Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಉಪ್ಪಿಟ್ಟಿಗೆ ಹಾಲಿಡೆ, ರವೆ ಪೊಂಗಲ್ ಈ ಸ್ಯಾಟರ್ಡೆ

ರೆಸಿಪಿ ಹೇಳಿದವರು : ಸೀತಮ್ಮ, ಹೆಣ್ಣೂರು ಕ್ರಾಸ್, ಬೆಂಗಳೂರು
ಸಾಮಗ್ರಿಗಳು :
ಸಣ್ಣ ರವೆ ಎರಡು ಲೋಟ
ಹೆಸರುಬೇಳೆ ಅರ್ಧ ಲೋಟ
ನೀರು ಒಂಭತ್ತು ಲೋಟ
ಉಪ್ಪು ಎರಡು ಟೀ ಚಮಚ
ಕಾಳುಮೆಸಿನ ಪುಡಿ ಎರಡು ಚಮಚ
ಗೋಡಂಬಿ ಚೂರುಗಳು ಒಂದು ಹಿಡಿ
ಎಣ್ಣೆ ಮತ್ತು ತುಪ್ಪ ಎಂಟು ಚಮಚ
ಕರಿಬೇವಿನ ಸೊಪ್ಪು, ತುರಿದ ಹಸಿ ಶುಂಠಿ
ತಯಾರಿಸುವ ವಿಧಾನ :
ಹಸಿವಾಸನೆ ನಿವಾರಣೆ ಆಗುವವರೆಗೆ ಅರ್ಧ ಚಮಚ ತುಪ್ಪ ಹಾಕಿ ರವೆ ಹುರಿದಿಟ್ಟುಕೊಳ್ಳಬೇಕು. ಹೆಸರುಬೇಳೆಯನ್ನು ದಪ್ಪತಳದ ಪಾತ್ರೆಯಲ್ಲಿ 3,4 ಲೋಟ ನೀರು ಹಾಕಿ ಮುಕ್ಕಾಲು ಬೇಯುವವರೆಗೆ ಕುದಿಸಿಟ್ಟುಕೊಳ್ಳಬೇಕು. ಪ್ರತ್ಯೇಕವಾಗಿ ಎಣ್ಣೆ ಬಿಸಿಮಾಡಿಕೊಂಡು ಗೋಡಂಬಿ, ಕರಿಬೇವಿನ ಸೊಪ್ಪು, ಶುಂಠಿ, ಪುಡಿ ಮಾಡಿದ ಮೆಣಸು ಮತ್ತು ಜೀರಿಗೆ ಒಗ್ಗರಣೆಯನ್ನು ಮಾಡಿಟ್ಟುಕೊಳ್ಳಬೇಕು.
ಈ ಒಗ್ಗರಣೆ ಮಾಡಿದ ಬಾಣಲೆಗೆ ಬೇಯಿಸಿದ ಬೇಳೆ ಮತ್ತು ರವೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕದಕಿರಿ. 5 ಅಥವಾ 6 ಲೋಟ ಬಿಸಿನೀರು ಹಾಕಿ ಪಾತ್ರೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಇಂಗುವವರೆಗೆ ಮತ್ತು ರವೆ ಚೆನ್ನಾಗಿ ಬೇಯುವವರೆಗೆ ಬೇಯಿಸಿರಿ. ಪಾತ್ರೆಯಲ್ಲಿರುವ ಬೇಳೆ ಸೀಯದಂತೆ ಆಗಾಗ ಕೆದಕುತ್ತಾ ಇರಬೇಕು. ಅದರ ಮೇಲೆ ಬಿಸಿ ತುಪ್ಪ ಹಾಕಿದರೆ ರವೆ ಪೊಂಗಲ್ಲು ರೆಡಿ. ತೆಂಗಿನಕಾಯಿ ಚಟ್ನಿ ಅಥವಾ ಮೊಸರು ಬಜ್ಜಿ ಜತೆಗೆ ಬಡಿಸಬಹುದು.



Click it and Unblock the Notifications











