Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸ್ವಂತ ಮನೆಯಲ್ಲಿಯೇ ಕದಿಯುವುದು ಏಕೆ?

ಕಾರಣಗಳು:
1. ಪೋಷಕರಿಗೆ ಮಕ್ಕಳ ಬಗ್ಗೆ ಶ್ರದ್ಧೆ ಇಲ್ಲದಿದ್ದರೆ ಈ ರೀತಿಯ ಕದಿಯುವ ಕಾಯಿಲೆ ಬೆಳೆಸಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ತಿಂಡಿ, ಚಾಕೋಲೆಟ್, ಒಡ ಹುಟ್ಟಿದವರ ಆಟದ ಸಾಮಾನುಗಳನ್ನು ಕದಿಯುತ್ತಾರೆ. ನಂತರ ನಿಧಾನಕ್ಕೆ ಹಣ ಕದಿಯಲು ಪ್ರಾರಂಭಿಸುತ್ತಾರೆ.
2. ಕೆಲವೊಮ್ಮೆ ಮನೆಯಲ್ಲಿ ಎರಡು ಮಕ್ಕಳಿದ್ದರೆ ಒಂದು ಮಗುವನ್ನು ತುಂಬಾ ಪ್ರೀತಿ ಮಾಡುತ್ತಿದು, ಇನ್ನೊಂದು ಮಗುವಿನ ಬಗ್ಗೆ ಅಷ್ಟಾಗಿ ಗಮನ ಹರಿಸದಿದ್ದರೆ ಮಕ್ಕಳು ಈ ರೀತಿಯ ತಪ್ಪುಗಳನ್ನು ಮಾಡುತ್ತಾರೆ.
3. ಸಹವಾಸ ದೋಷದಿಂದ ಕೂಡ ಈ ರೀತಿಯ ತಪ್ಪು ಮಾಡುತ್ತಾರೆ. ಸ್ನೇಹಿತರ ಮುಂದೆ ತಾನು ದೊಡ್ಡ ಜನ ಅನ್ನಿಸಿಕೊಳ್ಳಬೇಕೆಂದು ಕೂಡ ಈ ರೀತಿಯ ತಪ್ಪು ಮಾಡುತ್ತಾರೆ.
ಪರಿಹಾರ:
1. ಪೋಷಕರಿಗೆ ಎಷ್ಟೇ ಕೆಲಸವಿರಲಿ ಮಕ್ಕಳ ಕಡೆ ಗಮನ ಕೊಡುವುದು ಒಳ್ಳೆಯದು. ಕೆಲಸದವರ ಸುಪರ್ದಿಗೆ ಮಕ್ಕಳನ್ನು ಒಪ್ಪಿಸಿ ಸುಮ್ಮನೆ ಕೂರುವುದು ಕೆಲ ಪೋಷಕರು ಮಾಡುವ ದೊಡ್ಡ ತಪ್ಪು. ಮಕ್ಕಳ ಬೇಕು, ಬೇಡ ಮತ್ತು ಗುಣಗಳ ಬಗ್ಗೆ ಗಮನ ಕೊಡಬೇಕಾದದು ಪೋಷಕರ ಕರ್ತವ್ಯ, ಇಲ್ಲದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
2. ಅಪ್ಪ-ಅಮ್ಮ ನನ್ನನ್ನು ಸರಿಯಾಗಿ ನೋಡುತ್ತಿಲ್ಲ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ತುಂಬಲು ಅವಕಾಶ ಕೊಡಬೇಡಿ. ಏಕೆಂದರೆ ಕೆಲವೊಂದು ಮನೆಗಳಲ್ಲಿ ಕೊನೆಯ ಮಕ್ಕಳನ್ನು ತುಂಬಾ ಮುದ್ದು ಮಾಡುತ್ತಾರೆ, ಕೆಲವರು ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಈ ರೀತಿ ಮಾಡಬಾರದು, ಎಲ್ಲಾ ಮಕ್ಕಳನ್ನು ಸಮನಾಗಿ ನೋಡಬೇಕು. ಇಲ್ಲದಿದ್ದರೆ ಚಿಕ್ಕ ಮನಸ್ಸು ತಪ್ಪು ಹಾದಿಯನ್ನು ಸುಳಿಯುವುದು.
3. ನಮ್ಮ ಮಕ್ಕಳ ಸ್ನೇಹಿತರ ಬಗ್ಗೆ ತಿಳಿದಿರಬೇಕು. ಕೆಟ್ಟ ಗುಣವಿರುವ ಮಕ್ಕಳ ಸಹವಾಸ ಮಾಡಲು ಬಿಡಬಾರದು.
4. ಮಕ್ಕಳ ಬೇಕು ಬೇಡಗಳನ್ನು ತಿಳಿದು ಪೂರೈಸಬೇಕು. ಒಂದು ವೇಳೆ ನಿಮಗೆ ಅವರ ಬೇಡಿಕೆಯನ್ನು ಪೂರೈಸಲು ಆಗದಿದ್ದರೆ ನಿಮ್ಮ ಅಸಹಾಯಕತೆಯನ್ನು ಮಕ್ಕಳಿಗೆ ಮನದಟ್ಟು ಮಾಡಲು ಹಿಂಜರಿಯಬಾರದು. ನಿಮ್ಮ ಆರ್ಥಿಕ ಹಿತಿ-ಮಿತಿ ಬಗ್ಗೆ ಮಕ್ಕಳಿಗೆ ತಿಳಿದಿರುವುದು ಒಳ್ಳೆಯದು. ಆಗ ಅವರು ಕೂಡ ಅದಕ್ಕೆ ತಕ್ಕಂತೆ ಜೀವನ ನಡೆಸಲು ಕಲಿಯುತ್ತಾರೆ.



Click it and Unblock the Notifications