Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಆಹಾ! ಉದ್ದಿನ ವಡೆ

ಇಡ್ಲಿ .. ವಡೆ.. ಸಾಂಬರ್ ರುಚಿಯಾಗಿ ಮಾಡೋ ಬಟ್ಲರ್, ನಾನೇ ಆಲ್ಸೋ ಸಿಂಗರ್, ಈ ನಾಡಿಗೆ ನಾನೇ ಸೂಪರ್ ಎಂದು ಹಾಸ್ಯನಟ ದಿನೇಶ್ ಪ್ರಚಂಡ ಪುಟಾಣಿಗಳು ಚಿತ್ರದಲ್ಲಿ ಹಾಡಿ ಕುಣಿದಿದ್ದರು. ವಡೆ ಒಂದು ಸ್ವಾದಿಷ್ಟ ಹಾಗೂ ಪೌಷ್ಟಿಕ ಆಹಾರ. ಸಾಮಾನ್ಯವಾಗಿ ಬ್ರಾಹ್ಮಣರ ಮನೆಯಲ್ಲಿ ತಿಥಿಯ (ಶ್ರಾದ್ಧ) ದಿನ ಹಿರಿಯರ ಪ್ರಸಾದ ಎಂದು ಮಾಡುತ್ತಿದ್ದ ಈ ತಿನಿಸು ಇಂದು ಇಡ್ಲಿಯ ಜತೆ ಒಳ್ಳೇ ಕಾಂಬಿನೇಷನ್. ಕರ್ನಾಟಕದ ಎಲ್ಲ ಹೋಟೆಲ್ಗಳಲ್ಲೂ ದೊರಕುವ ದಿನನಿತ್ಯದ ತಿಂಡಿ.
ವಡೆ - ಪಾಯಸ ಕೂಡ ಸೊಗಸಾದ ಕಾಂಬಿನೇಷನ್. ಗರಿಗರಿಯಾದ ವಡೆ ತಿನ್ನಲು ರುಚಿಯೋ ರುಚಿ. ವಡೆಯಾಂದಿಗೆ, ಕಾಯಿ ಚಟ್ನಿ, ಒಳ್ಳೆ ಈರುಳ್ಳಿ ಸಾಂಬರ್ ಇದ್ದರಂತೂ ಅದರ ಗಮ್ಮತ್ತೇ ಬೇರೆ. ಬಾಯಿಯಲ್ಲಿ ನೀರೂರಿತೆ? ತಡವೇಕೆ, ವಡೆ ಮಾಡಲು ತಯಾರಾಗಿ.
ವಡೆ ತಯಾರಿಕೆಗೆ ಬೇಕಾಗುವ ಸಾಮಾನು : ಅರ್ಧ ಕೆ.ಜಿ. ಉದ್ದಿನ ಬೇಳೆ, ಹದವಾಗಿ ಉಪ್ಪು, ಒಂದು ಪುಟ್ಟ ಹಿಡಿ ಮೆಣಸು, ಚಿಟಿಕೆ ಅಡಿಗೆ ಸೋಡ, ಕರೆಯಲು ಪುಟ್ಟ ಬಾಣಲೆ ತುಂಬ ಎಣ್ಣೆ.
ಮಾಡುವ ವಿಧಾನ : ಮೊದಲು ಉದ್ದಿನಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಮೂರ್ನಾಲ್ಕು ಗಂಟೆ ನೀರಿನಲ್ಲಿ ನೆನೆಸಿ. ಬಳಿಕ ನೀರನ್ನು ಬೇರೆ ಪಾತ್ರೆಗೆ ಬಸಿದು ಆ ನೀರನ್ನು ಹೊರಗೆ ಚೆಲ್ಲಿ. (ಮನೆಯ ಸಿಂಕ್ ಅಥವಾ ಬಚ್ಚಲಲ್ಲಿ ಉದ್ದಿನಬೇಳೆ ನೆನೆಹಾಕಿ ತೊಳೆದ ನೀರು ಚೆಲ್ಲ ಬೇಡಿ. ಉದ್ದಿನ ಬೇಳೆ ತೊಳೆದ ನೀರು ದುರ್ವಾಸನೆ ಬೀರುತ್ತದೆ).
ನೀರು ಬಸಿದ ನಂತರ ನೆನೆದ ಉದ್ದಿನ ಬೇಳೆಗೆ ಹದವಾಗಿ ಉಪ್ಪು ಬೆರೆಸಿ. ಆನಂತರ ಮಿಕ್ಸಿಯಲ್ಲಿ ಇಲ್ಲವೇ ಟಿಲ್ಟಿಂಗ್ ವೆಟ್ ಗ್ರೆೃಂಡರ್ ಅಥವಾ ಒರಳುಕಲ್ಲಿನಲ್ಲಿ ಚೆನ್ನಾಗಿ, ನುಣುಪಾಗಿ ರುಬ್ಬಿ. ಆಗ ಹದವಾದ ಹಿಟ್ಟು ಸಿದ್ಧವಾಗುತ್ತದೆ. ಅದಕ್ಕೆ ಕಾಳು ಮೆಣಸು , ಸೋಡಾ ಹಾಕಿ ಕಲಸಿಡಿ. (ಕುಟ್ಟಿ ಪುಡಿ ಮಾಡಿ ಹಾಕಿದರೂ ಅಡ್ಡಿ ಇಲ್ಲ).
ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ, ಹಿಟ್ಟನ್ನು ಗುಂಡಗೆ ಮಾಡಿ, ಮಧ್ಯ ರಂಧ್ರ ಕೊರೆದು, ಎಣ್ಣೆಯಲ್ಲಿ ಹಾಕಿ ಕರಿಯಿರಿ. ಜಾಲರಿಯ ಸೌಟಿನಲ್ಲಿ ಕರಿದ ವಡೆ ತೆಗೆದು, ಎಣ್ಣೆ ಜರಡಿ ಪಾತ್ರೆಯಲ್ಲಿ ಹಾಕಿ. ವಡೆ ಸ್ವಲ್ಪ ಆರಿದ ನಂತರ ಹಾಗೂ ಎಣ್ಣೆ ಇಳಿದ ನಂತರ, ಸಾಂಬರ್ನೊಂದಿಗೆ ಇಲ್ಲವೇ ಕಾಯಿಚಟ್ನಿಯಾಂದಿಗೆ ತಿನ್ನಲು ತಯಾರಾಗಿ.
ಎಚ್ಚರ! ವಡೆ ತಿನ್ನುವುದು ಮಜ. ನೆಪ್ಪಿಡಿ, ಅದು ವಾಯು!!



Click it and Unblock the Notifications