Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ದೇವಾನುದೇವತೆಗಳೆ ‘ತಿಂಡಿಪೋತ’ರಾಗಿರುವಾಗ... (ಭಾಗ 1)
ದೇವರ ಉದಾಹರಣೆಗಳನ್ನು ಮುಂದಿಟ್ಟರೂ, ಇಷ್ಟೆಲ್ಲ ಮನವರಿಕೆ ಮಾಡಿಕೊಟ್ಟರೂ ಕೇವಲ ನಾನೊಬ್ಬನೆ ತಿಂಡಿಪೋತ ಅಲ್ಲ ಎಂಬುದನ್ನು ನನ್ನ ಹಠಮಾರಿ ಗೆಳೆಯಗೆಳತಿಯರು ಒಪ್ಪುವುದೇ ಇಲ್ಲ. ನನ್ನ ಕರ್ಮ!
ಎಲ್ಲರಿಗೂ ಒಂದಲ್ಲ ಒಂದು ಚಟ ಇರಬೇಕಾದ್ದು ಪ್ರಕೃತಿ ನಿಯಮ. ನನಗಂತೂ ತಿಂಡಿಯನ್ನು ಮೆಲುಕು ಹಾಕುತ್ತ ಇರುವುದೆಂದರೆ ಪಂಚಪ್ರಾಣ. ಈ ಒಳ್ಳೆಯ ಚಟವನ್ನು ಸೊಟ್ಟ ದೃಷ್ಟಿಯಿಂದ ಹಿಯ್ಯಾಳಿಸುತ್ತ ‘ತಿಂಡಿಪೋತ ಹಾಯ್.. ಹಾಯ್’ ಎಂದು ಗೆಳೆಯರೆನ್ನಿಸಿಕೊಂಡಿರುವ ಪಾಪಿಗಳು ಗೇಲಿ ಮಾಡುತ್ತಾರೆ.
ಇಡೀ ಪ್ರಪಂಚದಲ್ಲಿ ನಾನೊಬ್ಬನೇ ತಿಂಡಿಪೋತನೇ? ಬೇರೆ ಯಾರೂ ಈ ಹೆಗ್ಗಳಿಕೆಗೆ ಪಾಲುದಾರರು ಇಲ್ಲವೇ? ‘ದೇವಾನಂ ತಿಂಡಿ ಪ್ರಿಯಂಃ’ ಎಂಬ ಉಕ್ತಿ ಇವರ ಗಮನಕ್ಕೆ ಏಕೆ ಬರುವುದಿಲ್ಲ ಎಂದು ಸಂಕಟವಾಗುತ್ತದೆ ಹಾಗೂ ಈ ತಿಂಡಿ ಪಕ್ಷಪಾತಿಗಳ ಮೇಲೆ ಕಡುಕೋಪ ಬರುತ್ತೆ!
ಪುಟ್ಟ ಬಾಲಕೃಷ್ಣನ ಉದಾಹರಣೆ ತೆಗೆದುಕೊಳ್ಳಿ. ಅವನ ಜನ್ಮದಿನ, ಎಲ್ಲರೂ ಅದೆಷ್ಟು ವಿವಿಧ ತಿಂಡಿ ತಿನಿಸುಗ
ಳನ್ನು ನಿಷ್ಠೆಯಿಂದ ತಯಾರಿಸಿ ಭಕ್ತಿಪೂರ್ವಕವಾಗಿ ನೈವೇದ್ಯ ಮಾಡುತ್ತಾರೆ. ಚಕ್ಕುಲಿ, ತೆಂಗೊಳಲು, ಬೆಣ್ಣೆ ಮುರುಕು, ಕೋಡುಬಳೆ.. ಅಬ್ಬಬ್ಬ...ನಿಪ್ಪಟ್ಟು, ಹಪ್ಪಳ, ಸಂಡಿಗೆ, ಬೇಸಿನ್ ಉಂಡೆ.. ಛೇ ಯಾಕೆ ಇದನ್ನೆಲ್ಲ ಜ್ಞಾಪಿಸಿಕೊಂಡು ಬಾಯಿಯಲ್ಲಿ ನೀರು ತರಿಸಿಕೊಳ್ಳುವುದು.ಆಹಾ ! ಸತ್ಯನಾರಾಯಣನಿಗಂತೂ ಬೆಣ್ಣೆ ಕಾಯಿಸಿದ ತುಪ್ಪ, ಸಕ್ಕರೆ, ಬಾಳೆಹಣ್ಣು, ಪಚ್ಚ ಕರ್ಪೂರ, ಧಂಡಿಯಾಗಿ ದ್ರಾಕ್ಷಿ, ಗೋಡಂಬಿ, ರವೆಯ ಮಿಶ್ರಣದಿಂದ ತಯಾರಿಸಿದ ‘ಸಪಾದ ಭಕ್ಷ್ಯ’. ಈ ಪ್ರಸಾದ ತಿಂದ ಮೇಲೆ ಜಿಡ್ಡಿನ ಕೈಯನ್ನು ಸೀಗೆಪುಡಿಯಿಂದಲೇ ತೊಳೆದುಕೊಳ್ಳಬೇಕು. ಡೆಟಾಲ್ ಲಿಕ್ವಿಡ್ ಸೋಪು ಮಡಿಗೆ ಬರಲ್ಲ.
ತಿರುಪತಿ ತಿಮ್ಮಪ್ಪನಿಗೆ ಹಲ್ಲು ನೋವಿರಬಹುದೇನೋ ಎಂದು ನನಗೆ ಅನುಮಾನ. ಅವನಿಗೆ ಬಲು ಇಷ್ಟವಾಗಿರುವ, ಮೆತ್ತಗಿರುವ, ಘಮಘಮವೆನಿಸುವ ಲಾಡು ಉಂಡೆ- ಅದರಲ್ಲಿ ಒಂಬತ್ತು ಅಂಶ ಉತ್ತುತ್ತೆ, ಗೋಡಂಬಿ, ದ್ರಾಕ್ಷಿ, ಪಚ್ಚ ಕರ್ಪೂರ, ಜೇನು ತುಪ್ಪ, ಲವಂಗ ಮತ್ತು ಒಂದಂಶ ಲಾಡು ಕಾಳಿನ ಮಿಶ್ರಣದ ಉಂಡೆ. ಇನ್ನು ವಡೆ- ಅಯ್ಯಮ್ಮ ಇದನ್ನು ಪುಡಿ ಮಾಡಬೇಕಾದರೆ ಹಲ್ಲು ಪ್ರಯೋಜನಕ್ಕೆ ಬಾರದು. ಏನಿದ್ದರೂ ಎರಡಾದರೂ ಕಬ್ಬಿಣದ ಸುತ್ತಿಗೆ ಬೇಕು! ಈ ಕಟಕಲು ವಡೆಯನ್ನು ಭಕ್ತರಿಗೆ ದಾಟಿಸಿ, ತಾನು ಮಾತ್ರ ಲಘುವಾದ ಘಮ್ಮೆನಿಸುವ ಲಾಡು ಉಂಡೆಯ ರುಚಿಯನ್ನು ಆಸ್ವಾದಿಸುತ್ತಿದ್ದಾನೆ ಈ ನಮ್ಮ ತಿಮ್ಮಪ್ಪ !
ಇನ್ನು ಬುಸ್ಸ್ ನಾಗಪ್ಪ- ಅದೇ ಸುಬ್ರಹ್ಮಣ್ಯನಿಗೆ ಹದವಾಗಿ ಘಮ್ಮೆನಿಸುವ ಚಿಗುಳಿ, ತಂಬಿಟ್ಟು ಜೊತೆಗೆ ದಪ್ಪ ಕೆನೆಗಟ್ಟುವಂತೆ ಕಾಯಿಸಿದ ಹಾಲು- ಏನುಂಟು ಏನಿಲ್ಲ - ಇವುಗಳ ನಿವೇದನೆ. ಇತ್ತೀಚಿನ ಕೆಲವು ಕ್ರಾಂತಿಕಾರಿ ವಿಚಾರವಾದಿಗಳು ಹಾಲನ್ನು ಕೇವಲ ಬಡವರಿಗೆ ಮಾತ್ರ ಮೀಸಲಿಡಿ ಎಂಬ ಕೂಗಿನೊಂದಿಗೆ ನಾಗರಗಳಿಗೆ ಕೇವಲ ಮೊಟ್ಟೆಯನ್ನು ಮಾತ್ರ ನಿವೇದಿಸತಕ್ಕದ್ದೆಂದು ಆದೇಶ ಹೊರಡಿಸಿಬಿಟ್ಟಿದ್ದಾರಂತೆ.



Click it and Unblock the Notifications