Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ರಸ್ತೆಬದಿಯ ಆಹಾರಕ್ಕೆ ಮುಗಿಬೀಳುವ ಮುನ್ನ ಇರಲಿ ಕಟ್ಟೆಚ್ಚರ
ರಸ್ತೆಬದಿಯ ಕುರುಕಲು ತಿಂಡಿಗಳಿಗೆ ಪಾನಿಪೂರಿ ಮಸಾಲ್ ಪೂರಿ ಮೊದಲಾದ ಚಾಟ್ಗಳಿಗೆ ಮನಸೋಲದವರು ಯಾರಿದ್ದಾರೆ ಹೇಳಿ? ಕಡಿಮೆ ಬೆಲೆಯಲ್ಲಿ ಸಿಗುವ ಈ ಕುರುಕಲು ತಿಂಡಿಗಳಿಗೆ ಏನೋ ಒಂದು ಸ್ವಾದವಿರುತ್ತದೆ ಎಂದೇ ಜನರು ಇದಕ್ಕೆ ಮುಗಿಬೀಳುತ್ತಾರೆ. ಆರೋಗ್ಯದ ದೃಷ್ಟಿಯಿಂದ ಈ ತಿಂಡಿ ತಿನಿಸುಗಳು ಮಾರಕವಾಗಿದ್ದರೂ ನಾವು ಇದರ ಬಗ್ಗೆ ಗಮನ ನೀಡದೇ ಒಂದು ಬಾರಿಯಲ್ಲವೇ ಎಂಬ ತಾತ್ಸಾರದಲ್ಲೇ ಇಂತಹ ಆಹಾರಗಳನ್ನು ಹೆಚ್ಚು ಬಾರಿ ಸೇವಿಸುತ್ತೇವೆ.
ಮಕ್ಕಳಂತೂ ಈ ಬಗೆಯ ಆಹಾರಗಳ ಮೇಲೆ ಹೆಚ್ಚಿನ ಒಲವನ್ನು ಹೊಂದಿರುವುದರಿಂದ ಈ ಬಗೆಯ ತಿಂಡಿ ಎಂದರೆ ಅವರಿಗೆ ಕೊಳ್ಳುವುದಕ್ಕೆ ಮನಸ್ಸಾಗುವುದೇ ಹೆಚ್ಚು. ಆದರೆ ಈ ಬಗೆಯ ಆಹಾರಗಳು ಅವರಲ್ಲಿ ಹೆಚ್ಚಿನ ರೋಗಕ್ಕೆ ಕಾರಣವಾಗುತ್ತವೆ ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ನೀವು ವೈದ್ಯರ ಬಳಿ ಹೋದಾಗ ಅವರು ಕೇಳುವ ಮೊದಲ ಪ್ರಶ್ನೆಯೇ ರಸ್ತೆ ಬದಿಯ ಆಹಾರಗಳನ್ನು ತಿನ್ನುತ್ತೀರಾ ಎಂಬುದಾಗಿದೆ.
ಅಗ್ಗದ ಬೆಲೆಯಲ್ಲಿ ದೊರೆಯುವ ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ಇಂತಹ ತಿಂಡಿ ತಿನಿಸುಗಳನ್ನು ಇವರು ತಯಾರಿಸುವುದರಿಂದ ರೋಗಗಳು ಆಹ್ವಾನ ನೀಡದೆಯೇ ನಮ್ಮನ್ನು ಎಡತಾಗುತ್ತವೆ. ಬನ್ನಿ ಇಂದಿನ ಲೇಖನದಲ್ಲಿ ಇಂತಹ ಆಹಾರಗಳು ಏಕೆ ಹಾನಿಕಾರಕ ಎಂಬ ಸಂಗತಿಗಳನ್ನು ಮೊದಲು ತಿಳಿದುಕೊಳ್ಳೋಣ.
ಮಿಲ್ಕ್ ಶೇಕ್, ಚಾಟ್ ಐಟಂಗಳಿಂದ ದೂರವಿರಿಸಿ
ವಿವಿಧ ಚಾಟ್ಗಳಲ್ಲಿ ಮೊಸರನ್ನು ಸೇರಿಸಲಾಗುತ್ತದೆ. ಆದರೆ ಈ ಮೊಸರಿನ ಗುಣಮಟ್ಟ ಹೇಗಿದೆಯೋ ಎಂದು ಪರಿಗಣಿಸದೇ ಸೇವಿಸುವುದು ಅಪಾಯಕ್ಕೆ ಆಹ್ವಾನ ನೀಡುವುದಾಗಿದೆ. ಮಕ್ಕಳಿಗೆ ಮೊಸರು ಇಲ್ಲದೇ ಇರುವ ತಿನಿಸುಗಳನ್ನು ಪರಿಗಣಿಸುವುದು ಸೂಕ್ತ. ಅಂತೆಯೇ ಹಾಲನ್ನು ಉಪಯೋಗಿಸುವ ಮಿಲ್ಕ್ ಶೇಕ್, ಫಾಲೂದಾ ಮೊದಲಾದವನ್ನೂ ಮಕ್ಕಳಿಗೆ ನೀಡದೇ ಇರುವುದು ಒಳಿತು. ಇಂದಿನ ದಿನಗಳಲ್ಲಿ ಕೃತಕ ಹಾಲನ್ನೂ ಅಗ್ಗದ ದರದಲ್ಲಿ ಮಾರುತ್ತಿರುವುದು ಹಾಗೂ ಹಾದಿಬದಿಯ ವ್ಯಾಪಾರಸ್ಥರು ಲಾಭದ ಆಸೆಗಾಗಿ ಇವನ್ನು ಕೊಳ್ಳುವುದು ಸಹಾ ಈ ನಿರ್ಧಾರಕ್ಕೆ ಪೂರಕವಾಗಿದೆ.

ಪಾನಿಪೂರಿಗೆ ಸಾಥ್ ನೀಡುವ ಬೀಯಿಸಿದ ಆಲೂಗಡ್ಡೆ
ಸಾಮಾನ್ಯವಾಗಿ ಹಾದಿಬದಿಯ ತಿನಿಸುಗಳನ್ನು ಹಗಲಿನಲ್ಲಿಯೇ ಮನೆಯಲ್ಲಿ ತಯಾರಿಸಿ ಸಂಜೆಯವೇಳೆ ಮಾರುಕಟ್ಟೆಗೆ ತರಲಾಗುತ್ತದೆ. ತರಕಾರಿಯನ್ನು ಬೆಂದ ಬಳಿಕ ಹೆಚ್ಚು ಹೊತ್ತು ಇಡಬಾರದು. ಏಕೆಂದರೆ ಬೆಂದ ತರಕಾರಿ ತಣಿಯುತ್ತಿದ್ದಂತೆ ಬ್ಯಾಕ್ಟೀರಿಯಾಗಳ ಧಾಳಿಗೆ ಸುಲಭವಾಗಿ ತುತ್ತಾಗುತ್ತದೆ. ವಿಶೇಷವಾಗಿ ಬೆಂದ ಆಲುಗಡ್ಡೆ ಬೇಗನೇ ಹಾಳಾಗುತ್ತದೆ. ಈ ತರಕಾರಿಗಳನ್ನು ಉಳಿದ ಖಾರದ ಅಥವಾ ಹುಳಿಯಾದ ರಸಗಳೊಡನೆ ಮಿಶ್ರಣ ಮಾಡಿ ನೀಡಿದರೆ ಆಲುಗಡ್ಡೆ ಹಾಳಾಗಿದ್ದುದು ಗೊತ್ತೇ ಆಗುವುದಿಲ್ಲ. ಉದಾಹರಣೆಗೆ ಪಾನಿಪೂರಿಗೆ ಹಾಕಿ ಕೊಡುವ ಬೇಯಿಸಿರುವ ಆಲೂಗಡ್ಡೆ. ಆದರೆ ಇದರಿಂದಾಗಿ ಮಕ್ಕಳ ಜಠರ ಈ ಬ್ಯಾಕ್ಟೀರಿಯಾಗಳ ಧಾಳಿಗೆ ಸುಲಭವಗಿ ತುತ್ತಾಗಿ ಅನಾರೋಗ್ಯ ಆವರಿಸುತ್ತದೆ. ಈ ಬಗ್ಗೆ ಖಚಿತವಾದ ಮಾಹಿತಿ ಪಡೆಯದೇ ತುಂಬಾ ಹಿಂದೆ ಬೇಯಿಸಿದ ತರಕಾರಿ ಸೇವಿಸುವುದರಿಂದ ಮಕ್ಕಳಿಗೂ ಹಿರಿಯರಿಗೂ ಮಾರಕವಾಗಿದೆ.
ಪಾಮ್ ಆಯಿಲ್ (ತಾಳೆ ಎಣ್ಣೆ ಬಳಕೆ)
ಆರೋಗ್ಯದ ದೃಷ್ಟಿಯಿಂದ ಅದರಲ್ಲೂ ಮಕ್ಕಳ ಆರೋಗ್ಯಕ್ಕೆ ತಾಳೆ ಎಣ್ಣೆ ಖಂಡಿತಾ ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿರುವ saturated vegetable fats ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಾರಣದಿಂದ ಮುಂದುವರೆದ ದೇಶಗಳಲ್ಲಿ ಈಗಾಗಲೇ ತಾಳೆ ಎಣ್ಣೆಯನ್ನು ನಿಷೇಧಿಸಲಾಗಿದೆ. ಆದರೆ ಅಪಾರ ಪ್ರಮಾಣದಲ್ಲಿ ಈಗಾಗಲೇ ಉತ್ಪತ್ತಿಯಾಗಿರುವ ಎಣ್ಣೆಯನ್ನು ಮಾಡುವುದಾದರೂ ಏನು? ಈ ಪ್ರಶ್ನೆಗೆ ಈ ದೇಶಗಳು ಭಾರತ ಸೇರಿ ತೃತೀಯ ದೇಶಗಳಿಗೆ ಅಗ್ಗದ ದರದಲ್ಲಿ ನೀಡುತ್ತಿವೆ. ಇದರ ಅರಿವಿಲ್ಲದ ಜನತೆ ಕೇವಲ ಅಗ್ಗ ಎಂಬ ಒಂದೇ ಕಾರಣಕ್ಕಾಗಿ ತಾಳೆ ಎಣ್ಣೆಯನ್ನು ಬಳಸುತ್ತಿದ್ದಾರೆ. ಲಾಭದ ದೃಷ್ಟಿಯಿಂದ ಮತ್ತು ತುಂಬಾ ಹೆಚ್ಚಿನ ತಿನಿಸುಗಳನ್ನು ಈ ಎಣ್ಣೆಯಲ್ಲಿ ಕರಿಯಲು ಸಾಧ್ಯ ಎಂದು ಮನಗಂಡಿರುವ ವ್ಯಾಪಾರಿಗಳು ತಾಳೆ ಎಣ್ಣೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎಣ್ಣೆಯಲ್ಲಿ ಕರಿದ, ಹುರಿದ ತಿಂಡಿಗಳು ಎಲ್ಲರ ಆರೋಗ್ಯಕ್ಕೆ ಮಾರಕವಾಗಿವೆ.
ಅಗ್ಗ ಎಂಬ ಕಾರಣಕ್ಕೆ ಮಾರುಹೋಗಬೇಡಿ
ಹೋಟೆಲಿಗಿಂತಲೂ ಅಗ್ಗ ಮತ್ತು ಅದಕ್ಕಿಂತಲೂ ರುಚಿ ಎಂಬ ಕಾರಣದಿಂದ ಹೆಚ್ಚಿನವರು ಒಂದಕ್ಕಿಂತಲೂ ಹೆಚ್ಚಿನ ಪ್ರಕಾರದ ತಿನಿಸುಗಳನ್ನು ಸೇವಿಸುತ್ತಾರೆ. ಮಕ್ಕಳೂ ಇದಕ್ಕೆ ಹೊರತಲ್ಲ. ಕೆಲವೊಮ್ಮೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ ಮನೆಯಲ್ಲಿ ಊಟವನ್ನೇ ಮಾಡುವುದಿಲ್ಲ. ಒಂದು ವೇಳೆ ಹಾದಿಬದಿಯ ತಿನಿಸು ತಿನ್ನುವುದು ಅನಿವಾರ್ಯವಾದರೆ ಮಕ್ಕಳಿಗೆ ಬಾಳೆ ಹಣ್ಣು, ಸಿಟ್ರಿಕ್ ಹಣ್ಣುಗಳಾದ ಮೂಸಂಬಿ, ಕಿತ್ತಳೆ ಹಣ್ಣುಗಳನ್ನು ತೆಗೆದುಕೊಡಿ.



Click it and Unblock the Notifications












