Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಕೆಸುವಿನಷ್ಟೇ ರುಚಿ ಎಲೆಕೋಸಿನ ಪತ್ರೊಡೆ

ಈ ಪದಾರ್ಥಗಳನ್ನು ಹೊಂಚಿಕೊಳ್ಳಿ
*ಸಣ್ಣಗೆ ತುರಿದ ಕ್ಯಾಬೇಜ್ ಕಾಲು ಕೆಜಿ
*ಒಂದು ಸ್ಪೂನ್ ಕೊತ್ತಂಬರಿ ಬೀಜ
*ಒಂದು ಸ್ಪೂನ್ ಮೆಂತ್ಯ
*ಉದ್ದಿನ ಬೇಳೆ ಒಂದು ಸ್ಪೂನ್
*ಐದು ಕೆಂಪು ಮೆಣಸು
*ಹುಣಸೆ ಹಣ್ಣು, ಒಂದು ನಿಂಬೆಯಷ್ಟು
*ನಾಲ್ಕು ಬೆರಳಿನಷ್ಟಗಲದ ಬೆಲ್ಲದ ತುಂಡು
*ಭರ್ತಿ ಒಂದು ಚಿಟಿಕೆ ಅರಿಶಿಣ
*ಒಂದು ಕಪ್ ಕಾಯಿ ತುರಿ
*ಅರ್ಧ ಕಪ್ ಅಕ್ಕಿಯ ಸೋಜಿ
*ಉಪ್ಪು : ನಿಮ್ಮ ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೆಣಸು, ಮೆಂತ್ಯ ಮತ್ತು ಉದ್ದಿನ ಬೇಳೆಯನ್ನು ಸ್ವಲ್ಪ ಹುರಿಯಬೇಕು. ತೆಂಗಿನ ಕಾಯಿ, ಕೊತ್ತಂಬರಿ ಬೀಜ, ಹುಣಸೇ, ಬೆಲ್ಲ , ಅರಿಶಿಣ ಮತ್ತು ಹುರಿದ ಈ ಮಿಶ್ರಣವನ್ನು ಅರೆಯಿರಿ. ಉಪ್ಪು ಸೇರಿಸಿ ಇನ್ನೊಂದು ಸುತ್ತು ಮಿಕ್ಸಿ ತಿರುಗಿಸಿ. ಈ ಮಿಶ್ರಣ, ಅಕ್ಕಿ ಸೋಜಿ ಮತ್ತು ಕತ್ತರಿಸಿಟ್ಟಿರುವ ಕ್ಯಾಬೇಜ್ ಜೊತೆ ಚೆನ್ನಾಗಿ ಕಲೆಸಿ. ಕಡಿಮೆ ನೀರು ಸೇರಿಸಬೇಕು. ನಂತರ ಮಿಶ್ರಣವನ್ನು ಲಡ್ಡುವಿಗಿಂತ ಸ್ವಲ್ಪ ದೊಡ್ಡ ಸೈಜಿನಲ್ಲಿ ಉಂಡೆ ಮಾಡಿ ಅರ್ಧ ಗಂಟೆ ಕಾಲ ಹಬೆಯಲ್ಲಿ ಬೇಯಿಸಿ.
ಒಂದು ಬಾಣಲೆಯಲ್ಲಿ ಎರಡು ಸ್ಪೂನ್ ಎಣ್ಣೆ, ಎರಡು ಚಿಟಿಕೆಯಷ್ಟು ಉದ್ದಿನ ಬೇಳೆ , ಸಾಸಿವೆ, ಕರಿಬೇವಿನಸೊಪ್ಪು ಮತ್ತು ಕೆಂಪು ಮೆಣಸನ್ನು ಹುರಿಯಿರಿ. ಬೆಂದ ಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಗ್ಗರಣೆ ಬಾಣಲೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಹಿಯಾಗಿರಬೇಕಿದ್ದರೆ ಬೆಲ್ಲ ಒಂದಿಷ್ಟು ಹೆಚ್ಚು, ಖಾರ ಬೇಕಿದ್ರೆ ಎರಡು ಮೆಣಸು ಜಾಸ್ತಿ .. ಹೀಗೆ ಪತ್ರೊಡೆ ಪರಿಣತರಾಗುತ್ತಿದ್ದಂತೆ ನಿಮ್ಮದೇ ಆದ ಕೈಗುಣದ ಛಾಪು ಒತ್ತಿರುತ್ತೀರಿ.
ಕ್ಯಾಬೇಜ್ ಬದಲಿಗೆ ಕೆಸುವಿನೆಲೆ ಅಥವಾ ತಗತ್ತೆ ಸೊಪ್ಪನ್ನೂ ಹೆಚ್ಚಿ ಪತ್ರೊಡೆ ಮಾಡಬಹುದು. ನಿಮ್ಮ ಅಡುಗೆ ಕ್ಯಾಲ್ಕ್ಯುಲೇಷನ್ಗಳು ಒಂದು ಹದಕ್ಕೆ ಬಂದ ಮೇಲೆ ನಿಮಗೇ ಅಂದಾಜಾಗುತ್ತದೆ. ಆಲ್ ದ ಬೆಸ್ಟ್.



Click it and Unblock the Notifications











