Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೂದಲು ಕಟ್ಟದೆ ಪೂಜೆ ಮಾಡಬಾರದು ಏಕೆ? ಇದರ ಹಿಂದಿನ ಕಾರಣ ಗೊತ್ತಾ?
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಕಾರಣಗಳಿ, ವೈಜ್ಞಾನಿಕ ಸಾಕ್ಷಿಗಳು, ಪುರಾವೆಗಳು ಸಿಗುವುದು ನೋಡಬಹುದು. ನಿಮ್ಮ ಪ್ರತಿಯೊಂದು ಆಚಾರ ವಿಚಾರದಲ್ಲೂ ಕೂಡ ಒಂದಲ್ಲಾ ಒಂದು ರೀತಿಯ ಆಲೋಚನೆಗಳು ಇರಬಹುದು, ಆದ್ರೆ ಕೆಲವೊಂದು ಕಟ್ಟುಪಾಡುಗಳು, ನಿಯಮಗಳ ಹಿಂದೆ ಶಾಸ್ತ್ರದಲ್ಲಿ ಅದರದ್ದೇ ಆದ ನಿಯಮಗಳಿವೆ, ಅದಕ್ಕೆ ಸೂಕ್ತ ರೀತಿ ವಿವರಣೆಗಳು ಕೂಡ ಇವೆ.
ಹಾಗೆ ಹಿರಿಯರ ಮಾತಿನಲ್ಲಿ ಹಲವು ನಿಯಮಗಳ ಕೇಳುವುದು ನೋಡಬಹುದು. ಕೆಲವೊಂದು ಆಚರಣೆಯಲ್ಲಿ ಅವರು ಹೇಳುವಂತೆ ಶಾಸ್ತ್ರದಲ್ಲಿಯೂ ಹೇಳುವುದು ನೋಡಬಹುದು. ಮುಖ್ಯವಾಗಿ ಪೂಜೆ, ಭಕ್ತಿ, ದೇವಾಲಯ ಭೇಟಿ ನೀಡುವಂತಹ ಸಮಯಲ್ಲಿ ಹಲವು ರೀತಿಯ ಅಲಿಖಿತ ನಿಯಮಗಳ ಹೇಳುವುದು ನೀವು ಸಹ ಕೇಳಿರಬಹುದು.

ಹಾಗೆ ಕೂದಲನ್ನು ಕಟ್ಟದೆ ಹಾಗೆ ಪೂಜೆಯಲ್ಲಿ ಪಾಲ್ಗೊಳ್ಳುವುದು ದೇವಾಲಯಕ್ಕೆ ಹೋಗುವುದನ್ನು ಕೂಡ ಹಿರಿಯರು ಅಶುಭ ಎಂದು ಹೇಳುತ್ತಾರೆ. ಯುವತಿಯರು ಇಲ್ಲವೆ ಮಹಿಳೆಯರು ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಇಳಿ ಬಿಟ್ಟು ಯಾವುದೇ ಶುಭ ಕಾರ್ಯದಲ್ಲಿ ಭಾಗಿಯಾಗಬಾರದು ಎಂದು ಹಿರಿಯರು ಹೇಳುವುದು ಕೇಳಿರಬಹುದು.
ಹಿರಿಯರು ಹೀಗೆ ಹೇಳುವುದರ ಹಿಂದೆ ಕೂಡ ಕಾರಣಗಳಿವೆ. ಶಾಸ್ತ್ರವೂ ಕೂಡ ಇದನ್ನೇ ಹೇಳುತ್ತದೆ. ಮಹಿಳೆಯರು ಕೂದಲನ್ನು ಇಳಿಬಿಟ್ಟು ಅಥವಾ ಕಟ್ಟದೆ ಪೂಜೆಯಲ್ಲಿ ಪಾಲ್ಗೊಳ್ಳುವುದು ಅಥವಾ ದೇವಾಲಯ ಭೇಟಿ, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಅಶುಭ ಕಾರಕ ಎಂದು ಹೇಳಲಾಗುತ್ತದೆ.
ಕೂದಲು ಇಳಿ ಬಟ್ಟು ಅಥವಾ ಕಟ್ಟದೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದರಿಂದ ದೇವರ ಕೋಪಕ್ಕೆ ಗುರಿಯಾಗಬಹುದಂತೆ. ಹಾಗೆ ನಕಾರಾತ್ಮಕ ಆಲೋಚನೆಗಳು, ಶಕ್ತಿಯನ್ನು ಆಕರ್ಷಿಸಲಿದೆ ಎಂದು ಕೂಡ ಹೇಳಲಾಗಿದೆ. ಹಾಗೆ ಕೂದಲು ಕಟ್ಟಿಕೊಳ್ಳದೆ ದೇವರ ಪ್ರಾರ್ಥನೆ ಮಾಡುವಾಗ ನಿಮ್ಮ ಗಮನ ಬೇರೆಡೆ ಸೆಳೆಯಬಹುದು ಎಂಬ ವಾದವೂ ಇದೆ. ಕೂದಲು ಸರಿ ಮಾಡಿಕೊಳ್ಳುವುದರ ಕಡೆ ನಿಮ್ಮ ಗಮನವಿರಲಿದೆ ಭಕ್ತಿಯ ಕಡೆ ಗಮನ ಹರಿಸಲು ಆಗುವುದಿಲ್ಲ ಎಂಬುದಾಗಿಯೂ ಹೇಳಲಾಗಿದೆ.
ಕಿರೀಟ ಚಕ್ರಕ್ಕೆ ಹಾನಿಯಾಲಿದೆ
ಕಿರೀಟ ಚಕ್ರ ಅಥವಾ ಸಹಸ್ರಾರವು ದೇಹದ ಏಳನೇ ಮತ್ತು ಅತ್ಯುನ್ನತ ಶಕ್ತಿ ಕೇಂದ್ರ ಎಂದು ಹೇಳಲಾಗುತ್ತದೆ. ಇದು ತಲೆಯ ಮೇಲ್ಭಾಗದಲ್ಲಿರಲಿದೆ. ಹೀಗಾಗಿ ಕೂದಲು ಕಟ್ಟದೆಯೇ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವುದು ಈ ಸಹಸ್ರಾರದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಕೂಡ ಹೇಳಲಾಗುತ್ತದೆ. ಈ ಚಕ್ರವು ನಿಮ್ಮ ಆಧ್ಯಾತ್ಮಿಕ ಜಾಗೃತಿಗೆ ಕಾರಣವಾಗುತ್ತದೆ. ದೈವಿಕ ಸಂಪರ್ಕ ಮತ್ತು ದೈವಿಕತೆಯೊಂದಿಗಿನ ಏಕತೆಯ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ.
ಹಾಗೆ ತೆರೆದ ಕೂದಲು ಮಹಿಳೆಯರಲ್ಲಿ ಕೋಪದ ಸಂಕೇತವಂತೆ. ತಾಳ್ಮೆಯ ವಿರುದ್ಧದ ಸಂಬಂಧ ಹೊಂದಿದ್ದು, ಇದರಿಂದ ನಿಮ್ಮಲ್ಲಿ ನಕಾರಾತ್ಮಕ ಹಾಗೂ ಚಂಚಲತೆಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ. ಹಾಗೆ ಇದರ ಹಿಂದೆ ಸೀತೆಯ ಒಂದು ಕಥೆ ಕೂಡ ಇದೆ. ಸೀತಾ ದೇವಿಯ ವಿವಾಹ ಸಮಯದಲ್ಲಿ ಆಕೆಯ ಕೂದಲನ್ನು ಬಿಗಿಯಾಗಿ ಕಟ್ಟಲಾಗಿತ್ತಂತೆ. ತಾಯಿ ಸುನಯನ ಸೀತೆಗೆ ಹೀಗೆ ಬಿಗಿಯಾಗಿ ಕೂದಲನ್ನು ಕಟ್ಟಿದ್ದರಂತೆ. ಏಕೆ ಇಷ್ಟು ಬಿಗಿಯಾಗಿ ಕಟ್ಟಿದ್ದೀರಿ ಎಂದು ಕೇಳಿದಾಗ ಕೂದಲು ಬಿಗಿಯಾಗಿ ಕಟ್ಟಿದಷ್ಟು ನಿಮ್ಮಿಬ್ಬರ ಸಂಬಂಧ ಗಟ್ಟಿಯಾಗಲಿದೆ ಎಂದು ಹೇಳಿದ್ದಳಂತೆ.
ಇದಿಷ್ಟೇ ಅಲ್ಲ ಕೂದಲು ತೆರೆದಿದ್ದರೆ ಕೂದಲು ಉದುರುವುದು ಹೆಚ್ಚಾತ್ತದೆ. ದೇವಾಲಯದಲ್ಲಿ, ಧಾರ್ಮಿಕ ಕಾರ್ಯ ನಡೆಯುವ ಸ್ಥಳದಲ್ಲಿ ಕೂದಲು ಉದುರುವುದು ಶುಭ ಸೂಚಕವಲ್ಲ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications