Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಪೌಷ್ಟಿಕತೆಯ ಆಗರ ಸೀತಾಫಲ
ಹಚ್ಚಹಸಿರಿನಿಂದ ಕೂಡಿದ ಸೀತಾಫಲದ ಗಿಡಗಳು ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುತ್ತವೆ. ಇದರ ಹಣ್ಣು ರುಚಿಕರ, ಎಷ್ಟೋ ಪೋಷಕಾಂಶಗಳ ಆಗರ. ಮಕ್ಕಳಿಗೆ ಸೀತಾಫಲದ ಹಣ್ಣನು ಹೆಚ್ಚುಹೆಚ್ಚಿಗೆ ತಿನ್ನಿಸಿ. ಇಷ್ಟಪಡದವರಿಗೆ ಮಿಲ್ಕ್ ಷೇಕ್ ಮಾಡಿ ಕೊಡಿ.
ಸೀತಾಫಲದಲ್ಲಿ ಅನ್ನಾಂಗಗಳು ಸಮೃದ್ಧಿಯಾಗಿದ್ದು ಸ್ವಲ್ಪ ಪ್ರಮಾಣದಲ್ಲಿ ಕೊಬ್ಬಿನ ಅಂಶವೂ ಅಡಕವಾಗಿದೆ. ಅನ್ನಾಂಗಗಳಾದ ಸಿ, ಬಿ6, ಮೆಗ್ನಿಷಿಯಂ, ಪೊಟಾಷಿಯಂ, ಅಲ್ಪ ಪ್ರಮಾಣದಲ್ಲಿ ಬಿ2, ಶರ್ಕರ ಪಿಷ್ಠಗಳು ದಂಡಿಯಾಗಿವೆ.
*ದಿನಕ್ಕೊಂದು ಸೀತಾಫಲ ಸೇವಿಸುವುದರಿಂದ ಆ ದಿನಕ್ಕಾಗುವ ಅನ್ನಾಂಗ 'ಸಿ' ದೇಹಕ್ಕೆ ಲಭಿಸುತ್ತದೆ.
*ದಿನವೊಂದಕ್ಕೆ ನಮ್ಮ ದೇಹಕ್ಕೆ ಅವಶ್ಯಕವಾದ ಮೆಗ್ನೀಷಿಯಂ ಸಹ ಪಡೆಯಬಹುದು. ಮೆಗ್ನೀಷಿಯಂಗೆ ಹೃದ್ರೋಗಗಳು ಬಾರದಂತೆ ಕಾಪಾಡುವ ಶಕ್ತಿ ಇದೆ. ಮೆಗ್ನೀಷಿಯಂ ನೊಂದಿಗೆ ರಾಗಿಯ ಅಂಶ ಸಹ ಸೀತಾಫಲದಲ್ಲಿ ಸಮೃದ್ಧಿಯಾಗಿದೆ. ಒತ್ತಡಕ್ಕೆ ಒಳಗಾದಾಗ, ಸೋಂಕು ರೋಗಗಳಿಂದ ರಕ್ಷಣೆ ಪಡೆಯಲು, ಫ್ರೀ ರಾಡಿಕಲ್ಸ್ ನ್ನ್ನು ನಿವಾರಿಸಿ ಕ್ಯಾನ್ಸರ್ ಬಾರದಂತೆ ತಡೆಯುವ ಶಕ್ತಿಯು ಇದೆ. ಚಿಕಿತ್ಸೆಯ ಬಳಿಕ ಗಾಯ ವಾಸಿಯಾಗಲು ಸೀತಾಫಲ ಎಷ್ಟೋ ಸಹಾಯಕಾರಿ.
ಇಷ್ಟೆಲ್ಲ ಸುಗುಣಗಳಿಂದ ತುಂಬಿರುವ ಸೀತಾಫಲವನ್ನು ತಿನ್ನಲು ಮಕ್ಕಳು ಅಷ್ಟಾಗಿ ಇಷ್ಟಪಡುವುದಿಲ್ಲ. ಅಂತಹವರಿಗಾಗಿ ಬಾಯಲ್ಲಿ ನೀರೂರಿಸುವ ಈ ಪೇಯವನ್ನು ಮಾಡಿಕೊಡಿ.
ಈ ಪೇಯ ಮಾಡಲು ದೊಡ್ಡ ಗಾತ್ರದ ಒಂದು ಸೀತಾಫಲ, ಒಂದು ಕಪ್ಪು ಹಾಲು, ಒಂದು ಕೋಳಿ ಮೊಟ್ಟೆ, ಎರಡು ಚಮಚ ಜೇನುತುಪ್ಪವನ್ನು ಸರಿಮಾಡಿಕೊಳ್ಳಿ. ಮೊದಲು ಸೀತಾಫಲದಲ್ಲಿನ ಬೀಜಗಳನ್ನು ಬೇರ್ಪಡಿಸಿ ತಿರುಳನ್ನು 5 ನಿಮಿಷಗಳ ಕಾಲ ಮಿಕ್ಸಿಗೆ ಹಾಕಿ ತಿರುವಿ ನಂತ ಪಕ್ಕಕ್ಕಿಡಿ. ದಪ್ಪತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ. ಮೊಟ್ಟೆಯನ್ನು ಒಡೆದು ಹಾಲಿಗೆ ಹಾಕಿ ಕಲೆಸಿ. ಇದಕ್ಕೆ ಜೇನು ತುಪ್ಪ ಹಾಗೂ ಮಿಕ್ಸಿಯಲ್ಲಿ ರುಬ್ಬಿಕೊಂಡ ಸೀತಾಫಲ ತಿರುಳನ್ನು ಹಾಕಿ. ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಾ ಕಲಕುತ್ತಿರಿ. ಸ್ವಲ್ಪ ಸಮಯದ ಬಳಿಕ ಒಲೆ ಮೇಲಿಂದ ಕೆಳಗಿಳಿಸಿ. ಸ್ವಲ್ಪ ಸಮಯ ಬಿಡಿ ತಣ್ಣಗಾಗುತ್ತದೆ ಬಳಿಕ ಫ್ರಿಜ್ ನಲ್ಲಿಟ್ಟು ಮತ್ತಷ್ಟು ತಣ್ಣಗಾದ ನಂತರ ಸೀತಾಫಲ ಪೇಯವನ್ನು ಕೊಡಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications