Latest Updates
-
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ!
ಈ ವರ್ಷ ಓಣಂ ಆಚರಣೆ ಯಾವಾಗ? ಓಣಂಗೂ ದೀಪಾವಳಿಗೂ ಇರುವ ಹೋಲಿಕೆಯೇನು?
ಕೇರಳಿಗರ ಪ್ರಮುಖ ಹಬ್ಬ ಓಣಂ. ನಮ್ಮಲ್ಲಿ ದಸರಾವನ್ನು 10 ದಿನಗಳು ಹೇಗೆ ಸಡಗರ-ಸಂಭ್ರಮದಿಂದ ಆಚರಿಸುತ್ತೇವೋ ಅದೇ ರೀತಿ ಕೇರಳದಲ್ಲಿ 10 ದಿನ ಹೂವಿನ ರಂಗೋಲಿ ಹಾಕಿ ಆಚರಿಸಲಾಗುವುದು. ಓಣಂ ಹಬ್ಬವನ್ನು ಕೇರಳಿಗರು ಆಚರಿಸುವುದಾದರೂ ಕರ್ನಾಟಕದಲ್ಲೂ ಈ ಹಬ್ಬದ ಆಚರಣೆಯನ್ನು ಕಾಣಬಹುದು. ಕೇರಳದಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿರುವ, ಉದ್ಯೋಗಕ್ಕಾಗಿ ಕರ್ನಾಟಕ್ಕೆ ಬಂದಿರುವ ಕೇರಳಿಗರು ಈ ಹಬ್ಬವನ್ನು ಆಚರಿಸುತ್ತಾರೆ. ಕೆಲವೊಂದು ಆಫೀಸ್ಗಳಲ್ಲಿಯೂ ಹೂವಿನ ರಂಗೋಲಿ ಹಾಕಿ ಓಣಂ ಆಚರಿಸಲಾಗುವುದು.

ಈ ವರ್ಷ ಓಣಂವನ್ನು ಯಾವಾಗ ಆಚರಿಸಲಾಗುವುದು? ನಮ್ಮ ಯಾವ ಹಬ್ಬಕ್ಕೆ ಓಣಂಗೆ ಹೋಲಿಕೆ ಇದೆ ಎಂದು ನೋಡುವುದಾದರೆ
2023ರಲ್ಲಿ ಓಣಂ ಆಚರಣೆ
ಈ ವರ್ಷ ಓಣಂ ಅನ್ನು 29 ಹಾಗೂ 30ರಂದು ಆಚರಿಸಲಾಗುವುದು.
ತಿರುವಾಣಂ ನಕ್ಷತ್ರ ಆಗಸ್ಟ್ 29 ಮುಂಜಾನೆ 2:43ಕ್ಕೆ ಪ್ರಾರಂಭ
ತಿರುವಾಣಂ ನಕ್ಷತ್ರ ಮುಕ್ತಾಯ : ಆಗಸ್ಟ್ 29 ರಾತ್ರಿ 11:50
ತಿರುವಾಣಂ ಅನ್ನು ಮಕ್ಕಳ ಓಣಂ ಎಂದು ಕರೆಯಲಾಗುವುದು.
ಓಣಂ ಅನ್ನು ಆಗಸ್ಟ್ 30ರಂದು ಆಚರಿಸಲಾಗುವುದು.
ಈ ಹಬ್ಬದ ಆಚರಣೆಗೂ ನಮ್ಮ ದೀಪಾವಳಿಗೂ ಒಂದಕ್ಕೊಂದು ಸಂಬಂಧವಿದೆ.
ಓಣಂ ಹಬ್ಬದಂದು ಪೂಕಳಂ (ಹೂವಿನ ರಂಗೋಲಿ) ಹಾಕಿ ಮಾವಾಲಿಯನ್ನು ಕರೆಯಲಾಗುವುದು. ನಾವು ದೀಪಾವಳಿಯಂದು ದೀಪಗಳನ್ನು ಬೆಳಗಿ ಬಲಿಚಕ್ರವರ್ತಿಯನ್ನು ಆಹ್ವಾನಿಸುತ್ತೇವೆ.
ಮಾವಾಲಿ ಕತೆ ಹಾಗೂ ಬಲಿಚಕ್ರವರ್ತಿ ಕತೆ ಎರಡೂ ಒಂದೇ ರೀತಿ ಇರುವುದರಿಂದ ನಮ್ಮಲ್ಲಿಯ ದೀಪಾವಳಿ ಹಾಗೂ ಕೇರಳಂ ಓಣಂ ಆಚರಣೆಯ ಉದ್ದೇಶ ಒಂದೇ ರೀತಿ ಕಾಣುವುದು.
ಓಣಂ ಆಚರಣೆಯ ಸಮಯದಲ್ಲಿ ಸಾಂಪ್ರದಾಯಕ ನೃತ್ಯಗಳು ಹಾಗೂ ಆಟಗಳನ್ನು ಆಡಲಾಗುವುದು. ಕೈಕೊತ್ತಿ ಕಲಿ, ತುಂಬಿ ತುಳ್ಳಲ್ ಎಂಬ ಮನೋಹರವಾದ ನೃತ್ಯ ಪ್ರಕಾರಗಳನ್ನು ಮಾಡಲಾಗುವುದು. ದೋಣಿ ಪಂದ್ಯಗಳಿರುತ್ತದೆ. ಈ ಹಬ್ಬದ ಸಮಯದಲ್ಲಿ ವಿಶೇಷ ಅಡುಗೆಗಳನ್ನು ತಯಾರಿಸಲಾಗುವುದು. ಓಣಂ ಸಮಯದಲ್ಲಿ ಈ ಹಬ್ಬದ ವೈಶಿಷ್ಠ್ಯತೆ ಕಣ್ತುಂಬಿಗಳು ಬರುವ ಪ್ರವಾಸಿಗರ ಸಂಖ್ಯೆಯೂ ಅಧಿಕವಿರುತ್ತದೆ.



Click it and Unblock the Notifications