Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಯಣ್ಗಾಯಿ ಬದನೆಕಾಯಿ ಪಲ್ಯ

ಅಗತ್ಯವಾಗಿ ಇಷ್ಟು ಬೇಕು :
ಚಿಕ್ಕ ಚಿಕ್ಕ ದುಂಡು ಬದನೆಕಾಯಿ - 6
ಈರುಳ್ಳಿ - 2
ಹುರಿದ ಕಡಲೆಕಾಯಿ ಬೀಜದ ಪುಡಿ - 3 ಟೇಬಲ್ಸ್ಪೂನ್
ತೆಂಗಿನ ತುರಿ
ಖಾರದ ಪುಡಿ - 1 ಟೇಬಲ್ ಸ್ಪೂನ್
ಗರಂ ಮಸಾಲ - 1 ಟೇಬಲ್ ಸ್ಪೂನ್
ಧನಿಯಾ ಪುಡಿ - 1 ಟೇಬಲ್ ಸ್ಪೂನ್
ಸಕ್ಕರೆ - 1 ಚಮಚ
ಬೆಳ್ಳುಳ್ಳಿ ಶುಂಠಿ ಚಟ್ನಿ (ಬೆಳ್ಳುಳ್ಳಿ ಬೇಕಿದ್ದರೆ) - 1 ಸ್ಪೂನ್
ಗಟ್ಟಿ ಮೊಸರು - 1/4 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 3 ಚಮಚ
ಮಾಡುವ ವಿಧಾನ :
1. ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಉದ್ದಕ್ಕೆ ಮಧ್ಯಭಾಗದಲ್ಲಿ ಸೀಳಿ. ತೊಟ್ಟು ಹಾಗೆಯೇ ಇರಲಿ. ಇದನ್ನು ಸ್ವಲ್ಪ ಉಪ್ಪು, ಅರಿಶಿನ ಬೆರೆಸಿದ ತಣ್ಣೀರಿನಲ್ಲಿ ಹಾಕಿಡಿ.
2. ಈರುಳ್ಳಿ ಸಣ್ಣಗೆ ಹೆಚ್ಚಿಕೊಳ್ಳಿ. ಹಸಿ ವಾಸನೆ ಇಷ್ಟ ಪಡದವರು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿಕೊಳ್ಳಬಹುದು.
3. ಈರುಳ್ಳಿ, ಕಾಯಿತುರಿ, ಸಕ್ಕರೆ, ಮಸಾಲೆ, ಕಡಲೆ ಕಾಯಿ ಬೀಜದ ಪುಡಿ, ಉಪ್ಪು ಮೊಸರಿನೊಂದಿಗೆ ಬೆರೆಸಿ ಚೆನ್ನಾಗಿ ಕಲಸಿ. ನಂತರ ಅದೆಲ್ಲವನ್ನು ಸೀಳಿದ ಬದನೆಕಾಯಿ ಒಳಗೆ ತುಂಬಿ.
4. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಹಾಕಿ ಬದನೆಕಾಯಿಗಳನ್ನು ತೊಟ್ಟು ಮೇಲೆ ಬರುವಂತೆ ಉದ್ದುದ್ದಕ್ಕೆ ನಿಲ್ಲಿಸಿ, ಮಿಕ್ಕ ಮಸಾಲೆಯನ್ನೂ ಸುತ್ತಲೂ ಹಾಕಿ ಮುಚ್ಚಳ ಮುಚ್ಚಿ. ಎರಡು ನಿಮಿಷಗಳಿಗೊಮ್ಮೆ ಮಸಾಲೆಯಾಂದಿಗೆ ಬದನೆಕಾಯಿಗಳನ್ನು ಮೆಲ್ಲಗೆ ತಿರುವಿ ಹಾಕುತ್ತಿರಿ(ನಿಮಗೆ ಗಟ್ಟಿ ಎನಿಸಿದಲ್ಲಿ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ). ಬದನೆಕಾಯಿ ಮಸಾಲೆಯಾಂದಿಗೆ ಬೆಂದು ಸ್ವಲ್ಪ ಮೃದುವಾದ ನಂತರ ಇಳಿಸಿ. ಕೊತ್ತಂಬರಿ, ಕರಿಬೇವು ಸೇರಿಸಿ.
ಕಾಯಿತುರಿ ಸ್ವಲ್ಪ ಜಾಸ್ತಿ ಇದ್ದರೆ ಈ ಪಲ್ಯದ ಸವಿಯ ಮಜಾನೆ ಬೇರೆ. ಬಿಸಿಯಾಗಿರುವಾಗಲೇ ಅನ್ನ, ಭಕ್ರಿ, ಚಪಾತಿಯಾಂದಿಗೆ ಸವಿಯಿರಿ.
(ಸೂಚನೆ : ಇದನ್ನು ಮಂದ ಉರಿಯಲ್ಲಿ ಬೇಯಿಸಬೇಕು)



Click it and Unblock the Notifications
