Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಬಾಯಿ ಸಿಹಿ ಮಾಡುವ ಕುಂಬಳಕಾಯಿ ಹಲ್ವಾ
ದೀಪಗಳ ಹಬ್ಬ ದೀಪಾವಳಿಗೆ ಇನ್ನೇನು ಬೆರಳಣಿಕೆಯ ದಿನಗಳ ಕ್ಷಣಗಣನೆ ಮಾತ್ರ ಬಾಕಿ ಇದೆ. ಅದಾಗ್ಯೂ ದೀಪಗಳ ಹಬ್ಬ ಮನರಂಜನೆಯನ್ನು ಮಾತ್ರ ನೀಡುವುದಲ್ಲದೆ ಭಾವೈಕ್ಯದ ಪ್ರತೀಕ ಎಂದೆನಿಸಿದೆ. ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಜ್ಞಾನ ಜ್ಯೋತಿಯನ್ನು ಬೆಳಗುವ ಈ ಹಬ್ಬ ಜಾತಿಯ ಸಂಕೋಲೆಯನ್ನು ಬೇಧಿಸಿ ಆಚರಿಸುವಂಥದ್ದಾಗಿದೆ, ಅಲ್ಲದೆ ಇಡೀ ವಿಶ್ವವೇ ಈ ಹಬ್ಬದ ಆಚರಣೆಯಲ್ಲಿ ತೊಡಗುತ್ತದೆ.
ಹೌದು, ಪ್ರತಿಯೊಬ್ಬ ಮಾನವನ ಒಳಗಿನ ಆತ್ಮವು ಬೆಳಕಿನಿಂದ ಕೂಡಿದ್ದರೆ ಮಾತ್ರ ಹೊರಪ್ರಪಂಚ ಸುಂದರವಾಗಿರುತ್ತದೆ. ಕತ್ತಲೆಯೆಂಬ ಮೌಢ್ಯ ನಮ್ಮ ಮನದಲ್ಲಿ ಮನೆಮಾಡಿರುವುದರಿಂದ ಅಜ್ಞಾನವೇ ಅಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಇದು ದೂರಾದರೆ ಮಾತ್ರವೇ ಸುಂದರ ಪ್ರಪಂಚ ನಮಗೆ ಗೋಚರವಾಗುತ್ತದೆ. ಹಾಗಾಗಿ ಇಂತಹ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಚೆಲ್ಲುವ ಹಬ್ಬವೇ ದೀಪಾವಳಿ ಹಬ್ಬದ ಹೆಗ್ಗಳಿಕೆ
ಇನ್ನು ಹಬ್ಬದ ಸಂಭ್ರಮಾಚರಣೆಯಲ್ಲಿ ಹಬ್ಬದಡುಗೆಯ ಜೊತೆಗೆ ಏನಾದರೂ ಸಿಹಿ ಇರಲೇಬೇಕು ಅಲ್ಲವೇ? ದೀಪಾವಳಿಯ ಸಂಭ್ರಮಕ್ಕಾಗಿ ನೆಂಟರಿಷ್ಟರು ಮನೆಗೆ ಬಂದಿರುವಾಗ ಏನಾದರೂ ಪ್ರತ್ಯೇಕವಾದ ಸಿಹಿಯನ್ನು ತಯಾರಿಸಲೇಬೇಕಾಗುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಅತಿ ವಿಶೇಷವಾದ ಕುಂಬಳ ಕಾಯಿ ಹಲ್ವಾ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮ ಬಂಧು ಬಾಂಧವರಿಗೆ ಇಷ್ಟವಾಗುವ ಈ ಹಲ್ವಾ ರೆಸಿಪಿಯನ್ನು ಕ್ಷಣದಲ್ಲೇ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ತಯಾರಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ಇಲ್ಲಿ ನೀಡುತ್ತಿದ್ದೇವೆ, ಮುಂದೆ ಓದಿ...

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹತ್ತು ನಿಮಿಷಗಳು
ತಯಾರಿಕಾ ಸಮಯ: ಹತ್ತು ನಿಮಿಷಗಳು
ಅಗತ್ಯವಿರುವ ಸಾಮಗ್ರಿಗಳು:
*ಸಿಹಿಗುಂಬಳ ತುರಿದದ್ದು: ಎರಡು ಕಪ್
*ಹಾಲು: ಒಂದು ಕಪ್
*ಸಕ್ಕರೆ: ಒಂದು ಕಪ್
*ತುಪ್ಪ: ಒಂದು ಕಪ್
*ಒಣದ್ರಾಕ್ಷಿ : ಸುಮಾರು ಹತ್ತು
*ಏಲಕ್ಕಿ ಪುಡಿ: ಕಾಲು ಟೀ ಚಮಚ (ಅಥವಾ ನಾಲ್ಕು ದೊಡ್ಡ ಗಾತ್ರದ ಏಲಕ್ಕಿಯನ್ನು ಪುಡಿಮಾಡಿ)
*ಗೋಡಂಬಿ: ಸುಮಾರು ಆರು (ಬಿಳಿಯದ್ದು), (ಲಭ್ಯವಿದ್ದರೆ ಬಾದಾಮಿಯನ್ನೂ ಸೇರಿಸಬಹುದು)
*ಕೇಸರಿ: ಎರಡರಿಂದ ಮೂರು ಎಸಳು ಸಾಕು.
ವಿಧಾನ:
1) ಸಿಹಿಗುಂಬಳದ ತುರಿಯನ್ನು ಕುಕ್ಕರ್ ನಲ್ಲಿ ಕೊಂಚವೇ ನೀರಿನೊಡನೆ ಎರಡು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಣಿಸಿ ಮುಚ್ಚಳ ತೆಗೆಯಿರಿ. ಸಿಹಿಗುಂಬಳವನ್ನು ಹೊರತೆಗೆದು ಒಂದು ತಟ್ಟೆಯ ನಡುವೆ ಹರಡಿ. ತಟ್ಟೆ ಕೊಂಚ ಓರೆಯಾಗಿಸಿದರೆ ಉಳಿದಿದ್ದ ನೀರು ಹರಿದು ಹೋಗುತ್ತದೆ. ಈ ನೀರನ್ನು ನಿವಾರಿಸಿ. ಕೊಂಚ ಒತ್ತಿ ಉಳಿದ ನೀರು ಸಹಾ ಹರಿದು ಹೋಗುವಂತೆ ಮಾಡಿ.
2) ಒಂದು ದಪ್ಪತಳದ ಬಾಣಲೆ ಅಥವಾ ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ಎರಡು ದೊಡ್ಡ ಚಮಚ ತುಪ್ಪವನ್ನು ಕಾಯಿಸಿ. ತುಪ್ಪ ಬಿಸಿಯಾದ ಕೂಡಲೇ ಬೇಯಿಸಿದ ಸಿಹಿಗುಂಬಳ ತುರಿಯನ್ನು ಹಾಕಿ
3) ಕುಂಬಳಕಾಯಿ ಪೂರ್ಣವಾಗಿ ಬೇಯುವವರೆಗೆ ತಿರುವುತ್ತಾ ಇರಿ. ಇದು ಹುರಿಯಲು ಸುಮಾರು ಐದು ನಿಮಿಷ ಬೇಕಾಗಬಹುದು. ಆದರೆ ನಡುನಡುವೆ ತಿರುವುತ್ತಾ ಇರಬೇಕು, ಇಲ್ಲದಿದ್ದರೆ ತಳ ಕಪ್ಪಾಗಿ ರುಚಿ ಹುಳಿಯಾಗುತ್ತದೆ.
4) ಈಗ ಹಾಲು ಹಾಕಿ ಕಲಕಿ. ಬಳಿಕ ಸಕ್ಕರೆ, ಕೇಸರಿ ಹಾಕಿ ಕಲಕಿ. ಹಾಲನ್ನು ಕುಂಬಳದ ತುರಿ ಪೂರ್ಣವಾಗಿ ಹೀರಿಕೊಂಡ ಬಳಿಕ ಉರಿಯನ್ನು ಚಿಕ್ಕದಾಗಿಸಿ ಇನ್ನೂ ಎರಡು ದೊಡ್ಡ ಚಮಚ ತುಪ್ಪವನ್ನು ಹಾಕಿ ತಿರುವಿ.
5) ಈಗ ಏಲಕ್ಕಿಪುಡಿ ಹಾಕಿ ತಿರುವಿ. ತುಪ್ಪ ಬಿಡುತ್ತಿದೆ ಎಂದೆನ್ನಿಸಿದಾಗ ಉರಿ ಆರಿಸಿ ಪಾತ್ರೆಯನ್ನು ಕೆಳಗಿಳಿಸಿ
6) ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಇನ್ನೆರಡು ದೊಡ್ಡ ಚಮಚ ತುಪ್ಪ ಬಿಸಿಮಾಡಿ ಗೋಡಂಬಿ, ದ್ರಾಕ್ಷಿ (ಮತ್ತು ಬಾದಾಮಿ) ಗಳನ್ನು ಹಾಕಿ ಕೆಂಪಗಾಗುವಷ್ಟು ಹುರಿಯಿರಿ.
7) ಹುರಿದ ಗೋಡಂಬಿ ದ್ರಾಕ್ಷಿಯನ್ನು ಕುಂಬಳ ತುರಿಗೆ ಹಾಕಿ ಮಿಶ್ರಣ ಮಾಡಿ.
8) ಬಿಸಿಬಿಸಿಯಿರುವಂತೆಯೇ ಸೇವಿಸಿ



Click it and Unblock the Notifications











