Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಪಿತೃಪಕ್ಷದಲ್ಲಿ ಪಿತೃದೋಷ ನಿವಾರಣೆಗೆ ಪರಿಹಾರ
ಯಾವುದೇ ಕಾರಣಕ್ಕೆ ಪಿತೃದೋಷ ಒಳ್ಳೆಯದಲ್ಲ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು. ಪಿತೃದೋಷ ಹೇಗೆ ಉಂಟಾಗುತ್ತದೆ? ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಇದರ ಲಕ್ಷಣಗಳೇನು? ಪಿತೃದೋಷಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಪಿತೃದೋಷ ಹೇಗೆ ಉಂಟಾಗುವುದು?
ಪಿತೃದೋಷ ಪೂರ್ವಜರ ಶಾಪದಿಂದ ಉಂಟಾಗಬಹುದು, ವ್ಯಕ್ತಿಯ ಕುಂಡಲಿಯಲ್ಲಿ ಪಿತೃದೋಷವಿದ್ದರೆ ಅದರಿಂದಲೂ ಉಂಟಾಗುವುದು. ಪೂರ್ವಜರು ಏನಾದರೂ ತಪ್ಪು ಮಾಡಿದ್ದರೆ ಅದರ ದೋಷವೂ ಮುಂದಿನ ತಲೆಮಾರುಗಳಿಗೆ ಬಾಧಿಸಬಹುದು. ಈ ಪಿತೃದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಪಿತೃದೋಷವಿದ್ದರೆ ಅನೇಕ ಋಣಾತ್ಮಕ ಘಟನೆಗಳು ಬದುಕಿನಲ್ಲಿ ಸಂಭವಿಸುತ್ತದೆ. ತುಂಬಾನೇ ನಷ್ಟ ಅನುಭವಿಸಬೇಕಾಗುತ್ತದೆ, ಏನೇ ಮಾಡಿದರೂ ಏಳಿಗೆಯಾಗುವುದಿಲ್ಲ, ಮನಸ್ಸಿಗೆ ನೆಮ್ಮದಿಯೆಂಬುವುದೇ ಇರುವುದಿಲ್ಲ.
ಪಿತೃದೋಷವಿದೆಯೆಂದು ತಿಳಿಯುವುದು ಹೇಗೆ?
* ಆಗಾಗ ಕಾಯಿಲೆ ಬೀಳುವುದು
* ದಂಪತಿಗೆ ಗರ್ಭಧಾರಣೆಯಲ್ಲಿ ತೊಂದರೆಯಾಗುವುದು
* ಆಗಾಗ ಗರ್ಭಪಾತ ಉಂಟಾಗುವುದು
* ಯಾವುದೇ ಕಾರಣವಿಲ್ಲದೆ ಮನೆಯ ಸದಸ್ಯರ ನಡುವೆ ಸದಾ ಜಗಳ
* ಗಂಡ-ಹೆಂಡತಿ ನಡುವೆ ಜಗಳ ಉಂಟಾಗುವುದು
* ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು
* ಕುಟುಂಬ ಏಳಿಗೆಯಾಗುವುದಿಲ್ಲ
* ದೈಹಿಕ , ಮಾನಸಿಕ ನ್ಯೂನತೆಗಳು ಉಂಟಾಗುವುದು.
ಪಿತೃದೋಷ ಹೇಗೆ ಉಂಟಾಗುವುದು
* ತುಂಬಾ ಕ್ರೂರ ವರ್ತನೆ, ಪ್ರಾಣಿ, ಮನುಷ್ಯರನ್ನು ಕ್ರೂರವಾಗಿ ಕೊಲ್ಲುವುದು
* ಬೇರೆಯವರಿಗೆ ವಂಚನೆ ಮಾಡಿ ತಾವು ಬೆಳೆಯಲು ಯತ್ನಿಸುವುದು
* ಹಿರಿಯರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳದಿರುವುದು
ಕುಂಡಲಿಯಲ್ಲಿ ಪಿತೃದೋಷ ಯಾವಾಗ ಉಂಟಾಗುವುದು
* ಕುಂಡಲಿಯಲ್ಲಿ ರಾಹು-ಕೇತು ಸಂಯೋಗವಾದರೆ ಪಿತೃದೋಷ ಉಂಟಾಗುವುದು
* ಸೂರ್ಯ-ರಾಹು/ಕೇತು ಅಥವಾ ಗುರು-ರಾಹು/ ಕೇತು ಸಂಯೋಗವಾಗಿದ್ದರೆ ಪಿತೃದೋಷ ಉಂಟಾಗುವುದು.
* ಜನ್ಮ ಕುಂಡಲಿಯಲ್ಲಿ ಸೂರ್ಯ ಮತ್ತು ರಾಹು ಅಥವಾ ಸೂರ್ಯ ಮತ್ತು ಶನಿ ಕುಂಡಲಿಯ ಮೊದಲ, 2ನೇ, 4ನೇ, 7ನೇ, 9 ಹಾಗೂ 10ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಪಿತೃಪಕ್ಷದಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು.
* ಪಿತೃಪಕ್ಷದಲ್ಲಿ ಪಿತೃ ತರ್ಪಣ ಮಾಡಿದರೆ ಒಳ್ಳೆಯದು
* ಪಿತೃಪಕ್ಷದಲ್ಲಿ ಪಿತೃ ದೋಷ ನಿವಾರಣೆ ಪೂಜೆ ಮಾಡಿ
* ಆಲದ ಮರಕ್ಕೆ ನೀರು ಹಾಕಿ ಶಿವನಿಗೆ ಪ್ರತಿದಿನ ಪೂಜೆ ಸಲ್ಲಿಸಿ, ಇದರಿಂದ ಪಿತೃದೋಷ ಕಡಿಮೆಯಾಗುವುದು.
* ನೀವು ಪಿತೃಪಕ್ಷದಲ್ಲಿ ಪಿಂಡದಾನ ಮಾಡಿ
* ಮಹಾಲಯ ಅಮವಾಸ್ಯೆಯಂದು ಪಿತೃ ತರ್ಪಣ ಮಾಡಿ.
* ನಿಮ್ಮ ಕುಂಡಲಿಯನ್ನು ಬಲಪಡಿಸಲು ನಿಮ್ಮ ರಾಶಿಗೆ ಸೂಕ್ತವಾದ ಹರಳು ಧರಿಸಬಹುದು.
* ಪಿತೃ ದೋಷ ನಿವಾರಣ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್ ಶಾಂತಿಂ ದಹಿ ಪತ್ ಸ್ವಾಹಾ
ಈ ಮಂತ್ರ ಪಠಿಸಿ
* ಮೃತ್ಯುಂಜಯ ಮಂತ್ರ ಪಠಿಸಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications