Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಾನುದೇವತೆಗಳೆ ‘ತಿಂಡಿಪೋತ’ರಾಗಿರುವಾಗ... (ಭಾಗ 1)
ದೇವರ ಉದಾಹರಣೆಗಳನ್ನು ಮುಂದಿಟ್ಟರೂ, ಇಷ್ಟೆಲ್ಲ ಮನವರಿಕೆ ಮಾಡಿಕೊಟ್ಟರೂ ಕೇವಲ ನಾನೊಬ್ಬನೆ ತಿಂಡಿಪೋತ ಅಲ್ಲ ಎಂಬುದನ್ನು ನನ್ನ ಹಠಮಾರಿ ಗೆಳೆಯಗೆಳತಿಯರು ಒಪ್ಪುವುದೇ ಇಲ್ಲ. ನನ್ನ ಕರ್ಮ!
ಎಲ್ಲರಿಗೂ ಒಂದಲ್ಲ ಒಂದು ಚಟ ಇರಬೇಕಾದ್ದು ಪ್ರಕೃತಿ ನಿಯಮ. ನನಗಂತೂ ತಿಂಡಿಯನ್ನು ಮೆಲುಕು ಹಾಕುತ್ತ ಇರುವುದೆಂದರೆ ಪಂಚಪ್ರಾಣ. ಈ ಒಳ್ಳೆಯ ಚಟವನ್ನು ಸೊಟ್ಟ ದೃಷ್ಟಿಯಿಂದ ಹಿಯ್ಯಾಳಿಸುತ್ತ ‘ತಿಂಡಿಪೋತ ಹಾಯ್.. ಹಾಯ್’ ಎಂದು ಗೆಳೆಯರೆನ್ನಿಸಿಕೊಂಡಿರುವ ಪಾಪಿಗಳು ಗೇಲಿ ಮಾಡುತ್ತಾರೆ.
ಇಡೀ ಪ್ರಪಂಚದಲ್ಲಿ ನಾನೊಬ್ಬನೇ ತಿಂಡಿಪೋತನೇ? ಬೇರೆ ಯಾರೂ ಈ ಹೆಗ್ಗಳಿಕೆಗೆ ಪಾಲುದಾರರು ಇಲ್ಲವೇ? ‘ದೇವಾನಂ ತಿಂಡಿ ಪ್ರಿಯಂಃ’ ಎಂಬ ಉಕ್ತಿ ಇವರ ಗಮನಕ್ಕೆ ಏಕೆ ಬರುವುದಿಲ್ಲ ಎಂದು ಸಂಕಟವಾಗುತ್ತದೆ ಹಾಗೂ ಈ ತಿಂಡಿ ಪಕ್ಷಪಾತಿಗಳ ಮೇಲೆ ಕಡುಕೋಪ ಬರುತ್ತೆ!
ಪುಟ್ಟ ಬಾಲಕೃಷ್ಣನ ಉದಾಹರಣೆ ತೆಗೆದುಕೊಳ್ಳಿ. ಅವನ ಜನ್ಮದಿನ, ಎಲ್ಲರೂ ಅದೆಷ್ಟು ವಿವಿಧ ತಿಂಡಿ ತಿನಿಸುಗ
ಳನ್ನು ನಿಷ್ಠೆಯಿಂದ ತಯಾರಿಸಿ ಭಕ್ತಿಪೂರ್ವಕವಾಗಿ ನೈವೇದ್ಯ ಮಾಡುತ್ತಾರೆ. ಚಕ್ಕುಲಿ, ತೆಂಗೊಳಲು, ಬೆಣ್ಣೆ ಮುರುಕು, ಕೋಡುಬಳೆ.. ಅಬ್ಬಬ್ಬ...ನಿಪ್ಪಟ್ಟು, ಹಪ್ಪಳ, ಸಂಡಿಗೆ, ಬೇಸಿನ್ ಉಂಡೆ.. ಛೇ ಯಾಕೆ ಇದನ್ನೆಲ್ಲ ಜ್ಞಾಪಿಸಿಕೊಂಡು ಬಾಯಿಯಲ್ಲಿ ನೀರು ತರಿಸಿಕೊಳ್ಳುವುದು.ಆಹಾ ! ಸತ್ಯನಾರಾಯಣನಿಗಂತೂ ಬೆಣ್ಣೆ ಕಾಯಿಸಿದ ತುಪ್ಪ, ಸಕ್ಕರೆ, ಬಾಳೆಹಣ್ಣು, ಪಚ್ಚ ಕರ್ಪೂರ, ಧಂಡಿಯಾಗಿ ದ್ರಾಕ್ಷಿ, ಗೋಡಂಬಿ, ರವೆಯ ಮಿಶ್ರಣದಿಂದ ತಯಾರಿಸಿದ ‘ಸಪಾದ ಭಕ್ಷ್ಯ’. ಈ ಪ್ರಸಾದ ತಿಂದ ಮೇಲೆ ಜಿಡ್ಡಿನ ಕೈಯನ್ನು ಸೀಗೆಪುಡಿಯಿಂದಲೇ ತೊಳೆದುಕೊಳ್ಳಬೇಕು. ಡೆಟಾಲ್ ಲಿಕ್ವಿಡ್ ಸೋಪು ಮಡಿಗೆ ಬರಲ್ಲ.
ತಿರುಪತಿ ತಿಮ್ಮಪ್ಪನಿಗೆ ಹಲ್ಲು ನೋವಿರಬಹುದೇನೋ ಎಂದು ನನಗೆ ಅನುಮಾನ. ಅವನಿಗೆ ಬಲು ಇಷ್ಟವಾಗಿರುವ, ಮೆತ್ತಗಿರುವ, ಘಮಘಮವೆನಿಸುವ ಲಾಡು ಉಂಡೆ- ಅದರಲ್ಲಿ ಒಂಬತ್ತು ಅಂಶ ಉತ್ತುತ್ತೆ, ಗೋಡಂಬಿ, ದ್ರಾಕ್ಷಿ, ಪಚ್ಚ ಕರ್ಪೂರ, ಜೇನು ತುಪ್ಪ, ಲವಂಗ ಮತ್ತು ಒಂದಂಶ ಲಾಡು ಕಾಳಿನ ಮಿಶ್ರಣದ ಉಂಡೆ. ಇನ್ನು ವಡೆ- ಅಯ್ಯಮ್ಮ ಇದನ್ನು ಪುಡಿ ಮಾಡಬೇಕಾದರೆ ಹಲ್ಲು ಪ್ರಯೋಜನಕ್ಕೆ ಬಾರದು. ಏನಿದ್ದರೂ ಎರಡಾದರೂ ಕಬ್ಬಿಣದ ಸುತ್ತಿಗೆ ಬೇಕು! ಈ ಕಟಕಲು ವಡೆಯನ್ನು ಭಕ್ತರಿಗೆ ದಾಟಿಸಿ, ತಾನು ಮಾತ್ರ ಲಘುವಾದ ಘಮ್ಮೆನಿಸುವ ಲಾಡು ಉಂಡೆಯ ರುಚಿಯನ್ನು ಆಸ್ವಾದಿಸುತ್ತಿದ್ದಾನೆ ಈ ನಮ್ಮ ತಿಮ್ಮಪ್ಪ !
ಇನ್ನು ಬುಸ್ಸ್ ನಾಗಪ್ಪ- ಅದೇ ಸುಬ್ರಹ್ಮಣ್ಯನಿಗೆ ಹದವಾಗಿ ಘಮ್ಮೆನಿಸುವ ಚಿಗುಳಿ, ತಂಬಿಟ್ಟು ಜೊತೆಗೆ ದಪ್ಪ ಕೆನೆಗಟ್ಟುವಂತೆ ಕಾಯಿಸಿದ ಹಾಲು- ಏನುಂಟು ಏನಿಲ್ಲ - ಇವುಗಳ ನಿವೇದನೆ. ಇತ್ತೀಚಿನ ಕೆಲವು ಕ್ರಾಂತಿಕಾರಿ ವಿಚಾರವಾದಿಗಳು ಹಾಲನ್ನು ಕೇವಲ ಬಡವರಿಗೆ ಮಾತ್ರ ಮೀಸಲಿಡಿ ಎಂಬ ಕೂಗಿನೊಂದಿಗೆ ನಾಗರಗಳಿಗೆ ಕೇವಲ ಮೊಟ್ಟೆಯನ್ನು ಮಾತ್ರ ನಿವೇದಿಸತಕ್ಕದ್ದೆಂದು ಆದೇಶ ಹೊರಡಿಸಿಬಿಟ್ಟಿದ್ದಾರಂತೆ.



Click it and Unblock the Notifications