Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಆರೋಗ್ಯಕ್ಕೆ ಒಳ್ಳೆಯದು ಕಿತ್ತಳೆ ಸಿಪ್ಪೆಯ ಗೊಜ್ಜು

ಆದರೆ ಇದರ ಸಿಪ್ಪೆಯಿಂದ ತಂಬುಳಿ, ಗೊಜ್ಜು ತಯಾರಿಸುವುದು ಮಲೆನಾಡಿನಲ್ಲಿ ಸಾಮಾನ್ಯ. ಸಿಪ್ಪೆಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಬಯೋಫ್ಲೇವೊನೈಡ್ಸ್ (bioflavonoids) ಎಂಬ antioxidant ಮತ್ತು ವಿಟಮಿನ್ ಸಿ ಇರುವುದರಿಂದ ಇದನ್ನು ಪದಾರ್ಥ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇವತ್ತು ಕಿತ್ತಳೆ ಸಿಪ್ಪೆಯಿಂದ ಗೊಜ್ಜು ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಗ್ರಿಗಳು:
* ಕಿತ್ತಳೆ ಸಿಪ್ಪೆ - ಕಿತ್ತಳೆ ಹಣ್ಣಿನ ಸಿಪ್ಪೆಯ ಕಾಲು ಭಾಗದಷ್ಟು
* ತೆಂಗಿನ ತುರಿ
* ಒಣಮೆಣಸಿನ ಕಾಯಿ 3
* ಉದ್ದಿನ ಬೇಳೆ 1 ಚಮಚ
* ಸಾಸಿವೆ 1 / 4 ಚಮಚ
* ಎಳ್ಳು 1 ಚಮಚ
* ಚಿಟಿಕೆಯಷ್ಟು ಇಂಗು
*ಎಣ್ಣೆ 2 ಚಮಚ
* ಹುಣಸೆ ಹಣ್ಣು - ಚಿಕ್ಕ ನಿಂಬೆ ಗಾತ್ರದಷ್ಟು
* ಬೆಲ್ಲ 3 ಚಮಚ
* ನೀರು
ಮಾಡುವ ವಿಧಾನ:
1. ಕಿತ್ತಳೆ ಸಿಪ್ಪೆಯನ್ನು 1 ಲೋಟದಷ್ಟು ಬಿಸಿನೀರಿನಲ್ಲಿ 5 ನಿಮಿಷ ಬೇಯಿಸಿಕೊಂಡು, ನೀರಿನಂಶವನ್ನು ಹಿಂಡಿ ತೆಗೆಯಬೇಕು.
2. ಎಣ್ಣೆ ಕಾಯಿಸಿ ಅದಕ್ಕೆ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಎಳ್ಳು, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದರೊಡನೆ ಬೇಯಿಸಿದ ಕಿತ್ತಳೆ ಸಿಪ್ಪೆ, ತೆಂಗಿನತುರಿ, ಹುಣಸೆಹಣ್ಣು ಸೇರಿಸಿ, ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.
3. ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಿಹಿಯಾಗುವಷ್ಟು ಬೆಲ್ಲ ಸೇರಿಸಿ ಐದು ನಿಮಿಷ ಚೆನ್ನಾಗಿ ಕುದಿಸಿ ಇಳಿಸಿದರೆ ಆರೋಗ್ಯಕರ ಮತ್ತು ರುಚಿಕರವಾದ ಪದಾರ್ಥ ರೆಡಿ.
ಈ ಗೊಜ್ಜು ಹಾಗೆಯೇ ಇಟ್ಟರೂ 2 ದಿನದವರೆಗೆ ಕೆಡುವುದಿಲ್ಲ. ಫ್ರಿಜ್ ನಲ್ಲಿಟ್ಟುಕೊಂಡರೆ ಒಂದು ವಾರದವರೆಗೂ ಉಪಯೋಗಿಸಬಹುದು.



Click it and Unblock the Notifications