Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಹಿಂದೂ ಧರ್ಮ ವಿರೋಧಿಸುವ ಉದಯನಿಧಿ ಸ್ಟಾಲಿನ್: ತಾಯಿ ಹಿಂದೂ ದೇವರುಗಳ ಪರಮಭಕ್ತೆ !
ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಉದಯನಿಧಿ ಸ್ಟಾಲಿನ್ ಅವರ ತಾಯಿ ದುರ್ಗಾ ಸ್ಟಾಲಿನ್ ಸನಾತನ ಧರ್ಮವನ್ನು ತುಂಬಾನೇ ನಂಬುವವರು, ಇವರ ದೇವರ ಪರಮ ಭಕ್ತೆ ಎಂಬುವುದು ಹಲವು ಬಾರಿ ಸಾಬೀತಾಗಿದೆ. ಈ ಹಿಂದೆ ತಮಿಳಿನ ಖಾಸಗಿ ಚಾನಲ್ವೊಂದು ದುರ್ಗಾ ಸ್ಟಾಲಿನ್ ಪೂಜಾ ರೂಂ ಹೇಗಿದೆ ಎಂಬುವುದನ್ನು ತೋರಿಸಿದ್ದರು. ದುರ್ಗಾ ಸ್ಟಾಲಿನ್ ಅವರ ಪೂಜಾ ಕೋಣೆ ನೋಡಿದರೆ ಸಾಕ್ಷಾತ್ ದೇವಾಲಯದಂತಿದೆ.

ದುರ್ಗಾ ಸ್ಟಾಲಿನ್ ಅವರು ಪ್ರತಿದಿನ ದೇವರನ್ನು ಆರಾಧಿಸುತ್ತಾರೆ, ಅದರಲ್ಲೂ ಶುಕ್ರವಾರದಂದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಅವರ ದೇವರ ಮಂದಿರದಲ್ಲಿರುವ ದೇವರ ವಿಗ್ರಹಗಳನ್ನು ನೋಡಲು ತುಂಬಾನೇ ಆಕರ್ಷಕವಾಗಿದೆ, ಶ್ರೀ ಕೃಷ್ಣ, ತಿರುಪತಿ ತಿಮ್ಮಪ್ಪ, ಪೆರುಮಾಳ್ ಸೇರಿದಂತೆ ಪ್ರತಿಯೊಂದು ಹಿಂದೂ ದೇವರುಗಳು ಮೂರ್ತಿ ಅಥವಾ ವಿಗ್ರಹ ದುರ್ಗಾ ಸ್ಟಾಲಿನ್ ದೇವರ ಮಂದಿರದಲ್ಲಿದೆ. ಅವರ ದೇವರ ಮಂದಿರಲ್ಲಿ ಹನುಮಂತನ ಬೆಳ್ಳಿಯ ಗದೆ, ಸುಬ್ರಹ್ಮಣ್ಯ ಸ್ವಾಮಿಯ ಬೆಳ್ಳಿಯ ತ್ರಿಶೂಲ, ರುದ್ರಾಕ್ಷಿ ಮಾಲೆ ಇವೆಲ್ಲವೂ ವೀಕ್ಷಕರ ಗಮನ ಸೆಳೆದಿತ್ತು.
ದುರ್ಗಾ ಸ್ಟಾಲಿನ್ ಅವರು ಈ ವರ್ಷದಲ್ಲಿ ಕೇರಳದ ಶ್ರೀ ಕೃಷ್ಣ ದೇವಾಲಯವಾದ ಗುರುವಾಯರ್ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ 14 ಲಕ್ಷ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಶ್ರೀಕೃಷ್ಣನಿಗೆ ಕಿರೀಟ ಮಾಡಲು ಅಳತೆಯನ್ನು ತೆಗೆದುಕೊಂಡು ಹೋಗಿ ಕಿರೀಟವನ್ನು ಮಾಡಿ ಅರ್ಪಿಸಿದ್ದರು. ಅಲ್ಲದೆ ಚಂದನವನ್ನು ಅರಿಯಲು ಮೆಷಿನ್ ಕೂಡ ನೀಡಿದ್ದರು.
ದೇವರ ಕೃಪೆಯಂದಾಗಿ ಉದಯ್ನಿಧಿ ಉಳಿದಿದ್ದು ಎನ್ನುತ್ತಾರೆ ದುರ್ಗಾ ಸ್ಟಾಲಿನ್
ದುರ್ಗಾ ಸ್ಟಾಲಿನ್ ಒಂದು ಕಡೆ ಮಾತನಾಡುತ್ತಾ ಹೇಳುತ್ತಾರೆ ನನ್ನ ಮಗ ಉಳಿದಿದ್ದೇ ದೇವರ ಕೃಪೆಯಿಂದಾಗಿ. ಹೆರಿಗೆಯಾದಾಗ ಮಗು ತುಂಬಾನೇ ತೂಕ ಕಡಿಮೆಯಿತ್ತು ಅಲ್ಲದೆ ಕೆಂಪು-ಕೆಂಪಗೆ ಇದ್ದ ಮಗು ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿತು. ನೀಲಿ ಬಣ್ಣ ಶ್ರೀಕೃಷ್ಣನ ಬಣ್ಣವಾದರೂ ಮಗು ನೀಲಿ ಬಣ್ಣಕ್ಕೆ ತಿರುಗಿದರೆ ಅಪಾಯಕಾರಿ ಎಂದು ಹೇಳಲಾಗಿತ್ತು.
ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೈನೋಸಿಸ್ ( Cyanosis) ಎಂದು ಕರೆಯಲಾಗುವುದು. ದುರ್ಗಾ ಸ್ಟಾಲಿನ್ ಅವರ ಅಜ್ಜಿ (ತಂದೆಯ ತಾಯಿಯ ಮೊದಲ ಮಗು ಕೂಡ ಇದೇ ರೀತಿ ನೀಲಿ ಬಣ್ಣಕ್ಕೆ ತಿರುಗಿ ಸಾವನ್ನಪ್ಪಿತ್ತು). ನಂತರ ಅವರ ಅಜ್ಜಿ ಸೂಚಿಸಿದ ಮನೆಮದ್ದು ಹಚ್ಚಿ ಕಾಲಿಗೆ ಸಾಕ್ಸ್ ಹಾಕಿ ಆರೈಕೆ ಮಾಡಿ ಮಗು-ತಾಯಿ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ತಾಯಿ ಮನೆಗೆ ಹೋಗುವ ಅವರು ಮೊದಲು ಊರಿನ ದೇವರಲ್ಲಿಗೆ ಹೋಗಿ ಪೂಜೆಯನ್ನು ಸಲ್ಲಿಸಿದಾಗಿ ಹೇಳುತ್ತಾರೆ.
ದುರ್ಗಾ ಸ್ಟಾಲಿನ್ ಅವರು ಹಿಂದೂ ಧರಗಮವನ್ನೇ ಅನುಸರಿಸುತ್ತಾರೆ, ಅಲ್ಲದೆ ಹಿಂದೂ ಆಚರನೆಗಳನ್ನು ಬಲವಾಗಿ ನಂಬುತ್ತಾರೆ.



Click it and Unblock the Notifications
