ದುಡುಕಿ ಸತ್ತರೆ ವಂಚಿಸಿದವರಿಗೆ ಪ್ರಯೋಜನ!

comeout from breakup
ಯಾರೂ ತಮ್ಮ ಬದುಕಿನಲ್ಲಿ ಕೆಟ್ಟದು ನಡೆಯಲಿ ಎಂದು ಬಯಸುವುದಿಲ್ಲ. ಆದರೆ ಕೆಲವೊಮ್ಮೆ ಉಂಟಾಗುತ್ತದೆ. ಆ ಸಮಯದಲ್ಲಿ ಅವರು ಆ ಬೇಸರದಿಂದ ಹೊರಬರಲು ಮಾಡಬೇಕಾದದು ಇಷ್ಟೆ.

1. ಅಳು, ಅಳು, ಅಳು: ಅತ್ತಾಗ ಮನಸ್ಸು ಹಗುರವಾಗುತ್ತದೆ. ಆದ್ದರಿಂದ ಸಮಧಾನವಾಗುವವರೆಗೆ ಅಳಬೇಕು. ಆಪ್ತರ ಬಳಿ ಸಂಕಟ ತೋಡಿಕೊಂಡರೆ ನೋವು ಕಡಿಮೆಯಾಗುತ್ತದೆ. ಇಲ್ಲವಾದರೆ ಒಂಟಿಯಾಗಿ ಕೂತು ಸಾಕಷ್ಟು ಅತ್ತುಬಿಡಬೇಕು.

2. ನೆನಪುಗಳನ್ನು ಅಳಿಸಿ: ಪ್ರೇಮಿ ಕೊಟ್ಟಂತಹ ವಸ್ತುಗಳನ್ನು ಸುಟ್ಟುಬಿಡಿ, ಮೊಬೈಲ್ ನಲ್ಲಿರುವ ಅವರ ನಂಬರ್ , ಫೋಟೊ ಹೀಗೆ ಅವರ ನೆನೆಪು ತರುವ ಎಲ್ಲಾ ವಸ್ತುಗಳನ್ನು ಅಳಿಸಿಬಿಡಬೇಕು. ಮದುವೆಯಾದ ಮೇಲೆ ಗಂಡ -ಹೆಂಡತಿ ನಡುವೆ ಸಾಮರಸ್ಯವಿಲ್ಲದಿದ್ದರೆ ಅಥವಾ ಇದರಲ್ಲಿ ಒಬ್ಬರು ವಂಚಿಸಿದರೆ ಸಾಯುವ ಬದಲು ವಿಚ್ಛೇದನ ತೆಗೆದುಕೊಳ್ಳುವುದು ಸೂಕ್ತ. ದುಡುಕಿ ಸತ್ತರೆ ಅದರಿಂದ ವಂಚಿಸಿದವರಿಗೆ ಪ್ರಯೋಜನ ಹೊರತು ನಷ್ಟವಲ್ಲ.

3. ಒಂಟಿಯಾಗಿ ಇರಬಾರದು: ಮನಸ್ಸು ಮುರಿದಾಗ ಒಂಟಿಯಾಗಿ ಇರದೆ ಸ್ವಲ್ಪ ಕಾಲ ಆಪ್ತರ ಜೊತೆ ಇರಬಹುದು. ಅದು ಇಷ್ಟವಿಲ್ಲದಿದ್ದರೆ ತಮ್ಮನ್ನು ಯಾವುದಾದರೂ ಕೆಲಸದಲ್ಲಿ ಬ್ಯೂಸಿಯಾಗಿ ತೊಡಗಿಸಿಕೊಳ್ಳಬೇಕು. ಒಂದು ವೇಳೆ ಪ್ರೀತಿಸಿ ವಂಚಿಸಿದವರು ಜೊತೆಗೆ ಕೆಲಸ ಮಾಡುವವರಾದರೆ ಆ ಸ್ಥಳದಿಂದ ವರ್ಗಾವಣೆ ಮಾಡಿಸಿಕೊಳ್ಳಿ ಅಥವಾ ಅಂತಹ ವ್ಯಕ್ತಿಗಳನ್ನು ಸಂಪೂರ್ಣ ಮರೆತು, ಅವರತ್ತ ನಿರ್ಲಕ್ಷ್ಯದಿಂದ ಇದ್ದುಬಿಡಬೇಕು.

ಒಬ್ಬ ವ್ಯಕ್ತಿ ವಂಚಿಸಿದ ಮಾತ್ರಕ್ಕೆ ಜೀವನ ಕೊನೆಗೊಳ್ಳುವುದಿಲ್ಲ. ವಸಂತ ಮತ್ತೆ ಬದುಕಿನಲ್ಲಿ ಚಿಗುರೇ ಚಿಗುರುತ್ತದೆ. ಜೀವನದಲ್ಲಿ ಇತರರಿಗಾಗಿ ಬದುಕಬಹುದು, ಆದರೆ ಇತರರಿಗಾಗಿ ಸಾಯಬಾರದು.

English summary

If Some Cheated Don't End Your Life | Love And Relationship | ಪ್ರೀತಿಸಿದ ವ್ಯಕ್ತಿ ವಂಚಿಸಿದರೆ ದುಡುಕಬೇಡಿ | ಪ್ರೀತಿ ಮತ್ತು ಸಂಬಂಧ

Love, breakup, extramarital affair, cheating these are the 
 main reason behind suicide attempt. But if the person commit the suicide for these ultimate he/ she will be looser. When Relationship failed don't commit suicide. Live, Live your own life, you don't have rights to end.
Story first published: Friday, March 16, 2012, 16:52 [IST]
X
Desktop Bottom Promotion