Latest Updates
-
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು
ರಾಯರ ಮಠದ ಘಮ ಘಮಿಸುವ ತಿಳಿಸಾರು ಮಾಡಿ! ಎಷ್ಟು ಸುಲಭ ಮಾಡೋದು ಗೊತ್ತಾ?
ನೀವು ಊಟದೊಂದಿಗೆ ಹಲವು ರೀತಿಯ ಸಾಂಬಾರ್, ರಸಂ ಮಾಡಿ ಸವಿದಿರುತ್ತೀರಿ. ಹಾಗೆ ನೀವು ರಸಂ ಇಷ್ಟಪಡುವ ಮಂದಿಯಾಗಿದ್ದರೆ ನೀವು ಯಾವಾಗಲು ಊಟದೊಂದಿಗೆ ರುಚಿ ರುಚಿಯ ರಸಂ ಮಾಡಿ ಸವಿಯುವುದು ನೋಡಬಹುದು. ಹಾಗೆ ನಾವು ದೇವಾಲಯಗಳಲ್ಲಿ ಸವಿಯುವ ರಸಂ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಏಕೆಂದರೆ ದೇವಾಲಯದಲ್ಲಿ ನೀಡುವ ರಸಂ ಅದ್ಭುತ ರುಚಿಯಲ್ಲಿರಲಿದೆ.
ನಾವು ಕೂಡ ದೇವಸ್ಥಾನದ ರುಚಿಯಲ್ಲಿ ಈ ರಸಂ ಸವಿಯಲು ಇಷ್ಟಪಟ್ಟು ಅದನ್ನು ಮನೆಯಲ್ಲೇ ಮಾಡಿ ಸವಿಯಲು ಮುಂದಾಗಿರುತ್ತೇವೆ. ಆದ್ರೆ ನಾವಿಂದು ರಾಯರ ಮಠದಲ್ಲಿ ನೀಡುವಂತಹ ರುಚಿ ರುಚಿಯ ತಿಳಿಸಾರು ಮಾಡುವ ಕುರಿತು ತಿಳಿದುಕೊಳ್ಳೋಣ. ಯಾವುದೇ ರಾಯರ ಮಠದಲ್ಲಿ ನೀವು ಊಟ ಸವಿದರೆ ಅಲ್ಲಿ ರುಚಿ ರುಚಿಯ ತಿಳಿಸಾರು ಸವಿದಿರುತ್ತೀರಿ.

ಈ ರುಚಿಯಲ್ಲಿ ಮನೆಯಲ್ಲೂ ಕೂಡ ತಿಳಿ ಸಾರು ಮಾಡಿ ಸವಿಯಬಹುದು. ಹಾಗಾದ್ರೆ ಈ ತಿಳಿಸಾರು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ತಿಳಿಸಾರು ಮಾಡಿದ್ರೆ ಮನೆಮಂದಿ ಎಲ್ಲರು ಇಷ್ಟಪಟ್ಟು ಸವಿಯುತ್ತಾರೆ. ರಾಯರ ಮಠದಲ್ಲಿನ ತಿಳಿಸಾರು ಘಮ ಘಮ ಎನ್ನುವ ರುಚಿ ನೀಡುತ್ತೆ.
ಹಾಗಾದ್ರೆ ಈ ಬೇಳೆ ತಿಳಿಸಾರು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದಕೊಳ್ಳೋಣ.
ರಾಯರ ಮಠದ ತಿಳಿ ಸಾರು ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ತೊಗರಿ ಬೇಳೆ
- ಅರಶಿಣ
- ಎಣ್ಣೆ
- ಸಾಸಿವೆ
- ಜೀರಿಗೆ
- ಇಂಗು ಕರಿಬೇವು
- ಒಣ ಮೆಣಸು
- ಕಾಳು ಮೆಣಸು ಮೆಂತ್ಯ
- ಧನಿಯಾ ಕಾಳು
- ಉಪ್ಪು
- ಹುಣಸೆ ಹುಳಿ
- ಬೆಲ್ಲ
ರಾಯರ ಮಠದ ತಿಳಿ ಸಾರು ಮಾಡುವುದು ಹೇಗೆ?
ಮೊದಲು ಅರ್ಧ ಕಪ್ ತೊಗರಿ ಬೇಳೆ ತೆಗೆದುಕೊಂಡು ತೊಳೆದು ಅನ್ನು ಕುಕ್ಕರ್ಗೆ ಹಾಕಿ ಬೇಳೆಯ 2 ಪಟ್ಟು ನೀರು, ಅರಶಿಣ, ಎಣ್ಣೆ ಹಾಕಿಕೊಂಡು ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ಸೀಟಿ ಹೊಡೆದ ಬಳಿಕ ಮುಚ್ಚಳ ತೆಗೆದು ಸ್ವಲ್ಪ ಪುಡಿ ಮಾಡಿಕೊಳ್ಳಬೇಕು. ನಂತರ ಮತ್ತೆ 3 ಕಪ್ ನೀರು ಹಾಕಿಕೊಂಡು ಕುದಿಯಲು ಬಿಡಿ.
ಈಗ ಬಾಣಲೆಯನ್ನ ಒಲೆ ಮೇಲೆ ಇಟ್ಟು ಅದಕ್ಕೆ ಒಣ ಮೆಣಸು, ಧನಿಯಾ ಕಾಳು, ಜೀರಿಗೆ, ಸಾಸಿವೆ, ಮೆಂತ್ಯ ಕಾಳು ಅರ್ಧ ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. 2 ನಿಮಿಷ ಹುರಿದು ಒಲೆ ಆಫ್ ಮಾಡಿ ತಣ್ಣಗಾಲು ಬಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
ಇನ್ನೊಂದು ಕಡೆ ಬೇಳೆಯನ್ನು ಕುದಿ ಬರಲು ಬಿಡಿ. ಅದಕ್ಕೆ ಉಪ್ಪು, ಚಿಕ್ಕ ಬೆಲ್ಲ, ಹುಣಸೆ ಹುಳಿಯ ನೀರು ಅಥವಾ ಪೇಸ್ಟ್ ಸಹ ಹಾಕಿಕೊಳ್ಳಬಹುದು. ಹಾಗೆ ಈಗ ರುಬ್ಬಿಕೊಂಡಿರುವ ಮಸಾಲೆಗಳ ಪುಡಿಯನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಕುದಿಬಂದ ಬಳಿಕ ಇದಕ್ಕೆ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಬಿಡಿ.
ಈಗ ಸಣ್ಣದಾಗಿ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ ಈ ತಿಳಿಸಾರಿನ ಜೊತೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ತಿಳಿಸಾರು ರೆಡಿಯಾಗಲಿದೆ. ಇದರ ಘಮ ಘಮ ಎನ್ನುವಂತಹ ರುಚಿಯು ನಿಮಗೆ ರಾಯರ ಮಟದ ತಿಳಿಸಾರನ್ನು ನೆನಪಿಸಲಿದೆ. ಒಮ್ಮೆ ಸವಿದರೆ ನೀವು ಪತ್ತೆ ಮತ್ತೆ ಮಾಡಿ ಸವಿಯೋದು ಖಚಿತ.



Click it and Unblock the Notifications