Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಪ್ರೀತಿಸಿದ ಹುಡುಗಿಯ ಶವಕ್ಕೆ ತಾಳಿ ಕಟ್ಟಿದ ಅಸ್ಸಾಂ ಯುವಕ: ಮನಮಿಡಿಯುವ ಲವ್ ಸ್ಟೋರಿ
ಕೆಲವೊಂದು ಘಟನೆ ನೋಡುವಾಗ ಛೇ, ವಿಧಿಯೇ ನೀನೆಷ್ಟು ಕ್ರೂರಿ ಎಂದನಿಸುವುದು. ಅಂಥದ್ದೇ ಮನಕಲುಕುವ ವೀಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಆ ಪ್ರೇಮಿ ತನ್ನ ಗೆಳತಿಯ ಕೊನೆಯಾಸೆ ನೆರವೇರಿಸಲು ಆಕೆಯ ಪಾರ್ಥೀವ ಶರೀರಕ್ಕೆ ತಾಳಿ ಕಟ್ಟಿ, ಆಕೆಗೆ ಮುತ್ತೈದೆ ಬೀಳ್ಗೊಡೆಗೆ ನೀಡಿರುವ ಘಟನೆ ಮನಕಲುಕುವಂತಿದೆ. '
ಪ್ರೀತಿಯೆಂದರೆ ಬರೀ ಆಕರ್ಷಣೆಯಲ್ಲ, ನಿಜವಾದ ಪ್ರೀತಿಗೆ ಸಾವಿಲ್ಲ, ಸಾವಿನಿಂದಲೂ ಪ್ರೀತಿಯನ್ನು ದೂರ ಮಾಡಲು ಸಾಧ್ಯವಿಲ್ಲ ಎಂಬುವುದಕ್ಕೆ ಉದಾಹರಣೆ ಈ ಜೋಡಿ...

ಇದನ್ನು ಅಸ್ಸಾಂನಲ್ಲಿ ನಡೆದಿರುವ ಸುಂದರ ಪ್ರೇಮ ಕಾವ್ಯ ಅಂತ ಹೇಳುವುದೋ, ವಿಧಿಯ ಕ್ರೂರ ಆಟ ಅನ್ನುವುದೋ ಗೊತ್ತಾಗಲ್ಲ.. ಹೇ ದೇವ.... ಈ ಜೋಡಿಯನ್ನು ಬೇರೆ ಮಾಡಿ ನಿನಗೇನು ಸಿಕ್ತು? ಎಂದು ಕೇಳುವಿರಿ.
ಮೊಯಿರ್ಗಾಂವ್ ಆತನ ಹೆಸರು ಬಿಟುಪಾನ್ ತಮುಲಿ, ಆಕೆ ಕೊಸುವಾದ ಪ್ರಾರ್ಥನಾ ಬೋರಾ. ಇಬ್ಬರು ತುಂಬಾನೇ ಪ್ರೀತಿಸುತ್ತಿದ್ದರು, ಇವರ ಪ್ರೀತಿ ವಿಷಯ ಮನೆಯವರಿಗೂ ತಿಳಿದಿತ್ತು. ಇಬ್ಬರು ಮದುವೆಯಾಗಲೂ ಕೂಡ ತೀರ್ಮಾನ ಕೂಡ ಮಾಡಿದ್ದರು. ಆದರೆ ವಿಧಿ ಅವರ ಬದುಕಿನಲ್ಲಿ ಬೇರೆಯದ್ದೇ ತೀರ್ಮಾನಿಸಿತ್ತು. ಇದ್ದಕ್ಕಿದ್ದಂತೆ ಪ್ರಾರ್ಥನಾಗೆ ಅನಾರೋಗ್ಯ ಉಂಟಾಯ್ತು. ಗುವಾಹಟಿಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.
ಆಕೆಯ ಅಂತ್ಯಕ್ರಿಯೆಗೆ ಬಂದ ಪ್ರೇಮಿ ಬಿಟುಪಾನ್ ಆಕೆಯನ್ನು ಮದುವೆಯಾಗುವುದಾಗಿ ಹೇಳುತ್ತಾನೆ, ಅದನ್ನು ಕೇಳಿದವರಿಗೆ ಆಶ್ಚರ್ಯವಾಗುತ್ತೆ. ಆತ ಆಕೆ ನನ್ನನ್ನು ಮದುವೆಯಾಗಬೇಕೆಂದು ಬಯಸಿದ್ದಳು, ಅವಳ ಕೊನೆಯಾಸೆ ಈಡೇರದೆ ನಾನು ಕಳುಹಿಸಲ್ಲ ಅಂತ ಹಠ ಹಿಡಿಯುತ್ತಾನೆ. ಈ ಪ್ರೇಮಿಯ ನೋವು ನೋಡಿ ಮನೆಯವರೂ ಒಪ್ಪಿಗೆ ಸೂಚಿಸುತ್ತಾರೆ, ಆತ ಆಕೆಯ ದೇಹಕ್ಕೆ ತಾಳಿ ಕಟ್ಟಿದ್ದಾನೆ. ಅವಳ ಹಣೆಗೆ ಸಿಂಧೂರ ಇಟ್ಟು ಮುತ್ತೈದೆಯಂತೆ ಕಳುಹಿಸಿಕೊಟ್ಟಿದ್ದಾನೆ.
ಅಷ್ಟು ಮಾತ್ರವಲ್ಲ ಎಂದೆಂದಿಗೂ ಆಕೆಯೇ ನನ್ನ ಹೆಂಡತಿ, ನಾನು ಬೇರೆ ಮದುವೆಯಾಗುವುದಿಲ್ಲ ಎಂದಿದ್ದಾನೆ..... ಅವನಂಥ ಪ್ರೇಮಿ ಪಡೆದ ಅವಳೇ ಅದೃಷ್ಟವಂತಳು....



Click it and Unblock the Notifications
