Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ರಾಗಿ ಹಾಲಿನ ರೆಸಿಪಿ: ಉರಿಮೂತ್ರ ಶಮನಕ್ಕೆ ತುಂಬಾ ಒಳ್ಳೆಯದು
ಬೇಸಿಗೆ ಕಾಲಕ್ಕೆ ಸೂಕ್ತವಾದ ಪಾನೀಯ ರೆಸಿಪಿ ಇದಾಗಿದೆ. ಈ ಪಾನೀಯ ದೇಹವನ್ನು ತಂಪಾಗಿ ಇಡುತ್ತದೆ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ, ಉರಿ ಮೂತ್ರದಂಥ ಸಮಸ್ಯೆ ತಡೆಗಟ್ಟುತ್ತದೆ, ಅಲ್ಲದೆ ಈ ಪಾನೀಯವನ್ನು ಟೀ-ಕಾಫಿ ಬದಲಿಗೆ ಮಾಡಿ ಸವಿಯಬಹುದು, ರೆಸಿಪಿಯಂತೂ ತುಂಬಾ ಸುಲಭವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಲೋಟ ರಾಗಿ
1 ಏಲಕ್ಕಿ
ಒಂದು ದುಂಡು ಬೆಲ್ಲ
ಚಿಟಿಕೆಯಷ್ಟು ಉಪ್ಪು
ಮಾಡುವ ವಿಧಾನ
- ಒಂದು ಲೋಟ ರಾಗಿಯನ್ನು ತೊಳೆದು ನೆನೆ ಹಾಕಿ
- ನಂತರ ರಾಗಿಗೆ ಅದೇ ನೀರು ಹಾಕಿ, 1 ಏಲಕ್ಕಿ ಹಾಕಿ ನುಣ್ಣನೆ ರುಬ್ಬಿ ಆ ರಾಗಿ ನೀರನ್ನು ಒಂದು ಪಾತ್ರೆಗೆ ಸೋಸಿ
- ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ
- ಈಗ ಈ ರಾಗಿ ಹಾಲನ್ನು ಬಿಸಿ ಮಾಡಿ
- ಚಿಟಿಕೆಯಷ್ಟು ಕಲ್ಲುಪ್ಪು ಹಾಕಿ
- ಒಂದು ತುಂಡು ಬೆಲ್ಲ ಹಾಕಿ
- ಈ ಪಾನೀಯ ಬಿಸಿಯಾಗುವಾಗ ಸೌಟ್ನಿಂದ ಆಡಿಸುತ್ತಾ ಇರಿ
- ರಾಗಿ ಬೇಯುತ್ತಾ ಬರುವಾಗ ಹಾಲನ್ನು ಹಾಕಿ
- ರಾಗಿ ಪಾನೀಯ ಬಿಸಿ ಬಿಸಿಯಾಗಿಯೂ ಕುಡಿಯಬಹುದು ಅಥವಾ ತಣ್ಣಗಾದ ಮೇಲೆ ಕೂಡ ಕುಡಿಯಬಹುದು.
- ಬೇಸಿಗೆಗೆ ಇಂಥ ಪಾನೀಯ ಕುಡಿಯಬಹುದು ತುಂಬಾ ಒಳ್ಳೆಯದು, ಕೆಲವರಿಗೆ ಬೇಸಿಗೆಯಲ್ಲಿ ತುಂಬಾನೇ ಉರಿಮೂತ್ರದ ಸಮಸ್ಯೆ ಕಂಡು ಬರುತ್ತದೆ, ಅದನ್ನು ತಡೆಗಟ್ಟಲು ಈ ಪಾನೀಯ ತುಂಬಾನೇ ಸಹಕಾರಿ.
- ಉರಿಮೂತ್ರದ ಸಮಸ್ಯೆ ಇರುವವರು ಇದನ್ನು ಪ್ರತಿನಿತ್ಯ 1-2 ಲೋಟ ಕುಡಿಯಿರಿ.
ಇನ್ನು ಸಿಹಿ ಬೇಡ, ಹಾಲು ಬೇಡ ಎನ್ನುವವರು ರಾಗಿ ಹಾಲಿಗೆ ಸ್ವಲ್ಪ ಉಪ್ಪು ಹಾಕಿ ಕಾಯಿಸಿ ಕುಡಿಯಬಹುದು, ಆದರೆ ರುಚಿಯಾಗಿ ಬೇಕೆಂದರೆ ಮೇಲೆ ಹೇಳಿದಂತೆ ಮಾಡಬೇಕು.
ರಾಗಿ ಹಾಲು ಈ ಸಮಸ್ಯೆ ಇರುವವರೆಗೆ ತುಂಬಾೇ ಒಳ್ಳೆಯದು
ಮಧುಮೇಹಿಗಳಿಗೆ ಅತ್ಯುತ್ತಮ ಆಹಾರ: ಬೆಲ್ಲ ಸೇರಿಸದೆ ಬರಿ ಉಪ್ಪು ಮಾತ್ರ ಹಾಕಿ
ಮಾಡಿದ ಪಾನೀಯ ಕುಡಿಯಿರಿ
ರಕ್ತ ಹೀನತೆ ಸಮಸ್ಯೆ ತಡೆಗಟ್ಟಲು ಸಹಕಾರಿ: ರಕ್ತಹೀನತೆ ಸಮಸ್ಯೆ ಇರುವವರು ಈ
ಪಾನೀಯ ಕುಡಿಯುವುದರಿಂದ ದೇಹದಲ್ಲಿ ಹೀಮೋಗ್ಲೋಬಿನ್ ಸಮಸ್ಯೆ ಹೆಚ್ಚಾಗುವುದು
ಬಾಣಂತಿಯರಿಗೆ ಒಳ್ಳೆಯದು: ಬಾಣಂತಿಯರಿಗೆ ಎದೆ ಹಾಲಿನ ಉತ್ಪತ್ತಿಗೆ, ದೇಹಕ್ಕೆ
ಶಕ್ತಿಗೆ ತುಂಬಾನೇ ಒಳ್ಳೆಯುದ.
ರೋಗ ನಿರೋಧಕ ಶಕ್ತಿ ಹೆಚ್ಚಿದೆ: ಇದರಲ್ಲಿ ಪೋಷಕಾಂಶ ಅಧಿಕವಿರುವುದರಿಂದ ರೋಗ
ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ
ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.



Click it and Unblock the Notifications