Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಡಿನಲ್ಲಿ ಕಣ್ಮೆರೆಯಾದ ಯುವಕ, ಆ ವಿಶೇಷ ಕಲ್ಲಿಗೆ ಪೂಜೆ ಸಲ್ಲಿಸಿದಾಗ ಮರಳಿ ಬಂದ: ನೈಜ ಘಟನೆ
ಕೆಲವೊಂದು ವಿಸ್ಮಯ ಘಟನೆಗಳನ್ನು ನೋಡುವಾಗ ಹೀಗೂ ಇರುತ್ತಾ? ಎಂಬ ಪ್ರಶ್ನೆ ಮೂಡುವುದು, ಆದರೆ ಆ ರೀತಿ ಮೂಡುವ ಪ್ರಶ್ನೆಗಳಿಗೆ ಉತ್ತರವೂ ಸಿಗಲ್ಲ. ಅಂಥದ್ದೊಂದು ಘಟನೆ ಉಡುಪಿಯಲ್ಲಿ ನಡೆದಿದ್ದು ಆ ಘಟನೆ ತುಂಬಾನೇ ಸುದ್ದಿ ಮಾಡುತ್ತಿದೆ. ಕಾಡಿನಲ್ಲಿ ಕಾಣೆಯಾದ ಯುವಕ ಪವಾಡ ಸದೃಶ್ಯವಾಗಿ ಬದುಕಿ ಬಂದಿರುವ ಘಟನೆ ಇದು.

ಕಾಡಿಗೆ ಹೋದ ಹುಡುಗ ದಾರಿ ತಪ್ಪಿರಬಹುದು, ಕೊನೆಗೆ ಮರಳಿ ಬಂದಿದ್ದಾನೆ ಇದರಲ್ಲೇನು ವಿಶೇಷ ಎಂದು ಕೇಳುವವರೂ ಇದ್ದಾರೆ. ಆದರೆ ಇಲ್ಲಿ ಹುಡುಗ ಕಾಡಿನಲ್ಲಿ ದಾರಿ ತಪ್ಪಿ ಪತ್ತೆ ಸಿಕ್ಕಿರುವುದು ವಿಶೇಷವಲ್ಲ, ಆದರೆ ಈ ಹುಡುಗ ಕಾಣೆಯಾದ ಮೇಲೆ ನಡೆದ ಸಂಗತಿಗಳು ಇದೆಯೆಲ್ಲಾ ಅದು ವಿಸ್ಮಯ, ಅದುವೇ ಜನರ ಅಚ್ಚರಿಕೆ ಕಾರಣವಾಗಿರುವುದು.
ಉಡುಪಿಯ ಬೈಂದೂರು ತಾಲೂಕಿನಲ್ಲಿ ನಡೆದ ಘಟನೆಯಿದು. ಕಾಂತಾರ ಸಿನಿಮಾದಂತಿದೆ ಎಂತಿದ್ದಾರೆ ಜನರು. ಕಾಂತಾರದಲ್ಲಿ ಕಾಡಿನೊಳಗೆ ಹೋಗುವ ವ್ಯಕ್ತಿ ಕಾಣೆಯಾಗುವ ದೃಶ್ಯವಿದೆ. ಅದರಂತೆ ಇಲ್ಲಿಯೂ ಕಾಡಿಗೆ ಕಂಬ ತರಲೆಂದು ತನ್ನ ಸಾಕುನಾಯಿಯೊಂದಿಗೆ ಹೋದ ವಿವೇಕಾನಂದ ಕಾಣೆಯಾಗಿದ್ದಾರೆ. ಈತ ಕಾಡಿಗೆ ಹೋಗಿ ಬಾರದೇ ಹೋದಾಗ ಗಾಬರಿ ಬಿದ್ದ ಮನೆಯವರು ಊರಿನವರೊಂದಿಗೆ ಹುಡುಕಲಾರಂಭಿಸಿದ್ದಾರೆ. ಆ ಕಾಡಿನ ಬಗ್ಗೆ ಚೆನ್ನಾಗಿ ತಿಳಿದಿದ್ದವರೂ ಸೇರಿಕೊಂಡು ನೂರಕ್ಕೂ ಅಧಿಕ ಮಂದಿ ಹುಡುಕಿದ್ದಾರೆ. ಬರೀ ಒಂದು ದಿನವಲ್ಲ 8 ದಿನ ಹುಡುಕಿದ್ದಾರೆ. 8ನೇ ದಿನ ಹುಡುಗನ ಪತ್ತೆಯಾಗಿದೆ.
ಜ್ಯೋತಿಷಿ ಹುಡುಗನ ಬಗ್ಗೆ ಭವಿಷ್ಯ ಹೇಳಿದ್ದರು
ಮನೆಯ ಹುಡುಗ ಕಾಣೆಯಾದಾಗ ಮನೆಯವರು ಇದ್ದ ದೇವರ ಮೊರೆ ಹೋಗಿದ್ದಾರೆ, ಈತನ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಎಂದು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಕರಾವಳಿಯ ಜನರು ತುಂಬಾ ನಂಬುವ ಕೊರಗಜ್ಜನ ದೇವರ ಬಳಿ ಬಂದು ಪ್ರಾರ್ಥಿಸಿದಾಗಲೂ ಹುಡುಗ ಬದುಕಿದ್ದಾನೆ ಎಂಬ ಸುಳಿವು ನೀಡಿತ್ತು, ಅದಾದ ಬಳಿಕ ಮಹಿಳಾ ಜ್ಯೋತಿಷಿಯೊಬ್ಬರ ಬಳಿ ಕೇಳಿದಾಗ ಹುಡುಗ ಬದುಕಿದ್ದಾನೆ, ಆದರೆ ಅವನನ್ನು ದೇವಿಯೇ ಕಾಣೆ ಮಾಡಿದ್ದಾಳೆ, ನಿಮ್ಮ ಜಮೀನಿನಲ್ಲಿ ಒಂದು ಕಲ್ಲಿದೆ, ಅದು ವಿಶೇಷ ಅನಿಸದಿದ್ದರೂ ಆ ಕಲ್ಲು ವಿಶೇಷವಾಗಿದೆ, ಅದರಲ್ಲಿ ದೇವಿ ಇದ್ದಾಳೆ, ಅವಳಿಗೆ ಪೂಜೆ ಸಲ್ಲಿಸಿ ನಿಮ್ಮ ಮಗ ಬಂದೇ ಬರುತ್ತಾನೆ ಎಂದು ಹೇಳುತ್ತಾಳೆ.
ಅಚ್ಚರಿ ಎಂಬಂತೆ ಪೂಜೆ ಬಳಿಕ ಸಿಕ್ಕ ಮಗ
ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದ ಪೋಷಕರು ಎಲ್ಲಾ ಪೂಜೆ ಮಾಡುತ್ತೇವೆ ನಮ್ಮ ಮಗ ಜೀವಂತ ಸಿಕ್ಕರೆ ಸಾಕು ಎಂದು ಬಯಸಿ ಆ ಕಲ್ಲಿಗೆ ಪೂಜೆ ಸಲ್ಲಿಸುತ್ತಾರೆ. ಆ ಕಲ್ಲಿಗೆ ಪೂಜೆ ಸಲ್ಲಿಸಿ ಮಾರನೇ ದಿನವೇ ಪವಾಡ ಸದೃಶ್ಯ ಎಂಬಂತೆ ಮಗ, ಮಗನ ಜೊತೆ ಕಾಣೆಯಾದ ನಾಯಿ ಸಿಗುತ್ತದೆ. ಈ ವಿಷಯ ತಿಳಿಯುತ್ತಿದ್ದಂತೆ ಜನರಿಗೆ ಅಚ್ಚರಿ ಉಂಟಾಗಿದೆ. ಅಲ್ಲದೆ ಈ ಸುದ್ದಿ ತುಂಬಾನೇ ವೈರಲ್ ಆಗಿದೆ.
ಹುಡುಗ ಸಿಕ್ಕಿದ ಮೇಲೆ ಗ್ರಾಮಸ್ಥರು ಬೈಕ್,ಟೆಂಪೂಗಳಲ್ಲಿ ಸಂಭ್ರಮದ ಮೆರವಣಿಗೆ ಮಾಡಿದ್ದಾರೆ. ಮನೆಯವರು ಊರಿನವರಿಗೆ ಸಿಹಿ ಊಟ ನೀಡಿದ್ದಾರೆ. ಆ ದೈವ ಶಕ್ತಿ ಇರುವ ಕಲ್ಲಿಗೆ ಪೂಜೆ ಮಾಡಿದ ಕಾರಣಕ್ಕೆ ನಮ್ಮ ಮಗ ನಮ್ಮ ಸಿಕ್ಕಿದ್ದಾನೆ ಎಂದು ಪೋಷಕರು ಬಲವಾಗಿ ನಂಬಿದ್ದಾರೆ.
ಕೆಲವೊಂದು ಘಟನೆಗಳೇ ಹಾಗೇ ... ಅವುಗಳನ್ನು ತುಂಬಾ ವೈಜ್ಞಾನಿಕವಾಗಿ ನೋಡಲು ಹೋಗಬಾರದು, ನಮ್ಮ ಅನುಭವಕ್ಕೆ ಬರುವುದೇ ಸತ್ಯ ಅಲ್ವಾ?



Click it and Unblock the Notifications