Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಗರಮಾಗರಂ ಅವರೆಕಾಳು ನಿಪ್ಪಟ್ಟು

ಆದರೇನಂತೆ, ಚಳಿಗಾಲ ಮುಗಿಯುವ ಮೊದಲೇ ಬೆಚ್ಚನೆಯ ಸಂಜೆಗಳಿಗಾಗಿ ಅವರೆಕಾಯಿಯಂತೂ ಸಜ್ಜಾಗಿ ನಿಂತಿದೆ. ಬೆಂಗಳೂರಿನಲ್ಲೂ ಜ.7ರಿಂದ 11 ದಿನಗಳ ಕಾಲ ಅವರೆಸಂತೆ ತನ್ನ ಗದ್ದಲವನ್ನು ಎಬ್ಬಿಸಲಿದೆ. ಅವರೆಕಾಳಿನಿಂದ ನಾನಾಬಗೆಯ ತಿಂಡಿಗಳನ್ನು ಮಾಡಬಹುದೆಂದು ಅವರೆಸಂತೆ ಲೇಖನದಲ್ಲಿ ಓದಿಯಾಗಿದೆ. ಇನ್ನೇಕೆ ತಡ ಅವರೆಕಾಳಿನ ನಿಪ್ಪಟ್ಟನ್ನು ತಯಾರಿಸಿಬಿಡೋಣ.
ಈ ಪದಾರ್ಥಗಳನ್ನು ರೆಡಿಯಾಗಿಟ್ಟುಕೊಳ್ಳಿ :
ಸಂತೆಯಿಂದ ತಂದ ಎಳೆ ಅವರೆಕಾಳು 1 ಲೋಟ
ಅಕ್ಕಿಹಿಟ್ಟು 1 ಪಾವು
ಚಿರೋಟಿ ರವೆ 1 ಚಮಚ
ಮೈದಾಹಿಟ್ಟು 1 ಚಮಚ
ಹುರಿದ ಎಳ್ಳು 1 ಚಮಚ
ಚಿಟಿಕೆ ಜೀರಿಗೆ
ಕಾರದ ಪುಡಿ
ಒಣಕೊಬ್ಬರಿ ಅರ್ಧ ಲೋಟ
ಮತ್ತು ಕರಿಯಲು ಖಾದ್ಯತೈಲ
ತಯಾರಿಸುವ ವಿಧಾನ :
ಎಳೆ ಅವರೆಕಾಳುಗಳನ್ನು ಒಂದು ಲೋಟದಷ್ಟು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ. ನಂತರ ಅಕ್ಕಿಹಿಟ್ಟು ಮತ್ತು ಚಿರೋಟಿ ರವೆಯನ್ನು ಮಿಲಾಯಿಸಿ ಅದಕ್ಕೆ ಒಂದೇ ಒಂದು ಚಮಚದಷ್ಟು ಕಾದ ಎಣ್ಣೆ ಸುರಿದು ಹದವಾಗಿ ಕೈಯಾಡಿಸಿಕೊಳ್ಳಿ. ಅದಕ್ಕೆ ಬೇಯಿಸಿದ ಅವರೆಕಾಳು, ಮೈದಾಹಿಟ್ಟು, ಜೀರಿಗೆ, ಕಾರದ ಪುಡಿ, ಎಳ್ಳು ಮತ್ತು ಒಣಕೊಬ್ಬರಿ ಮತ್ತು ಉಪ್ಪನ್ನು ಬೆರೆಸಿ ಒಂದಿಷ್ಟು ನೀರಿನೊಂದಿಗೆ ಚೆನ್ನಾಗಿ ಕಲಿಸಿಟ್ಟುಕೊಳ್ಳಿ. ಇಷ್ಟು ಮಾಡಿಟ್ಟುಕೊಂಡರೆ ಕರಿಯಲು ಅವರೆಕಾಳು ನಿಪ್ಪಟ್ಟಿನ ಹಿಟ್ಟು ರೆಡಿಯಾದಂತೆ.
ಇಷ್ಟಾದನಂತರ ಒಂದು ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಖಾದ್ಯತೈಲವನ್ನು ಸುರುವಿ ಚೆನ್ನಾಗಿ ಕಾಯಿಸಿ. ಪ್ಲಾಸ್ಟಿಕ್ ಹಾಳೆಯ ಮೇಲೋ ಅಥವಾ ಬಾಳೆಎಲೆಯ ಮೇಲೋ ಕಲಿಸಿಟ್ಟುಕೊಂಡ ಹಿಟ್ಟನ್ನು ಕೈಯಿಂದ ತಟ್ಟಿ ಅದನ್ನು ಕಾದ ತೈಲದಲ್ಲಿ ತೇಲಿಬಿಡಿ. ತೂತುತೂತಿನ ಜಾಲರಿಯಿಂದ ಎಣ್ಣೆಯನ್ನು ತೇಲಿಬಿಟ್ಟ ಹಿಟ್ಟಿನ ಮೇಲೆ ಹರಡುತ್ತಿರಿ. ತಟ್ಟಿದ ಹಿಟ್ಟು ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಬಾಣಲೆಯಿಂದ ತೆಗೆದುಬಿಡಿ. ಅಷ್ಟೇ, ಗರಮಾಗರಂ ಅವರೆಕಾಳು ನಿಪ್ಪಟ್ಟು ರೆಡಿ.
ಬೇಕಿದ್ದರೆ ಬಿಸಿಬಿಸಿಯಿರುವಾಗಲೇ ಕಾಫಿ ಅಥವಾ ಚಹಾದೊಡನೆ ಸಂಜೆಯನ್ನು ಸಂತಸದಿಂದ ಕಳೆಯಿರಿ. ಇಲ್ಲದಿದ್ದರೆ, ಒಂದು ಡಬ್ಬದಲ್ಲಿ ಒಂದರ ಮೇಲೊಂದು ಪೇರಿಸಿಟ್ಟುಕೊಂಡರೆ ಹತ್ತುದಿನಗಳವರೆಗೆ ಗರಮಾಗರಂ ಅಲ್ಲದ ಕುರುಕುರು ನಿಪ್ಪಟ್ಟನ್ನು ಯಾವಾಗಬೇಕೆಂದಾಗ ಮೆಲ್ಲಬಹುದು.



Click it and Unblock the Notifications