Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ವಸ್ತುಗಳು ಮನೆ ಬಾಗಿಲಿನಲ್ಲಿದ್ದರೆ ಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ!
ಹಿಂದೂ ಧರ್ಮದ ಪ್ರಕಾರ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮನೆ ಕಟ್ಟೋದ್ರಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ನಂಬಿಕೆಗಳ ಪ್ರಕಾರ ನಾವು ಶಾಸ್ತ್ರದ ಪ್ರಕಾರ ನಡೆದುಕೊಂಡರೆ ಮಾತ್ರ ಆ ಮನೆಗೆ ಶುಭವಾಗುತ್ತಂತೆ. ಶಾಸ್ತ್ರ ತಪ್ಪಿ ನಡೆದರೆ ಆ ಮನೆಗೆ ಶುಭವಾಗೋದಿಲ್ವಂತೆ.
ಅದ್ರಲ್ಲೂ ಮನೆಗೆ ಅದೃಷ್ಟ ಲಕ್ಷ್ಮೀ ಬರಬೇಕೆಂದರೆ, ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕೆಂದರೆ ಕೆಲವೊಂದು ವಾಸ್ತು ಟಿಪ್ಸ್ ಗಳನ್ನು ಪಾಲಿಸಲೇಬೇಕಾಗುತ್ತದೆ. ಅಷ್ಟಕ್ಕು ವಾಸ್ತು ಪ್ರಕಾರ ಯಾವೆಲ್ಲಾ ವಸ್ತು ನಮ್ಮ ಮನೆಯಲ್ಲಿದ್ರೆ ಶುಭವಾಗುತ್ತೆ ಅನ್ನೋದನ್ನು ತಿಳಿಯೋಣ.

1. ಹೂವಿನ ಕುಂಡ
ಮನೆಯ ಎದುರುಗಡೆ ಗ್ಲಾಸ್ ನಿಂದ ಮಾಡಿದ ಹೂಕುಂಡ ಇದ್ದರೆ ಒಳ್ಳೆಯದು. ನಿತ್ಯವೂ ಅದಕ್ಕೆ ನೀರು ಹಾಕಿ ಅದನ್ನು ಪೋಷಿಸುವ ಕೆಲಸವನ್ನು ಮಾಡಬೇಕು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿಯನ್ನು ಆಕರ್ಷಿಸುತ್ತಂತೆ. ಅಷ್ಟೇ ಅಲ್ಲ, ಮನೆಯ ಮುಂದೆ ನೋಡೋದಕ್ಕೆ ಸುಂದರವಾಗಿ ಕಾಣುತ್ತಂತೆ. ಇತ್ತೀಚಿಗೆ ಕೃತಕ ಹೂ ಕುಂಡಗಳು ಕೂಡ ಮಾರಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ನೈಸರ್ಗಿಕ ಹೂ ಕುಂಡಗಳು ಇದ್ದರೇನೇ ಒಳ್ಳೆಯದು.
2. ತೋರಣ
ಹಿಂದೂ ಧರ್ಮದಲ್ಲಿ ಮನೆಯ ಮುಂಭಾಗ ತೋರಣವನ್ನು ಕಟ್ಟುವುದು ಒಂದು ರೀತಿಯ ಸಂಪ್ರದಾಯ. ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಮನೆಯ ಮುಂಭಾಗ ತೋರಣವನ್ನು ಕಟ್ಟಲಾಗುತ್ತದೆ. ಮಾವಿನ ಎಲೆಯ ತೋರಣವನ್ನು ಹೆಚ್ಚಾಗಿ ಕಟ್ಟಲಾಗುತ್ತದೆ. ಹಬ್ಬದ ದಿನದ ಹೊರತಾಗಿಯೂ ಉಳಿದ ದಿನಗಳಲ್ಲೂ ಕೂಡ ನಾವು ಮಾವಿನ ತೋರಣವನ್ನು ಕಟ್ಟಿದರೆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ.
ಕೆಲವೊಂದು ಮನೆಗಳಲ್ಲಿ ಹೇಗಾಗುತ್ತೆ ಎಂದರೆ ಮನೆಯ ಎದುರು ಕಟ್ಟಿದ ತೋರಣ ಒಣಗಿ ಹೋದರೂ ಕೂಡ ಅದನ್ನು ತೆಗೆಯೋದಿಲ್ಲ. ಹಾಗೆಯೇ ಒಣಗಲು ಬಿಡುತ್ತಾರೆ ಈ ರೀತಿ ಮಾಡುವುದು ತಪ್ಪು. ಮನೆಯ ಮುಂದುಗಡೆ ಇರುವ ತೋರಣ ಒಣಗಿದ್ದರೆ ಅದು ನಕಾರಾತ್ಮ ಶಕ್ತಿಯನ್ನು ಆಕರ್ಷಿಸುತ್ತಂತೆ. ಹೀಗಾಗಿ ಮನೆಯ ತೋರಣವನ್ನು ಒಣಗುವ ಮೊದಲು ಬದಲಾಯಿಸುತ್ತಿರಿ.
3. ಲಕ್ಷ್ಮೀಯ ಪಾದಗಳು
ಮನೆಯ ಮುಂಭಾಗ ಲಕ್ಷ್ಮೀಯ ಪಾದಗಳು ಇದ್ದರೆ ಒಳ್ಳೆಯದು. ಹೆಚ್ಚಿನವರು ಪಾದಗಳ ಸ್ಟಿಕ್ಕರ್ ತಂದು ಅಂಟಿಸುತ್ತಾರೆ. ಪ್ರತಿನಿತ್ಯ ಈ ಪಾದಗಳಿಗೆ ಭಕ್ತಿಯಿಂದ ಪೂಜೆ ಮಾಡಿದರೆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಅಷ್ಟೇ ಅಲ್ಲದೇ, ಈ ಪಾದಗಳು ದೇವಾನು ದೇವತೆಗಳ ಗಮನವನ್ನೂ ಕೂಡ ಸೆಳೆಯುತ್ತಂತೆ. ಇದರ ಜೊತೆಗೆ ನಕಾರಾತ್ಮಕ ಶಕ್ತಿಯು ಮನೆಯೊಳಗಡೆ ಬಾರದಂತೆ ತಡೆಹಿಡಿಯುತ್ತಂತೆ.
4. ಸ್ವಸ್ತಿಕ್
ಮೆನಯ ಮುಂಭಾಗ ಸ್ವಸ್ತಿಕ್ ಚಿಹ್ನೆ ಇದ್ದರೆ ಒಳ್ಳೆಯದು. ಇದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಕೂಡ ಮನೆಯಲ್ಲಿ ಅದೃಷ್ಟ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಸ್ವಸ್ತಿಕ್ ಚಿಹ್ನೆ ಮನೆ ಮುಭಾಗ ಇದ್ದರೆ ಮನೆಯಲ್ಲಿ ಯಾವುದೇ ರೀತಿ ದುಃಖ ಅಥವಾ ನೋವಿನ ಘಟನೆಗಳು ನಡೆಯೋದಿಲ್ವಂತೆ. ಅಷ್ಟೇ ಅಲ್ಲದೇ, ಕುಟುಂಬಸ್ಥರೆಲ್ಲರೂ ಸುಖವಾಗಿ, ಸಂತೋಷವಾಗಿ ಇರಬಹುದಂತೆ.
5. ದೊಡ್ಡದಾದ ಮನೆ ಬಾಗಿಲು
ನಮ್ಮ ಮನೆಯ ಮುಂಭಾಗದ ಬಾಗಿಲು ತುಂಬಾನೇ ದೊಡ್ಡವಾಗಿರಬೇಕಂತೆ. ಈ ರೀತಿ ಇದ್ದರೆ ಅದನ್ನು ಶುಭ ಎಂದು ಪರಿಗಣಿಸಲಾಗಿದೆ. ಮನೆ ಬಾಗಿಲನ್ನು ಗಡಿಯಾರದ ದಿಕ್ಕಿನಲ್ಲಿ ತೆರೆಯೋದ್ರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಗಳು ಕೂಡ ಕಡಿಮೆಯಾಗುತ್ತಂತೆ. ಇನ್ನೂ ಮನೆಬಾಗಿಲು ಎತ್ತರವಾಗಿರಲೂ ಬೇಕು. ಇದರಿಂದ ಮನೆಯೊಳಗಡೆ ನೇರವಾಗಿ ಬೆಳಕು ಬರೋದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಯಾರಾದರೂ ಹೊಸದಾಗಿ ಮನೆ ಕಟ್ಟಿಸುತ್ತಿದ್ದರೆ ಮನೆ ಬಾಗಿಲು ದೊಡ್ಡದಾಗಿ ಇರುವಂತೆ ನೋಡಿಕೊಳ್ಳಿ.
ನಿಮ್ಮ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕಾದರೆ ಜೊತೆಗೆ ಆರ್ಥಿಕ ಸಮಸ್ಯೆಗಳು ಎದುರಾಗಬಾರದೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications



