ಅಯ್ಯಪ್ಪಸ್ವಾಮಿ ಪೂಜೆಗೆ ಅರವಣ ಪಾಯಸ ಮಾಡುವುದು ಹೇಗೆ?

Posted By:

ಜನವರಿ 14ಕ್ಕೆ ಮಕರವಿಳಕ್ಕು, ಈ ದಿನ ಅಯ್ಯಪ್ಪಸ್ವಾಮಿ ತನ್ನ ಭಕ್ತರಿಗೆ ನಕ್ಷತ್ರ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುವುದು ನಂಬಿಕೆ, ಅದನ್ನು ಮಕರವಿಳಕ್ಕು ಎಂದು ಕರೆಯಲಾಗುವುದು ಈ ಮಕರವಿಳಕ್ಕು ದರ್ಶನ ಪಡೆಯಲೆಂದೇ ಲಕ್ಷಾಂತರ ಭಕ್ತರು ಕಠಿಣ ವ್ರತ ನಿಯಮ ಪಾಲಿಸಿ ಕೇರಳದ ಶಬರಿಮಲೆಗೆ ಭೇಟಿ ನೀಡುತ್ತಾರೆ.

ಜನವರಿ ಮಾಸವೆಂದರೆ ಅಯ್ಯಪ್ಪಸ್ವಾಮಿ ಪೂಜೆಯ ಸಮಯ. ಭಜನೆ, ಕಟ್ಟು ತುಂಬಿಸಿ ಹೋಗುವುದು ಹೀಗೆ ಧಾರ್ಮಿಕ ಪೂಜೆಗಳು ನಡೆಯುತ್ತಿರುತ್ತದೆ. ಈ ಪೂಜೆಯಲ್ಲಿ ನೀವು ಅರವಣ ಪಾಯಸ ತಯಾರಿಸಿ ನೈವೇದ್ಯವಾಗಿ ಅರ್ಪಿಸಬಹುದು.

Ayyappaswami naivedya

ಅರವಣ ಪಾಯಸವೆಂಬುವುದು ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ದೊರೆಯುವ ವಿಶೇಷ ಪ್ರಸಾದವಾಗಿದೆ.ಇದೇ ರುಚಿಯಲ್ಲಿ ಮನೆಯಲ್ಲಿ ನಡೆಸುವ ಅಯ್ಯಪ್ಪಸ್ವಾಮಿ ಪೂಜೆಯಲ್ಲಿಯೂ ಪಾಯಸ ತಯಾರಿಸಬಹುದಾಗಿದ್ದು ಅದರ ರೆಸಿಪಿ ನೋಡಿ ಇಲ್ಲಿದೆ:

1 ಕಪ್‌ ಮಟ್ಟಾರೈಸ್
1 ಕಪ್‌ ತುಪ್ಪ2 ಕಪ್‌ ನೀರು
ಸ್ವಲ್ಪ ತೆಂಗಿನಕಾಯಿ ತುಂಡು(ಒಂದು ತೆಂಗಿನಕಾಯಿಯ ತುಂಡು)
ಬೆಲ್ಲ 1 ಕಪ್‌
ಒಣ ಶುಂಠಿ (ಪುಡಿ ಮಾಡಿದ್ದು 1/4 ಚಮಚ)
4-5 ಏಲಕ್ಕಿ
ನೀರು 3 ಕಪ್

ಅರವಣ ಪಾಯಸ ಮಾಡುವುದು ಹೇಗೆ?

  • ನೀವು ಈ ಪಾಯಸ ಮಾಡಲು ಉರುಳಿ ಬಳಸಿ (ದಪ್ಪ ತಳವಿರುವ ಪಾತ್ರೆ)
  • ಈಗ ಪಾತ್ರೆ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ತುಪ್ಪದಲ್ಲಿ ತೆಂಗಿಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ ನಂತರ ತೆಗೆದು ತಟ್ಟೆಯಲ್ಲಿ ಹಾಕಿಡಿ.
  • ಈಗ ಅದೇ ತುಪ್ಪಕ್ಕೆ ಮತ್ತಷ್ಟು ತುಪ್ಪ ಸೇರಿಸಿ ಅದರಲ್ಲಿ ಮಟ್ಟಾ ರೈಸ್‌ ಹಾಕಿ ಫ್ರೈ ಮಾಡಿ, ನಂತರ 3 ಕಪ್‌ ನೀರು ಸೇರಿಸಿ ಬೇಯಿಸಿ
  • ಈಗ ಬೆಲ್ಲವನ್ನು ಸೇರಿಸಿ ( ಬೆಲ್ಲ ತುರಿದು ಅಥವಾ ಪುಡಿ ಮಾಡಿ ಸೇರಿಸಿ)
  • ಏಲಕ್ಕಿ ಸೇರಿಸಿ
  • ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಷ್ಟು ಹೊತ್ತು ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಿರಲು ಆಆಗ ಸೌಟ್‌ನಿಂದ ಆಡಿಸುತ್ತಾ ಇರಿ.
  • ಪಾಯಸ ಸ್ವಲ್ಪ ಮಂದವಾಗುವಾಗ ಉರಿಯಿಂದ ಇಳಿಸಿ ದೇವರಿಗೆ ನೈವೇದ್ಯವಿಟ್ಟು ನಂತರ ಸರ್ವ್ ಮಾಡಿ.
  • ತಾಮ್ರದ ಕಡಾಯಿಯಲ್ಲಿ ಮಾಡಿದರೆ ಇನ್ನೂ ರುಚಿ, ಪಾಯಸದ ಸ್ವಾದ ತುಂಬಾ ಚೆನ್ನಾಗಿರುತ್ತದೆ.
[ of 5 - Users]
Story first published: Thursday, January 2, 2025, 19:44 [IST]
X
Desktop Bottom Promotion