Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಅಕ್ಕಿಗೆ ಹುಳ ಆಗದಂತೆ ಏನು ಮಾಡಬೇಕು?

* ಭಾರತಿ ಎಚ್ಎಸ್, ಬೆಂಗಳೂರು
1) ಅಕ್ಕಿ ಡಬ್ಬದ ಒಳಗೆ ಹರಳೆಣ್ಣೆಯನ್ನು ಸವರಿ ಅಕ್ಕಿ ಹಾಕಿಟ್ಟರೆ ಹುಳ ಬರುವುದಿಲ್ಲ.
2) ಅಕ್ಕಿ ಡಬ್ಬದಲ್ಲಿ ಈರುಳ್ಳಿ ಅಥವಾ ಬೇವಿನ ಎಲೆ ಅಥವಾ ಅರಿಶಿಣ ಕೊಂಬುಗಳನ್ನು ಇಟ್ಟರೂ ಹುಳ ಆಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹಸಿ ಕೈಯಿಂದ ಅಕ್ಕಿ ಮುಟ್ಟಬಾರದು.
3) ಸೊಪ್ಪನ್ನು ಬೇಯಿಸುವಾಗ ಮುಚ್ಚಳ ಮುಚ್ಚಬೇಡಿ. ಮುಚ್ಚಿದಾಗ ಅದರ ಬಣ್ಣ ಬದಲಾಗುತ್ತದೆ.
4) ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಂಡು ತರಕಾರಿಗಳನ್ನು ಹೆಚ್ಚಿದಾಗ ಕೈ ಕಪ್ಪಾಗುವುದಿಲ್ಲ.
5) ತರಕಾರಿ ಹೆಚ್ಚಿ ಕೈ ಕಪ್ಪಾಗಿದ್ದರೆ ನಿಂಬೆ ಹಣ್ಣಿನ ಸಿಪ್ಪೆಯಿಂದ ಕೈಯನ್ನು ಉಜ್ಜಿ ಕೈ ಸ್ವಚ್ಚವಾಗಿ ಮೃದುವಾಗುವುದು.
6) ಬೆಂಡೆಕಾಯಿ ಪಲ್ಯ ಲೋಳೆಯಾಗದಿರಲು ಸ್ವಲ್ಪಎಣ್ಣೆ ಹಾಕಿ ಹುರಿದ ಬಳಿಕ ಹುಣಸೆ ರಸವನ್ನು ಹಾಕಿದಲ್ಲಿ ಪಲ್ಯ ಅಥವಾ ಸಾರು ಲೋಳೆಯಾಗುವುದಿಲ್ಲ.
7) ಪಲ್ಯಕ್ಕೆ ಆಲುಗಡ್ಡೆ ಬೇಯಿಸುವಾಗ ಸ್ವಲ್ಪ ಉಪ್ಪು ಹಾಕಿದರೆ ಸಿಪ್ಪೆ ಸಲೀಸಾಗಿ ಸುಲಿದು ಬರುತ್ತದೆ.
8) ತರಕಾರಿ ಬಾಡಿದ ಹಾಗಿದ್ದರೆ ನೀರಿಗೆ ನಿಂಬೆರಸ ಹಾಕಿ ಅದರಲ್ಲಿ ತರಕಾರಿಗಳನ್ನು 1/2 ಗಂಟೆ ಮುಳುಗಿಸಿಡಿ. ಮತ್ತೆ ಹೊಸದರಂತೆ ಹಾಗುತ್ತದೆ.
9) ಸಲಾಡ್ ಗಳನ್ನು ಮಾಡುವಾಗ ಈರುಳ್ಳಿ, ಸೌತೆಕಾಯಿ, ಟೊಮೆಟೊ ಅಥವಾ ಇತರೇ ತರಕಾರಿಗಳನ್ನು ಹೆಚ್ಚಿ ಫ್ರಿಡ್ಜ್ ನಲ್ಲಿ 1/2 ಗಂಟೆ ಇಟ್ಟು ಉಪಯೋಗಿಸಿದರೆ ರುಚಿ ಹೆಚ್ಚುತದೆ.
10) ಟೀ ಮಾಡುವಾಗ ಸ್ವಲ್ಪ ಏಲಕ್ಕಿ ಪುಡಿ ಹಾಕಿದರೆ ಘಮ್ಮನೆಯ ಚಹಾ ಮತ್ತಷ್ಟು ರುಚಿ ಪಡೆಯುತ್ತದೆ. ಏಲ್ಲಕ್ಕಿ ಉಪಯೋಗಿಸಿದ ಮೇಲೆ ಸಿಪ್ಪೆಯನ್ನು ಬಿಸಾಡುವ ಬದಲು ಟೀ ಡಬ್ಬದಲ್ಲಿ ಹಾಕಿಡಿ.
11) ಸಾರಿನಲ್ಲಿ ಉಪ್ಪು ಜಾಸ್ತಿಯಾದರೆ ಆಲುಗಡ್ಡೆಯ ಚೂರುಗಳನ್ನು ಹಾಕಿ ಬೇಯಿಸಿ. 1/2 ಗಂಟೆಯಾದ ಮೇಲೆ ಮೆಲ್ಲಗೆ ತೆಗೆಯಿರಿ.
12) ಸಾರಿಗೆ ಖಾರ ಜಾಸ್ತಿಯಾದರೆ ಟೊಮೆಟೊ ಹಣ್ಣನ್ನು ಹಾಕಿ ಬೇಯಿಸಿ.
13) ಮಜ್ಜಿಗೆ ತುಂಬಾ ಹುಳಿಯಾದರೆ ಜಾಸ್ತಿ ನೀರು ಹಾಕಿ ಒಂದೆರಡು ಗಂಟೆಗಳ ಕಾಲ ಇಡಿ. ಆಮೇಲೆ ಮೇಲಿನ ತಿಳಿ ನೀರನ್ನು ಚೆಲ್ಲಿದಾಗ ಹುಳಿ ಮಾಯವಾಗಿರುತ್ತದೆ.
14) ದೋಸೆ ಮಾಡುವಾಗ ದೋಸೆ ಕಾವಲಿಗೆ ಕಚ್ಚುತ್ತಿದ್ದರೆ ಒಂದು ಈರುಳ್ಳಿಯನ್ನು 1/2 ಮಾಡಿ ಕಾವಲಿಗೆ ತಿಕ್ಕಿ ದೋಸೆ ಹುಯ್ಯಿರಿ.
15) ತರಕಾರಿ ಬೇಯಿಸುವಾಗ ಸ್ಟೀಲ್ ಪಾತ್ರೆಯಲ್ಲಿ ಬೇಯಿಸಬೇಕು. ಅಲ್ಯುಮಿನಿಯಂದಾದರೆ ತರಕಾರಿ ಕಪ್ಪಾಗುವುದು.



Click it and Unblock the Notifications