Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಪ್ರೋಟೀನು ಜಾಸ್ತಿಯಿರುವ ಕಡಲೆಬೀಜದ ಖಾರಾ ಚಟ್ನಿ

* ಶಾಂತಲಾ, ವಿವಿ ಪುರಂ
ಪದಾರ್ಥಪಟ್ಟಿ : ಒಳ್ಳೆ ಜಾತಿ ಕಡಲೆ ಬೀಜ 1 ಕಪ್. ಕೆಂಪು ಮೆಣಸಿನಕಾಯಿ 8-10, ಬೆಳ್ಳುಳ್ಳಿ ಎರಡು ಎಸಳು. ನಿಂಬೆ ರಸ ಅಥವಾ ಹುಣಿಸೆಹಣ್ಣಿನ ರಸ ನಾಲಕ್ಕು ಚಮಚ. ರುಚಿಗೆ ಹೊಂದುವಷ್ಟು ಉಪ್ಪು.
ವಿಧಾನ : ಕಡಲೆಕಾಯಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬೀಜ ಸ್ಪಲ್ಪ ಮಟ್ಟಿಗೆ ಕೆಂಪಾಗುವ ರೀತಿಯಲ್ಲಿ ಹುರಿದಿರಬೇಕು. ಹುರಿದ ನಂತರ ಬೀಜವನ್ನು ಹಗುರವಾಗಿ ಹಿಚುಕಿದರೆ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ಮನೆಯಲ್ಲಿ ಮರ ಇದ್ದರೆ ಕೇರಿ ಸಿಪ್ಪೆಯನ್ನು ತೆಗೆಯಿರಿ. ಮರ ಇಲ್ಲದಿದ್ದರೆ ತಟ್ಟೆ ಅಥವಾ ಸ್ಟೀಲ್ ಮರದಲ್ಲಿ ಬೀಜವನ್ನು ಕೇರಿ ಉಫ್ ಎಂದು ಊದಿ ಎಳ್ಳು ಬೆಲ್ಲಕ್ಕೆ ಮಾಡಿಕೊಂಡಂತೆ ಬೀಜ ಸಿದ್ಧಪಡಿಸಿಟ್ಟುಕೊಳ್ಳಿರಿ.
ಕೆಂಪುಮೆಣಸಿನಕಾಯಿಯನ್ನು ಇದೇ ರೀತಿ ಚೂರೇಚೂರು ಎಣ್ಣೆಯಲ್ಲಿ ಗರಿಗರಿಯಾಗುವತನಕ ಹುರಿಯಬೇಕು. ಆನಂತರ ಹುರಿದ ಬೀಜ, ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ರುಬ್ಬಿರಿ. ತೀರ ನುಣ್ಣಗಾಗಬಾರದು, ತೀರಾ ತರಿತರಿ ಇರಬಾರದು. ರುಬ್ಬುವಾಗಲೇ ಉಪ್ಪು ಹಾಕಿದರೆ ಚೆನ್ನಾಗಿ ಕೂಡಿಕೊಳ್ಳುತ್ತದೆ.
ಇದಕ್ಕೆ ನಿಂಬೆ ರಸ ಅಥವಾ ಹುಣಿಸೆರಸ ಬೆರಸಿ, ಸಾಸಿವೆ ಮತ್ತು ಕರಿಬೇವು ಒಗ್ಗರಣೆ ಸಿಂಪಡಿಸಿರಿ. ಚಪಾತಿ ಜತೆಗೆ ಚೆನ್ನಾಗಿರುತ್ತದೆ. ಅರ್ಜೆಂಟ್ ಅರ್ಜೆಂಟಾಗಿ ಕೆಲಸಕ್ಕೆ ಧಾವಿಸುವವರು ಚಪಾತಿ, ಕಡಲೆಬೀಜದ ಚಟ್ನಿಯ ರೋಲ್ ಮಾಡಿಕೊಂಡು ಹೋದರೆ ಕಾರಿನಲ್ಲಿ ಅಥವಾ ಆಟೋದಲ್ಲಿ ತಿಂದುಕೊಂಡು ಕೆಲಸಕ್ಕೆ ಹೋಗಬಹುದು.



Click it and Unblock the Notifications