Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಪೂರಿ ಹಿಟ್ಟಿನಿಂದ ರುಚಿಕರ ಆಲೂ ಕಚೋರಿ

ಸೂಚನೆ: ಪೂರಿಯ ಮಿಶ್ರಣವನ್ನು ಮಾಡಿಡಬೇಕು.
ಬೇಕಾಗುವ ಸಾಮಾಗ್ರಿಗಳು:
1. ಆಲೂಗೆಡ್ಡೆ 8-10 (ಬೇಯಿಸಿದ್ದು)
2. ಆರ್ರೋರೂಟ್ 100 ಗ್ರಾಂ
3. ತುರಿದ ತೆಂಗಿನ ಕಾಯಿ 1 ಕಪ್
4. ಹೆಸರು ಬೇಳೆ (ರಾತ್ರಿಯಲ್ಲಿ ನೆನೆ ಹಾಕಿರಬೇಕು)
5. ಹಸಿಮೆಣಸಿ ಕಾಯಿ 5-6
6. ಒಣಗಿದ ಮಾವಿನ ಹಣ್ಣಿನ ಪುಡಿ 1 ಚಮಚ
7. ಚಿಟಿಕೆಯಷ್ಟು ಇಂಗು
8. ಎಣ್ಣೆ 1 ಕಪ್
9. ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಹೆಸರು ಬೇಳೆ ಮತ್ತು ಆಲೂಗೆಡ್ಡೆಯನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು. ಈಗ ಆಲೂಗೆಡ್ಡೆಯನ್ನು ಸೌಟ್ ನಿಂದ ಹಿಸುಕಬೇಕು.
2. ಆರ್ರೋರೂಟ್ ಅನ್ನು 2 ಗ್ಲಾಸ್ ನೀರಿನಲ್ಲಿ ಕಲಿಸಿ ಅದರಲ್ಲಿ ಚೆನ್ನಾಗಿ ಹಿಸುಕಿದ ಆಲೂಗೆಡ್ಡೆ ಹಾಕಿ ಚಿಟಿಕೆಯಷ್ಟು ಇಂಗು ಹಾಕಿ ಚೆನ್ನಾಗಿ ಕಲೆಸಬೇಕು.
3. ಈಗ ತುರಿದ ತೆಂಗಿನ ಕಾಯಿಯನ್ನು ಬೇಯಿಸಿದ ಹೆಸರು ಬೇಳೆ ಜೊತೆ ಮಿಶ್ರ ಮಾಡಿ, ಹಸಿಮೆಣಸಿನ ಕಾಯಿ ಕತ್ತರಿಸಿ ಹಾಕಬೇಕು.
4. ಈಗ ಪೂರಿಯ ಮಿಶ್ರಣದಿಂದ ಚಿಕ್ಕ ಪೂರಿ ರೀತಿ ಮಾಡಿ ಅದಕ್ಕೆ ಆಲೂಗೆಡ್ಡೆ ಮಿಶ್ರಣವನ್ನು ಹಾಕಿ ಹರಡಬೇಕು, ನಂತರ ಒಂದು ಚಮಚದಷ್ಟು ಬೇಯಿಸಿದ ಬೇಳೆ ಮತ್ತು ತುರಿದ ತೆಂಗಿನಕಾಯಿ ಮಿಶ್ರಣವನ್ನು ಹಾಕಿ ಉಂಡೆ ಕಟ್ಟಬೇಕು.
5. ಬಾಣಲೆಯನ್ನು ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ಎಣ್ಣೆ ಕುದಿ ಬರಲಾರಂಭಿಸಿದಾಗ ಅದರಲ್ಲಿ ಈ ಉಂಡೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ಈಗ ರುಚಿಕರವಾದ ಆಲೂ ಕಚೋರಿ ರೆಡಿ. ಇದು ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications