Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್

ನೋಡಿ, ಮಕ್ಕಳಿಗೆ ಚಿಕ್ಕವರಾಗಿದ್ದಾಗಲೇ ಹೊಟೇಲಿನ ರುಚಿ ಹಚ್ಚಿಸಿದರೆ ಮನೇಲಿ ಮಾಡಿದ್ದು ರುಚಿಸೋದೆ ಇಲ್ಲ. ಹೊಟೇಲಿಂದು ರುಚಿ ಅಷ್ಟಕ್ಕಷ್ಟೇ ಇದ್ದರೂ ಅದರ ರುಚಿಯ ಮುಂದೆ ಮನೆರುಚಿ ಡಲ್ಲು ಹೊಡೆದಿರುತ್ತದೆ. ಕೊನೆಗೆ, ಪುಟಾಣಿಗೆ ಹೊಟೇಲಿಂದಲೇ ಸಾಂಬಾರು ತಂದು ತಿನ್ನಿಸಿದರೆನ್ನಿ. ನಂತರ, ಹೊಟೇಲಲ್ಲಿ ಮಾಡೋದಕ್ಕಿಂದ ಸಖತ್ತಾಗಿರೋ ಸಾಂಬಾರು ಮಾಡೋದು ಹೇಗೆಂದು ನಾನೇ ಅವರಿಗೆ ಹೇಳಿಕೊಟ್ಟೆ.
ನೀವು ಕೂಡ ಎಷ್ಟೋ ಬಾರಿ ಅನೇಕ ಬಗೆಯ ಸಾಂಬಾರುಗಳನ್ನು ಮಾಡಿರುತ್ತೀರಿ. ಆದರೆ, ಅದೆಷ್ಟೇ ಲಾಗ ಹೊಡೆದರೂ ಹೊಟೇಲು ಸಾಂಬಾರು ರುಚಿ ಬಂದಿರುವುದಿಲ್ಲ. ಯಾಕೆ? ಜಾಸ್ತಿ ತಲೆಕೆಡಿಸಿಕೊಳ್ಳದೆ, ಇಲ್ಲಿದೆ ನೋಡಿ ಇಡ್ಲಿ ಸಾಂಬಾರು ತಯಾರಿಸುವ ಸೂಕ್ತ ವಿಧಾನ.
* ಭಾರತಿ ಎಚ್.ಎಸ್., ಬೆಂಗಳೂರು
ಬೇಕಾಗುವ ಸಾಮಾನುಗಳು
ತೊಗರಿಬೇಳೆ 1 ಬಟ್ಟಲು
ಹೆಚ್ಚಿದ ತರಕಾರಿ ಒಂದು ಬಟ್ಟಲು [ಕ್ಯಾರೆಟ್, ಹುರುಳಿಕಾಯಿ, ಆಲೂಗೆದ್ದೆ, ಟೊಮೆಟೋ]
ಬೆಲ್ಲ ಅರ್ಧ ಚಮಚ
ಹೆಚ್ಚಿದ ಈರುಳ್ಳಿ 2
ಕರಿಬೇವು, ಕೊತಂಬರಿ ಸೊಪ್ಪು
ಎಣ್ಣೆ 2 ಚಮಚ
ಇಂಗು ಚಿಟಿಕಿ
ರುಚಿಗೆ ತಕ್ಕಷ್ಟು ಉಪ್ಪು.
[ಕಡಲೆಬೇಳೆ 1 ಚಮಚ, ಉದ್ದಿನಬೇಳೆ 1 ಚಮಚ, ಬ್ಯಾಡಗಿ ಮೆಣಸಿನಕಾಯಿ 8, ದನಿಯ 2 ಚಮಚ, ಕೊಬ್ಬರಿ ತುರಿ ಒಂದು ಚಮಚ, ಚಕ್ಕೆ 2, ಲವಂಗ 4 , ಚಿಟಿಕಿ ಇಂಗು, ಇದೆಲ್ಲವನ್ನು ಹುರಿದು ಪುಡಿ ಮಾಡಿತ್ತು ಕೊಳ್ಳಿ.]
ಮಾಡುವ ವಿಧಾನ
ಕುಕ್ಕರ್ ನಲ್ಲಿ ತೊಗರಿಬೇಳೆ ಮತ್ತು ತರಕಾರಿಯನ್ನು ಬೇಯಿಸಿಟ್ಟುಕೊಳ್ಳಿ. ಬೇಯಿಸುವ ಮುನ್ನ ಬೇಳೆಯನ್ನು ಹತ್ತು ನಿಮಿಷ ನೀರಲ್ಲಿ ನೆನೆಸಿಡಿ.
ನಂತರ ಸಣ್ಣ ಉರಿಯ ಮೇಲೆ ಒಂದು ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚಟಪಟ ಅನ್ನಿಸಿಬಿಡಿ. ವಗ್ಗರಣೆ ಹೊತ್ತುವ ಮುನ್ನ ಇಂಗು, ಸ್ವಲ್ಪ ದೊಡ್ಡದಾಗಿ ಹೆಚ್ಚಿಟ್ಟುಕೊಂಡು ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕೈಯಾಡಿಸಿ.
ಇದಕ್ಕೆ ಬೇಯಿಸಿಟ್ಟುಕೊಂಡ ಬೇಳೆ ಮತ್ತು ತರಕಾರಿಯನ್ನು ಸುರುವಿ, ಅದರ ಹಿಂದೆಯೇ ಪುಡಿ ಮಾಡಿಟ್ಟುಕೊಂಡ ಪದಾರ್ಥವನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಿ. ಕುದಿ ಬರುತ್ತಿದ್ದಂತೆ ಹುಣಸೆಹುಳಿ, ಕರಣೆ ಬೆಲ್ಲ ಮುಳುಗಿಸಿ ಮತ್ತೆ ಕುದಿಸಿರಿ. ದಟ್ಸಾಲ್. ನೆನಪಿಡಿ, ಇದು ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್.



Click it and Unblock the Notifications