Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅಯ್ಯಪ್ಪಸ್ವಾಮಿ ಪೂಜೆಗೆ ಅರವಣ ಪಾಯಸ ಮಾಡುವುದು ಹೇಗೆ?
ಜನವರಿ 14ಕ್ಕೆ ಮಕರವಿಳಕ್ಕು, ಈ ದಿನ ಅಯ್ಯಪ್ಪಸ್ವಾಮಿ ತನ್ನ ಭಕ್ತರಿಗೆ ನಕ್ಷತ್ರ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುವುದು ನಂಬಿಕೆ, ಅದನ್ನು ಮಕರವಿಳಕ್ಕು ಎಂದು ಕರೆಯಲಾಗುವುದು ಈ ಮಕರವಿಳಕ್ಕು ದರ್ಶನ ಪಡೆಯಲೆಂದೇ ಲಕ್ಷಾಂತರ ಭಕ್ತರು ಕಠಿಣ ವ್ರತ ನಿಯಮ ಪಾಲಿಸಿ ಕೇರಳದ ಶಬರಿಮಲೆಗೆ ಭೇಟಿ ನೀಡುತ್ತಾರೆ.
ಜನವರಿ ಮಾಸವೆಂದರೆ ಅಯ್ಯಪ್ಪಸ್ವಾಮಿ ಪೂಜೆಯ ಸಮಯ. ಭಜನೆ, ಕಟ್ಟು ತುಂಬಿಸಿ ಹೋಗುವುದು ಹೀಗೆ ಧಾರ್ಮಿಕ ಪೂಜೆಗಳು ನಡೆಯುತ್ತಿರುತ್ತದೆ. ಈ ಪೂಜೆಯಲ್ಲಿ ನೀವು ಅರವಣ ಪಾಯಸ ತಯಾರಿಸಿ ನೈವೇದ್ಯವಾಗಿ ಅರ್ಪಿಸಬಹುದು.

ಅರವಣ ಪಾಯಸವೆಂಬುವುದು ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ದೊರೆಯುವ ವಿಶೇಷ ಪ್ರಸಾದವಾಗಿದೆ.ಇದೇ ರುಚಿಯಲ್ಲಿ ಮನೆಯಲ್ಲಿ ನಡೆಸುವ ಅಯ್ಯಪ್ಪಸ್ವಾಮಿ ಪೂಜೆಯಲ್ಲಿಯೂ ಪಾಯಸ ತಯಾರಿಸಬಹುದಾಗಿದ್ದು ಅದರ ರೆಸಿಪಿ ನೋಡಿ ಇಲ್ಲಿದೆ:
1 ಕಪ್ ಮಟ್ಟಾರೈಸ್
1 ಕಪ್ ತುಪ್ಪ2 ಕಪ್ ನೀರು
ಸ್ವಲ್ಪ ತೆಂಗಿನಕಾಯಿ ತುಂಡು(ಒಂದು ತೆಂಗಿನಕಾಯಿಯ ತುಂಡು)
ಬೆಲ್ಲ 1 ಕಪ್
ಒಣ ಶುಂಠಿ (ಪುಡಿ ಮಾಡಿದ್ದು 1/4 ಚಮಚ)
4-5 ಏಲಕ್ಕಿ
ನೀರು 3 ಕಪ್
ಅರವಣ ಪಾಯಸ ಮಾಡುವುದು ಹೇಗೆ?
- ನೀವು ಈ ಪಾಯಸ ಮಾಡಲು ಉರುಳಿ ಬಳಸಿ (ದಪ್ಪ ತಳವಿರುವ ಪಾತ್ರೆ)
- ಈಗ ಪಾತ್ರೆ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ತುಪ್ಪದಲ್ಲಿ ತೆಂಗಿಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ನಂತರ ತೆಗೆದು ತಟ್ಟೆಯಲ್ಲಿ ಹಾಕಿಡಿ.
- ಈಗ ಅದೇ ತುಪ್ಪಕ್ಕೆ ಮತ್ತಷ್ಟು ತುಪ್ಪ ಸೇರಿಸಿ ಅದರಲ್ಲಿ ಮಟ್ಟಾ ರೈಸ್ ಹಾಕಿ ಫ್ರೈ ಮಾಡಿ, ನಂತರ 3 ಕಪ್ ನೀರು ಸೇರಿಸಿ ಬೇಯಿಸಿ
- ಈಗ ಬೆಲ್ಲವನ್ನು ಸೇರಿಸಿ ( ಬೆಲ್ಲ ತುರಿದು ಅಥವಾ ಪುಡಿ ಮಾಡಿ ಸೇರಿಸಿ)
- ಏಲಕ್ಕಿ ಸೇರಿಸಿ
- ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಿರಲು ಆಆಗ ಸೌಟ್ನಿಂದ ಆಡಿಸುತ್ತಾ ಇರಿ.
- ಪಾಯಸ ಸ್ವಲ್ಪ ಮಂದವಾಗುವಾಗ ಉರಿಯಿಂದ ಇಳಿಸಿ ದೇವರಿಗೆ ನೈವೇದ್ಯವಿಟ್ಟು ನಂತರ ಸರ್ವ್ ಮಾಡಿ.
- ತಾಮ್ರದ ಕಡಾಯಿಯಲ್ಲಿ ಮಾಡಿದರೆ ಇನ್ನೂ ರುಚಿ, ಪಾಯಸದ ಸ್ವಾದ ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications