Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದೇವಾನುದೇವತೆಗಳೆ ‘ತಿಂಡಿಪೋತ’ರಾಗಿರುವಾಗ... (ಭಾಗ 1)
ದೇವರ ಉದಾಹರಣೆಗಳನ್ನು ಮುಂದಿಟ್ಟರೂ, ಇಷ್ಟೆಲ್ಲ ಮನವರಿಕೆ ಮಾಡಿಕೊಟ್ಟರೂ ಕೇವಲ ನಾನೊಬ್ಬನೆ ತಿಂಡಿಪೋತ ಅಲ್ಲ ಎಂಬುದನ್ನು ನನ್ನ ಹಠಮಾರಿ ಗೆಳೆಯಗೆಳತಿಯರು ಒಪ್ಪುವುದೇ ಇಲ್ಲ. ನನ್ನ ಕರ್ಮ!
ಎಲ್ಲರಿಗೂ ಒಂದಲ್ಲ ಒಂದು ಚಟ ಇರಬೇಕಾದ್ದು ಪ್ರಕೃತಿ ನಿಯಮ. ನನಗಂತೂ ತಿಂಡಿಯನ್ನು ಮೆಲುಕು ಹಾಕುತ್ತ ಇರುವುದೆಂದರೆ ಪಂಚಪ್ರಾಣ. ಈ ಒಳ್ಳೆಯ ಚಟವನ್ನು ಸೊಟ್ಟ ದೃಷ್ಟಿಯಿಂದ ಹಿಯ್ಯಾಳಿಸುತ್ತ ‘ತಿಂಡಿಪೋತ ಹಾಯ್.. ಹಾಯ್’ ಎಂದು ಗೆಳೆಯರೆನ್ನಿಸಿಕೊಂಡಿರುವ ಪಾಪಿಗಳು ಗೇಲಿ ಮಾಡುತ್ತಾರೆ.
ಇಡೀ ಪ್ರಪಂಚದಲ್ಲಿ ನಾನೊಬ್ಬನೇ ತಿಂಡಿಪೋತನೇ? ಬೇರೆ ಯಾರೂ ಈ ಹೆಗ್ಗಳಿಕೆಗೆ ಪಾಲುದಾರರು ಇಲ್ಲವೇ? ‘ದೇವಾನಂ ತಿಂಡಿ ಪ್ರಿಯಂಃ’ ಎಂಬ ಉಕ್ತಿ ಇವರ ಗಮನಕ್ಕೆ ಏಕೆ ಬರುವುದಿಲ್ಲ ಎಂದು ಸಂಕಟವಾಗುತ್ತದೆ ಹಾಗೂ ಈ ತಿಂಡಿ ಪಕ್ಷಪಾತಿಗಳ ಮೇಲೆ ಕಡುಕೋಪ ಬರುತ್ತೆ!
ಪುಟ್ಟ ಬಾಲಕೃಷ್ಣನ ಉದಾಹರಣೆ ತೆಗೆದುಕೊಳ್ಳಿ. ಅವನ ಜನ್ಮದಿನ, ಎಲ್ಲರೂ ಅದೆಷ್ಟು ವಿವಿಧ ತಿಂಡಿ ತಿನಿಸುಗ
ಳನ್ನು ನಿಷ್ಠೆಯಿಂದ ತಯಾರಿಸಿ ಭಕ್ತಿಪೂರ್ವಕವಾಗಿ ನೈವೇದ್ಯ ಮಾಡುತ್ತಾರೆ. ಚಕ್ಕುಲಿ, ತೆಂಗೊಳಲು, ಬೆಣ್ಣೆ ಮುರುಕು, ಕೋಡುಬಳೆ.. ಅಬ್ಬಬ್ಬ...ನಿಪ್ಪಟ್ಟು, ಹಪ್ಪಳ, ಸಂಡಿಗೆ, ಬೇಸಿನ್ ಉಂಡೆ.. ಛೇ ಯಾಕೆ ಇದನ್ನೆಲ್ಲ ಜ್ಞಾಪಿಸಿಕೊಂಡು ಬಾಯಿಯಲ್ಲಿ ನೀರು ತರಿಸಿಕೊಳ್ಳುವುದು.ಆಹಾ ! ಸತ್ಯನಾರಾಯಣನಿಗಂತೂ ಬೆಣ್ಣೆ ಕಾಯಿಸಿದ ತುಪ್ಪ, ಸಕ್ಕರೆ, ಬಾಳೆಹಣ್ಣು, ಪಚ್ಚ ಕರ್ಪೂರ, ಧಂಡಿಯಾಗಿ ದ್ರಾಕ್ಷಿ, ಗೋಡಂಬಿ, ರವೆಯ ಮಿಶ್ರಣದಿಂದ ತಯಾರಿಸಿದ ‘ಸಪಾದ ಭಕ್ಷ್ಯ’. ಈ ಪ್ರಸಾದ ತಿಂದ ಮೇಲೆ ಜಿಡ್ಡಿನ ಕೈಯನ್ನು ಸೀಗೆಪುಡಿಯಿಂದಲೇ ತೊಳೆದುಕೊಳ್ಳಬೇಕು. ಡೆಟಾಲ್ ಲಿಕ್ವಿಡ್ ಸೋಪು ಮಡಿಗೆ ಬರಲ್ಲ.
ತಿರುಪತಿ ತಿಮ್ಮಪ್ಪನಿಗೆ ಹಲ್ಲು ನೋವಿರಬಹುದೇನೋ ಎಂದು ನನಗೆ ಅನುಮಾನ. ಅವನಿಗೆ ಬಲು ಇಷ್ಟವಾಗಿರುವ, ಮೆತ್ತಗಿರುವ, ಘಮಘಮವೆನಿಸುವ ಲಾಡು ಉಂಡೆ- ಅದರಲ್ಲಿ ಒಂಬತ್ತು ಅಂಶ ಉತ್ತುತ್ತೆ, ಗೋಡಂಬಿ, ದ್ರಾಕ್ಷಿ, ಪಚ್ಚ ಕರ್ಪೂರ, ಜೇನು ತುಪ್ಪ, ಲವಂಗ ಮತ್ತು ಒಂದಂಶ ಲಾಡು ಕಾಳಿನ ಮಿಶ್ರಣದ ಉಂಡೆ. ಇನ್ನು ವಡೆ- ಅಯ್ಯಮ್ಮ ಇದನ್ನು ಪುಡಿ ಮಾಡಬೇಕಾದರೆ ಹಲ್ಲು ಪ್ರಯೋಜನಕ್ಕೆ ಬಾರದು. ಏನಿದ್ದರೂ ಎರಡಾದರೂ ಕಬ್ಬಿಣದ ಸುತ್ತಿಗೆ ಬೇಕು! ಈ ಕಟಕಲು ವಡೆಯನ್ನು ಭಕ್ತರಿಗೆ ದಾಟಿಸಿ, ತಾನು ಮಾತ್ರ ಲಘುವಾದ ಘಮ್ಮೆನಿಸುವ ಲಾಡು ಉಂಡೆಯ ರುಚಿಯನ್ನು ಆಸ್ವಾದಿಸುತ್ತಿದ್ದಾನೆ ಈ ನಮ್ಮ ತಿಮ್ಮಪ್ಪ !
ಇನ್ನು ಬುಸ್ಸ್ ನಾಗಪ್ಪ- ಅದೇ ಸುಬ್ರಹ್ಮಣ್ಯನಿಗೆ ಹದವಾಗಿ ಘಮ್ಮೆನಿಸುವ ಚಿಗುಳಿ, ತಂಬಿಟ್ಟು ಜೊತೆಗೆ ದಪ್ಪ ಕೆನೆಗಟ್ಟುವಂತೆ ಕಾಯಿಸಿದ ಹಾಲು- ಏನುಂಟು ಏನಿಲ್ಲ - ಇವುಗಳ ನಿವೇದನೆ. ಇತ್ತೀಚಿನ ಕೆಲವು ಕ್ರಾಂತಿಕಾರಿ ವಿಚಾರವಾದಿಗಳು ಹಾಲನ್ನು ಕೇವಲ ಬಡವರಿಗೆ ಮಾತ್ರ ಮೀಸಲಿಡಿ ಎಂಬ ಕೂಗಿನೊಂದಿಗೆ ನಾಗರಗಳಿಗೆ ಕೇವಲ ಮೊಟ್ಟೆಯನ್ನು ಮಾತ್ರ ನಿವೇದಿಸತಕ್ಕದ್ದೆಂದು ಆದೇಶ ಹೊರಡಿಸಿಬಿಟ್ಟಿದ್ದಾರಂತೆ.



Click it and Unblock the Notifications