Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅತೀ ಕಾಳಜಿ ತೋರಿಸುವ ಪೋಷಕರು ನೀವಾಗಬೇಡಿ!
ಸ್ವತಂತ್ರವಾಗಿ ಬೆಳೆದ ಮಕ್ಕಳು ಪೋಷಕರು ಸ್ಪೂನ್ ಫೀಡ್ ಮಾಡಿ ಬೆಳೆಸಿದ ಮಕ್ಕಳಿಗಿಂತ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಎದುರಿಸುವ ಮನೋಬಲ ಹೊಂದಿರುತ್ತಾರೆ ಅನ್ನುವುದು ಸತ್ಯದ ಮಾತು. ಮಕ್ಕಳಿಗೆ ಪೋಷಕರು ರಕ್ಷಣೆ ಒದಗಿಸಬೇಕು, ಆದರೆ ಅದೇ ಮಿತಿಯಾಗಬಾರದು.
ಕೆಲವು ಪೋಷಕರು ಮಕ್ಕಳ ಬಗ್ಗೆ ಅತೀಯಾದ ಕೇರ್ ತೆಗೆದುಕೊಳ್ಳುತ್ತಾರೆ. ಅವರಿಗೆ ಒಂಟಿಯಾಗಿ ಎಲ್ಲಿಗೂ ಹೋಗಲು ಬಿಡುವುದಿಲ್ಲ, ಕೈಯಲ್ಲಿ ದುಡ್ಡು ಕೊಟ್ಟು ಅವರಿಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಬಿಡುವುದಿಲ್ಲ. ಮಕ್ಕಳ ಬೇಕು-ಬೇಡಗಳನ್ನು ತಾವೇ ತಿರ್ಮಾನಿಸುತ್ತಾರೆ. ಮಕ್ಕಳಿಗೆ ಕೆಟ್ಟ ಪ್ರಪಂಚ ಗೊತ್ತಾಗಬಾರದು, ಯಾವುದೇ ಕಷ್ಟ ಗೊತ್ತಾಗಬಾರದು ಅಗತ್ಯಕ್ಕೆ ಮೀರಿದ ತುಂಬಾ ಮುತುವರ್ಜಿಯಿಂದ ಸಾಕುತ್ತಾರೆ.

ಆದರೆ ಮಕ್ಕಳನ್ನು ಆ ರೀತಿ ಸಾಕುವುದು ಅವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಎಲ್ಲಾ ಸಮಯದಲ್ಲಿ ನೀವು ಅವರ ಜೊತೆ ಇರುತ್ತೀರ ಎಂದು ಹೇಳಲು ಸಾಧ್ಯವಿಲ್ಲ. ಅವರಲ್ಲಿ ಸ್ವಾತಂತ್ರ್ಯ ಮನೋಭಾವ ಬೆಳೆಸಿ. ಎಲ್ಲವನ್ನು ನೀವು ಮಾಡಿ, ಈ ಕೆಳಗಿನಂತೆ ಮಾಡಿ ಅವರಲ್ಲಿ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿ.
ಬಾಡಿ ಗಾರ್ಡ್ ರೀತಿ ಸದಾ ಜೊತೆಯಲ್ಲಿ ಇರಬೇಡಿ
ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು, ಕರೆದುಕೊಂಡು ಬಿಡುವುದು, ಒಬ್ಬರೆ ಪ್ರಯಾಣ ಮಾಡಲು ಬಿಡಿದಿರುವುದು ಮಾಡಬೇಡಿ. ಮಕ್ಕಳು ನಾನು ಹೋಗುತ್ತೇನೆ ಎಂದಾಗ ಕಳುಹಿಸಿ. ಈಗೀನ ಮಕ್ಕಳು ನಮಗಿಂತ ಚುರುಕಾಗಿ ಇರುತ್ತಾರೆ. ಅವರಿಗೆ ನಿಮ್ಮ ಅತೀ ಪ್ರೀತಿ ಕಿರಿಕಿರಿಯಾಗದಿರಲಿ.
ನೈಜತೆಯಿಂದ ದೂರವಿಡಬೇಡಿ
ಮಕ್ಕಳಿಗೆ ಕೆಟ್ಟ ವಿಷಯಗಳು ತಿಳಿಯಬಾರದೆಂದು ಬಯಸುವುದು ತಪ್ಪು. ಸಮಾಜದಲ್ಲಿ ನಡೆಯುತ್ತಿರುವ ರೇಪ್, ದರೋಡೆ ಇವೆಲ್ಲಾ ಅವರ ಅರಿವಿಗೆ ತಂದು ಅವರ ರಕ್ಷಣೆಗೆ ಹೇಗೆ ಇರಬೇಕೆಂಬ ಮಾಹಿತಿ ನೀಡಿ.
ದುಡ್ಡಿನ ಬೆಲೆ ತಿಳಿದಿರಲಿ
ನಿಮ್ಮ ಹತ್ತಿರ ತುಂಬಾ ದುಡ್ಡು ಇದೆಯೆಂದು ತುಂಬಾ ಪಾಕೆಟ್ ಮನಿ ಕೊಟ್ಟು ಅವರನ್ನು ಹಾಳು ಮಾಡಬೇಡಿ, ಹಾಗಂತ ಕೊಡದೆ ಕೂಡ ಇರಬೇಡಿ. ಹಣದ ಬೆಲೆ ತಿಳಿಯುವಂತೆ ಅವರನ್ನು ಬೆಳೆಸಿ.
ಮಿಸ್ಟೇಕ್ ಮಾಡಲಿ ಪರ್ವಾಗಿಲ್ಲ
ತಪ್ಪು ಮಾಡಿದಾಗ ಮಾತ್ರ ಯಾವುದು ತಪ್ಪು? ಯಾವುದು ಸರಿ ಅನ್ನುವುದು ತಿಳಿಯುತ್ತದೆ.
ಅವರ ಅಭಿಪ್ರಾಯ ವ್ಯಕ್ತ ಪಡಿಸಲು ಬಿಡಿ
ಹೆಚ್ಚಿನ ಪೋಷಕರು ಮಕ್ಕಳ ಭಾವನೆಗಳನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯ ಕೊಡದೆ ತಪ್ಪು ಮಾಡುತ್ತಾರೆ. ಎಲ್ಲಾ ಬಾರಿ ನಿಮ್ಮ ಯೋಚನೆ ಸರಿ ಅಂತ ಹೇಳಲು ಆಗುವುದಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೆಂದು ತಿಳಿಯಿರಿ. ಆದ್ದರಿಂದ ಅವರ ಭಾವನೆಗಳನ್ನು ವ್ಯಕ್ತ ಪಡಿಸಲು ಬಿಡಿ.



Click it and Unblock the Notifications
