Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಪಿತೃಪಕ್ಷದಲ್ಲಿ ಪಿತೃದೋಷ ನಿವಾರಣೆಗೆ ಪರಿಹಾರ
ಯಾವುದೇ ಕಾರಣಕ್ಕೆ ಪಿತೃದೋಷ ಒಳ್ಳೆಯದಲ್ಲ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು. ಪಿತೃದೋಷ ಹೇಗೆ ಉಂಟಾಗುತ್ತದೆ? ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಇದರ ಲಕ್ಷಣಗಳೇನು? ಪಿತೃದೋಷಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಪಿತೃದೋಷ ಹೇಗೆ ಉಂಟಾಗುವುದು?
ಪಿತೃದೋಷ ಪೂರ್ವಜರ ಶಾಪದಿಂದ ಉಂಟಾಗಬಹುದು, ವ್ಯಕ್ತಿಯ ಕುಂಡಲಿಯಲ್ಲಿ ಪಿತೃದೋಷವಿದ್ದರೆ ಅದರಿಂದಲೂ ಉಂಟಾಗುವುದು. ಪೂರ್ವಜರು ಏನಾದರೂ ತಪ್ಪು ಮಾಡಿದ್ದರೆ ಅದರ ದೋಷವೂ ಮುಂದಿನ ತಲೆಮಾರುಗಳಿಗೆ ಬಾಧಿಸಬಹುದು. ಈ ಪಿತೃದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಪಿತೃದೋಷವಿದ್ದರೆ ಅನೇಕ ಋಣಾತ್ಮಕ ಘಟನೆಗಳು ಬದುಕಿನಲ್ಲಿ ಸಂಭವಿಸುತ್ತದೆ. ತುಂಬಾನೇ ನಷ್ಟ ಅನುಭವಿಸಬೇಕಾಗುತ್ತದೆ, ಏನೇ ಮಾಡಿದರೂ ಏಳಿಗೆಯಾಗುವುದಿಲ್ಲ, ಮನಸ್ಸಿಗೆ ನೆಮ್ಮದಿಯೆಂಬುವುದೇ ಇರುವುದಿಲ್ಲ.
ಪಿತೃದೋಷವಿದೆಯೆಂದು ತಿಳಿಯುವುದು ಹೇಗೆ?
* ಆಗಾಗ ಕಾಯಿಲೆ ಬೀಳುವುದು
* ದಂಪತಿಗೆ ಗರ್ಭಧಾರಣೆಯಲ್ಲಿ ತೊಂದರೆಯಾಗುವುದು
* ಆಗಾಗ ಗರ್ಭಪಾತ ಉಂಟಾಗುವುದು
* ಯಾವುದೇ ಕಾರಣವಿಲ್ಲದೆ ಮನೆಯ ಸದಸ್ಯರ ನಡುವೆ ಸದಾ ಜಗಳ
* ಗಂಡ-ಹೆಂಡತಿ ನಡುವೆ ಜಗಳ ಉಂಟಾಗುವುದು
* ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು
* ಕುಟುಂಬ ಏಳಿಗೆಯಾಗುವುದಿಲ್ಲ
* ದೈಹಿಕ , ಮಾನಸಿಕ ನ್ಯೂನತೆಗಳು ಉಂಟಾಗುವುದು.
ಪಿತೃದೋಷ ಹೇಗೆ ಉಂಟಾಗುವುದು
* ತುಂಬಾ ಕ್ರೂರ ವರ್ತನೆ, ಪ್ರಾಣಿ, ಮನುಷ್ಯರನ್ನು ಕ್ರೂರವಾಗಿ ಕೊಲ್ಲುವುದು
* ಬೇರೆಯವರಿಗೆ ವಂಚನೆ ಮಾಡಿ ತಾವು ಬೆಳೆಯಲು ಯತ್ನಿಸುವುದು
* ಹಿರಿಯರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳದಿರುವುದು
ಕುಂಡಲಿಯಲ್ಲಿ ಪಿತೃದೋಷ ಯಾವಾಗ ಉಂಟಾಗುವುದು
* ಕುಂಡಲಿಯಲ್ಲಿ ರಾಹು-ಕೇತು ಸಂಯೋಗವಾದರೆ ಪಿತೃದೋಷ ಉಂಟಾಗುವುದು
* ಸೂರ್ಯ-ರಾಹು/ಕೇತು ಅಥವಾ ಗುರು-ರಾಹು/ ಕೇತು ಸಂಯೋಗವಾಗಿದ್ದರೆ ಪಿತೃದೋಷ ಉಂಟಾಗುವುದು.
* ಜನ್ಮ ಕುಂಡಲಿಯಲ್ಲಿ ಸೂರ್ಯ ಮತ್ತು ರಾಹು ಅಥವಾ ಸೂರ್ಯ ಮತ್ತು ಶನಿ ಕುಂಡಲಿಯ ಮೊದಲ, 2ನೇ, 4ನೇ, 7ನೇ, 9 ಹಾಗೂ 10ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಪಿತೃಪಕ್ಷದಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು.
* ಪಿತೃಪಕ್ಷದಲ್ಲಿ ಪಿತೃ ತರ್ಪಣ ಮಾಡಿದರೆ ಒಳ್ಳೆಯದು
* ಪಿತೃಪಕ್ಷದಲ್ಲಿ ಪಿತೃ ದೋಷ ನಿವಾರಣೆ ಪೂಜೆ ಮಾಡಿ
* ಆಲದ ಮರಕ್ಕೆ ನೀರು ಹಾಕಿ ಶಿವನಿಗೆ ಪ್ರತಿದಿನ ಪೂಜೆ ಸಲ್ಲಿಸಿ, ಇದರಿಂದ ಪಿತೃದೋಷ ಕಡಿಮೆಯಾಗುವುದು.
* ನೀವು ಪಿತೃಪಕ್ಷದಲ್ಲಿ ಪಿಂಡದಾನ ಮಾಡಿ
* ಮಹಾಲಯ ಅಮವಾಸ್ಯೆಯಂದು ಪಿತೃ ತರ್ಪಣ ಮಾಡಿ.
* ನಿಮ್ಮ ಕುಂಡಲಿಯನ್ನು ಬಲಪಡಿಸಲು ನಿಮ್ಮ ರಾಶಿಗೆ ಸೂಕ್ತವಾದ ಹರಳು ಧರಿಸಬಹುದು.
* ಪಿತೃ ದೋಷ ನಿವಾರಣ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್ ಶಾಂತಿಂ ದಹಿ ಪತ್ ಸ್ವಾಹಾ
ಈ ಮಂತ್ರ ಪಠಿಸಿ
* ಮೃತ್ಯುಂಜಯ ಮಂತ್ರ ಪಠಿಸಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications