Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಪ್ರೀತಿಸಿದ ಹುಡುಗಿಯ ಶವಕ್ಕೆ ತಾಳಿ ಕಟ್ಟಿದ ಅಸ್ಸಾಂ ಯುವಕ: ಮನಮಿಡಿಯುವ ಲವ್ ಸ್ಟೋರಿ
ಕೆಲವೊಂದು ಘಟನೆ ನೋಡುವಾಗ ಛೇ, ವಿಧಿಯೇ ನೀನೆಷ್ಟು ಕ್ರೂರಿ ಎಂದನಿಸುವುದು. ಅಂಥದ್ದೇ ಮನಕಲುಕುವ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಆ ಪ್ರೇಮಿ ತನ್ನ ಗೆಳತಿಯ ಕೊನೆಯಾಸೆ ನೆರವೇರಿಸಲು ಆಕೆಯ ಪಾರ್ಥೀವ ಶರೀರಕ್ಕೆ ತಾಳಿ ಕಟ್ಟಿ, ಆಕೆಗೆ ಮುತ್ತೈದೆ ಬೀಳ್ಗೊಡೆಗೆ ನೀಡಿರುವ ಘಟನೆ ಮನಕಲುಕುವಂತಿದೆ. '
ಪ್ರೀತಿಯೆಂದರೆ ಬರೀ ಆಕರ್ಷಣೆಯಲ್ಲ, ನಿಜವಾದ ಪ್ರೀತಿಗೆ ಸಾವಿಲ್ಲ, ಸಾವಿನಿಂದಲೂ ಪ್ರೀತಿಯನ್ನು ದೂರ ಮಾಡಲು ಸಾಧ್ಯವಿಲ್ಲ ಎಂಬುವುದಕ್ಕೆ ಉದಾಹರಣೆ ಈ ಜೋಡಿ...

ಇದನ್ನು ಅಸ್ಸಾಂನಲ್ಲಿ ನಡೆದಿರುವ ಸುಂದರ ಪ್ರೇಮ ಕಾವ್ಯ ಅಂತ ಹೇಳುವುದೋ, ವಿಧಿಯ ಕ್ರೂರ ಆಟ ಅನ್ನುವುದೋ ಗೊತ್ತಾಗಲ್ಲ.. ಹೇ ದೇವ.... ಈ ಜೋಡಿಯನ್ನು ಬೇರೆ ಮಾಡಿ ನಿನಗೇನು ಸಿಕ್ತು? ಎಂದು ಕೇಳುವಿರಿ.
ಮೊಯಿರ್ಗಾಂವ್ ಆತನ ಹೆಸರು ಬಿಟುಪಾನ್ ತಮುಲಿ, ಆಕೆ ಕೊಸುವಾದ ಪ್ರಾರ್ಥನಾ ಬೋರಾ. ಇಬ್ಬರು ತುಂಬಾನೇ ಪ್ರೀತಿಸುತ್ತಿದ್ದರು, ಇವರ ಪ್ರೀತಿ ವಿಷಯ ಮನೆಯವರಿಗೂ ತಿಳಿದಿತ್ತು. ಇಬ್ಬರು ಮದುವೆಯಾಗಲೂ ಕೂಡ ತೀರ್ಮಾನ ಕೂಡ ಮಾಡಿದ್ದರು. ಆದರೆ ವಿಧಿ ಅವರ ಬದುಕಿನಲ್ಲಿ ಬೇರೆಯದ್ದೇ ತೀರ್ಮಾನಿಸಿತ್ತು. ಇದ್ದಕ್ಕಿದ್ದಂತೆ ಪ್ರಾರ್ಥನಾಗೆ ಅನಾರೋಗ್ಯ ಉಂಟಾಯ್ತು. ಗುವಾಹಟಿಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.
ಆಕೆಯ ಅಂತ್ಯಕ್ರಿಯೆಗೆ ಬಂದ ಪ್ರೇಮಿ ಬಿಟುಪಾನ್ ಆಕೆಯನ್ನು ಮದುವೆಯಾಗುವುದಾಗಿ ಹೇಳುತ್ತಾನೆ, ಅದನ್ನು ಕೇಳಿದವರಿಗೆ ಆಶ್ಚರ್ಯವಾಗುತ್ತೆ. ಆತ ಆಕೆ ನನ್ನನ್ನು ಮದುವೆಯಾಗಬೇಕೆಂದು ಬಯಸಿದ್ದಳು, ಅವಳ ಕೊನೆಯಾಸೆ ಈಡೇರದೆ ನಾನು ಕಳುಹಿಸಲ್ಲ ಅಂತ ಹಠ ಹಿಡಿಯುತ್ತಾನೆ. ಈ ಪ್ರೇಮಿಯ ನೋವು ನೋಡಿ ಮನೆಯವರೂ ಒಪ್ಪಿಗೆ ಸೂಚಿಸುತ್ತಾರೆ, ಆತ ಆಕೆಯ ದೇಹಕ್ಕೆ ತಾಳಿ ಕಟ್ಟಿದ್ದಾನೆ. ಅವಳ ಹಣೆಗೆ ಸಿಂಧೂರ ಇಟ್ಟು ಮುತ್ತೈದೆಯಂತೆ ಕಳುಹಿಸಿಕೊಟ್ಟಿದ್ದಾನೆ.
ಅಷ್ಟು ಮಾತ್ರವಲ್ಲ ಎಂದೆಂದಿಗೂ ಆಕೆಯೇ ನನ್ನ ಹೆಂಡತಿ, ನಾನು ಬೇರೆ ಮದುವೆಯಾಗುವುದಿಲ್ಲ ಎಂದಿದ್ದಾನೆ..... ಅವನಂಥ ಪ್ರೇಮಿ ಪಡೆದ ಅವಳೇ ಅದೃಷ್ಟವಂತಳು....



Click it and Unblock the Notifications
