Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಯಣ್ಗಾಯಿ ಬದನೆಕಾಯಿ ಪಲ್ಯ

ಅಗತ್ಯವಾಗಿ ಇಷ್ಟು ಬೇಕು :
ಚಿಕ್ಕ ಚಿಕ್ಕ ದುಂಡು ಬದನೆಕಾಯಿ - 6
ಈರುಳ್ಳಿ - 2
ಹುರಿದ ಕಡಲೆಕಾಯಿ ಬೀಜದ ಪುಡಿ - 3 ಟೇಬಲ್ಸ್ಪೂನ್
ತೆಂಗಿನ ತುರಿ
ಖಾರದ ಪುಡಿ - 1 ಟೇಬಲ್ ಸ್ಪೂನ್
ಗರಂ ಮಸಾಲ - 1 ಟೇಬಲ್ ಸ್ಪೂನ್
ಧನಿಯಾ ಪುಡಿ - 1 ಟೇಬಲ್ ಸ್ಪೂನ್
ಸಕ್ಕರೆ - 1 ಚಮಚ
ಬೆಳ್ಳುಳ್ಳಿ ಶುಂಠಿ ಚಟ್ನಿ (ಬೆಳ್ಳುಳ್ಳಿ ಬೇಕಿದ್ದರೆ) - 1 ಸ್ಪೂನ್
ಗಟ್ಟಿ ಮೊಸರು - 1/4 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 3 ಚಮಚ
ಮಾಡುವ ವಿಧಾನ :
1. ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಉದ್ದಕ್ಕೆ ಮಧ್ಯಭಾಗದಲ್ಲಿ ಸೀಳಿ. ತೊಟ್ಟು ಹಾಗೆಯೇ ಇರಲಿ. ಇದನ್ನು ಸ್ವಲ್ಪ ಉಪ್ಪು, ಅರಿಶಿನ ಬೆರೆಸಿದ ತಣ್ಣೀರಿನಲ್ಲಿ ಹಾಕಿಡಿ.
2. ಈರುಳ್ಳಿ ಸಣ್ಣಗೆ ಹೆಚ್ಚಿಕೊಳ್ಳಿ. ಹಸಿ ವಾಸನೆ ಇಷ್ಟ ಪಡದವರು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿಕೊಳ್ಳಬಹುದು.
3. ಈರುಳ್ಳಿ, ಕಾಯಿತುರಿ, ಸಕ್ಕರೆ, ಮಸಾಲೆ, ಕಡಲೆ ಕಾಯಿ ಬೀಜದ ಪುಡಿ, ಉಪ್ಪು ಮೊಸರಿನೊಂದಿಗೆ ಬೆರೆಸಿ ಚೆನ್ನಾಗಿ ಕಲಸಿ. ನಂತರ ಅದೆಲ್ಲವನ್ನು ಸೀಳಿದ ಬದನೆಕಾಯಿ ಒಳಗೆ ತುಂಬಿ.
4. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಹಾಕಿ ಬದನೆಕಾಯಿಗಳನ್ನು ತೊಟ್ಟು ಮೇಲೆ ಬರುವಂತೆ ಉದ್ದುದ್ದಕ್ಕೆ ನಿಲ್ಲಿಸಿ, ಮಿಕ್ಕ ಮಸಾಲೆಯನ್ನೂ ಸುತ್ತಲೂ ಹಾಕಿ ಮುಚ್ಚಳ ಮುಚ್ಚಿ. ಎರಡು ನಿಮಿಷಗಳಿಗೊಮ್ಮೆ ಮಸಾಲೆಯಾಂದಿಗೆ ಬದನೆಕಾಯಿಗಳನ್ನು ಮೆಲ್ಲಗೆ ತಿರುವಿ ಹಾಕುತ್ತಿರಿ(ನಿಮಗೆ ಗಟ್ಟಿ ಎನಿಸಿದಲ್ಲಿ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ). ಬದನೆಕಾಯಿ ಮಸಾಲೆಯಾಂದಿಗೆ ಬೆಂದು ಸ್ವಲ್ಪ ಮೃದುವಾದ ನಂತರ ಇಳಿಸಿ. ಕೊತ್ತಂಬರಿ, ಕರಿಬೇವು ಸೇರಿಸಿ.
ಕಾಯಿತುರಿ ಸ್ವಲ್ಪ ಜಾಸ್ತಿ ಇದ್ದರೆ ಈ ಪಲ್ಯದ ಸವಿಯ ಮಜಾನೆ ಬೇರೆ. ಬಿಸಿಯಾಗಿರುವಾಗಲೇ ಅನ್ನ, ಭಕ್ರಿ, ಚಪಾತಿಯಾಂದಿಗೆ ಸವಿಯಿರಿ.
(ಸೂಚನೆ : ಇದನ್ನು ಮಂದ ಉರಿಯಲ್ಲಿ ಬೇಯಿಸಬೇಕು)



Click it and Unblock the Notifications