Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಕ್ಯಾರಟ್ ಹೆಸರು ಬೇಳೆ ಪಾಯಸ
ಹೊಸ ವರ್ಷದ ಮೊದಲದಿನ ಕ್ಯಾರೆಟ್ ಹೆಸರುಬೇಳೆ ಪಾಯಸ ಮಾಡಿ ಗುರುರಾಯರಿಗೆ ನೈವೇದ್ಯ ಮಾಡಿ ಸೇವಿಸಿ. ವರ್ಷಾಚರಣೆಯಲ್ಲಿ ದಣಿದ ದೇಹಕ್ಕೆ ಪಾಯಸ ಆಯಾಸ ಪರಿಹಾರ ಮಾಡಿಸಿದಂತೆಯೂ ಆಗುತ್ತದೆ.
ಕ್ಯಾರಟ್ ಹಲ್ವ, ಕ್ಯಾರಟ್ ಪಲ್ಯ, ಕ್ಯಾರಟ್ ಹುಳಿ ಹಾಗೂ ಕೋಸಂಬರಿ, ಈ ಪದಾರ್ಥಗಳು ಎಲ್ಲರಿಗೂ ಗೊತ್ತು. ಅಂತೆಯೇ ಹೆಸರುಬೇಳೆ ತೊವ್ವೆ, ಹೆಸರುಬೇಳೆ ಪಾಯಸ, ಕೋಸಂಬರಿ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದದ್ದೇ. ಆದರೆ ಕ್ಯಾರಟ್ ಹಾಗೂ ಹೆಸರುಬೇಳೆಯನ್ನು ಒಟ್ಟಿಗೇ ಸೇರಿಸಿ ಪಾಯಸವನ್ನು ತಯಾರಿಸಬಹುದು. ಇದು ಮತ್ತೂ ಸ್ವಾದಿಷ್ಟವಾಗಿರುತ್ತದೆ ಹಾಗೂ ಆರೋಗ್ಯಕ್ಕೂ ಹಿತಕರ.
ಕ್ಯಾರಟ್ ವಿಟಮಿನ್'ಎ'ಯನ್ನು ಒಳಗೊಂಡಿದ್ದು, ಕಣ್ಣಿಗೆ, ರಕ್ತದ ಉತ್ಪತ್ತಿಗೆ ಪೂರಕ. ಹಾಗೆಯೇ ಹೆಸರುಬೇಳೆ ಉಷ್ಣ ಪ್ರಕೃತಿಯವರಿಗೆ ಹೇಳಿಮಾಡಿಸಿದಂತಹ ಧಾನ್ಯ. ಇದು ದೇಹಕ್ಕೆ ಬಲು ತಂಪು. ಇನ್ನೇನು ಹೊಸವರ್ಷದ ಆಗಮನವಾಗುತ್ತಿದೆ. ಡಿ 31ರ ಬುಧವಾರ ರಾತ್ರಿ ವರ್ಷಾಚರಣೆಯ ಗುಂಗಿನಲ್ಲಿದ್ದು ಸುಸ್ತು ಮಾಡಿಕೊಂಡವರಿಗೆ ಮರುದಿನ ಬೆಳಗ್ಗೆ ಈ ಪಾಯಸ ಆಯಾಸಪರಿಹಾರ ಮಾಡಿಸುತ್ತೆ. ಹೊಟ್ಟೆ ತಣ್ಣಗಿಡುತ್ತದೆ.
ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ - 1 ಲೋಟ
* ಕ್ಯಾರಟ್ - 2 (ಸಣ್ಣ ಗಾತ್ರದ್ದಾಗಿದ್ದರೆ 3-4)
* ಸಕ್ಕರೆ - 1 1/4 ಲೋಟ
* ತೆಂಗಿನಕಾಯಿ - 1/2 ಭಾಗ (ತೀರಾ ಸಣ್ಣಕಾಯಿಯಾಗಿದ್ದಲ್ಲಿ ಒಂದು ಇಡಿ ಕಾಯಿಯನ್ನು ಹಾಕಿದರೆ ಒಳ್ಳೆಯದು)
* ಉಪ್ಪು - ರುಚಿಗೆ ತಕ್ಕ
* ಏಲಕ್ಕಿ ಪುಡಿ - 1 ಚಮಚ
* ದ್ರಾಕ್ಷಿ ಹಾಗೂ ಗೋಡಂಬಿ ಚೂರುಗಳು
ವಿಶೇಷ ಸೂಚನೆ : ಈ ಪಾಯಸವನ್ನು ತಯಾರಿಸುವಾಗ ತೆಂಗಿನಕಾಯಿಯ ಜಿಗುಟನ್ನು ಹಾಕುವುದಿಲ್ಲ. ರುಬ್ಬಿದ ಮೇಲೆ ಜಿಗುಟ್ಟನ್ನು ಸೋಸಿ ಅದರ ರಸವನ್ನು ಮಾತ್ರ ಹಾಕುವುದರಿಂದ ಆರೋಗ್ಯಕ್ಕೆ ತೊಂದರೆಯಾಗದು. ಕೊಲೆಸ್ಟ್ರಾಲ್ ಭಯವೂ ಇರದು.
ಮಾಡುವ ವಿಧಾನ:
* ಮೊದಲು ಕ್ಯಾರಟ್ ಹೆಚ್ಚಿಕೊಂಡು ಸ್ವಲ್ಪ ನೀರು ಹಾಕಿ ಮೆದು ಆಗುವಷ್ಟು ಬೇಯಿಸಿಕೊಳ್ಳಬೇಕು.
* ಒಂದು ಲೋಟ ಹೆಸರುಬೇಳೆಗೆ ಮೂರು ಲೋಟ ನೀರು ಹಾಕಿ ಕುಕ್ಕರಿನಲ್ಲಿಟ್ಟು ಒಂದು ವ್ಹಿಸಿಲ್ ತರಿಸಬೇಕು.
* ನಂತರ ಬೇಯಿಸಿಟ್ಟ ಹೆಸರುಬೇಳೆ, ಕ್ಯಾರಟ್, ಉಪ್ಪು, ಸಕ್ಕರೆ, ಗೋಡಂಬಿ ಹಾಗೂ ದ್ರಾಕ್ಷಿ ಚೂರುಗಳನ್ನು ಹಾಕಿ ಬೇಕಿದ್ದರೆ ಸ್ವಲ್ಪ ನೀರನ್ನೂ ಸೇರಿಸಿ ಚೆನ್ನಾಗಿ ಕುದಿಸಬೇಕು.
* ಕಾಯಿತುರಿಯನ್ನು ನುಣ್ಣನೆ ರುಬ್ಬಿ, ಸ್ವಚ್ಛ ಬಟ್ಟೆಯಲ್ಲಿ ಸೋಸಿ ಜಿಗುಟನ್ನು ತೆಗೆದು, ಬರಿಯ ಹಿಂಡಿದ ಕಾಯಿರಸವನ್ನಷ್ಟೇ ಹಾಕಿ ಮತ್ತೊಮ್ಮೆ ಕುದಿ ತರಿಸಬೇಕು.
* ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಹಾಕಿ ಒಮ್ಮೆ ಕಲಕಿಟ್ಟರೆ ರುಚಿಕರವಾದ ಪಾಯಸ ತಯಾರು.
ಘಮಘಮಿಸುವ ಬಿಸಿ ಪಾಯಸಕ್ಕೆ ಬೇಕಿದ್ದರೆ ಎರಡು ಚಮಚ ತುಪ್ಪವನ್ನು ಹಾಕಬಹುದು. ತುಪ್ಪ ಪಾಯಸದ ಸ್ವಾದವನ್ನು ಮತ್ತಷ್ಟು ಹೆಚ್ಚಿಸುವುದಲ್ಲದೇ ಜೀರ್ಣಿಸಿಕೊಳ್ಳಲು ಸಹಕಾರಿಯಾಗಿದೆ.
ಕ್ಯಾರೆಟ್ನ ಹೆಚ್ಚಿನ ಮಾಹಿತಿಗಳಿಗೆ ಹಾಗೂ ಇದರಿಂದ ಇನ್ನಿತರ ಪದಾರ್ಥಗಳ ತಯಾರಿಕೆಯನ್ನು ನೋಡಲು ಆಸಕ್ತರು ಈ ಕೆಳಗಿನ ಲಿಂಕ್ಗಳಿಗೆ ಭೇಟಿ ನೀಡಬಹುದಾಗಿದೆ.
http://www.carrotmuseum.co.uk/nutrition3.html
http://www.carrotmuseum.co.uk/recipes.html



Click it and Unblock the Notifications