Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್

ನೋಡಿ, ಮಕ್ಕಳಿಗೆ ಚಿಕ್ಕವರಾಗಿದ್ದಾಗಲೇ ಹೊಟೇಲಿನ ರುಚಿ ಹಚ್ಚಿಸಿದರೆ ಮನೇಲಿ ಮಾಡಿದ್ದು ರುಚಿಸೋದೆ ಇಲ್ಲ. ಹೊಟೇಲಿಂದು ರುಚಿ ಅಷ್ಟಕ್ಕಷ್ಟೇ ಇದ್ದರೂ ಅದರ ರುಚಿಯ ಮುಂದೆ ಮನೆರುಚಿ ಡಲ್ಲು ಹೊಡೆದಿರುತ್ತದೆ. ಕೊನೆಗೆ, ಪುಟಾಣಿಗೆ ಹೊಟೇಲಿಂದಲೇ ಸಾಂಬಾರು ತಂದು ತಿನ್ನಿಸಿದರೆನ್ನಿ. ನಂತರ, ಹೊಟೇಲಲ್ಲಿ ಮಾಡೋದಕ್ಕಿಂದ ಸಖತ್ತಾಗಿರೋ ಸಾಂಬಾರು ಮಾಡೋದು ಹೇಗೆಂದು ನಾನೇ ಅವರಿಗೆ ಹೇಳಿಕೊಟ್ಟೆ.
ನೀವು ಕೂಡ ಎಷ್ಟೋ ಬಾರಿ ಅನೇಕ ಬಗೆಯ ಸಾಂಬಾರುಗಳನ್ನು ಮಾಡಿರುತ್ತೀರಿ. ಆದರೆ, ಅದೆಷ್ಟೇ ಲಾಗ ಹೊಡೆದರೂ ಹೊಟೇಲು ಸಾಂಬಾರು ರುಚಿ ಬಂದಿರುವುದಿಲ್ಲ. ಯಾಕೆ? ಜಾಸ್ತಿ ತಲೆಕೆಡಿಸಿಕೊಳ್ಳದೆ, ಇಲ್ಲಿದೆ ನೋಡಿ ಇಡ್ಲಿ ಸಾಂಬಾರು ತಯಾರಿಸುವ ಸೂಕ್ತ ವಿಧಾನ.
* ಭಾರತಿ ಎಚ್.ಎಸ್., ಬೆಂಗಳೂರು
ಬೇಕಾಗುವ ಸಾಮಾನುಗಳು
ತೊಗರಿಬೇಳೆ 1 ಬಟ್ಟಲು
ಹೆಚ್ಚಿದ ತರಕಾರಿ ಒಂದು ಬಟ್ಟಲು [ಕ್ಯಾರೆಟ್, ಹುರುಳಿಕಾಯಿ, ಆಲೂಗೆದ್ದೆ, ಟೊಮೆಟೋ]
ಬೆಲ್ಲ ಅರ್ಧ ಚಮಚ
ಹೆಚ್ಚಿದ ಈರುಳ್ಳಿ 2
ಕರಿಬೇವು, ಕೊತಂಬರಿ ಸೊಪ್ಪು
ಎಣ್ಣೆ 2 ಚಮಚ
ಇಂಗು ಚಿಟಿಕಿ
ರುಚಿಗೆ ತಕ್ಕಷ್ಟು ಉಪ್ಪು.
[ಕಡಲೆಬೇಳೆ 1 ಚಮಚ, ಉದ್ದಿನಬೇಳೆ 1 ಚಮಚ, ಬ್ಯಾಡಗಿ ಮೆಣಸಿನಕಾಯಿ 8, ದನಿಯ 2 ಚಮಚ, ಕೊಬ್ಬರಿ ತುರಿ ಒಂದು ಚಮಚ, ಚಕ್ಕೆ 2, ಲವಂಗ 4 , ಚಿಟಿಕಿ ಇಂಗು, ಇದೆಲ್ಲವನ್ನು ಹುರಿದು ಪುಡಿ ಮಾಡಿತ್ತು ಕೊಳ್ಳಿ.]
ಮಾಡುವ ವಿಧಾನ
ಕುಕ್ಕರ್ ನಲ್ಲಿ ತೊಗರಿಬೇಳೆ ಮತ್ತು ತರಕಾರಿಯನ್ನು ಬೇಯಿಸಿಟ್ಟುಕೊಳ್ಳಿ. ಬೇಯಿಸುವ ಮುನ್ನ ಬೇಳೆಯನ್ನು ಹತ್ತು ನಿಮಿಷ ನೀರಲ್ಲಿ ನೆನೆಸಿಡಿ.
ನಂತರ ಸಣ್ಣ ಉರಿಯ ಮೇಲೆ ಒಂದು ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚಟಪಟ ಅನ್ನಿಸಿಬಿಡಿ. ವಗ್ಗರಣೆ ಹೊತ್ತುವ ಮುನ್ನ ಇಂಗು, ಸ್ವಲ್ಪ ದೊಡ್ಡದಾಗಿ ಹೆಚ್ಚಿಟ್ಟುಕೊಂಡು ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕೈಯಾಡಿಸಿ.
ಇದಕ್ಕೆ ಬೇಯಿಸಿಟ್ಟುಕೊಂಡ ಬೇಳೆ ಮತ್ತು ತರಕಾರಿಯನ್ನು ಸುರುವಿ, ಅದರ ಹಿಂದೆಯೇ ಪುಡಿ ಮಾಡಿಟ್ಟುಕೊಂಡ ಪದಾರ್ಥವನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಿ. ಕುದಿ ಬರುತ್ತಿದ್ದಂತೆ ಹುಣಸೆಹುಳಿ, ಕರಣೆ ಬೆಲ್ಲ ಮುಳುಗಿಸಿ ಮತ್ತೆ ಕುದಿಸಿರಿ. ದಟ್ಸಾಲ್. ನೆನಪಿಡಿ, ಇದು ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್.



Click it and Unblock the Notifications