Latest Updates
-
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ
ಎಳ್ಳು ಬೆಲ್ಲದ ಬೆಂಡೇ ಗೊಜ್ಜು

ಬೇಕಾಗುವ ಪದಾರ್ಥಗಳು :
* ಬೇಯಿಸಿದ ಅರ್ಧ ಕೆಜಿ ತರಕಾರಿ
* ಸಿದ್ಧವಾಗಿರುವ ಎಳ್ಳುಬೆಲ್ಲದ ಮಿಶ್ರಣ ಒಂದು ಕಪ್
* ಹಸಿ ತೆಂಗಿನಕಾಯಿ ತುರಿ ಒಂದು ಕಪ್
* ಎರಡು ಚಮಚ ಹುಳಿಪುಡಿ ಅಥವಾ 5 ಹಸಿಮೆಣಸಿನಕಾಯಿ
* ಸ್ವಲ್ಪ ಹುಣಿಸೆಹಣ್ಣು, ತುಂಡು ಬೆಲ್ಲ, ಉಪ್ಪು
* ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು
ವಿಧಾನ :
ಎಳ್ಳುಬೆಲ್ಲದ ಮಿಶ್ರಣ, ತೆಂಗು, ಹುಣಿಸೆಹಣ್ಣು, ಹುಳಿಪುಡಿ, ಉಪ್ಪು ಮತ್ತು ಬೆಲ್ಲವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಗೆ ಹಾಕಿಕೊಳ್ಳುವುದು. ನುಣ್ಣಗೆ ರುಬ್ಬಿ ಚಟ್ನಿ ಆಗಬೇಕು. ಎರಡು ಚಮಚ ಅಕ್ಕಿ ಹಾಕಿಕೊಂಡು ರುಬ್ಬಿದರೆ ಗೊಜ್ಜಿಗೆ ಥಿಕ್ ನೆಸ್ ಬರತ್ತೆ. ಆನಂತರ ತವದಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಆಗಲಿ. ಇದಕ್ಕೆ ರುಬ್ಬಿಕೊಂಡಿರುವಂತಹ ಚಟ್ನಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು.
ಇದಕ್ಕೆ ಬೇಯಿಸಿದ ಬದನೆಕಾಯಿ ಅಥವಾ ಹುರುಳಿಕಾಯಿ ಅಥವಾ ಚೆನ್ನಾಗಿ ಹುರಿದುಕೊಂಡ ಬೆಂಡೇಕಾಯಿಯನ್ನು ಬೆರೆಸಿ ಪುನಃ ಕುದಿಸಬೇಕು. ಸಾಮಾನ್ಯವಾಗಿ ನಾವೆಲ್ಲ ಮಾಡುವ ಗೊಜ್ಜಿನ ರೆಸಿಪಿ ಇದು. ಆದರೆ, ಎಳ್ಳುಬೆಲ್ಲ ಮಿಶ್ರಣದ ರುಚಿ ಗೊಜ್ಜಿಗೆ ಹೊಸ ಅರ್ಥ ಹೊಸ ರುಚಿ ತಂದುಕೊಡುತ್ತದೆ. ಟ್ರೈ ಮಾಡಿ. ನಮ್ಮ ಮನೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಆದನಂತರ ಈ ಗೊಜ್ಜು ತಯಾರಿಸುವುದು ತಪ್ಪುವುದೇ ಇಲ್ಲ.



Click it and Unblock the Notifications