Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಿಸೇರಿಯನ್ ನಂತರ ಪೋಷಣೆ ಹೇಗಿರಬೇಕು?

ಹೆರಿಗೆ ನಂತರ 2 ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳುವುದು ಅನಿವಾರ್ಯ. ಇದರ ಹೊರತಾಗಿಯೂ ಸಿಸೇರಿಯನ್ ನಂತರ ಇನ್ನಿತರ ಕಾಳಜಿ ಮಾಡಬೇಕಾಗುತ್ತದೆ. ಅದು ಹೇಗೆಂದು ಇಲ್ಲಿ ತಿಳಿದುಕೊಳ್ಳಿ.
ಸಿಸೇರಿಯನ್ ನಂತರ ಕಾಳಜಿ ಹೇಗೆ?
* ಸಿಸೇರಿಯನ್ ಗಾಯ: ಸಿಸೇರಿಯನ್ ಹೆರಿಗೆ ಮಾಡಿದಾಗ ಹೊಲಿಗೆ ಹಾಕುವುದರಿಂದ ಆ ಗಾಯ ಮಾಸಲು ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ ವೈದ್ಯರು ಸೂಚಿಸಿದಂತೆ ಕೆಲವು ದಿನ ಸ್ನಾನವನ್ನು ಮಾಡಬಾರದು. ಗಾಯಕ್ಕೆ ನೀರು ಬಿದ್ದರೆ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಗಾಯ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಈ ಸಮಯದಲ್ಲಿ ಹೆಚ್ಚು ಬಿಗಿ ಬಟ್ಟೆಗಳನ್ನು ಧರಿಸಬಾರದು. ಕಾಟನ್ ಬಟ್ಟೆಗಳನ್ನು ಧರಿಸಿದರೆ ಉತ್ತಮ.
* ಡ್ರೆಸಿಂಗ್: ಸಿಸೇರಿಯನ್ ನಂತರ ಸ್ನಾನ ಮಾಡುವುದು ಸ್ವಲ್ಪ ಕಷ್ಟವೆನಿಸುತ್ತದೆ. ಆದರೆ ಗಾಯಕ್ಕೆ ವಾರಕ್ಕೊಮ್ಮೆ ಡ್ರೆಸಿಂಗ್ ಮಾಡಿಸಿಕೊಳ್ಳಬೇಕು. ಹೊಲಿಗೆ ತೆಗೆದ ನಂತರ ವೈದ್ಯರು ಸ್ನಾನ ಮಾಡಲು ಸಲಹೆ ನೀಡಿದರೆ, ಸ್ನಾನ ಮಾಡಿದ ನಂತರ ಹತ್ತಿಯಿಂದ ಅಥವಾ ಹತ್ತಿ ಬಟ್ಟೆಯಿಂದ ಗಾಯದ ಜಾಗವನ್ನು ನಿಧಾನಕ್ಕೆ ಒರೆಸಿಕೊಳ್ಳಬೇಕು.
* ನಿಧಾನ ನಡಿಗೆ: ಸಿಸೇರಿಯನ್ ಆದ ಕೆಲವು ದಿನಗಳ ತನಕ ನಿಧಾನವಾಗಿ ನಡೆಯಬೇಕು. ಇದು ತುಂಬಾ ಮುಖ್ಯ. ತುಂಬಾ ಜೋರಾಗಿ ನಡೆಯಬಾರದು. ಸಿಸೇರಿಯನ್ ಆದ 4-6 ವಾರಗಳವರೆಗೂ ಜಾಗರೂಕವಾಗಿ ನಡೆಯಬೇಕು.
* ಆಹಾರ ನಿಯಮ: ಸಮತೋಲನ ಆಹಾರದ ಹೊರತಾಗಿಯೂ ವಿಟಮಿನ್ ಸಿ ಹೆಚ್ಚಿರುವ ಆಹಾರ ಈ ಸಮಯದಲ್ಲಿ ಹೆಚ್ಚು ಅವಶ್ಯಕವಿರುತ್ತದೆ. ಇದು ಗಾಯ ಬೇಗ ಗುಣವಾಗಲು ಸಹಾಯ ಮಾಡುತ್ತದೆ. ಬ್ರೊಕೊಲಿ, ಆಸ್ಪರಾಗಸ್, ಪಾಲಾಕ್, ಮೊಳಕೆ ಕಾಳುಗಳು, ಬಟಾಣಿ, ಕಿತ್ತಳೆ, ದ್ರಾಕ್ಷಿ ಮುಂತಾದುವು ಇರಲಿ. ಎಣ್ಣೆ ಮತ್ತು ಖಾರದ ಪದಾರ್ಥಗಳನ್ನು ಕನಿಷ್ಠ 20 ದಿನಗಳವರೆಗಾದರೂ ದೂರವಿಡಬೇಕು. 6-8 ತಿಂಗಳು ಹೆಚ್ಚು ಭಾರದ ಪದಾರ್ಥಗಳನ್ನು ಎತ್ತಲೇಬಾರದು.



Click it and Unblock the Notifications
