ ನೋಡಿದ್ದಾಳೆ ಆದರೆ ಮಾತನಾಡಿಸಲು ಧೈರ್ಯ ಮಾಡಿರಲಿಲ್ಲ.

ಈ ಪ್ರೇಮ ಸಂಬಂಧದ ರಹಸ್ಯ ಹೊರ ಬಂದಿದ್ದೇ ಇನ್ನೂ ಸ್ವಾರಸ್ಯಕರ
ರೆಹಮಾನ್ಗೆ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದರು. ಆಗ ಆತ ಮದುವೆಗೆ ಒಪ್ಪದೆ ಸಜಿತಾಳೊಂದಿಗೆ ಮನೆ ಬಿಟ್ಟು ಹೋಗಿದ್ದ. ಆಗ ಆತನನ್ನು ಹುಡುಕಿ ಕೊಡುವಂತೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಆಗ ತನ ಪಕ್ಕದ ಊರಿನಲ್ಲಿ ಯುವತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿರುವುದು ತಿಳಿಯಿತು..

ಕೋರ್ಟ್ ಎದುರಿಗೆ ಹಾಜರು ಪಡಿಸಿದಾಗ ಬಯಲಾಯಿತು ಸತ್ಯಾಂಶ
ಕೋರ್ಟ್ ಎದುರು ಈ ಜೋಡಿಯನ್ನು ಹಾಜರು ಪಡಿಸಿದಾಗ 11 ವರ್ಷದಿಂದ ನಾವಿಬ್ಬರು ರಹಸ್ಯವಾಗಿ ಆತನ ಮನೆಯಲ್ಲಿ ಸಂಸಾರ ನಡೆಸಿದ ವಿಷಯ ತಿಳಿಸಿ ತಮ್ಮಿಬ್ಬರನ್ನು ಬೇರೆ ಮಾಡದಂತೆ ಮನವಿ ಮಾಡಿದಳು.
ಇವರಿಬ್ಬರ ಪ್ರಿತಿಯ ಆಳ ನೋಡಿ ಈ ಜೋಡಿಯನ್ನು ಬೇರೆಯಾಗುವಂತೆ ಹೇಳಲು ಪೋಷಕರಿಗೆ ತಾನೆ ಹೇಗೆ ಬಂದೀತು ಅಲ್ವಾ?



Click it and Unblock the Notifications