Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಗೋಬಿಯಲ್ಲ ವೆಜಿಟೇಬಲ್ ಮಂಚೂರಿ

ಬೇಕಾಗುವ ಸಾಮಾಗ್ರಿಗಳು:
1. ಕತ್ತರಿಸಿದ ಎಲೆಕೋಸು 2
2. ಕತ್ತರಿಸಿದ ಕ್ಯಾರೆಟ್ 2
3. ಈರುಳ್ಳಿ 1
4. ಕತ್ತರಿಸಿದ ಹಸಿಮೆಣಸು 2
5. ಚೆನ್ನಾಗಿ ಜಜ್ಜಿದ ಬೆಳ್ಳುಳ್ಳಿ 3-4 ಎಸಳು
6. ಕಡಲೆ ಇಟ್ಟು 2 ಚಮಚ
7. ಸೋಯಾ ಸಾಸ್ 1 ಚಮಚ
8. ಸಕ್ಕರೆ 1 ಚಮಚ
9. ರುಚಿಗೆ ತಕ್ಕಷ್ಟು ಉಪ್ಪು
10. ಕರಿಮೆಣಸು 1 ಚಮಚ
11. ಅಜಿನೊಮೊಟೊ
12. ಕೊತ್ತಂಬರಿ ಸೊಪ್ಪು
13. ಎಣ್ಣೆ
ಮಾಡುವ ವಿಧಾನ:
1. ಎಲೆಕೋಸು ಚೆನ್ನಾಗಿ ತೊಳೆದು ನೀರು ಬಸಿದು ಅದಕ್ಕೆ ಕಡಲೆಹಿಟ್ಟು, ಉಪ್ಪು, ಹಸಿ ಮೆಣಸು ಹಾಕಿ ಚೆನ್ನಾಗಿ ಬೆರೆಸಿ ಅದನ್ನು ಮಂಚೂರಿಯ ಆಕಾರದಲ್ಲಿ ಉಂಡೆ ಕಟ್ಟಬೆಕು.
2. ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈ ಉಂಡೆಯನ್ನು ಹಾಕಿ ಕಂದು ಬಣ್ಣ ಬರುವರೆಗೆ ಹುರಿಯಿರಿ, ನಂತರ ಅದನ್ನು ಎಣ್ಣೆಯಿಂದ ತೆಗೆದು ಇಡಿ.
3. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ಉಪ್ಪು, ಕರಿಮೆಣಸು, ಸಕ್ಕರೆ, ಸೋಯಾ ಸಾಸ್, ಅಜಿನೊಮಿಟೊ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ ಗಟ್ಟಿ ಗ್ರೇವಿಯನ್ನು ತಯಾರಿಸಬೇಕು.
4. ನಂತರ 1 ಚಮಚ ಕಡಲೆ ಹಿಟ್ಟಿಗೆ ನೀರು ಹಾಕಿ ಅದನ್ನು ಮಂಚೂರಿ ಉಂಡೆ ಮೇಲೆ ಚಿಮುಕಿಸಬೇಕು.ನಂತರ ಅ ಉಂಡೆಯನ್ನು ಗ್ರೇವಿಯಲ್ಲಿ ಹಾಕಿ 5-6 ನಿಮಿಷ ಕಾಯಿಸಬೇಕು.
ನಂತರ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಅದನ್ನು ಟೊಮೆಟೊ ಕೆಚಪ್ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ತಿನ್ನಲು ಮನೆಗೆ ಬಂದ ಅತಿಥಿಗಳಿಗೆ ಕೊಟ್ಟು ನೋಡಿ ಅವರು ಹೊಗಳದಿದ್ದರೆ ಮತ್ತೆ ಕೇಳಿ.



Click it and Unblock the Notifications