Latest Updates
-
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ!
ಕ್ಯಾರಟ್ ಹೆಸರು ಬೇಳೆ ಪಾಯಸ
ಹೊಸ ವರ್ಷದ ಮೊದಲದಿನ ಕ್ಯಾರೆಟ್ ಹೆಸರುಬೇಳೆ ಪಾಯಸ ಮಾಡಿ ಗುರುರಾಯರಿಗೆ ನೈವೇದ್ಯ ಮಾಡಿ ಸೇವಿಸಿ. ವರ್ಷಾಚರಣೆಯಲ್ಲಿ ದಣಿದ ದೇಹಕ್ಕೆ ಪಾಯಸ ಆಯಾಸ ಪರಿಹಾರ ಮಾಡಿಸಿದಂತೆಯೂ ಆಗುತ್ತದೆ.
ಕ್ಯಾರಟ್ ಹಲ್ವ, ಕ್ಯಾರಟ್ ಪಲ್ಯ, ಕ್ಯಾರಟ್ ಹುಳಿ ಹಾಗೂ ಕೋಸಂಬರಿ, ಈ ಪದಾರ್ಥಗಳು ಎಲ್ಲರಿಗೂ ಗೊತ್ತು. ಅಂತೆಯೇ ಹೆಸರುಬೇಳೆ ತೊವ್ವೆ, ಹೆಸರುಬೇಳೆ ಪಾಯಸ, ಕೋಸಂಬರಿ ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ತಿಳಿದದ್ದೇ. ಆದರೆ ಕ್ಯಾರಟ್ ಹಾಗೂ ಹೆಸರುಬೇಳೆಯನ್ನು ಒಟ್ಟಿಗೇ ಸೇರಿಸಿ ಪಾಯಸವನ್ನು ತಯಾರಿಸಬಹುದು. ಇದು ಮತ್ತೂ ಸ್ವಾದಿಷ್ಟವಾಗಿರುತ್ತದೆ ಹಾಗೂ ಆರೋಗ್ಯಕ್ಕೂ ಹಿತಕರ.
ಕ್ಯಾರಟ್ ವಿಟಮಿನ್'ಎ'ಯನ್ನು ಒಳಗೊಂಡಿದ್ದು, ಕಣ್ಣಿಗೆ, ರಕ್ತದ ಉತ್ಪತ್ತಿಗೆ ಪೂರಕ. ಹಾಗೆಯೇ ಹೆಸರುಬೇಳೆ ಉಷ್ಣ ಪ್ರಕೃತಿಯವರಿಗೆ ಹೇಳಿಮಾಡಿಸಿದಂತಹ ಧಾನ್ಯ. ಇದು ದೇಹಕ್ಕೆ ಬಲು ತಂಪು. ಇನ್ನೇನು ಹೊಸವರ್ಷದ ಆಗಮನವಾಗುತ್ತಿದೆ. ಡಿ 31ರ ಬುಧವಾರ ರಾತ್ರಿ ವರ್ಷಾಚರಣೆಯ ಗುಂಗಿನಲ್ಲಿದ್ದು ಸುಸ್ತು ಮಾಡಿಕೊಂಡವರಿಗೆ ಮರುದಿನ ಬೆಳಗ್ಗೆ ಈ ಪಾಯಸ ಆಯಾಸಪರಿಹಾರ ಮಾಡಿಸುತ್ತೆ. ಹೊಟ್ಟೆ ತಣ್ಣಗಿಡುತ್ತದೆ.
ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ - 1 ಲೋಟ
* ಕ್ಯಾರಟ್ - 2 (ಸಣ್ಣ ಗಾತ್ರದ್ದಾಗಿದ್ದರೆ 3-4)
* ಸಕ್ಕರೆ - 1 1/4 ಲೋಟ
* ತೆಂಗಿನಕಾಯಿ - 1/2 ಭಾಗ (ತೀರಾ ಸಣ್ಣಕಾಯಿಯಾಗಿದ್ದಲ್ಲಿ ಒಂದು ಇಡಿ ಕಾಯಿಯನ್ನು ಹಾಕಿದರೆ ಒಳ್ಳೆಯದು)
* ಉಪ್ಪು - ರುಚಿಗೆ ತಕ್ಕ
* ಏಲಕ್ಕಿ ಪುಡಿ - 1 ಚಮಚ
* ದ್ರಾಕ್ಷಿ ಹಾಗೂ ಗೋಡಂಬಿ ಚೂರುಗಳು
ವಿಶೇಷ ಸೂಚನೆ : ಈ ಪಾಯಸವನ್ನು ತಯಾರಿಸುವಾಗ ತೆಂಗಿನಕಾಯಿಯ ಜಿಗುಟನ್ನು ಹಾಕುವುದಿಲ್ಲ. ರುಬ್ಬಿದ ಮೇಲೆ ಜಿಗುಟ್ಟನ್ನು ಸೋಸಿ ಅದರ ರಸವನ್ನು ಮಾತ್ರ ಹಾಕುವುದರಿಂದ ಆರೋಗ್ಯಕ್ಕೆ ತೊಂದರೆಯಾಗದು. ಕೊಲೆಸ್ಟ್ರಾಲ್ ಭಯವೂ ಇರದು.
ಮಾಡುವ ವಿಧಾನ:
* ಮೊದಲು ಕ್ಯಾರಟ್ ಹೆಚ್ಚಿಕೊಂಡು ಸ್ವಲ್ಪ ನೀರು ಹಾಕಿ ಮೆದು ಆಗುವಷ್ಟು ಬೇಯಿಸಿಕೊಳ್ಳಬೇಕು.
* ಒಂದು ಲೋಟ ಹೆಸರುಬೇಳೆಗೆ ಮೂರು ಲೋಟ ನೀರು ಹಾಕಿ ಕುಕ್ಕರಿನಲ್ಲಿಟ್ಟು ಒಂದು ವ್ಹಿಸಿಲ್ ತರಿಸಬೇಕು.
* ನಂತರ ಬೇಯಿಸಿಟ್ಟ ಹೆಸರುಬೇಳೆ, ಕ್ಯಾರಟ್, ಉಪ್ಪು, ಸಕ್ಕರೆ, ಗೋಡಂಬಿ ಹಾಗೂ ದ್ರಾಕ್ಷಿ ಚೂರುಗಳನ್ನು ಹಾಕಿ ಬೇಕಿದ್ದರೆ ಸ್ವಲ್ಪ ನೀರನ್ನೂ ಸೇರಿಸಿ ಚೆನ್ನಾಗಿ ಕುದಿಸಬೇಕು.
* ಕಾಯಿತುರಿಯನ್ನು ನುಣ್ಣನೆ ರುಬ್ಬಿ, ಸ್ವಚ್ಛ ಬಟ್ಟೆಯಲ್ಲಿ ಸೋಸಿ ಜಿಗುಟನ್ನು ತೆಗೆದು, ಬರಿಯ ಹಿಂಡಿದ ಕಾಯಿರಸವನ್ನಷ್ಟೇ ಹಾಕಿ ಮತ್ತೊಮ್ಮೆ ಕುದಿ ತರಿಸಬೇಕು.
* ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಹಾಕಿ ಒಮ್ಮೆ ಕಲಕಿಟ್ಟರೆ ರುಚಿಕರವಾದ ಪಾಯಸ ತಯಾರು.
ಘಮಘಮಿಸುವ ಬಿಸಿ ಪಾಯಸಕ್ಕೆ ಬೇಕಿದ್ದರೆ ಎರಡು ಚಮಚ ತುಪ್ಪವನ್ನು ಹಾಕಬಹುದು. ತುಪ್ಪ ಪಾಯಸದ ಸ್ವಾದವನ್ನು ಮತ್ತಷ್ಟು ಹೆಚ್ಚಿಸುವುದಲ್ಲದೇ ಜೀರ್ಣಿಸಿಕೊಳ್ಳಲು ಸಹಕಾರಿಯಾಗಿದೆ.
ಕ್ಯಾರೆಟ್ನ ಹೆಚ್ಚಿನ ಮಾಹಿತಿಗಳಿಗೆ ಹಾಗೂ ಇದರಿಂದ ಇನ್ನಿತರ ಪದಾರ್ಥಗಳ ತಯಾರಿಕೆಯನ್ನು ನೋಡಲು ಆಸಕ್ತರು ಈ ಕೆಳಗಿನ ಲಿಂಕ್ಗಳಿಗೆ ಭೇಟಿ ನೀಡಬಹುದಾಗಿದೆ.
http://www.carrotmuseum.co.uk/nutrition3.html
http://www.carrotmuseum.co.uk/recipes.html



Click it and Unblock the Notifications