Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆಹಾ! ಉದ್ದಿನ ವಡೆ

ಇಡ್ಲಿ .. ವಡೆ.. ಸಾಂಬರ್ ರುಚಿಯಾಗಿ ಮಾಡೋ ಬಟ್ಲರ್, ನಾನೇ ಆಲ್ಸೋ ಸಿಂಗರ್, ಈ ನಾಡಿಗೆ ನಾನೇ ಸೂಪರ್ ಎಂದು ಹಾಸ್ಯನಟ ದಿನೇಶ್ ಪ್ರಚಂಡ ಪುಟಾಣಿಗಳು ಚಿತ್ರದಲ್ಲಿ ಹಾಡಿ ಕುಣಿದಿದ್ದರು. ವಡೆ ಒಂದು ಸ್ವಾದಿಷ್ಟ ಹಾಗೂ ಪೌಷ್ಟಿಕ ಆಹಾರ. ಸಾಮಾನ್ಯವಾಗಿ ಬ್ರಾಹ್ಮಣರ ಮನೆಯಲ್ಲಿ ತಿಥಿಯ (ಶ್ರಾದ್ಧ) ದಿನ ಹಿರಿಯರ ಪ್ರಸಾದ ಎಂದು ಮಾಡುತ್ತಿದ್ದ ಈ ತಿನಿಸು ಇಂದು ಇಡ್ಲಿಯ ಜತೆ ಒಳ್ಳೇ ಕಾಂಬಿನೇಷನ್. ಕರ್ನಾಟಕದ ಎಲ್ಲ ಹೋಟೆಲ್ಗಳಲ್ಲೂ ದೊರಕುವ ದಿನನಿತ್ಯದ ತಿಂಡಿ.
ವಡೆ - ಪಾಯಸ ಕೂಡ ಸೊಗಸಾದ ಕಾಂಬಿನೇಷನ್. ಗರಿಗರಿಯಾದ ವಡೆ ತಿನ್ನಲು ರುಚಿಯೋ ರುಚಿ. ವಡೆಯಾಂದಿಗೆ, ಕಾಯಿ ಚಟ್ನಿ, ಒಳ್ಳೆ ಈರುಳ್ಳಿ ಸಾಂಬರ್ ಇದ್ದರಂತೂ ಅದರ ಗಮ್ಮತ್ತೇ ಬೇರೆ. ಬಾಯಿಯಲ್ಲಿ ನೀರೂರಿತೆ? ತಡವೇಕೆ, ವಡೆ ಮಾಡಲು ತಯಾರಾಗಿ.
ವಡೆ ತಯಾರಿಕೆಗೆ ಬೇಕಾಗುವ ಸಾಮಾನು : ಅರ್ಧ ಕೆ.ಜಿ. ಉದ್ದಿನ ಬೇಳೆ, ಹದವಾಗಿ ಉಪ್ಪು, ಒಂದು ಪುಟ್ಟ ಹಿಡಿ ಮೆಣಸು, ಚಿಟಿಕೆ ಅಡಿಗೆ ಸೋಡ, ಕರೆಯಲು ಪುಟ್ಟ ಬಾಣಲೆ ತುಂಬ ಎಣ್ಣೆ.
ಮಾಡುವ ವಿಧಾನ : ಮೊದಲು ಉದ್ದಿನಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಮೂರ್ನಾಲ್ಕು ಗಂಟೆ ನೀರಿನಲ್ಲಿ ನೆನೆಸಿ. ಬಳಿಕ ನೀರನ್ನು ಬೇರೆ ಪಾತ್ರೆಗೆ ಬಸಿದು ಆ ನೀರನ್ನು ಹೊರಗೆ ಚೆಲ್ಲಿ. (ಮನೆಯ ಸಿಂಕ್ ಅಥವಾ ಬಚ್ಚಲಲ್ಲಿ ಉದ್ದಿನಬೇಳೆ ನೆನೆಹಾಕಿ ತೊಳೆದ ನೀರು ಚೆಲ್ಲ ಬೇಡಿ. ಉದ್ದಿನ ಬೇಳೆ ತೊಳೆದ ನೀರು ದುರ್ವಾಸನೆ ಬೀರುತ್ತದೆ).
ನೀರು ಬಸಿದ ನಂತರ ನೆನೆದ ಉದ್ದಿನ ಬೇಳೆಗೆ ಹದವಾಗಿ ಉಪ್ಪು ಬೆರೆಸಿ. ಆನಂತರ ಮಿಕ್ಸಿಯಲ್ಲಿ ಇಲ್ಲವೇ ಟಿಲ್ಟಿಂಗ್ ವೆಟ್ ಗ್ರೆೃಂಡರ್ ಅಥವಾ ಒರಳುಕಲ್ಲಿನಲ್ಲಿ ಚೆನ್ನಾಗಿ, ನುಣುಪಾಗಿ ರುಬ್ಬಿ. ಆಗ ಹದವಾದ ಹಿಟ್ಟು ಸಿದ್ಧವಾಗುತ್ತದೆ. ಅದಕ್ಕೆ ಕಾಳು ಮೆಣಸು , ಸೋಡಾ ಹಾಕಿ ಕಲಸಿಡಿ. (ಕುಟ್ಟಿ ಪುಡಿ ಮಾಡಿ ಹಾಕಿದರೂ ಅಡ್ಡಿ ಇಲ್ಲ).
ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ, ಹಿಟ್ಟನ್ನು ಗುಂಡಗೆ ಮಾಡಿ, ಮಧ್ಯ ರಂಧ್ರ ಕೊರೆದು, ಎಣ್ಣೆಯಲ್ಲಿ ಹಾಕಿ ಕರಿಯಿರಿ. ಜಾಲರಿಯ ಸೌಟಿನಲ್ಲಿ ಕರಿದ ವಡೆ ತೆಗೆದು, ಎಣ್ಣೆ ಜರಡಿ ಪಾತ್ರೆಯಲ್ಲಿ ಹಾಕಿ. ವಡೆ ಸ್ವಲ್ಪ ಆರಿದ ನಂತರ ಹಾಗೂ ಎಣ್ಣೆ ಇಳಿದ ನಂತರ, ಸಾಂಬರ್ನೊಂದಿಗೆ ಇಲ್ಲವೇ ಕಾಯಿಚಟ್ನಿಯಾಂದಿಗೆ ತಿನ್ನಲು ತಯಾರಾಗಿ.
ಎಚ್ಚರ! ವಡೆ ತಿನ್ನುವುದು ಮಜ. ನೆಪ್ಪಿಡಿ, ಅದು ವಾಯು!!



Click it and Unblock the Notifications
