Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಅತೀ ಕಾಳಜಿ ತೋರಿಸುವ ಪೋಷಕರು ನೀವಾಗಬೇಡಿ!
ಸ್ವತಂತ್ರವಾಗಿ ಬೆಳೆದ ಮಕ್ಕಳು ಪೋಷಕರು ಸ್ಪೂನ್ ಫೀಡ್ ಮಾಡಿ ಬೆಳೆಸಿದ ಮಕ್ಕಳಿಗಿಂತ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಎದುರಿಸುವ ಮನೋಬಲ ಹೊಂದಿರುತ್ತಾರೆ ಅನ್ನುವುದು ಸತ್ಯದ ಮಾತು. ಮಕ್ಕಳಿಗೆ ಪೋಷಕರು ರಕ್ಷಣೆ ಒದಗಿಸಬೇಕು, ಆದರೆ ಅದೇ ಮಿತಿಯಾಗಬಾರದು.
ಕೆಲವು ಪೋಷಕರು ಮಕ್ಕಳ ಬಗ್ಗೆ ಅತೀಯಾದ ಕೇರ್ ತೆಗೆದುಕೊಳ್ಳುತ್ತಾರೆ. ಅವರಿಗೆ ಒಂಟಿಯಾಗಿ ಎಲ್ಲಿಗೂ ಹೋಗಲು ಬಿಡುವುದಿಲ್ಲ, ಕೈಯಲ್ಲಿ ದುಡ್ಡು ಕೊಟ್ಟು ಅವರಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಬಿಡುವುದಿಲ್ಲ. ಮಕ್ಕಳ ಬೇಕು-ಬೇಡಗಳನ್ನು ತಾವೇ ತಿರ್ಮಾನಿಸುತ್ತಾರೆ. ಮಕ್ಕಳಿಗೆ ಕೆಟ್ಟ ಪ್ರಪಂಚ ಗೊತ್ತಾಗಬಾರದು, ಯಾವುದೇ ಕಷ್ಟ ಗೊತ್ತಾಗಬಾರದು ಅಗತ್ಯಕ್ಕೆ ಮೀರಿದ ತುಂಬಾ ಮುತುವರ್ಜಿಯಿಂದ ಸಾಕುತ್ತಾರೆ.

ಆದರೆ ಮಕ್ಕಳನ್ನು ಆ ರೀತಿ ಸಾಕುವುದು ಅವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಎಲ್ಲಾ ಸಮಯದಲ್ಲಿ ನೀವು ಅವರ ಜೊತೆ ಇರುತ್ತೀರ ಎಂದು ಹೇಳಲು ಸಾಧ್ಯವಿಲ್ಲ. ಅವರಲ್ಲಿ ಸ್ವಾತಂತ್ರ್ಯ ಮನೋಭಾವ ಬೆಳೆಸಿ. ಎಲ್ಲವನ್ನು ನೀವು ಮಾಡಿ, ಈ ಕೆಳಗಿನಂತೆ ಮಾಡಿ ಅವರಲ್ಲಿ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿ.
ಬಾಡಿ ಗಾರ್ಡ್ ರೀತಿ ಸದಾ ಜೊತೆಯಲ್ಲಿ ಇರಬೇಡಿ
ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು, ಕರೆದುಕೊಂಡು ಬಿಡುವುದು, ಒಬ್ಬರೆ ಪ್ರಯಾಣ ಮಾಡಲು ಬಿಡಿದಿರುವುದು ಮಾಡಬೇಡಿ. ಮಕ್ಕಳು ನಾನು ಹೋಗುತ್ತೇನೆ ಎಂದಾಗ ಕಳುಹಿಸಿ. ಈಗೀನ ಮಕ್ಕಳು ನಮಗಿಂತ ಚುರುಕಾಗಿ ಇರುತ್ತಾರೆ. ಅವರಿಗೆ ನಿಮ್ಮ ಅತೀ ಪ್ರೀತಿ ಕಿರಿಕಿರಿಯಾಗದಿರಲಿ.
ನೈಜತೆಯಿಂದ ದೂರವಿಡಬೇಡಿ
ಮಕ್ಕಳಿಗೆ ಕೆಟ್ಟ ವಿಷಯಗಳು ತಿಳಿಯಬಾರದೆಂದು ಬಯಸುವುದು ತಪ್ಪು. ಸಮಾಜದಲ್ಲಿ ನಡೆಯುತ್ತಿರುವ ರೇಪ್, ದರೋಡೆ ಇವೆಲ್ಲಾ ಅವರ ಅರಿವಿಗೆ ತಂದು ಅವರ ರಕ್ಷಣೆಗೆ ಹೇಗೆ ಇರಬೇಕೆಂಬ ಮಾಹಿತಿ ನೀಡಿ.
ದುಡ್ಡಿನ ಬೆಲೆ ತಿಳಿದಿರಲಿ
ನಿಮ್ಮ ಹತ್ತಿರ ತುಂಬಾ ದುಡ್ಡು ಇದೆಯೆಂದು ತುಂಬಾ ಪಾಕೆಟ್ ಮನಿ ಕೊಟ್ಟು ಅವರನ್ನು ಹಾಳು ಮಾಡಬೇಡಿ, ಹಾಗಂತ ಕೊಡದೆ ಕೂಡ ಇರಬೇಡಿ. ಹಣದ ಬೆಲೆ ತಿಳಿಯುವಂತೆ ಅವರನ್ನು ಬೆಳೆಸಿ.
ಮಿಸ್ಟೇಕ್ ಮಾಡಲಿ ಪರ್ವಾಗಿಲ್ಲ
ತಪ್ಪು ಮಾಡಿದಾಗ ಮಾತ್ರ ಯಾವುದು ತಪ್ಪು? ಯಾವುದು ಸರಿ ಅನ್ನುವುದು ತಿಳಿಯುತ್ತದೆ.
ಅವರ ಅಭಿಪ್ರಾಯ ವ್ಯಕ್ತ ಪಡಿಸಲು ಬಿಡಿ
ಹೆಚ್ಚಿನ ಪೋಷಕರು ಮಕ್ಕಳ ಭಾವನೆಗಳನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯ ಕೊಡದೆ ತಪ್ಪು ಮಾಡುತ್ತಾರೆ. ಎಲ್ಲಾ ಬಾರಿ ನಿಮ್ಮ ಯೋಚನೆ ಸರಿ ಅಂತ ಹೇಳಲು ಆಗುವುದಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೆಂದು ತಿಳಿಯಿರಿ. ಆದ್ದರಿಂದ ಅವರ ಭಾವನೆಗಳನ್ನು ವ್ಯಕ್ತ ಪಡಿಸಲು ಬಿಡಿ.



Click it and Unblock the Notifications











