Just In
- 42 min ago ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- 1 hr ago ವೃಷಭ ರಾಶಿಗೆ ಗುರು ಸಂಚಾರ: 11ನೇ ಮನೆಯಲ್ಲಿ ಗುರು ಕರ್ಕ ರಾಶಿಯವರಿಗೆ ಅದೃಷ್ಟವೋ ಅದೃಷ್ಟ
- 3 hrs ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 4 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
Don't Miss
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Movies 'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಓಣಂ 2019 ಸಂಭ್ರಮಕ್ಕೆ ಸಾತ್ ಕೊಡುವ-ಎರಿಶೇರಿ ರೆಸಿಪಿ
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾಂಬಾರು ಮತ್ತು ಸಾರು ಹೇಗೆಯೋ ಹಾಗೇ ಕೇರಳದಲ್ಲಿ ಎರಿಶೇರಿ ಅನ್ನದೊಡನೆ ಕಲಸಿ ತಿನ್ನುವ ಊಟದ ಎರಡನೆಯ ಮುಖ್ಯ ಭಾಗ. ಸಾಂಬಾರಿಗೂ ಎರಿಶೇರಿಗೂ ಖಾರದಲ್ಲಿ ಕೊಂಚ ವ್ಯತ್ಯಾಸ ಬಿಟ್ಟರೆ ಇನ್ನುಳಿದಂತೆ ತಯಾರಿಸಲು ಸರಿಸುಮಾರು ಸಾಂಬಾರಿನಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಆದರೆ ವ್ಯತ್ಯಾಸವೆಂದರೆ ಈ ಸಾರಿಸಲ್ಲಿ ಬೇಳೆಯ ಅಗತ್ಯವಿಲ್ಲ. ಬದಲಿಗೆ ಕುಂಬಳಕಾಯಿ ತುರಿಯನ್ನು ಬಳಸಲಾಗುತ್ತದೆ.
ಆದರೆ ರುಚಿಯ ಮಟ್ಟಿಗೆ ಮಾತ್ರ ಸಾಂಬಾರಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದ ಎರಿಶೇರಿ ಶತಮಾನಗಳಿಂದ ಕೇರಳೀಯರ ಮನೆಗಳ ವಿಶೇಷ ಸ್ವಾದವಾಗಿದ್ದು ಈಗ ನಿಮ್ಮ ಮನೆಯ ಸದಸ್ಯರ ನಾಲಿಗೆಗಳನ್ನೂ ಈಗ ಮೆಚ್ಚಿಸಬಹುದು. ಕೇರಳೀಯರು ಓಣಂ ಹಬ್ಬದ ಪ್ರಯುಕ್ತ ಈ ಸಾರನ್ನು ಓಣಂನ ವಿಶೇಷ ಅಡುಗೆಯ ಒಂದು ಭಾಗವಾಗಿ ಬಡಿಸುತ್ತಾರೆ.
ಈ
ಸಾಲಿನ
ತಿರು
ಓಣಂ
11ರಂದು
ಆಚರಿಸಲಾಗುತ್ತಿದ್ದು,
ಈ
ಹಿನ್ನೆಲೆ
ರುಚಿಕರವಾದ
ಎರಿಶೇರಿ
ಸಾಂಬಾರು
ತಯಾರಿಸುವ
ವಿಧಾನವನ್ನು
ತಿಳಿಸಕೊಡಲಾಗುವುದು.
ಬನ್ನಿ,
ಓಣಂ
ಹಬ್ಬದ
ಪ್ರಯುಕ್ತ
ಈ
ಸ್ವಾದಿಷ್ಟ
ಸಾರನ್ನು
ಹೇಗೆ
ಮಾಡುವುದು
ಎಂಬುದನ್ನು
ನಾವೂ
ಕಲಿಯೋಣ.
ಓಣಂಗೆ
ಕೇರಳ
ಸ್ಪೆಷಲ್
ರೆಸಿಪಿ
ಪ್ರಮಾಣ:
ಮೂವರಿಗೆ,
ಒಂದು
ಹೊತ್ತಿಗಾಗುವಷ್ಟು
ಸಿದ್ಧತಾ
ಸಮಯ:
ಹದಿನೈದು
ನಿಮಿಷಗಳು
ತಯಾರಿಕಾ
ಸಮಯ:
ಹದಿನೈದು
ನಿಮಿಷಗಳು
ಅಗತ್ಯವಿರುವ
ಸಾಮಾಗ್ರಿಗಳು:
*ಕುಂಬಳಕಾಯಿ
-
ತುರಿದದ್ದು,
ಸುಮಾರು
ಇನ್ನೂರು
ಗ್ರಾಂ
*ಕಾಯಿತುರಿ:
ಒಂದು
ಕಪ್
*ಅರಿಶಿನ
ಪುಡಿ:
ಕಾಲು
ಟೀ
ಚಮಚ
*ಕೆಂಪು
ಮೆಣಸು:
ನಾಲ್ಕರಿಂದ
ಐದು
(ಬ್ಯಾಡಗಿ
ಮೆಣಸು,
ಕಾಶ್ಮೀರಿ
ಚಿಲ್ಲಿ
ಆದರೆ
ಆರು,
ಗಿಡ್ಡವಾದ
ಖಾರ
ಮೆಣಸಾದರೆ
ಎರಡೇ
ಸಾಕು)
*ಹಸಿಮೆಣಸು:
ಒಂದು
*ಸಾಸಿವೆ:
ಕಾಲು
ಟೀ
ಚಮಚ
*ಜೀರಿಗೆ:
ಒಂದು
ಚಿಕ್ಕ
ಚಮಚ
*ಉಪ್ಪು:
ರುಚಿಗನುಸಾರ
*ಮೆಣಸಿನ
ಪುಡಿ:
ಒಂದು
ಚಿಕ್ಕ
ಚಮಚ
*ಕರಿಬೇವಿನ
ಎಲೆ:
ಸುಮಾರು
ಹತ್ತು
*ಕೊತ್ತಂಬರಿ
ಸೊಪ್ಪು:
ಅರ್ಧ
ಕಟ್ಟು
*ಎಣ್ಣೆ:
ಒಂದು
ದೊಡ್ಡ
ಚಮಚ
ವಿಧಾನ:
*ಪ್ರೆಶರ್
ಕುಕ್ಕರ್ನಲ್ಲಿ
ಕೊಂಚ
ನೀರು
ಹಾಕಿ
ತುರಿದ
ಕುಂಬಳಕಾಯಿ,
ಮೆಣಸಿನ
ಪುಡಿ,
ಅರಿಸಿನ
ಮತ್ತು
ಉಪ್ಪು
ಹಾಕಿ
ಎರಡು
ಸೀಟಿ
ಬರುವವರೆಗೆ
ಬೇಯಿಸಿ
*ಅತ್ತ
ಕುಕ್ಕರ್
ಬೇಯುತ್ತಿದ್ದಂತೆ,
ಮಿಕ್ಸಿಯ
ದೊಡ್ಡ
ಜಾರ್ನಲ್ಲಿ
ಕಾಯಿತುರಿ,
ಜೀರಿಗೆ,
ಹಸಿಮೆಣಸು
ಹಾಕಿ
ನುಣ್ಣಗೆ
ಅರೆಯಿರಿ.
*ಒಂದು
ದಪ್ಪತಳದ
ಪಾತ್ರೆಯಲ್ಲಿ
ಎಣ್ಣೆ
ಹಾಕಿ
ಸಾಸಿವೆ
ಸಿಡಿಸಿ.
ಬಳಿಕ
ಒಣಮೆಣಸು,
ಕರಿಬೇವು
ಹಾಕಿ
ತಿರುವಿ.
*ಈಗ
ಬೇಯಿಸಿದ
ಕುಂಬಳ
ಕಾಯಿ
ಮತ್ತು
ಮಸಾಲೆಯನ್ನು
ಹಾಕಿ
ತಿರುವಿ,
ಇನ್ನೂ
ಕೊಂಚ
ಉಪ್ಪು
ಹಾಕಿ.
*ನಿಮಗೆ
ಅಗತ್ಯವೆನಿಸಿದಷ್ಟು
ಹದಕ್ಕೆ
ನೀರು
ಹಾಕಿ
ಬೇಯಿಸಿ.
*ಸುಮಾರು
ಐದು
ನಿಮಿಷ
ಅಥವಾ
ಕುಂಬಳಕಾಯಿ
ಬೆಂದಿದೆ
ಅನ್ನಿಸುವವರೆಗೆ
ಬೇಯಿಸಿ
ಕೊತ್ತಂಬರಿ
ಸೊಪ್ಪು
ಸೇರಿಸಿ
ಕೆಳಗಿಳಿಸಿ.
ಕೊಂಚ
ಕಾಲ
ಮುಚ್ಚಳ
ತೆರೆದಿಡಿ.
*ಬಿಸಿಬಿಸಿಯಿದ್ದಂತೆಯೇ
ಅನ್ನದೊಡನೆ
ಬಡಿಸಿ.
ಸಲಹೆ:
*ಇದರಲ್ಲಿ
ಮೆಣಸು
ಹೆಚ್ಚಾಗಿರುವುದರಿಂದ
ಊಟದ
ಬಳಿಕ
ಮೊಸರು
ಅಥವಾ
ಮಜ್ಜಿಗೆಯನ್ನು
ಕಡ್ಡಾಯವಾಗಿ
ಸೇವಿಸಬೇಕು,
ಇಲ್ಲದಿದ್ದರೆ
ಮರುದಿನದ
ಬಹಿರ್ದೆಶೆ
ಉರಿ
ತರಿಸುತ್ತದೆ.
*ಕೊನೆಯದಾಗಿ
ಎರಿಶೇರಿ
ಹೇಗೆನ್ನಿಸಿತು?,
ಮನೆಯವರಿಗೆ
ಇಷ್ಟವಾಯಿತೋ
ಎಂದು
ನಮಗೆ
ತಿಳಿಸಿ.