Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಪ್ರೀತಿಸಿದ ಹುಡುಗಿಯ ಶವಕ್ಕೆ ತಾಳಿ ಕಟ್ಟಿದ ಅಸ್ಸಾಂ ಯುವಕ: ಮನಮಿಡಿಯುವ ಲವ್ ಸ್ಟೋರಿ
ಕೆಲವೊಂದು ಘಟನೆ ನೋಡುವಾಗ ಛೇ, ವಿಧಿಯೇ ನೀನೆಷ್ಟು ಕ್ರೂರಿ ಎಂದನಿಸುವುದು. ಅಂಥದ್ದೇ ಮನಕಲುಕುವ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಆ ಪ್ರೇಮಿ ತನ್ನ ಗೆಳತಿಯ ಕೊನೆಯಾಸೆ ನೆರವೇರಿಸಲು ಆಕೆಯ ಪಾರ್ಥೀವ ಶರೀರಕ್ಕೆ ತಾಳಿ ಕಟ್ಟಿ, ಆಕೆಗೆ ಮುತ್ತೈದೆ ಬೀಳ್ಗೊಡೆಗೆ ನೀಡಿರುವ ಘಟನೆ ಮನಕಲುಕುವಂತಿದೆ. '
ಪ್ರೀತಿಯೆಂದರೆ ಬರೀ ಆಕರ್ಷಣೆಯಲ್ಲ, ನಿಜವಾದ ಪ್ರೀತಿಗೆ ಸಾವಿಲ್ಲ, ಸಾವಿನಿಂದಲೂ ಪ್ರೀತಿಯನ್ನು ದೂರ ಮಾಡಲು ಸಾಧ್ಯವಿಲ್ಲ ಎಂಬುವುದಕ್ಕೆ ಉದಾಹರಣೆ ಈ ಜೋಡಿ...

ಇದನ್ನು ಅಸ್ಸಾಂನಲ್ಲಿ ನಡೆದಿರುವ ಸುಂದರ ಪ್ರೇಮ ಕಾವ್ಯ ಅಂತ ಹೇಳುವುದೋ, ವಿಧಿಯ ಕ್ರೂರ ಆಟ ಅನ್ನುವುದೋ ಗೊತ್ತಾಗಲ್ಲ.. ಹೇ ದೇವ.... ಈ ಜೋಡಿಯನ್ನು ಬೇರೆ ಮಾಡಿ ನಿನಗೇನು ಸಿಕ್ತು? ಎಂದು ಕೇಳುವಿರಿ.
ಮೊಯಿರ್ಗಾಂವ್ ಆತನ ಹೆಸರು ಬಿಟುಪಾನ್ ತಮುಲಿ, ಆಕೆ ಕೊಸುವಾದ ಪ್ರಾರ್ಥನಾ ಬೋರಾ. ಇಬ್ಬರು ತುಂಬಾನೇ ಪ್ರೀತಿಸುತ್ತಿದ್ದರು, ಇವರ ಪ್ರೀತಿ ವಿಷಯ ಮನೆಯವರಿಗೂ ತಿಳಿದಿತ್ತು. ಇಬ್ಬರು ಮದುವೆಯಾಗಲೂ ಕೂಡ ತೀರ್ಮಾನ ಕೂಡ ಮಾಡಿದ್ದರು. ಆದರೆ ವಿಧಿ ಅವರ ಬದುಕಿನಲ್ಲಿ ಬೇರೆಯದ್ದೇ ತೀರ್ಮಾನಿಸಿತ್ತು. ಇದ್ದಕ್ಕಿದ್ದಂತೆ ಪ್ರಾರ್ಥನಾಗೆ ಅನಾರೋಗ್ಯ ಉಂಟಾಯ್ತು. ಗುವಾಹಟಿಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.
ಆಕೆಯ ಅಂತ್ಯಕ್ರಿಯೆಗೆ ಬಂದ ಪ್ರೇಮಿ ಬಿಟುಪಾನ್ ಆಕೆಯನ್ನು ಮದುವೆಯಾಗುವುದಾಗಿ ಹೇಳುತ್ತಾನೆ, ಅದನ್ನು ಕೇಳಿದವರಿಗೆ ಆಶ್ಚರ್ಯವಾಗುತ್ತೆ. ಆತ ಆಕೆ ನನ್ನನ್ನು ಮದುವೆಯಾಗಬೇಕೆಂದು ಬಯಸಿದ್ದಳು, ಅವಳ ಕೊನೆಯಾಸೆ ಈಡೇರದೆ ನಾನು ಕಳುಹಿಸಲ್ಲ ಅಂತ ಹಠ ಹಿಡಿಯುತ್ತಾನೆ. ಈ ಪ್ರೇಮಿಯ ನೋವು ನೋಡಿ ಮನೆಯವರೂ ಒಪ್ಪಿಗೆ ಸೂಚಿಸುತ್ತಾರೆ, ಆತ ಆಕೆಯ ದೇಹಕ್ಕೆ ತಾಳಿ ಕಟ್ಟಿದ್ದಾನೆ. ಅವಳ ಹಣೆಗೆ ಸಿಂಧೂರ ಇಟ್ಟು ಮುತ್ತೈದೆಯಂತೆ ಕಳುಹಿಸಿಕೊಟ್ಟಿದ್ದಾನೆ.
ಅಷ್ಟು ಮಾತ್ರವಲ್ಲ ಎಂದೆಂದಿಗೂ ಆಕೆಯೇ ನನ್ನ ಹೆಂಡತಿ, ನಾನು ಬೇರೆ ಮದುವೆಯಾಗುವುದಿಲ್ಲ ಎಂದಿದ್ದಾನೆ..... ಅವನಂಥ ಪ್ರೇಮಿ ಪಡೆದ ಅವಳೇ ಅದೃಷ್ಟವಂತಳು....



Click it and Unblock the Notifications
