Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ 5 ವಸ್ತುಗಳು ಮನೆ ಬಾಗಿಲಿನಲ್ಲಿದ್ದರೆ ಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ!
ಹಿಂದೂ ಧರ್ಮದ ಪ್ರಕಾರ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮನೆ ಕಟ್ಟೋದ್ರಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ನಂಬಿಕೆಗಳ ಪ್ರಕಾರ ನಾವು ಶಾಸ್ತ್ರದ ಪ್ರಕಾರ ನಡೆದುಕೊಂಡರೆ ಮಾತ್ರ ಆ ಮನೆಗೆ ಶುಭವಾಗುತ್ತಂತೆ. ಶಾಸ್ತ್ರ ತಪ್ಪಿ ನಡೆದರೆ ಆ ಮನೆಗೆ ಶುಭವಾಗೋದಿಲ್ವಂತೆ.
ಅದ್ರಲ್ಲೂ ಮನೆಗೆ ಅದೃಷ್ಟ ಲಕ್ಷ್ಮೀ ಬರಬೇಕೆಂದರೆ, ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕೆಂದರೆ ಕೆಲವೊಂದು ವಾಸ್ತು ಟಿಪ್ಸ್ ಗಳನ್ನು ಪಾಲಿಸಲೇಬೇಕಾಗುತ್ತದೆ. ಅಷ್ಟಕ್ಕು ವಾಸ್ತು ಪ್ರಕಾರ ಯಾವೆಲ್ಲಾ ವಸ್ತು ನಮ್ಮ ಮನೆಯಲ್ಲಿದ್ರೆ ಶುಭವಾಗುತ್ತೆ ಅನ್ನೋದನ್ನು ತಿಳಿಯೋಣ.

1. ಹೂವಿನ ಕುಂಡ
ಮನೆಯ ಎದುರುಗಡೆ ಗ್ಲಾಸ್ ನಿಂದ ಮಾಡಿದ ಹೂಕುಂಡ ಇದ್ದರೆ ಒಳ್ಳೆಯದು. ನಿತ್ಯವೂ ಅದಕ್ಕೆ ನೀರು ಹಾಕಿ ಅದನ್ನು ಪೋಷಿಸುವ ಕೆಲಸವನ್ನು ಮಾಡಬೇಕು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿಯನ್ನು ಆಕರ್ಷಿಸುತ್ತಂತೆ. ಅಷ್ಟೇ ಅಲ್ಲ, ಮನೆಯ ಮುಂದೆ ನೋಡೋದಕ್ಕೆ ಸುಂದರವಾಗಿ ಕಾಣುತ್ತಂತೆ. ಇತ್ತೀಚಿಗೆ ಕೃತಕ ಹೂ ಕುಂಡಗಳು ಕೂಡ ಮಾರಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ನೈಸರ್ಗಿಕ ಹೂ ಕುಂಡಗಳು ಇದ್ದರೇನೇ ಒಳ್ಳೆಯದು.
2. ತೋರಣ
ಹಿಂದೂ ಧರ್ಮದಲ್ಲಿ ಮನೆಯ ಮುಂಭಾಗ ತೋರಣವನ್ನು ಕಟ್ಟುವುದು ಒಂದು ರೀತಿಯ ಸಂಪ್ರದಾಯ. ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಮನೆಯ ಮುಂಭಾಗ ತೋರಣವನ್ನು ಕಟ್ಟಲಾಗುತ್ತದೆ. ಮಾವಿನ ಎಲೆಯ ತೋರಣವನ್ನು ಹೆಚ್ಚಾಗಿ ಕಟ್ಟಲಾಗುತ್ತದೆ. ಹಬ್ಬದ ದಿನದ ಹೊರತಾಗಿಯೂ ಉಳಿದ ದಿನಗಳಲ್ಲೂ ಕೂಡ ನಾವು ಮಾವಿನ ತೋರಣವನ್ನು ಕಟ್ಟಿದರೆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ.
ಕೆಲವೊಂದು ಮನೆಗಳಲ್ಲಿ ಹೇಗಾಗುತ್ತೆ ಎಂದರೆ ಮನೆಯ ಎದುರು ಕಟ್ಟಿದ ತೋರಣ ಒಣಗಿ ಹೋದರೂ ಕೂಡ ಅದನ್ನು ತೆಗೆಯೋದಿಲ್ಲ. ಹಾಗೆಯೇ ಒಣಗಲು ಬಿಡುತ್ತಾರೆ ಈ ರೀತಿ ಮಾಡುವುದು ತಪ್ಪು. ಮನೆಯ ಮುಂದುಗಡೆ ಇರುವ ತೋರಣ ಒಣಗಿದ್ದರೆ ಅದು ನಕಾರಾತ್ಮ ಶಕ್ತಿಯನ್ನು ಆಕರ್ಷಿಸುತ್ತಂತೆ. ಹೀಗಾಗಿ ಮನೆಯ ತೋರಣವನ್ನು ಒಣಗುವ ಮೊದಲು ಬದಲಾಯಿಸುತ್ತಿರಿ.
3. ಲಕ್ಷ್ಮೀಯ ಪಾದಗಳು
ಮನೆಯ ಮುಂಭಾಗ ಲಕ್ಷ್ಮೀಯ ಪಾದಗಳು ಇದ್ದರೆ ಒಳ್ಳೆಯದು. ಹೆಚ್ಚಿನವರು ಪಾದಗಳ ಸ್ಟಿಕ್ಕರ್ ತಂದು ಅಂಟಿಸುತ್ತಾರೆ. ಪ್ರತಿನಿತ್ಯ ಈ ಪಾದಗಳಿಗೆ ಭಕ್ತಿಯಿಂದ ಪೂಜೆ ಮಾಡಿದರೆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಅಷ್ಟೇ ಅಲ್ಲದೇ, ಈ ಪಾದಗಳು ದೇವಾನು ದೇವತೆಗಳ ಗಮನವನ್ನೂ ಕೂಡ ಸೆಳೆಯುತ್ತಂತೆ. ಇದರ ಜೊತೆಗೆ ನಕಾರಾತ್ಮಕ ಶಕ್ತಿಯು ಮನೆಯೊಳಗಡೆ ಬಾರದಂತೆ ತಡೆಹಿಡಿಯುತ್ತಂತೆ.
4. ಸ್ವಸ್ತಿಕ್
ಮೆನಯ ಮುಂಭಾಗ ಸ್ವಸ್ತಿಕ್ ಚಿಹ್ನೆ ಇದ್ದರೆ ಒಳ್ಳೆಯದು. ಇದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಕೂಡ ಮನೆಯಲ್ಲಿ ಅದೃಷ್ಟ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಸ್ವಸ್ತಿಕ್ ಚಿಹ್ನೆ ಮನೆ ಮುಭಾಗ ಇದ್ದರೆ ಮನೆಯಲ್ಲಿ ಯಾವುದೇ ರೀತಿ ದುಃಖ ಅಥವಾ ನೋವಿನ ಘಟನೆಗಳು ನಡೆಯೋದಿಲ್ವಂತೆ. ಅಷ್ಟೇ ಅಲ್ಲದೇ, ಕುಟುಂಬಸ್ಥರೆಲ್ಲರೂ ಸುಖವಾಗಿ, ಸಂತೋಷವಾಗಿ ಇರಬಹುದಂತೆ.
5. ದೊಡ್ಡದಾದ ಮನೆ ಬಾಗಿಲು
ನಮ್ಮ ಮನೆಯ ಮುಂಭಾಗದ ಬಾಗಿಲು ತುಂಬಾನೇ ದೊಡ್ಡವಾಗಿರಬೇಕಂತೆ. ಈ ರೀತಿ ಇದ್ದರೆ ಅದನ್ನು ಶುಭ ಎಂದು ಪರಿಗಣಿಸಲಾಗಿದೆ. ಮನೆ ಬಾಗಿಲನ್ನು ಗಡಿಯಾರದ ದಿಕ್ಕಿನಲ್ಲಿ ತೆರೆಯೋದ್ರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಗಳು ಕೂಡ ಕಡಿಮೆಯಾಗುತ್ತಂತೆ. ಇನ್ನೂ ಮನೆಬಾಗಿಲು ಎತ್ತರವಾಗಿರಲೂ ಬೇಕು. ಇದರಿಂದ ಮನೆಯೊಳಗಡೆ ನೇರವಾಗಿ ಬೆಳಕು ಬರೋದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಯಾರಾದರೂ ಹೊಸದಾಗಿ ಮನೆ ಕಟ್ಟಿಸುತ್ತಿದ್ದರೆ ಮನೆ ಬಾಗಿಲು ದೊಡ್ಡದಾಗಿ ಇರುವಂತೆ ನೋಡಿಕೊಳ್ಳಿ.
ನಿಮ್ಮ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕಾದರೆ ಜೊತೆಗೆ ಆರ್ಥಿಕ ಸಮಸ್ಯೆಗಳು ಎದುರಾಗಬಾರದೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications
