Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್

ನೋಡಿ, ಮಕ್ಕಳಿಗೆ ಚಿಕ್ಕವರಾಗಿದ್ದಾಗಲೇ ಹೊಟೇಲಿನ ರುಚಿ ಹಚ್ಚಿಸಿದರೆ ಮನೇಲಿ ಮಾಡಿದ್ದು ರುಚಿಸೋದೆ ಇಲ್ಲ. ಹೊಟೇಲಿಂದು ರುಚಿ ಅಷ್ಟಕ್ಕಷ್ಟೇ ಇದ್ದರೂ ಅದರ ರುಚಿಯ ಮುಂದೆ ಮನೆರುಚಿ ಡಲ್ಲು ಹೊಡೆದಿರುತ್ತದೆ. ಕೊನೆಗೆ, ಪುಟಾಣಿಗೆ ಹೊಟೇಲಿಂದಲೇ ಸಾಂಬಾರು ತಂದು ತಿನ್ನಿಸಿದರೆನ್ನಿ. ನಂತರ, ಹೊಟೇಲಲ್ಲಿ ಮಾಡೋದಕ್ಕಿಂದ ಸಖತ್ತಾಗಿರೋ ಸಾಂಬಾರು ಮಾಡೋದು ಹೇಗೆಂದು ನಾನೇ ಅವರಿಗೆ ಹೇಳಿಕೊಟ್ಟೆ.
ನೀವು ಕೂಡ ಎಷ್ಟೋ ಬಾರಿ ಅನೇಕ ಬಗೆಯ ಸಾಂಬಾರುಗಳನ್ನು ಮಾಡಿರುತ್ತೀರಿ. ಆದರೆ, ಅದೆಷ್ಟೇ ಲಾಗ ಹೊಡೆದರೂ ಹೊಟೇಲು ಸಾಂಬಾರು ರುಚಿ ಬಂದಿರುವುದಿಲ್ಲ. ಯಾಕೆ? ಜಾಸ್ತಿ ತಲೆಕೆಡಿಸಿಕೊಳ್ಳದೆ, ಇಲ್ಲಿದೆ ನೋಡಿ ಇಡ್ಲಿ ಸಾಂಬಾರು ತಯಾರಿಸುವ ಸೂಕ್ತ ವಿಧಾನ.
* ಭಾರತಿ ಎಚ್.ಎಸ್., ಬೆಂಗಳೂರು
ಬೇಕಾಗುವ ಸಾಮಾನುಗಳು
ತೊಗರಿಬೇಳೆ 1 ಬಟ್ಟಲು
ಹೆಚ್ಚಿದ ತರಕಾರಿ ಒಂದು ಬಟ್ಟಲು [ಕ್ಯಾರೆಟ್, ಹುರುಳಿಕಾಯಿ, ಆಲೂಗೆದ್ದೆ, ಟೊಮೆಟೋ]
ಬೆಲ್ಲ ಅರ್ಧ ಚಮಚ
ಹೆಚ್ಚಿದ ಈರುಳ್ಳಿ 2
ಕರಿಬೇವು, ಕೊತಂಬರಿ ಸೊಪ್ಪು
ಎಣ್ಣೆ 2 ಚಮಚ
ಇಂಗು ಚಿಟಿಕಿ
ರುಚಿಗೆ ತಕ್ಕಷ್ಟು ಉಪ್ಪು.
[ಕಡಲೆಬೇಳೆ 1 ಚಮಚ, ಉದ್ದಿನಬೇಳೆ 1 ಚಮಚ, ಬ್ಯಾಡಗಿ ಮೆಣಸಿನಕಾಯಿ 8, ದನಿಯ 2 ಚಮಚ, ಕೊಬ್ಬರಿ ತುರಿ ಒಂದು ಚಮಚ, ಚಕ್ಕೆ 2, ಲವಂಗ 4 , ಚಿಟಿಕಿ ಇಂಗು, ಇದೆಲ್ಲವನ್ನು ಹುರಿದು ಪುಡಿ ಮಾಡಿತ್ತು ಕೊಳ್ಳಿ.]
ಮಾಡುವ ವಿಧಾನ
ಕುಕ್ಕರ್ ನಲ್ಲಿ ತೊಗರಿಬೇಳೆ ಮತ್ತು ತರಕಾರಿಯನ್ನು ಬೇಯಿಸಿಟ್ಟುಕೊಳ್ಳಿ. ಬೇಯಿಸುವ ಮುನ್ನ ಬೇಳೆಯನ್ನು ಹತ್ತು ನಿಮಿಷ ನೀರಲ್ಲಿ ನೆನೆಸಿಡಿ.
ನಂತರ ಸಣ್ಣ ಉರಿಯ ಮೇಲೆ ಒಂದು ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚಟಪಟ ಅನ್ನಿಸಿಬಿಡಿ. ವಗ್ಗರಣೆ ಹೊತ್ತುವ ಮುನ್ನ ಇಂಗು, ಸ್ವಲ್ಪ ದೊಡ್ಡದಾಗಿ ಹೆಚ್ಚಿಟ್ಟುಕೊಂಡು ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕೈಯಾಡಿಸಿ.
ಇದಕ್ಕೆ ಬೇಯಿಸಿಟ್ಟುಕೊಂಡ ಬೇಳೆ ಮತ್ತು ತರಕಾರಿಯನ್ನು ಸುರುವಿ, ಅದರ ಹಿಂದೆಯೇ ಪುಡಿ ಮಾಡಿಟ್ಟುಕೊಂಡ ಪದಾರ್ಥವನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಿ. ಕುದಿ ಬರುತ್ತಿದ್ದಂತೆ ಹುಣಸೆಹುಳಿ, ಕರಣೆ ಬೆಲ್ಲ ಮುಳುಗಿಸಿ ಮತ್ತೆ ಕುದಿಸಿರಿ. ದಟ್ಸಾಲ್. ನೆನಪಿಡಿ, ಇದು ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್.



Click it and Unblock the Notifications