Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಪ್ರೋಟೀನು ಜಾಸ್ತಿಯಿರುವ ಕಡಲೆಬೀಜದ ಖಾರಾ ಚಟ್ನಿ

* ಶಾಂತಲಾ, ವಿವಿ ಪುರಂ
ಪದಾರ್ಥಪಟ್ಟಿ : ಒಳ್ಳೆ ಜಾತಿ ಕಡಲೆ ಬೀಜ 1 ಕಪ್. ಕೆಂಪು ಮೆಣಸಿನಕಾಯಿ 8-10, ಬೆಳ್ಳುಳ್ಳಿ ಎರಡು ಎಸಳು. ನಿಂಬೆ ರಸ ಅಥವಾ ಹುಣಿಸೆಹಣ್ಣಿನ ರಸ ನಾಲಕ್ಕು ಚಮಚ. ರುಚಿಗೆ ಹೊಂದುವಷ್ಟು ಉಪ್ಪು.
ವಿಧಾನ : ಕಡಲೆಕಾಯಿ ಬೀಜವನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಬೀಜ ಸ್ಪಲ್ಪ ಮಟ್ಟಿಗೆ ಕೆಂಪಾಗುವ ರೀತಿಯಲ್ಲಿ ಹುರಿದಿರಬೇಕು. ಹುರಿದ ನಂತರ ಬೀಜವನ್ನು ಹಗುರವಾಗಿ ಹಿಚುಕಿದರೆ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ಮನೆಯಲ್ಲಿ ಮರ ಇದ್ದರೆ ಕೇರಿ ಸಿಪ್ಪೆಯನ್ನು ತೆಗೆಯಿರಿ. ಮರ ಇಲ್ಲದಿದ್ದರೆ ತಟ್ಟೆ ಅಥವಾ ಸ್ಟೀಲ್ ಮರದಲ್ಲಿ ಬೀಜವನ್ನು ಕೇರಿ ಉಫ್ ಎಂದು ಊದಿ ಎಳ್ಳು ಬೆಲ್ಲಕ್ಕೆ ಮಾಡಿಕೊಂಡಂತೆ ಬೀಜ ಸಿದ್ಧಪಡಿಸಿಟ್ಟುಕೊಳ್ಳಿರಿ.
ಕೆಂಪುಮೆಣಸಿನಕಾಯಿಯನ್ನು ಇದೇ ರೀತಿ ಚೂರೇಚೂರು ಎಣ್ಣೆಯಲ್ಲಿ ಗರಿಗರಿಯಾಗುವತನಕ ಹುರಿಯಬೇಕು. ಆನಂತರ ಹುರಿದ ಬೀಜ, ಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ರುಬ್ಬಿರಿ. ತೀರ ನುಣ್ಣಗಾಗಬಾರದು, ತೀರಾ ತರಿತರಿ ಇರಬಾರದು. ರುಬ್ಬುವಾಗಲೇ ಉಪ್ಪು ಹಾಕಿದರೆ ಚೆನ್ನಾಗಿ ಕೂಡಿಕೊಳ್ಳುತ್ತದೆ.
ಇದಕ್ಕೆ ನಿಂಬೆ ರಸ ಅಥವಾ ಹುಣಿಸೆರಸ ಬೆರಸಿ, ಸಾಸಿವೆ ಮತ್ತು ಕರಿಬೇವು ಒಗ್ಗರಣೆ ಸಿಂಪಡಿಸಿರಿ. ಚಪಾತಿ ಜತೆಗೆ ಚೆನ್ನಾಗಿರುತ್ತದೆ. ಅರ್ಜೆಂಟ್ ಅರ್ಜೆಂಟಾಗಿ ಕೆಲಸಕ್ಕೆ ಧಾವಿಸುವವರು ಚಪಾತಿ, ಕಡಲೆಬೀಜದ ಚಟ್ನಿಯ ರೋಲ್ ಮಾಡಿಕೊಂಡು ಹೋದರೆ ಕಾರಿನಲ್ಲಿ ಅಥವಾ ಆಟೋದಲ್ಲಿ ತಿಂದುಕೊಂಡು ಕೆಲಸಕ್ಕೆ ಹೋಗಬಹುದು.



Click it and Unblock the Notifications
