Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಹಿಂದೂ ಧರ್ಮ ವಿರೋಧಿಸುವ ಉದಯನಿಧಿ ಸ್ಟಾಲಿನ್: ತಾಯಿ ಹಿಂದೂ ದೇವರುಗಳ ಪರಮಭಕ್ತೆ !
ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಉದಯನಿಧಿ ಸ್ಟಾಲಿನ್ ಅವರ ತಾಯಿ ದುರ್ಗಾ ಸ್ಟಾಲಿನ್ ಸನಾತನ ಧರ್ಮವನ್ನು ತುಂಬಾನೇ ನಂಬುವವರು, ಇವರ ದೇವರ ಪರಮ ಭಕ್ತೆ ಎಂಬುವುದು ಹಲವು ಬಾರಿ ಸಾಬೀತಾಗಿದೆ. ಈ ಹಿಂದೆ ತಮಿಳಿನ ಖಾಸಗಿ ಚಾನಲ್ವೊಂದು ದುರ್ಗಾ ಸ್ಟಾಲಿನ್ ಪೂಜಾ ರೂಂ ಹೇಗಿದೆ ಎಂಬುವುದನ್ನು ತೋರಿಸಿದ್ದರು. ದುರ್ಗಾ ಸ್ಟಾಲಿನ್ ಅವರ ಪೂಜಾ ಕೋಣೆ ನೋಡಿದರೆ ಸಾಕ್ಷಾತ್ ದೇವಾಲಯದಂತಿದೆ.

ದುರ್ಗಾ ಸ್ಟಾಲಿನ್ ಅವರು ಪ್ರತಿದಿನ ದೇವರನ್ನು ಆರಾಧಿಸುತ್ತಾರೆ, ಅದರಲ್ಲೂ ಶುಕ್ರವಾರದಂದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಅವರ ದೇವರ ಮಂದಿರದಲ್ಲಿರುವ ದೇವರ ವಿಗ್ರಹಗಳನ್ನು ನೋಡಲು ತುಂಬಾನೇ ಆಕರ್ಷಕವಾಗಿದೆ, ಶ್ರೀ ಕೃಷ್ಣ, ತಿರುಪತಿ ತಿಮ್ಮಪ್ಪ, ಪೆರುಮಾಳ್ ಸೇರಿದಂತೆ ಪ್ರತಿಯೊಂದು ಹಿಂದೂ ದೇವರುಗಳು ಮೂರ್ತಿ ಅಥವಾ ವಿಗ್ರಹ ದುರ್ಗಾ ಸ್ಟಾಲಿನ್ ದೇವರ ಮಂದಿರದಲ್ಲಿದೆ. ಅವರ ದೇವರ ಮಂದಿರಲ್ಲಿ ಹನುಮಂತನ ಬೆಳ್ಳಿಯ ಗದೆ, ಸುಬ್ರಹ್ಮಣ್ಯ ಸ್ವಾಮಿಯ ಬೆಳ್ಳಿಯ ತ್ರಿಶೂಲ, ರುದ್ರಾಕ್ಷಿ ಮಾಲೆ ಇವೆಲ್ಲವೂ ವೀಕ್ಷಕರ ಗಮನ ಸೆಳೆದಿತ್ತು.
ದುರ್ಗಾ ಸ್ಟಾಲಿನ್ ಅವರು ಈ ವರ್ಷದಲ್ಲಿ ಕೇರಳದ ಶ್ರೀ ಕೃಷ್ಣ ದೇವಾಲಯವಾದ ಗುರುವಾಯರ್ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ 14 ಲಕ್ಷ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಶ್ರೀಕೃಷ್ಣನಿಗೆ ಕಿರೀಟ ಮಾಡಲು ಅಳತೆಯನ್ನು ತೆಗೆದುಕೊಂಡು ಹೋಗಿ ಕಿರೀಟವನ್ನು ಮಾಡಿ ಅರ್ಪಿಸಿದ್ದರು. ಅಲ್ಲದೆ ಚಂದನವನ್ನು ಅರಿಯಲು ಮೆಷಿನ್ ಕೂಡ ನೀಡಿದ್ದರು.
ದೇವರ ಕೃಪೆಯಂದಾಗಿ ಉದಯ್ನಿಧಿ ಉಳಿದಿದ್ದು ಎನ್ನುತ್ತಾರೆ ದುರ್ಗಾ ಸ್ಟಾಲಿನ್
ದುರ್ಗಾ ಸ್ಟಾಲಿನ್ ಒಂದು ಕಡೆ ಮಾತನಾಡುತ್ತಾ ಹೇಳುತ್ತಾರೆ ನನ್ನ ಮಗ ಉಳಿದಿದ್ದೇ ದೇವರ ಕೃಪೆಯಿಂದಾಗಿ. ಹೆರಿಗೆಯಾದಾಗ ಮಗು ತುಂಬಾನೇ ತೂಕ ಕಡಿಮೆಯಿತ್ತು ಅಲ್ಲದೆ ಕೆಂಪು-ಕೆಂಪಗೆ ಇದ್ದ ಮಗು ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿತು. ನೀಲಿ ಬಣ್ಣ ಶ್ರೀಕೃಷ್ಣನ ಬಣ್ಣವಾದರೂ ಮಗು ನೀಲಿ ಬಣ್ಣಕ್ಕೆ ತಿರುಗಿದರೆ ಅಪಾಯಕಾರಿ ಎಂದು ಹೇಳಲಾಗಿತ್ತು.
ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೈನೋಸಿಸ್ ( Cyanosis) ಎಂದು ಕರೆಯಲಾಗುವುದು. ದುರ್ಗಾ ಸ್ಟಾಲಿನ್ ಅವರ ಅಜ್ಜಿ (ತಂದೆಯ ತಾಯಿಯ ಮೊದಲ ಮಗು ಕೂಡ ಇದೇ ರೀತಿ ನೀಲಿ ಬಣ್ಣಕ್ಕೆ ತಿರುಗಿ ಸಾವನ್ನಪ್ಪಿತ್ತು). ನಂತರ ಅವರ ಅಜ್ಜಿ ಸೂಚಿಸಿದ ಮನೆಮದ್ದು ಹಚ್ಚಿ ಕಾಲಿಗೆ ಸಾಕ್ಸ್ ಹಾಕಿ ಆರೈಕೆ ಮಾಡಿ ಮಗು-ತಾಯಿ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ತಾಯಿ ಮನೆಗೆ ಹೋಗುವ ಅವರು ಮೊದಲು ಊರಿನ ದೇವರಲ್ಲಿಗೆ ಹೋಗಿ ಪೂಜೆಯನ್ನು ಸಲ್ಲಿಸಿದಾಗಿ ಹೇಳುತ್ತಾರೆ.
ದುರ್ಗಾ ಸ್ಟಾಲಿನ್ ಅವರು ಹಿಂದೂ ಧರಗಮವನ್ನೇ ಅನುಸರಿಸುತ್ತಾರೆ, ಅಲ್ಲದೆ ಹಿಂದೂ ಆಚರನೆಗಳನ್ನು ಬಲವಾಗಿ ನಂಬುತ್ತಾರೆ.



Click it and Unblock the Notifications
