Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
ರಾಗಿ ಹಾಲಿನ ರೆಸಿಪಿ: ಉರಿಮೂತ್ರ ಶಮನಕ್ಕೆ ತುಂಬಾ ಒಳ್ಳೆಯದು
ಬೇಸಿಗೆ ಕಾಲಕ್ಕೆ ಸೂಕ್ತವಾದ ಪಾನೀಯ ರೆಸಿಪಿ ಇದಾಗಿದೆ. ಈ ಪಾನೀಯ ದೇಹವನ್ನು ತಂಪಾಗಿ ಇಡುತ್ತದೆ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ, ಉರಿ ಮೂತ್ರದಂಥ ಸಮಸ್ಯೆ ತಡೆಗಟ್ಟುತ್ತದೆ, ಅಲ್ಲದೆ ಈ ಪಾನೀಯವನ್ನು ಟೀ-ಕಾಫಿ ಬದಲಿಗೆ ಮಾಡಿ ಸವಿಯಬಹುದು, ರೆಸಿಪಿಯಂತೂ ತುಂಬಾ ಸುಲಭವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಲೋಟ ರಾಗಿ
1 ಏಲಕ್ಕಿ
ಒಂದು ದುಂಡು ಬೆಲ್ಲ
ಚಿಟಿಕೆಯಷ್ಟು ಉಪ್ಪು
ಮಾಡುವ ವಿಧಾನ
- ಒಂದು ಲೋಟ ರಾಗಿಯನ್ನು ತೊಳೆದು ನೆನೆ ಹಾಕಿ
- ನಂತರ ರಾಗಿಗೆ ಅದೇ ನೀರು ಹಾಕಿ, 1 ಏಲಕ್ಕಿ ಹಾಕಿ ನುಣ್ಣನೆ ರುಬ್ಬಿ ಆ ರಾಗಿ ನೀರನ್ನು ಒಂದು ಪಾತ್ರೆಗೆ ಸೋಸಿ
- ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ
- ಈಗ ಈ ರಾಗಿ ಹಾಲನ್ನು ಬಿಸಿ ಮಾಡಿ
- ಚಿಟಿಕೆಯಷ್ಟು ಕಲ್ಲುಪ್ಪು ಹಾಕಿ
- ಒಂದು ತುಂಡು ಬೆಲ್ಲ ಹಾಕಿ
- ಈ ಪಾನೀಯ ಬಿಸಿಯಾಗುವಾಗ ಸೌಟ್ನಿಂದ ಆಡಿಸುತ್ತಾ ಇರಿ
- ರಾಗಿ ಬೇಯುತ್ತಾ ಬರುವಾಗ ಹಾಲನ್ನು ಹಾಕಿ
- ರಾಗಿ ಪಾನೀಯ ಬಿಸಿ ಬಿಸಿಯಾಗಿಯೂ ಕುಡಿಯಬಹುದು ಅಥವಾ ತಣ್ಣಗಾದ ಮೇಲೆ ಕೂಡ ಕುಡಿಯಬಹುದು.
- ಬೇಸಿಗೆಗೆ ಇಂಥ ಪಾನೀಯ ಕುಡಿಯಬಹುದು ತುಂಬಾ ಒಳ್ಳೆಯದು, ಕೆಲವರಿಗೆ ಬೇಸಿಗೆಯಲ್ಲಿ ತುಂಬಾನೇ ಉರಿಮೂತ್ರದ ಸಮಸ್ಯೆ ಕಂಡು ಬರುತ್ತದೆ, ಅದನ್ನು ತಡೆಗಟ್ಟಲು ಈ ಪಾನೀಯ ತುಂಬಾನೇ ಸಹಕಾರಿ.
- ಉರಿಮೂತ್ರದ ಸಮಸ್ಯೆ ಇರುವವರು ಇದನ್ನು ಪ್ರತಿನಿತ್ಯ 1-2 ಲೋಟ ಕುಡಿಯಿರಿ.
ಇನ್ನು ಸಿಹಿ ಬೇಡ, ಹಾಲು ಬೇಡ ಎನ್ನುವವರು ರಾಗಿ ಹಾಲಿಗೆ ಸ್ವಲ್ಪ ಉಪ್ಪು ಹಾಕಿ ಕಾಯಿಸಿ ಕುಡಿಯಬಹುದು, ಆದರೆ ರುಚಿಯಾಗಿ ಬೇಕೆಂದರೆ ಮೇಲೆ ಹೇಳಿದಂತೆ ಮಾಡಬೇಕು.
ರಾಗಿ ಹಾಲು ಈ ಸಮಸ್ಯೆ ಇರುವವರೆಗೆ ತುಂಬಾೇ ಒಳ್ಳೆಯದು
ಮಧುಮೇಹಿಗಳಿಗೆ ಅತ್ಯುತ್ತಮ ಆಹಾರ: ಬೆಲ್ಲ ಸೇರಿಸದೆ ಬರಿ ಉಪ್ಪು ಮಾತ್ರ ಹಾಕಿ
ಮಾಡಿದ ಪಾನೀಯ ಕುಡಿಯಿರಿ
ರಕ್ತ ಹೀನತೆ ಸಮಸ್ಯೆ ತಡೆಗಟ್ಟಲು ಸಹಕಾರಿ: ರಕ್ತಹೀನತೆ ಸಮಸ್ಯೆ ಇರುವವರು ಈ
ಪಾನೀಯ ಕುಡಿಯುವುದರಿಂದ ದೇಹದಲ್ಲಿ ಹೀಮೋಗ್ಲೋಬಿನ್ ಸಮಸ್ಯೆ ಹೆಚ್ಚಾಗುವುದು
ಬಾಣಂತಿಯರಿಗೆ ಒಳ್ಳೆಯದು: ಬಾಣಂತಿಯರಿಗೆ ಎದೆ ಹಾಲಿನ ಉತ್ಪತ್ತಿಗೆ, ದೇಹಕ್ಕೆ
ಶಕ್ತಿಗೆ ತುಂಬಾನೇ ಒಳ್ಳೆಯುದ.
ರೋಗ ನಿರೋಧಕ ಶಕ್ತಿ ಹೆಚ್ಚಿದೆ: ಇದರಲ್ಲಿ ಪೋಷಕಾಂಶ ಅಧಿಕವಿರುವುದರಿಂದ ರೋಗ
ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ
ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.



Click it and Unblock the Notifications