Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಸ್ವಂತ ಮನೆಯಲ್ಲಿಯೇ ಕದಿಯುವುದು ಏಕೆ?

ಕಾರಣಗಳು:
1. ಪೋಷಕರಿಗೆ ಮಕ್ಕಳ ಬಗ್ಗೆ ಶ್ರದ್ಧೆ ಇಲ್ಲದಿದ್ದರೆ ಈ ರೀತಿಯ ಕದಿಯುವ ಕಾಯಿಲೆ ಬೆಳೆಸಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ತಿಂಡಿ, ಚಾಕೋಲೆಟ್, ಒಡ ಹುಟ್ಟಿದವರ ಆಟದ ಸಾಮಾನುಗಳನ್ನು ಕದಿಯುತ್ತಾರೆ. ನಂತರ ನಿಧಾನಕ್ಕೆ ಹಣ ಕದಿಯಲು ಪ್ರಾರಂಭಿಸುತ್ತಾರೆ.
2. ಕೆಲವೊಮ್ಮೆ ಮನೆಯಲ್ಲಿ ಎರಡು ಮಕ್ಕಳಿದ್ದರೆ ಒಂದು ಮಗುವನ್ನು ತುಂಬಾ ಪ್ರೀತಿ ಮಾಡುತ್ತಿದು, ಇನ್ನೊಂದು ಮಗುವಿನ ಬಗ್ಗೆ ಅಷ್ಟಾಗಿ ಗಮನ ಹರಿಸದಿದ್ದರೆ ಮಕ್ಕಳು ಈ ರೀತಿಯ ತಪ್ಪುಗಳನ್ನು ಮಾಡುತ್ತಾರೆ.
3. ಸಹವಾಸ ದೋಷದಿಂದ ಕೂಡ ಈ ರೀತಿಯ ತಪ್ಪು ಮಾಡುತ್ತಾರೆ. ಸ್ನೇಹಿತರ ಮುಂದೆ ತಾನು ದೊಡ್ಡ ಜನ ಅನ್ನಿಸಿಕೊಳ್ಳಬೇಕೆಂದು ಕೂಡ ಈ ರೀತಿಯ ತಪ್ಪು ಮಾಡುತ್ತಾರೆ.
ಪರಿಹಾರ:
1. ಪೋಷಕರಿಗೆ ಎಷ್ಟೇ ಕೆಲಸವಿರಲಿ ಮಕ್ಕಳ ಕಡೆ ಗಮನ ಕೊಡುವುದು ಒಳ್ಳೆಯದು. ಕೆಲಸದವರ ಸುಪರ್ದಿಗೆ ಮಕ್ಕಳನ್ನು ಒಪ್ಪಿಸಿ ಸುಮ್ಮನೆ ಕೂರುವುದು ಕೆಲ ಪೋಷಕರು ಮಾಡುವ ದೊಡ್ಡ ತಪ್ಪು. ಮಕ್ಕಳ ಬೇಕು, ಬೇಡ ಮತ್ತು ಗುಣಗಳ ಬಗ್ಗೆ ಗಮನ ಕೊಡಬೇಕಾದದು ಪೋಷಕರ ಕರ್ತವ್ಯ, ಇಲ್ಲದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
2. ಅಪ್ಪ-ಅಮ್ಮ ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ತುಂಬಲು ಅವಕಾಶ ಕೊಡಬೇಡಿ. ಏಕೆಂದರೆ ಕೆಲವೊಂದು ಮನೆಗಳಲ್ಲಿ ಕೊನೆಯ ಮಕ್ಕಳನ್ನು ತುಂಬಾ ಮುದ್ದು ಮಾಡುತ್ತಾರೆ, ಕೆಲವರು ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಈ ರೀತಿ ಮಾಡಬಾರದು, ಎಲ್ಲಾ ಮಕ್ಕಳನ್ನು ಸಮನಾಗಿ ನೋಡಬೇಕು. ಇಲ್ಲದಿದ್ದರೆ ಚಿಕ್ಕ ಮನಸ್ಸು ತಪ್ಪು ಹಾದಿಯನ್ನು ಸುಳಿಯುವುದು.
3. ನಮ್ಮ ಮಕ್ಕಳ ಸ್ನೇಹಿತರ ಬಗ್ಗೆ ತಿಳಿದಿರಬೇಕು. ಕೆಟ್ಟ ಗುಣವಿರುವ ಮಕ್ಕಳ ಸಹವಾಸ ಮಾಡಲು ಬಿಡಬಾರದು.
4. ಮಕ್ಕಳ ಬೇಕು ಬೇಡಗಳನ್ನು ತಿಳಿದು ಪೂರೈಸಬೇಕು. ಒಂದು ವೇಳೆ ನಿಮಗೆ ಅವರ ಬೇಡಿಕೆಯನ್ನು ಪೂರೈಸಲು ಆಗದಿದ್ದರೆ ನಿಮ್ಮ ಅಸಹಾಯಕತೆಯನ್ನು ಮಕ್ಕಳಿಗೆ ಮನದಟ್ಟು ಮಾಡಲು ಹಿಂಜರಿಯಬಾರದು. ನಿಮ್ಮ ಆರ್ಥಿಕ ಹಿತಿ-ಮಿತಿ ಬಗ್ಗೆ ಮಕ್ಕಳಿಗೆ ತಿಳಿದಿರುವುದು ಒಳ್ಳೆಯದು. ಆಗ ಅವರು ಕೂಡ ಅದಕ್ಕೆ ತಕ್ಕಂತೆ ಜೀವನ ನಡೆಸಲು ಕಲಿಯುತ್ತಾರೆ.



Click it and Unblock the Notifications











