Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಿಂದೂ ಧರ್ಮ ವಿರೋಧಿಸುವ ಉದಯನಿಧಿ ಸ್ಟಾಲಿನ್: ತಾಯಿ ಹಿಂದೂ ದೇವರುಗಳ ಪರಮಭಕ್ತೆ !
ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಉದಯನಿಧಿ ಸ್ಟಾಲಿನ್ ಅವರ ತಾಯಿ ದುರ್ಗಾ ಸ್ಟಾಲಿನ್ ಸನಾತನ ಧರ್ಮವನ್ನು ತುಂಬಾನೇ ನಂಬುವವರು, ಇವರ ದೇವರ ಪರಮ ಭಕ್ತೆ ಎಂಬುವುದು ಹಲವು ಬಾರಿ ಸಾಬೀತಾಗಿದೆ. ಈ ಹಿಂದೆ ತಮಿಳಿನ ಖಾಸಗಿ ಚಾನಲ್ವೊಂದು ದುರ್ಗಾ ಸ್ಟಾಲಿನ್ ಪೂಜಾ ರೂಂ ಹೇಗಿದೆ ಎಂಬುವುದನ್ನು ತೋರಿಸಿದ್ದರು. ದುರ್ಗಾ ಸ್ಟಾಲಿನ್ ಅವರ ಪೂಜಾ ಕೋಣೆ ನೋಡಿದರೆ ಸಾಕ್ಷಾತ್ ದೇವಾಲಯದಂತಿದೆ.

ದುರ್ಗಾ ಸ್ಟಾಲಿನ್ ಅವರು ಪ್ರತಿದಿನ ದೇವರನ್ನು ಆರಾಧಿಸುತ್ತಾರೆ, ಅದರಲ್ಲೂ ಶುಕ್ರವಾರದಂದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಅವರ ದೇವರ ಮಂದಿರದಲ್ಲಿರುವ ದೇವರ ವಿಗ್ರಹಗಳನ್ನು ನೋಡಲು ತುಂಬಾನೇ ಆಕರ್ಷಕವಾಗಿದೆ, ಶ್ರೀ ಕೃಷ್ಣ, ತಿರುಪತಿ ತಿಮ್ಮಪ್ಪ, ಪೆರುಮಾಳ್ ಸೇರಿದಂತೆ ಪ್ರತಿಯೊಂದು ಹಿಂದೂ ದೇವರುಗಳು ಮೂರ್ತಿ ಅಥವಾ ವಿಗ್ರಹ ದುರ್ಗಾ ಸ್ಟಾಲಿನ್ ದೇವರ ಮಂದಿರದಲ್ಲಿದೆ. ಅವರ ದೇವರ ಮಂದಿರಲ್ಲಿ ಹನುಮಂತನ ಬೆಳ್ಳಿಯ ಗದೆ, ಸುಬ್ರಹ್ಮಣ್ಯ ಸ್ವಾಮಿಯ ಬೆಳ್ಳಿಯ ತ್ರಿಶೂಲ, ರುದ್ರಾಕ್ಷಿ ಮಾಲೆ ಇವೆಲ್ಲವೂ ವೀಕ್ಷಕರ ಗಮನ ಸೆಳೆದಿತ್ತು.
ದುರ್ಗಾ ಸ್ಟಾಲಿನ್ ಅವರು ಈ ವರ್ಷದಲ್ಲಿ ಕೇರಳದ ಶ್ರೀ ಕೃಷ್ಣ ದೇವಾಲಯವಾದ ಗುರುವಾಯರ್ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ 14 ಲಕ್ಷ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಶ್ರೀಕೃಷ್ಣನಿಗೆ ಕಿರೀಟ ಮಾಡಲು ಅಳತೆಯನ್ನು ತೆಗೆದುಕೊಂಡು ಹೋಗಿ ಕಿರೀಟವನ್ನು ಮಾಡಿ ಅರ್ಪಿಸಿದ್ದರು. ಅಲ್ಲದೆ ಚಂದನವನ್ನು ಅರಿಯಲು ಮೆಷಿನ್ ಕೂಡ ನೀಡಿದ್ದರು.
ದೇವರ ಕೃಪೆಯಂದಾಗಿ ಉದಯ್ನಿಧಿ ಉಳಿದಿದ್ದು ಎನ್ನುತ್ತಾರೆ ದುರ್ಗಾ ಸ್ಟಾಲಿನ್
ದುರ್ಗಾ ಸ್ಟಾಲಿನ್ ಒಂದು ಕಡೆ ಮಾತನಾಡುತ್ತಾ ಹೇಳುತ್ತಾರೆ ನನ್ನ ಮಗ ಉಳಿದಿದ್ದೇ ದೇವರ ಕೃಪೆಯಿಂದಾಗಿ. ಹೆರಿಗೆಯಾದಾಗ ಮಗು ತುಂಬಾನೇ ತೂಕ ಕಡಿಮೆಯಿತ್ತು ಅಲ್ಲದೆ ಕೆಂಪು-ಕೆಂಪಗೆ ಇದ್ದ ಮಗು ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿತು. ನೀಲಿ ಬಣ್ಣ ಶ್ರೀಕೃಷ್ಣನ ಬಣ್ಣವಾದರೂ ಮಗು ನೀಲಿ ಬಣ್ಣಕ್ಕೆ ತಿರುಗಿದರೆ ಅಪಾಯಕಾರಿ ಎಂದು ಹೇಳಲಾಗಿತ್ತು.
ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೈನೋಸಿಸ್ ( Cyanosis) ಎಂದು ಕರೆಯಲಾಗುವುದು. ದುರ್ಗಾ ಸ್ಟಾಲಿನ್ ಅವರ ಅಜ್ಜಿ (ತಂದೆಯ ತಾಯಿಯ ಮೊದಲ ಮಗು ಕೂಡ ಇದೇ ರೀತಿ ನೀಲಿ ಬಣ್ಣಕ್ಕೆ ತಿರುಗಿ ಸಾವನ್ನಪ್ಪಿತ್ತು). ನಂತರ ಅವರ ಅಜ್ಜಿ ಸೂಚಿಸಿದ ಮನೆಮದ್ದು ಹಚ್ಚಿ ಕಾಲಿಗೆ ಸಾಕ್ಸ್ ಹಾಕಿ ಆರೈಕೆ ಮಾಡಿ ಮಗು-ತಾಯಿ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ತಾಯಿ ಮನೆಗೆ ಹೋಗುವ ಅವರು ಮೊದಲು ಊರಿನ ದೇವರಲ್ಲಿಗೆ ಹೋಗಿ ಪೂಜೆಯನ್ನು ಸಲ್ಲಿಸಿದಾಗಿ ಹೇಳುತ್ತಾರೆ.
ದುರ್ಗಾ ಸ್ಟಾಲಿನ್ ಅವರು ಹಿಂದೂ ಧರಗಮವನ್ನೇ ಅನುಸರಿಸುತ್ತಾರೆ, ಅಲ್ಲದೆ ಹಿಂದೂ ಆಚರನೆಗಳನ್ನು ಬಲವಾಗಿ ನಂಬುತ್ತಾರೆ.



Click it and Unblock the Notifications



