Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭೀಮಸೇನ ನಳಮಹಾರಾಜರಿಗೆ ಅಡುಗೆಮನೆ ಟಿಪ್ಸ್
Tips
oi-Staff
By * ಭಾರತಿ ಎಚ್.ಎಸ್., ಬೆಂಗಳೂರು.

2) ಫ್ರಿಡ್ಜ್ ನ ಒಳಬಾಗ ಮತ್ತು ಹೊರಬಾಗ ಜಿಡ್ಡು ಮತ್ತು ಕೊಳೆ ಹಾಗೇ ಇದ್ದರೆ ಒಂದು ಬಟ್ಟಲಿನಲ್ಲಿ ಅಡುಗೆ ಸೋಡಾ, ಸ್ವಲ್ಪ ಬೆಚ್ಚನೆಯ ನೀರು ಹಾಕಿ ಒಂದು ಬಟ್ಟೆಯನ್ನು ಅದರಲ್ಲಿ ನೆನೆಸಿ ಒರೆಸಿದರೆ ಸ್ವಚ್ಛವಾಗುತ್ತದೆ.
3) ರೊಟ್ಟಿ ಮಾಡಿದ ಹೆಂಚಿಗೆ ನಿಂಬೆರಸ ಹಚ್ಚಿ ತೊಳೆದರೆ ಸ್ವಚ್ಛವಾಗುತ್ತದೆ.
4) ನೀರು ಕುಡಿಯುವಾಗ ಎತ್ತರಿಸಿ ಕುಡಿಯಬೇಡಿ, ಲೋಟಕ್ಕೆ ಬಾಯಿಯನ್ನು ಕಚ್ಚಿ ಕುಡಿಯಿರಿ. ಇದರಿಂದ ಅನೇಕ ಕೀಟಗಳು ನೇರವಾಗಿ ಹೊಟ್ಟೆಗೆ ಹೋಗುವುದು ತಪ್ಪುತ್ತದೆ.
5) ಗೋದಿ ಹಿಟ್ಟಿನ ಡಬ್ಬದಲ್ಲಿ ಸ್ವಲ್ಪ ಉಪ್ಪನ್ನು ಬೆರಸಿ ಇಟ್ಟರೆ ಹುಳ ಬರುವುದಿಲ್ಲ.
6) ಅಕ್ಕಿ ತೊಳೆದ ಮೊದಲ ನೀರನ್ನು ಚೆಲ್ಲಿ ಆಮೇಲೆ ತೊಳೆದ ನೀರನ್ನು ಬೇಳೆ ಸಾರಿಗೆ ಹಾಕಿದರೆ ಸಾರು ರುಚಿಯಾಗುವುದು ಮತ್ತು ವಿಟಮಿನ್ ನಷ್ಟವಾಗುವುದಿಲ್ಲ.
7) ಕಾಫಿ ಫಿಲ್ಟರ್ಗೆ ನೀರು ಹಾಕುವಾಗ ನೀರು ಬಿಸಿಯಾಗಿರಬೇಕು ಆದರೆ ಕುದಿಯುತ್ತಿರಬಾರದು. ಮರಳಿದ ನೀರು ಹಾಕಿದರೆ ರುಚಿ ಕೆಟ್ಟು ಹೋಗುವುದು.
8) ಟೀ ಮಾಡುವಾಗ ನೀರು ಹಾಕಿ ಟೀ ಮಾಡುವ ಬದಲು, ಹಾಲನ್ನೇ ಇಟ್ಟು ಅದಕ್ಕೆ ಟೀ ಪುಡಿ ಹಾಕಿ ಮಾಡಿದರೆ ತುಂಬಾ ಚೆನ್ನಾಗಿರುವುದು. ಅದರ ಜೊತೆ ಯೇಲ್ಲಕ್ಕಿ ಪುಡಿ ಹಾಕಿದರೆ ಸೊಗಸಾದ ಟೀ ರೆಡಿ.
9) ಹಸಿರು ತರಕಾರಿ ಬೇಯಿಸುವಾಗ ನಿಂಬೆರಸ ಬೆರೆಸಿದರೆ ಹಸಿರು ಬಣ್ಣ ಹಾಗೆ ಇರುವುದು.
10) ಹಾಲನ್ನು ಪಾತ್ರೆಗೆ ಹಾಕುವ ಮುಂಚೆ ಪಾತ್ರೆಯನ್ನು ತಣ್ಣೀರಿನಿಂದ ತೊಳೆದು ಆಮೇಲೆ ಪಾತ್ರೆಗೆ ಹಾಲು ಹಾಕಿದಲ್ಲಿ ತಳ ಕಚ್ಚುವುದಿಲ್ಲ.
11) ಬೆಲ್ಲ, ಮೈದಾಹಿಟ್ಟು, ಕಡಲೆ ಹಿಟ್ಟುಗಳನ್ನೂ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಫ್ರಿಡ್ಜ್ನಲ್ಲಿ ಇಟ್ಟರೆ ಹುಳ ಬರುವುದಿಲ್ಲ.
12) ಫ್ರಿಡ್ಜ್ ನಲ್ಲಿ ಇಡುವ ಎಲ್ಲ ಪದಾರ್ಥಗಳನ್ನೂ ಬೇರೆ ಬೇರೆಯಾಗಿ ಬಿಗಿಯಾದ ಡಬ್ಬಗಳಲ್ಲಾಗಲಿ ಅಥವಾ ಪ್ಲಾಸ್ಟಿಕ್ ಕವರ್ ಗಲ್ಲಾಗಲಿ ಇಡಬೇಕು. ಇಲ್ಲದಿದ್ದರೆ ಒಂದರ ವಾಸನೆ ಒಂದಕ್ಕೆ ಹೀರಿಕೊಳ್ಳುವುದು.
13) ಬೆಣ್ಣೆ ಕಾಯಿಸಿ, ತುಪ್ಪ ಆಗಿದೆ ಎಂದು ತಿಳಿದಾಗ ಅದಕ್ಕೆ 1/2 ಚಮಚ ಉಪ್ಪನ್ನು, ಒಂದೆರಡು ಏಲ್ಲಕ್ಕಿಪುಡಿಯನ್ನು,1/2 ಚಮಚ ಹುರಿದ ಮೆಂತ್ಯ ಪುಡಿಯನ್ನು, ಚಿಟಿಕೆ ಅರಿಶಿಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತುಪ್ಪ ತಿಳಿಯಾದ ಮೇಲೆ ಡಬ್ಬಿಗೆ ಸೋಸಿ ಇಡಿ. ಘಮ ಘಮಿಸುವ, ಮರಳು ಮರಳಾದ ತುಪ್ಪವಾಗುತ್ತದೆ.
14) ಬ್ಯಾಡಗಿ ಮೆಣಸಿನಕಾಯಿಯನ್ನು ಓವೆನ್ ನಲ್ಲಿ ಇಟ್ಟು ಒಂದು ನಿಮಿಷಕ್ಕೆ ಸೆಟ್ ಮಾಡಿ ಇಟ್ಟರೆ ಗರಿ ಗರಿ ಮನಸಿನಕಾಯಿ ಅಡುಗೆಗೆ ರೆಡಿ. ಹುರಿಯುವಾಗ ಬರುವ ಘಾಟು ಇರುವುದಿಲ್ಲ.
15) ಹಪ್ಪಳವನ್ನು ಓವೆನ್ ನಲ್ಲಿ ಇಟ್ಟು ಒಂದು ನಿಮಿಷಕ್ಕೆ ಸೆಟ್ ಮಾಡಿ ಇಟ್ಟರೆ ಎಣ್ಣೆ ಇಲ್ಲದೆ ಗರಿ ಗರಿ ಹಪ್ಪಳ ಸಿದ್ದ.
Comments
Read more about: useful kitchen tips bharathi hs bengaluru helpful kitchen hints cooking tips ಅಡುಗೆಮನೆ ಸಲಹೆಗಳು ಕಿಚನ್ ಟಿಪ್ಸ್ ಭಾರತಿ ಎಚ್ಎಸ್ ಬೆಂಗಳೂರು ಅಡುಗೆಮನೆ ಉಪಾಯಗಳು
Story first published: Thursday, August 6, 2009, 13:09 [IST]
Other articles published on Aug 6, 2009
More From Boldsky
Prev
Next



Click it and Unblock the Notifications











