Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಇವತ್ತು ಅಡುಗೆ ಏನಪ್ಪಾ? ಅವರೆಕಾಳು ಹುಳಿಯಪ್ಪ!
ಅವರೆ ಬೇಳೆಯ ಮುಂದೆ ಬೇರೆ ಯಾವ ಬೇಳೆಯ ಬೇಳೆಕಾಳು ಬೇಯುವುದಿಲ್ಲ.. ಅಡುಗೆಮನೆಯಿಂದ ಘಂ ಎನ್ನುವ ಪರಿಮಳ ಬರುತ್ತಿದೆ. ಎಲ್ಲಾರು ಊಟಕ್ಕೆ ಬನ್ನಿ..
ಬೇಕಾಗುವ ಪದಾರ್ಥ : ಸುಲಿದು, ಆರಿಸಿದ 2 ಪಾವಿನಷ್ಟು ಅವರೆಕಾಳು, 1 ಹೋಳು ತೆಂಗಿನಕಾಯಿ, 1 ಈರುಳ್ಳಿ, 1 ಚಮಚ ಜೀರಿಗೆ, ಒಂದೊಂದು ಚಮಚದಷ್ಟು ಕೊತ್ತಂಬರಿಬೀಜ, ಗಸಗಸೆ, ಅಕ್ಕಿ ಹಾಗೂ ಸಾಂಬಾರು ಪುಡಿ.
ಮಾಡುವ ವಿಧಾನ : ಚೆನ್ನಾಗಿ ಆರಿಸಿದ ಅವರೆಕಾಳಿಗೆ ಮೂರು ಲೋಟದಷ್ಟು ನೀರು ಹಾಕಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆನಂತರ ತೆಂಗಿನಕಾಯಿ ತುರಿ, ಈರುಳ್ಳಿ, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ಅಕ್ಕಿ, ಸಾಂಬಾರು ಪುಡಿ ಇವಿಷ್ಟನ್ನೂ ಹಸಿಯಾಗಿಯೇ ನುಣ್ಣಗೆ ರುಬ್ಬಿ ಬೆಂದ ಅವರೆಕಾಳಿಗೆ ಸೇರಿಸಿ.
ನಿಮ್ಮ ರುಚಿಗೆ ಅನುಗುಣವಾಗಿ ಕಲ್ಲುಪ್ಪು ಹಾಕಿ ಮತ್ತೊಂದು ಕುದಿ ಕುದಿಸಿ, ಕೆಳಗಿಳಿಸಿದ ತರುವಾಯ ಇಂಗು- ಸಾಸಿವೆ , ಕರಿಬೇವು ಒಗ್ಗರಣೆ ಹಾಕಿದರೆ, ಸೊಗಸಾದ ಅವರೆಕಾಳು ಹುಳಿ ಸಿದ್ಧ. ಹುಳಿ ದಪ್ಪನಾಗಿರಬಾರದು, ಸ್ಪಲ್ಪ ನೀರು ಜಾಸ್ತಿ ಹಾಕಿ ತೆಳ್ಳಗೆ ಮಾಡಿ. ಮುದ್ದೆ ಯ ಜತೆಗೆ ಅನ್ನದ ಜತೆಗೆ ಜೂಂಂಂ!



Click it and Unblock the Notifications