Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಸ್ವಂತ ಮನೆಯಲ್ಲಿಯೇ ಕದಿಯುವುದು ಏಕೆ?

ಕಾರಣಗಳು:
1. ಪೋಷಕರಿಗೆ ಮಕ್ಕಳ ಬಗ್ಗೆ ಶ್ರದ್ಧೆ ಇಲ್ಲದಿದ್ದರೆ ಈ ರೀತಿಯ ಕದಿಯುವ ಕಾಯಿಲೆ ಬೆಳೆಸಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ತಿಂಡಿ, ಚಾಕೋಲೆಟ್, ಒಡ ಹುಟ್ಟಿದವರ ಆಟದ ಸಾಮಾನುಗಳನ್ನು ಕದಿಯುತ್ತಾರೆ. ನಂತರ ನಿಧಾನಕ್ಕೆ ಹಣ ಕದಿಯಲು ಪ್ರಾರಂಭಿಸುತ್ತಾರೆ.
2. ಕೆಲವೊಮ್ಮೆ ಮನೆಯಲ್ಲಿ ಎರಡು ಮಕ್ಕಳಿದ್ದರೆ ಒಂದು ಮಗುವನ್ನು ತುಂಬಾ ಪ್ರೀತಿ ಮಾಡುತ್ತಿದು, ಇನ್ನೊಂದು ಮಗುವಿನ ಬಗ್ಗೆ ಅಷ್ಟಾಗಿ ಗಮನ ಹರಿಸದಿದ್ದರೆ ಮಕ್ಕಳು ಈ ರೀತಿಯ ತಪ್ಪುಗಳನ್ನು ಮಾಡುತ್ತಾರೆ.
3. ಸಹವಾಸ ದೋಷದಿಂದ ಕೂಡ ಈ ರೀತಿಯ ತಪ್ಪು ಮಾಡುತ್ತಾರೆ. ಸ್ನೇಹಿತರ ಮುಂದೆ ತಾನು ದೊಡ್ಡ ಜನ ಅನ್ನಿಸಿಕೊಳ್ಳಬೇಕೆಂದು ಕೂಡ ಈ ರೀತಿಯ ತಪ್ಪು ಮಾಡುತ್ತಾರೆ.
ಪರಿಹಾರ:
1. ಪೋಷಕರಿಗೆ ಎಷ್ಟೇ ಕೆಲಸವಿರಲಿ ಮಕ್ಕಳ ಕಡೆ ಗಮನ ಕೊಡುವುದು ಒಳ್ಳೆಯದು. ಕೆಲಸದವರ ಸುಪರ್ದಿಗೆ ಮಕ್ಕಳನ್ನು ಒಪ್ಪಿಸಿ ಸುಮ್ಮನೆ ಕೂರುವುದು ಕೆಲ ಪೋಷಕರು ಮಾಡುವ ದೊಡ್ಡ ತಪ್ಪು. ಮಕ್ಕಳ ಬೇಕು, ಬೇಡ ಮತ್ತು ಗುಣಗಳ ಬಗ್ಗೆ ಗಮನ ಕೊಡಬೇಕಾದದು ಪೋಷಕರ ಕರ್ತವ್ಯ, ಇಲ್ಲದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
2. ಅಪ್ಪ-ಅಮ್ಮ ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ತುಂಬಲು ಅವಕಾಶ ಕೊಡಬೇಡಿ. ಏಕೆಂದರೆ ಕೆಲವೊಂದು ಮನೆಗಳಲ್ಲಿ ಕೊನೆಯ ಮಕ್ಕಳನ್ನು ತುಂಬಾ ಮುದ್ದು ಮಾಡುತ್ತಾರೆ, ಕೆಲವರು ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಈ ರೀತಿ ಮಾಡಬಾರದು, ಎಲ್ಲಾ ಮಕ್ಕಳನ್ನು ಸಮನಾಗಿ ನೋಡಬೇಕು. ಇಲ್ಲದಿದ್ದರೆ ಚಿಕ್ಕ ಮನಸ್ಸು ತಪ್ಪು ಹಾದಿಯನ್ನು ಸುಳಿಯುವುದು.
3. ನಮ್ಮ ಮಕ್ಕಳ ಸ್ನೇಹಿತರ ಬಗ್ಗೆ ತಿಳಿದಿರಬೇಕು. ಕೆಟ್ಟ ಗುಣವಿರುವ ಮಕ್ಕಳ ಸಹವಾಸ ಮಾಡಲು ಬಿಡಬಾರದು.
4. ಮಕ್ಕಳ ಬೇಕು ಬೇಡಗಳನ್ನು ತಿಳಿದು ಪೂರೈಸಬೇಕು. ಒಂದು ವೇಳೆ ನಿಮಗೆ ಅವರ ಬೇಡಿಕೆಯನ್ನು ಪೂರೈಸಲು ಆಗದಿದ್ದರೆ ನಿಮ್ಮ ಅಸಹಾಯಕತೆಯನ್ನು ಮಕ್ಕಳಿಗೆ ಮನದಟ್ಟು ಮಾಡಲು ಹಿಂಜರಿಯಬಾರದು. ನಿಮ್ಮ ಆರ್ಥಿಕ ಹಿತಿ-ಮಿತಿ ಬಗ್ಗೆ ಮಕ್ಕಳಿಗೆ ತಿಳಿದಿರುವುದು ಒಳ್ಳೆಯದು. ಆಗ ಅವರು ಕೂಡ ಅದಕ್ಕೆ ತಕ್ಕಂತೆ ಜೀವನ ನಡೆಸಲು ಕಲಿಯುತ್ತಾರೆ.



Click it and Unblock the Notifications