Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಪ್ರೋಟೀನು ಜಾಸ್ತಿಯಿರುವ ಕಡಲೆಬೀಜದ ಖಾರಾ ಚಟ್ನಿ

* ಶಾಂತಲಾ, ವಿವಿ ಪುರಂ
ಪದಾರ್ಥಪಟ್ಟಿ : ಒಳ್ಳೆ ಜಾತಿ ಕಡಲೆ ಬೀಜ 1 ಕಪ್. ಕೆಂಪು ಮೆಣಸಿನಕಾಯಿ 8-10, ಬೆಳ್ಳುಳ್ಳಿ ಎರಡು ಎಸಳು. ನಿಂಬೆ ರಸ ಅಥವಾ ಹುಣಿಸೆಹಣ್ಣಿನ ರಸ ನಾಲಕ್ಕು ಚಮಚ. ರುಚಿಗೆ ಹೊಂದುವಷ್ಟು ಉಪ್ಪು.
ವಿಧಾನ : ಕಡಲೆಕಾಯಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬೀಜ ಸ್ಪಲ್ಪ ಮಟ್ಟಿಗೆ ಕೆಂಪಾಗುವ ರೀತಿಯಲ್ಲಿ ಹುರಿದಿರಬೇಕು. ಹುರಿದ ನಂತರ ಬೀಜವನ್ನು ಹಗುರವಾಗಿ ಹಿಚುಕಿದರೆ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ಮನೆಯಲ್ಲಿ ಮರ ಇದ್ದರೆ ಕೇರಿ ಸಿಪ್ಪೆಯನ್ನು ತೆಗೆಯಿರಿ. ಮರ ಇಲ್ಲದಿದ್ದರೆ ತಟ್ಟೆ ಅಥವಾ ಸ್ಟೀಲ್ ಮರದಲ್ಲಿ ಬೀಜವನ್ನು ಕೇರಿ ಉಫ್ ಎಂದು ಊದಿ ಎಳ್ಳು ಬೆಲ್ಲಕ್ಕೆ ಮಾಡಿಕೊಂಡಂತೆ ಬೀಜ ಸಿದ್ಧಪಡಿಸಿಟ್ಟುಕೊಳ್ಳಿರಿ.
ಕೆಂಪುಮೆಣಸಿನಕಾಯಿಯನ್ನು ಇದೇ ರೀತಿ ಚೂರೇಚೂರು ಎಣ್ಣೆಯಲ್ಲಿ ಗರಿಗರಿಯಾಗುವತನಕ ಹುರಿಯಬೇಕು. ಆನಂತರ ಹುರಿದ ಬೀಜ, ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ರುಬ್ಬಿರಿ. ತೀರ ನುಣ್ಣಗಾಗಬಾರದು, ತೀರಾ ತರಿತರಿ ಇರಬಾರದು. ರುಬ್ಬುವಾಗಲೇ ಉಪ್ಪು ಹಾಕಿದರೆ ಚೆನ್ನಾಗಿ ಕೂಡಿಕೊಳ್ಳುತ್ತದೆ.
ಇದಕ್ಕೆ ನಿಂಬೆ ರಸ ಅಥವಾ ಹುಣಿಸೆರಸ ಬೆರಸಿ, ಸಾಸಿವೆ ಮತ್ತು ಕರಿಬೇವು ಒಗ್ಗರಣೆ ಸಿಂಪಡಿಸಿರಿ. ಚಪಾತಿ ಜತೆಗೆ ಚೆನ್ನಾಗಿರುತ್ತದೆ. ಅರ್ಜೆಂಟ್ ಅರ್ಜೆಂಟಾಗಿ ಕೆಲಸಕ್ಕೆ ಧಾವಿಸುವವರು ಚಪಾತಿ, ಕಡಲೆಬೀಜದ ಚಟ್ನಿಯ ರೋಲ್ ಮಾಡಿಕೊಂಡು ಹೋದರೆ ಕಾರಿನಲ್ಲಿ ಅಥವಾ ಆಟೋದಲ್ಲಿ ತಿಂದುಕೊಂಡು ಕೆಲಸಕ್ಕೆ ಹೋಗಬಹುದು.



Click it and Unblock the Notifications