Latest Updates
-
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ!
ದಪ್ಪ ಮೆಣಸಿನಕಾಯಿ ಬದನೇಕಾಯಿ ಗೊಜ್ಜು

* ಭಾರತಿ ಎಚ್ಎಸ್, ಬೆಂಗಳೂರು
ಬೇಕಾಗುವ ಸಾಮಾನುಗಳು;
ದಪ್ಪ ಮೆಣಸಿನಕಾಯಿ 4
ಬದನೇಕಾಯಿ 4
ಎಣ್ಣೆ 1/2 ಬಟ್ಟಲು
ಸಾಸಿವೆ 1 ಚಮಚ
ಕರಿಬೇವು 8 ಎಸಳು
ಈರುಳ್ಳಿ 1 ಉದ್ದಕ್ಕೆ ಹೆಚ್ಚಿದ್ದು
ಮಸಾಲೆ ರುಬ್ಬಲು ಸಾಮಾನುಗಳು;
ಈರುಳ್ಳಿ 2
ಬೆಳ್ಳುಳ್ಳಿ 8 ಎಸಳು
ಬ್ಯಾಡಗಿ ಮೆನಸಿನಕಾಯಿ 4 ಅಥವಾ ಅಚ್ಚಮೆಣಸಿನಪುಡಿ 1 ಚಮಚ
ದನಿಯಾ ಪುಡಿ 2 ಚಮಚ
ಸಾರಿನ ಪುಡಿ 1 ಚಮಚ
ಚಕ್ಕೆ 2
ಲವಂಗ 3
ಶುಂಠಿ 1 ಇಂಚು
ತೆಂಗಿನತುರಿ 1 ಬಟ್ಟಲು
ಕಡಲೆ 1 ಚಮಚ
ಗಸಗಸೆ 1/4 ಚಮಚ
ರುಚಿಗೆ ಉಪ್ಪು
ಮಾಡುವ ವಿಧಾನ;
ಮೊದಲಿಗೆ ಮಸಾಲೆ ಸಾಮಾನುಗಳನ್ನೆಲ್ಲ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಟ್ಟು ಕೊಂಡ ಮಿಶ್ರಣವನ್ನು ಎಣ್ಣೆಗಾಯಿ ಪಲ್ಯ ಮಾಡುವಾಗ ಕತ್ತರಿಸುವಂತೆ ದೊಡ್ಡ ಮೆಣಸಿನಕಾಯಿ ಮತ್ತು ಬದನೆಕಾಯಿಗಳನ್ನು ಕತ್ತರಿಸಿ ಅವುಗಳಲ್ಲಿ ತುಂಬಿಟ್ಟು ಕೊಳ್ಳಬೇಕು.
ಸಣ್ಣ ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ತಾಳಿಸಿರಿ. ಈರುಳ್ಳಿ ಕಂದುಬಣ್ಣಕ್ಕೆ ಬಂದನಂತರ ಮಸಾಲೆ ತುಂಬಿದ ಕಾಯಿಗಳನ್ನು ಹಾಕಿ ಮತ್ತೊಮ್ಮೆ ತಾಳಿಸಿ ನಿಮಗೆ ಬೇಕಾಗುವ ಹದಕ್ಕೆ ನೀರು ಹಾಕಿ.
ಕುಕ್ಕರ್ ಒಂದೇ ಒಂದು ಬಾರಿ ಸೀಟಿ ಹೊಡೆದರೆ ಸಾಕು ರುಚಿಕಟ್ಟಾದ ಗೊಜ್ಜು ಸಿದ್ದವಾಗಿರುತ್ತದೆ. ಈ ಗೊಜ್ಜನ್ನು ಚಪಾತಿ, ಪೂರಿ ಮತ್ತು ರೊಟ್ಟಿಯೊಂದಿಗೆ ತಿನ್ನಬಹುದು. ಬಿಸಿಬಿಸಿ ಅನ್ನ, ತುಪ್ಪದೊಡನೆಯೂ ಗೊಜ್ಜನ್ನು ಹೊಟ್ಟೆಗಿಳಿಸಬಹುದು.



Click it and Unblock the Notifications