ಮಂಗಳೂರು ಮಳೆ ಮದ್ದು : ಮಾವಿನ ಓಟೆ ಸಾರು

By ಶಕುಂತಲ ವೆಲೆನ್ಶಿಯ, ಮಂಗಳೂರು

Mango rasam, coastal karnataka recipe
ಮೂರು ದಿವಸಗಳಿಂದ ನಮ್ಮೂರಿನಲ್ಲಿ ಭಾರೀ ಮಳೆ ಬೀಳುತ್ತಿದೆ. ಛತ್ರಿ ರೈನ್ ಕೋಟು ಇದ್ದರೂ ಹೊರಗೆ ಹೋಗಲಾರದಷ್ಟು ಮಳೆ. ಮಕ್ಕಳಿಗೆ ಶಾಲಾ ರಜೆ, ಮನೆ ಯಜಮಾನರು ಆಫೀಸಿಗೆ ಚಕ್ಕರ್. ಕರೆಂಟು ಇದ್ದರೆ ಟಿವಿ ನೋಡುವುದು ಇಲ್ಲದಿದ್ದರೆ ಗ್ಯಾಸ್ ಸ್ಟೌವ್ ನಲ್ಲಿ ಬಗೆಬಗೆ ಅಡುಗೆ ಮಾಡಿ ಊಟ ಮಾಡಿ ಮಲಗುವುದೇ ದಿನಚರಿಯಾಗಿದೆ. ಬಿಸಿಬಿಸಿ ಅನ್ನಕ್ಕೆ ಸರಿಹೊಂದುವ ಕರಾವಳಿ ವಿಶೇಷ ಮಾವಿನಸಾರು ಬರೆದಿದ್ದೇನೆ.

ಮಾವಿನ ಓಟೆ ಸಾರು (ಸೀಸನಲ್) : ಮಾವಿನಹಣ್ಣನ್ನು ಹೆಚ್ಚಿ ಹೋಳುಗಳನ್ನು ತಿಂದ ನಂತರ ಓಟೆಯನ್ನು ವ್ಯರ್ಥಮಾಡಬಾರದು. ಓಟೆಯನ್ನು ಫ್ರಿಜ್ ನಲ್ಲಿ ಇಟ್ಟಿರಬೇಕು. ಬಾಯಿರುಚಿಗೆ ಅಥವಾ ದಿಢೀರ್ ಎಂದು ಅತಿಥಿಗಳು ಮನೆಗೆ ಬಂದಾಗ ಸಾರು ಮಾಡಲು ಓಟೆ ಸಹಕಾರಿ.

ಮಾಡುವ ವಿಧಾನ : ಪಾತ್ರೆಯಲ್ಲಿ ನೀರು ಮತ್ತು ಓಟೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಓಟೆಯ ಎಲ್ಲಾ ರಸ ನೀರಿಗೆ ಇಳಿದನಂತರ ಓಟೆಯನ್ನು ತೆಗೆದು ಬಿಸಾಕಬೇಕು. ಮಾವಿನ ಬಿಸಿರಸಕ್ಕೆ ಬೆರೆಸುವ ಒಗ್ಗರಣೆಗೆ ಪದಾರ್ಥಗಳ ಪಟ್ಟಿ ಹೀಗಿದೆ : ಎಣ್ಣೆ ಅಥವಾ ತುಪ್ಪ, ಸಾಸಿವೆ, ಜೀರಿಗೆ, ಕರಿಬೇವು, ಸ್ವಲ್ಪ ಬೆಲ್ಲ, ಇಂಗು ಮತ್ತು ಉಪ್ಪು.

Story first published: Tuesday, July 7, 2009, 12:51 [IST]
X
Desktop Bottom Promotion