Latest Updates
-
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ -
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್!
ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಪಿತೃಪಕ್ಷದಲ್ಲಿ ಪಿತೃದೋಷ ನಿವಾರಣೆಗೆ ಪರಿಹಾರ
ಯಾವುದೇ ಕಾರಣಕ್ಕೆ ಪಿತೃದೋಷ ಒಳ್ಳೆಯದಲ್ಲ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು. ಪಿತೃದೋಷ ಹೇಗೆ ಉಂಟಾಗುತ್ತದೆ? ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಇದರ ಲಕ್ಷಣಗಳೇನು? ಪಿತೃದೋಷಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಪಿತೃದೋಷ ಹೇಗೆ ಉಂಟಾಗುವುದು?
ಪಿತೃದೋಷ ಪೂರ್ವಜರ ಶಾಪದಿಂದ ಉಂಟಾಗಬಹುದು, ವ್ಯಕ್ತಿಯ ಕುಂಡಲಿಯಲ್ಲಿ ಪಿತೃದೋಷವಿದ್ದರೆ ಅದರಿಂದಲೂ ಉಂಟಾಗುವುದು. ಪೂರ್ವಜರು ಏನಾದರೂ ತಪ್ಪು ಮಾಡಿದ್ದರೆ ಅದರ ದೋಷವೂ ಮುಂದಿನ ತಲೆಮಾರುಗಳಿಗೆ ಬಾಧಿಸಬಹುದು. ಈ ಪಿತೃದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಪಿತೃದೋಷವಿದ್ದರೆ ಅನೇಕ ಋಣಾತ್ಮಕ ಘಟನೆಗಳು ಬದುಕಿನಲ್ಲಿ ಸಂಭವಿಸುತ್ತದೆ. ತುಂಬಾನೇ ನಷ್ಟ ಅನುಭವಿಸಬೇಕಾಗುತ್ತದೆ, ಏನೇ ಮಾಡಿದರೂ ಏಳಿಗೆಯಾಗುವುದಿಲ್ಲ, ಮನಸ್ಸಿಗೆ ನೆಮ್ಮದಿಯೆಂಬುವುದೇ ಇರುವುದಿಲ್ಲ.
ಪಿತೃದೋಷವಿದೆಯೆಂದು ತಿಳಿಯುವುದು ಹೇಗೆ?
* ಆಗಾಗ ಕಾಯಿಲೆ ಬೀಳುವುದು
* ದಂಪತಿಗೆ ಗರ್ಭಧಾರಣೆಯಲ್ಲಿ ತೊಂದರೆಯಾಗುವುದು
* ಆಗಾಗ ಗರ್ಭಪಾತ ಉಂಟಾಗುವುದು
* ಯಾವುದೇ ಕಾರಣವಿಲ್ಲದೆ ಮನೆಯ ಸದಸ್ಯರ ನಡುವೆ ಸದಾ ಜಗಳ
* ಗಂಡ-ಹೆಂಡತಿ ನಡುವೆ ಜಗಳ ಉಂಟಾಗುವುದು
* ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು
* ಕುಟುಂಬ ಏಳಿಗೆಯಾಗುವುದಿಲ್ಲ
* ದೈಹಿಕ , ಮಾನಸಿಕ ನ್ಯೂನತೆಗಳು ಉಂಟಾಗುವುದು.
ಪಿತೃದೋಷ ಹೇಗೆ ಉಂಟಾಗುವುದು
* ತುಂಬಾ ಕ್ರೂರ ವರ್ತನೆ, ಪ್ರಾಣಿ, ಮನುಷ್ಯರನ್ನು ಕ್ರೂರವಾಗಿ ಕೊಲ್ಲುವುದು
* ಬೇರೆಯವರಿಗೆ ವಂಚನೆ ಮಾಡಿ ತಾವು ಬೆಳೆಯಲು ಯತ್ನಿಸುವುದು
* ಹಿರಿಯರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳದಿರುವುದು
ಕುಂಡಲಿಯಲ್ಲಿ ಪಿತೃದೋಷ ಯಾವಾಗ ಉಂಟಾಗುವುದು
* ಕುಂಡಲಿಯಲ್ಲಿ ರಾಹು-ಕೇತು ಸಂಯೋಗವಾದರೆ ಪಿತೃದೋಷ ಉಂಟಾಗುವುದು
* ಸೂರ್ಯ-ರಾಹು/ಕೇತು ಅಥವಾ ಗುರು-ರಾಹು/ ಕೇತು ಸಂಯೋಗವಾಗಿದ್ದರೆ ಪಿತೃದೋಷ ಉಂಟಾಗುವುದು.
* ಜನ್ಮ ಕುಂಡಲಿಯಲ್ಲಿ ಸೂರ್ಯ ಮತ್ತು ರಾಹು ಅಥವಾ ಸೂರ್ಯ ಮತ್ತು ಶನಿ ಕುಂಡಲಿಯ ಮೊದಲ, 2ನೇ, 4ನೇ, 7ನೇ, 9 ಹಾಗೂ 10ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಪಿತೃಪಕ್ಷದಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು.
* ಪಿತೃಪಕ್ಷದಲ್ಲಿ ಪಿತೃ ತರ್ಪಣ ಮಾಡಿದರೆ ಒಳ್ಳೆಯದು
* ಪಿತೃಪಕ್ಷದಲ್ಲಿ ಪಿತೃ ದೋಷ ನಿವಾರಣೆ ಪೂಜೆ ಮಾಡಿ
* ಆಲದ ಮರಕ್ಕೆ ನೀರು ಹಾಕಿ ಶಿವನಿಗೆ ಪ್ರತಿದಿನ ಪೂಜೆ ಸಲ್ಲಿಸಿ, ಇದರಿಂದ ಪಿತೃದೋಷ ಕಡಿಮೆಯಾಗುವುದು.
* ನೀವು ಪಿತೃಪಕ್ಷದಲ್ಲಿ ಪಿಂಡದಾನ ಮಾಡಿ
* ಮಹಾಲಯ ಅಮವಾಸ್ಯೆಯಂದು ಪಿತೃ ತರ್ಪಣ ಮಾಡಿ.
* ನಿಮ್ಮ ಕುಂಡಲಿಯನ್ನು ಬಲಪಡಿಸಲು ನಿಮ್ಮ ರಾಶಿಗೆ ಸೂಕ್ತವಾದ ಹರಳು ಧರಿಸಬಹುದು.
* ಪಿತೃ ದೋಷ ನಿವಾರಣ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್ ಶಾಂತಿಂ ದಹಿ ಪತ್ ಸ್ವಾಹಾ
ಈ ಮಂತ್ರ ಪಠಿಸಿ
* ಮೃತ್ಯುಂಜಯ ಮಂತ್ರ ಪಠಿಸಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications