Latest Updates
-
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು!
ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಪಿತೃಪಕ್ಷದಲ್ಲಿ ಪಿತೃದೋಷ ನಿವಾರಣೆಗೆ ಪರಿಹಾರ
ಯಾವುದೇ ಕಾರಣಕ್ಕೆ ಪಿತೃದೋಷ ಒಳ್ಳೆಯದಲ್ಲ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು. ಪಿತೃದೋಷ ಹೇಗೆ ಉಂಟಾಗುತ್ತದೆ? ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಇದರ ಲಕ್ಷಣಗಳೇನು? ಪಿತೃದೋಷಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಪಿತೃದೋಷ ಹೇಗೆ ಉಂಟಾಗುವುದು?
ಪಿತೃದೋಷ ಪೂರ್ವಜರ ಶಾಪದಿಂದ ಉಂಟಾಗಬಹುದು, ವ್ಯಕ್ತಿಯ ಕುಂಡಲಿಯಲ್ಲಿ ಪಿತೃದೋಷವಿದ್ದರೆ ಅದರಿಂದಲೂ ಉಂಟಾಗುವುದು. ಪೂರ್ವಜರು ಏನಾದರೂ ತಪ್ಪು ಮಾಡಿದ್ದರೆ ಅದರ ದೋಷವೂ ಮುಂದಿನ ತಲೆಮಾರುಗಳಿಗೆ ಬಾಧಿಸಬಹುದು. ಈ ಪಿತೃದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಪಿತೃದೋಷವಿದ್ದರೆ ಅನೇಕ ಋಣಾತ್ಮಕ ಘಟನೆಗಳು ಬದುಕಿನಲ್ಲಿ ಸಂಭವಿಸುತ್ತದೆ. ತುಂಬಾನೇ ನಷ್ಟ ಅನುಭವಿಸಬೇಕಾಗುತ್ತದೆ, ಏನೇ ಮಾಡಿದರೂ ಏಳಿಗೆಯಾಗುವುದಿಲ್ಲ, ಮನಸ್ಸಿಗೆ ನೆಮ್ಮದಿಯೆಂಬುವುದೇ ಇರುವುದಿಲ್ಲ.
ಪಿತೃದೋಷವಿದೆಯೆಂದು ತಿಳಿಯುವುದು ಹೇಗೆ?
* ಆಗಾಗ ಕಾಯಿಲೆ ಬೀಳುವುದು
* ದಂಪತಿಗೆ ಗರ್ಭಧಾರಣೆಯಲ್ಲಿ ತೊಂದರೆಯಾಗುವುದು
* ಆಗಾಗ ಗರ್ಭಪಾತ ಉಂಟಾಗುವುದು
* ಯಾವುದೇ ಕಾರಣವಿಲ್ಲದೆ ಮನೆಯ ಸದಸ್ಯರ ನಡುವೆ ಸದಾ ಜಗಳ
* ಗಂಡ-ಹೆಂಡತಿ ನಡುವೆ ಜಗಳ ಉಂಟಾಗುವುದು
* ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು
* ಕುಟುಂಬ ಏಳಿಗೆಯಾಗುವುದಿಲ್ಲ
* ದೈಹಿಕ , ಮಾನಸಿಕ ನ್ಯೂನತೆಗಳು ಉಂಟಾಗುವುದು.
ಪಿತೃದೋಷ ಹೇಗೆ ಉಂಟಾಗುವುದು
* ತುಂಬಾ ಕ್ರೂರ ವರ್ತನೆ, ಪ್ರಾಣಿ, ಮನುಷ್ಯರನ್ನು ಕ್ರೂರವಾಗಿ ಕೊಲ್ಲುವುದು
* ಬೇರೆಯವರಿಗೆ ವಂಚನೆ ಮಾಡಿ ತಾವು ಬೆಳೆಯಲು ಯತ್ನಿಸುವುದು
* ಹಿರಿಯರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳದಿರುವುದು
ಕುಂಡಲಿಯಲ್ಲಿ ಪಿತೃದೋಷ ಯಾವಾಗ ಉಂಟಾಗುವುದು
* ಕುಂಡಲಿಯಲ್ಲಿ ರಾಹು-ಕೇತು ಸಂಯೋಗವಾದರೆ ಪಿತೃದೋಷ ಉಂಟಾಗುವುದು
* ಸೂರ್ಯ-ರಾಹು/ಕೇತು ಅಥವಾ ಗುರು-ರಾಹು/ ಕೇತು ಸಂಯೋಗವಾಗಿದ್ದರೆ ಪಿತೃದೋಷ ಉಂಟಾಗುವುದು.
* ಜನ್ಮ ಕುಂಡಲಿಯಲ್ಲಿ ಸೂರ್ಯ ಮತ್ತು ರಾಹು ಅಥವಾ ಸೂರ್ಯ ಮತ್ತು ಶನಿ ಕುಂಡಲಿಯ ಮೊದಲ, 2ನೇ, 4ನೇ, 7ನೇ, 9 ಹಾಗೂ 10ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಪಿತೃಪಕ್ಷದಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು.
* ಪಿತೃಪಕ್ಷದಲ್ಲಿ ಪಿತೃ ತರ್ಪಣ ಮಾಡಿದರೆ ಒಳ್ಳೆಯದು
* ಪಿತೃಪಕ್ಷದಲ್ಲಿ ಪಿತೃ ದೋಷ ನಿವಾರಣೆ ಪೂಜೆ ಮಾಡಿ
* ಆಲದ ಮರಕ್ಕೆ ನೀರು ಹಾಕಿ ಶಿವನಿಗೆ ಪ್ರತಿದಿನ ಪೂಜೆ ಸಲ್ಲಿಸಿ, ಇದರಿಂದ ಪಿತೃದೋಷ ಕಡಿಮೆಯಾಗುವುದು.
* ನೀವು ಪಿತೃಪಕ್ಷದಲ್ಲಿ ಪಿಂಡದಾನ ಮಾಡಿ
* ಮಹಾಲಯ ಅಮವಾಸ್ಯೆಯಂದು ಪಿತೃ ತರ್ಪಣ ಮಾಡಿ.
* ನಿಮ್ಮ ಕುಂಡಲಿಯನ್ನು ಬಲಪಡಿಸಲು ನಿಮ್ಮ ರಾಶಿಗೆ ಸೂಕ್ತವಾದ ಹರಳು ಧರಿಸಬಹುದು.
* ಪಿತೃ ದೋಷ ನಿವಾರಣ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್ ಶಾಂತಿಂ ದಹಿ ಪತ್ ಸ್ವಾಹಾ
ಈ ಮಂತ್ರ ಪಠಿಸಿ
* ಮೃತ್ಯುಂಜಯ ಮಂತ್ರ ಪಠಿಸಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications