Latest Updates
-
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ
ಅಯ್ಯಪ್ಪಸ್ವಾಮಿ ಪೂಜೆಗೆ ಅರವಣ ಪಾಯಸ ಮಾಡುವುದು ಹೇಗೆ?
ಜನವರಿ 14ಕ್ಕೆ ಮಕರವಿಳಕ್ಕು, ಈ ದಿನ ಅಯ್ಯಪ್ಪಸ್ವಾಮಿ ತನ್ನ ಭಕ್ತರಿಗೆ ನಕ್ಷತ್ರ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುವುದು ನಂಬಿಕೆ, ಅದನ್ನು ಮಕರವಿಳಕ್ಕು ಎಂದು ಕರೆಯಲಾಗುವುದು ಈ ಮಕರವಿಳಕ್ಕು ದರ್ಶನ ಪಡೆಯಲೆಂದೇ ಲಕ್ಷಾಂತರ ಭಕ್ತರು ಕಠಿಣ ವ್ರತ ನಿಯಮ ಪಾಲಿಸಿ ಕೇರಳದ ಶಬರಿಮಲೆಗೆ ಭೇಟಿ ನೀಡುತ್ತಾರೆ.
ಜನವರಿ ಮಾಸವೆಂದರೆ ಅಯ್ಯಪ್ಪಸ್ವಾಮಿ ಪೂಜೆಯ ಸಮಯ. ಭಜನೆ, ಕಟ್ಟು ತುಂಬಿಸಿ ಹೋಗುವುದು ಹೀಗೆ ಧಾರ್ಮಿಕ ಪೂಜೆಗಳು ನಡೆಯುತ್ತಿರುತ್ತದೆ. ಈ ಪೂಜೆಯಲ್ಲಿ ನೀವು ಅರವಣ ಪಾಯಸ ತಯಾರಿಸಿ ನೈವೇದ್ಯವಾಗಿ ಅರ್ಪಿಸಬಹುದು.

ಅರವಣ ಪಾಯಸವೆಂಬುವುದು ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ದೊರೆಯುವ ವಿಶೇಷ ಪ್ರಸಾದವಾಗಿದೆ.ಇದೇ ರುಚಿಯಲ್ಲಿ ಮನೆಯಲ್ಲಿ ನಡೆಸುವ ಅಯ್ಯಪ್ಪಸ್ವಾಮಿ ಪೂಜೆಯಲ್ಲಿಯೂ ಪಾಯಸ ತಯಾರಿಸಬಹುದಾಗಿದ್ದು ಅದರ ರೆಸಿಪಿ ನೋಡಿ ಇಲ್ಲಿದೆ:
1 ಕಪ್ ಮಟ್ಟಾರೈಸ್
1 ಕಪ್ ತುಪ್ಪ2 ಕಪ್ ನೀರು
ಸ್ವಲ್ಪ ತೆಂಗಿನಕಾಯಿ ತುಂಡು(ಒಂದು ತೆಂಗಿನಕಾಯಿಯ ತುಂಡು)
ಬೆಲ್ಲ 1 ಕಪ್
ಒಣ ಶುಂಠಿ (ಪುಡಿ ಮಾಡಿದ್ದು 1/4 ಚಮಚ)
4-5 ಏಲಕ್ಕಿ
ನೀರು 3 ಕಪ್
ಅರವಣ ಪಾಯಸ ಮಾಡುವುದು ಹೇಗೆ?
- ನೀವು ಈ ಪಾಯಸ ಮಾಡಲು ಉರುಳಿ ಬಳಸಿ (ದಪ್ಪ ತಳವಿರುವ ಪಾತ್ರೆ)
- ಈಗ ಪಾತ್ರೆ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ತುಪ್ಪದಲ್ಲಿ ತೆಂಗಿಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ನಂತರ ತೆಗೆದು ತಟ್ಟೆಯಲ್ಲಿ ಹಾಕಿಡಿ.
- ಈಗ ಅದೇ ತುಪ್ಪಕ್ಕೆ ಮತ್ತಷ್ಟು ತುಪ್ಪ ಸೇರಿಸಿ ಅದರಲ್ಲಿ ಮಟ್ಟಾ ರೈಸ್ ಹಾಕಿ ಫ್ರೈ ಮಾಡಿ, ನಂತರ 3 ಕಪ್ ನೀರು ಸೇರಿಸಿ ಬೇಯಿಸಿ
- ಈಗ ಬೆಲ್ಲವನ್ನು ಸೇರಿಸಿ ( ಬೆಲ್ಲ ತುರಿದು ಅಥವಾ ಪುಡಿ ಮಾಡಿ ಸೇರಿಸಿ)
- ಏಲಕ್ಕಿ ಸೇರಿಸಿ
- ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಿರಲು ಆಆಗ ಸೌಟ್ನಿಂದ ಆಡಿಸುತ್ತಾ ಇರಿ.
- ಪಾಯಸ ಸ್ವಲ್ಪ ಮಂದವಾಗುವಾಗ ಉರಿಯಿಂದ ಇಳಿಸಿ ದೇವರಿಗೆ ನೈವೇದ್ಯವಿಟ್ಟು ನಂತರ ಸರ್ವ್ ಮಾಡಿ.
- ತಾಮ್ರದ ಕಡಾಯಿಯಲ್ಲಿ ಮಾಡಿದರೆ ಇನ್ನೂ ರುಚಿ, ಪಾಯಸದ ಸ್ವಾದ ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications