Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್

ನೋಡಿ, ಮಕ್ಕಳಿಗೆ ಚಿಕ್ಕವರಾಗಿದ್ದಾಗಲೇ ಹೊಟೇಲಿನ ರುಚಿ ಹಚ್ಚಿಸಿದರೆ ಮನೇಲಿ ಮಾಡಿದ್ದು ರುಚಿಸೋದೆ ಇಲ್ಲ. ಹೊಟೇಲಿಂದು ರುಚಿ ಅಷ್ಟಕ್ಕಷ್ಟೇ ಇದ್ದರೂ ಅದರ ರುಚಿಯ ಮುಂದೆ ಮನೆರುಚಿ ಡಲ್ಲು ಹೊಡೆದಿರುತ್ತದೆ. ಕೊನೆಗೆ, ಪುಟಾಣಿಗೆ ಹೊಟೇಲಿಂದಲೇ ಸಾಂಬಾರು ತಂದು ತಿನ್ನಿಸಿದರೆನ್ನಿ. ನಂತರ, ಹೊಟೇಲಲ್ಲಿ ಮಾಡೋದಕ್ಕಿಂದ ಸಖತ್ತಾಗಿರೋ ಸಾಂಬಾರು ಮಾಡೋದು ಹೇಗೆಂದು ನಾನೇ ಅವರಿಗೆ ಹೇಳಿಕೊಟ್ಟೆ.
ನೀವು ಕೂಡ ಎಷ್ಟೋ ಬಾರಿ ಅನೇಕ ಬಗೆಯ ಸಾಂಬಾರುಗಳನ್ನು ಮಾಡಿರುತ್ತೀರಿ. ಆದರೆ, ಅದೆಷ್ಟೇ ಲಾಗ ಹೊಡೆದರೂ ಹೊಟೇಲು ಸಾಂಬಾರು ರುಚಿ ಬಂದಿರುವುದಿಲ್ಲ. ಯಾಕೆ? ಜಾಸ್ತಿ ತಲೆಕೆಡಿಸಿಕೊಳ್ಳದೆ, ಇಲ್ಲಿದೆ ನೋಡಿ ಇಡ್ಲಿ ಸಾಂಬಾರು ತಯಾರಿಸುವ ಸೂಕ್ತ ವಿಧಾನ.
* ಭಾರತಿ ಎಚ್.ಎಸ್., ಬೆಂಗಳೂರು
ಬೇಕಾಗುವ ಸಾಮಾನುಗಳು
ತೊಗರಿಬೇಳೆ 1 ಬಟ್ಟಲು
ಹೆಚ್ಚಿದ ತರಕಾರಿ ಒಂದು ಬಟ್ಟಲು [ಕ್ಯಾರೆಟ್, ಹುರುಳಿಕಾಯಿ, ಆಲೂಗೆದ್ದೆ, ಟೊಮೆಟೋ]
ಬೆಲ್ಲ ಅರ್ಧ ಚಮಚ
ಹೆಚ್ಚಿದ ಈರುಳ್ಳಿ 2
ಕರಿಬೇವು, ಕೊತಂಬರಿ ಸೊಪ್ಪು
ಎಣ್ಣೆ 2 ಚಮಚ
ಇಂಗು ಚಿಟಿಕಿ
ರುಚಿಗೆ ತಕ್ಕಷ್ಟು ಉಪ್ಪು.
[ಕಡಲೆಬೇಳೆ 1 ಚಮಚ, ಉದ್ದಿನಬೇಳೆ 1 ಚಮಚ, ಬ್ಯಾಡಗಿ ಮೆಣಸಿನಕಾಯಿ 8, ದನಿಯ 2 ಚಮಚ, ಕೊಬ್ಬರಿ ತುರಿ ಒಂದು ಚಮಚ, ಚಕ್ಕೆ 2, ಲವಂಗ 4 , ಚಿಟಿಕಿ ಇಂಗು, ಇದೆಲ್ಲವನ್ನು ಹುರಿದು ಪುಡಿ ಮಾಡಿತ್ತು ಕೊಳ್ಳಿ.]
ಮಾಡುವ ವಿಧಾನ
ಕುಕ್ಕರ್ ನಲ್ಲಿ ತೊಗರಿಬೇಳೆ ಮತ್ತು ತರಕಾರಿಯನ್ನು ಬೇಯಿಸಿಟ್ಟುಕೊಳ್ಳಿ. ಬೇಯಿಸುವ ಮುನ್ನ ಬೇಳೆಯನ್ನು ಹತ್ತು ನಿಮಿಷ ನೀರಲ್ಲಿ ನೆನೆಸಿಡಿ.
ನಂತರ ಸಣ್ಣ ಉರಿಯ ಮೇಲೆ ಒಂದು ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚಟಪಟ ಅನ್ನಿಸಿಬಿಡಿ. ವಗ್ಗರಣೆ ಹೊತ್ತುವ ಮುನ್ನ ಇಂಗು, ಸ್ವಲ್ಪ ದೊಡ್ಡದಾಗಿ ಹೆಚ್ಚಿಟ್ಟುಕೊಂಡು ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕೈಯಾಡಿಸಿ.
ಇದಕ್ಕೆ ಬೇಯಿಸಿಟ್ಟುಕೊಂಡ ಬೇಳೆ ಮತ್ತು ತರಕಾರಿಯನ್ನು ಸುರುವಿ, ಅದರ ಹಿಂದೆಯೇ ಪುಡಿ ಮಾಡಿಟ್ಟುಕೊಂಡ ಪದಾರ್ಥವನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಿ. ಕುದಿ ಬರುತ್ತಿದ್ದಂತೆ ಹುಣಸೆಹುಳಿ, ಕರಣೆ ಬೆಲ್ಲ ಮುಳುಗಿಸಿ ಮತ್ತೆ ಕುದಿಸಿರಿ. ದಟ್ಸಾಲ್. ನೆನಪಿಡಿ, ಇದು ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್.



Click it and Unblock the Notifications