Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಳೆಗಾಲದ ಸಂಜೆ ದೊಡ್ಡಪತ್ರೆ ಬೋಂಡಾ

* ನಿವೇದಿತಾ ಪ್ರಭಾಕರ್
ಬೇಕಾಗುವ ಪದಾರ್ಥಗಳು
ದೊಡ್ಡಪತ್ರೆ ಎಲೆಗಳು 15ರಿಂದ 20
ಈರುಳ್ಳಿ 2ರಿಂದ 3
ಕಡಲೆ ಹಿಟ್ಟು 1 ಬಟ್ಟಲು
ಮೈದಾ ಹಿಟ್ಟು ಕಾಲು ಬಟ್ಟಲು
ಅಕ್ಕಿ ಹಿಟ್ಟು ಕಾಲು ಬಟ್ಟಲು
ಮೊಸರು ಅರ್ಧ ಬಟ್ಟಲು
ಖಾರದ ಪುಡಿ 1 ಚಮಚ
ಕೊತ್ತಂಬರಿ ಮತ್ತು ಕರಿಬೇವು
ಜೀರಿಗೆ, ಇಂಗು, ಅರಿಷಿಣ, ತಿನ್ನುವ ಸೋಡಾ, ಉಪ್ಪು, ಕರಿಯಲು ಎಣ್ಣೆ
ಮಾಡುವ ವಿಧಾನ
ದೊಡ್ಡಪತ್ರೆ ಎಲೆಗಳನ್ನು ನೀರಿನಲ್ಲಿ ತೊಳೆದಿಟ್ಟುಕೊಳ್ಳಿ. ಈರುಳ್ಳಿಗಳನ್ನು ಉದ್ದುದ್ದಕ್ಕೆ ಹೆಚ್ಚಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ (ಈರುಳ್ಳಿಯನ್ನು ನೀರಲ್ಲಿ ಕೆಲಕಾಲ ನೆನೆಸಿ ಹೆಚ್ಚಿದರೆ ಕಣ್ಣೀರು ಬರುವುದಿಲ್ಲವಂತೆ, ಪ್ರಯೋಗಿಸಿದೆ. ಆದರೂ ಸ್ವಲ್ಪ ಕಣ್ಣೀರು ಬಂದೇ ಬಿಟ್ಟಿತು. ಕಣ್ಣೀರು ಬರದಿರಲು ಮತ್ತೇನಾದರೂ ಉಪಾಯವಿದ್ದರೆ ತಿಳಿಸಿ.)
ನಂತರ ಕಡಲೆ, ಮೈದಾ ಮತ್ತು ಅಕ್ಕಿ ಹಿಟ್ಟುಗಳನ್ನು ಸೇರಿಸಿ ಅದಕ್ಕೆ ಚಿಟಿಕೆಯಷ್ಟು ಜೀರಿಗೆ, ಇಂಗು, ಅರಿಷಿಣ, ತಿನ್ನುವ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಅದಕ್ಕೆ ನೀರು ಹಾಕಿ ತೀರಾ ಅಳ್ಳಕಾಗದ ಹಾಗೆ ಕಲಿಸಿಟ್ಟುಕೊಳ್ಳಿ. ಈ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನೂ ಬೆರೆಸಿರಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕುದಿಯಲು ಬಿಟ್ಟು, ಕುದಿಬಂದ ನಂತರ ದೊಡ್ಡಪತ್ರೆ ಎಲೆಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಒಂದೊಂದಾಗಿ ಅದ್ದಿ ನಾಲ್ಕಾರಂತೆ ಕರಿಯಿರಿ. ಕಂದುಬಣ್ಣಕ್ಕೆ ಬಂದನಂತರ ಎಣ್ಣೆಯನ್ನು ಸೋಸಿ ಬಿಸಿಯಿರುವಂತೆಯೇ ಮಳೆಗಾಲದ ಸಂಜೆ ಹೊತ್ತಿನ ತಣ್ಣನೆ ವಾತಾವರಣದಲ್ಲಿ ಕಾಫಿ ಅಥವಾ ಚಹಾದೊಂದಿಗೆ ಸೇವಿಸಿ.



Click it and Unblock the Notifications
