Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ!
ನಾಯಿಯ ಆಟ ಗಾರೆಯವನಿಗೆ ತಂದಿಟ್ಟ ಪಜೀತಿ ನೋಡಿ: ವೀಡಿಯೋ ವೈರಲ್
ಫೇಸ್ಬುಕ್ ನಾಯಿಯ ತುಂಟಾದ ವೀಡಿಯೋವೊಂದು ತುಂಬಾನೇ ವೈರಲ್ ಆಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಇದೆಯೆಲ್ಲಾ ಈ ವೀಡಿಯೋದಲ್ಲಿರುವ ಸಿಚುವೇಷನ್ಗೆ ತುಂಬಾ ಸೂಟ್ ಆಗುತ್ತೆ.

ಪಾಪ ಗಾರೆಯವರೊಬ್ಬರು ತಮ್ಮ ಕೆಲಸ ಮಾಡ್ತಾ ಇರುತ್ತಾರೆ, ಫ್ಲೋರ್ ರೆಡಿ ಮಾಡುವಾಗ ಅದು ಸೆಟ್ ಆಗುವವರೆಗೆ ಯಾರೂ ಮೆಟ್ಟಬೇಡಿ ಎಂದು ಹೇಳುತ್ತಾರೆ, ಏಕೆಂದರೆ ಸಿಮೆಂಟ್ ಸೆಟ್ ಆಗಲು ನಿಷ್ಠ 24 ಗಂಟೆ ಸಮಯಬೇಕು, ಇಲ್ಲದಿದ್ದರೆ ನಾವು ನಡೆದಾಡುವ ಕಾಲಿನ ಮಾರ್ಕ್ಸ್ ಅಚ್ಚೊತ್ತಿದಂತೆ ಹಾಗೇ ಉಳಿದುಕೊಳ್ಳುವುದು. ಆ ಕಾರಣಕ್ಕೆ ಮನೆಯ ನಾಯಿ-ಬೆಕ್ಕು ಕೂಡ ಆ ಕಡೆ ಸುಳಿಯದಂತೆ ಎಚ್ಚರವಹಿಸಲಾಗುವುದು.
ಈ ವೀಡಿಯೋದಲ್ಲಿ ನೋಡಬಹುದು, ಆ ವ್ಯಕ್ತಿ ಮನೆಯ ವರಾಂಡವನ್ನು ತೆಳಿ ಹಾಕಿ ಸರಿ ತಮಾಸ್ (ಸಮತಟ್ಟಾಗಿ ಮಾಡುವುದು) ಮಾಡ್ತಾ ಇರ್ತಾನೆ, ಆದರೆ ಆ ಮನೆಯವರು ಸಾಕಿದ ನಾಯಿಮರಿ ಓಡಿಕೊಂಡು ಬಂದು ತನ್ನ ಹೆಜ್ಜೆ ಗುರುತು ಮೂಡಿಸುತ್ತದೆ, ಆತ ಅದನ್ನು ಓಡಿಸಿ ಮತ್ತೆ ಸರಿ ಮಾಡುತ್ತಾನೆ, ನೋಡಿದರೆ ನಾಯಿ ಮತ್ತೆ ಓಡಿ ಬಂದು ಅಲ್ಲಿಲ್ಲಾ ತನ್ನ ಹೆಜ್ಜೆ ಗುರುತು ಮೂಡಿಸಿ ಓಡುತ್ತದೆ.
ಪಾಪ ಅಷ್ಟು ಕಷ್ಟಪಟ್ಟು ಮಾಡಿದ ಕೆಲಸ ಕ್ಷಣಾರ್ಧದಲ್ಲಿ ನಾಶವಾಗುತ್ತೆ, ಆದರೆ ಆ ಗಾರೆಯವರ ತಾಳ್ಮೆಗೆ ಮೆಚ್ಚಲೇಬೇಕು, ಬೇರೆಯವರು ಆದರೆ ನಾಯಿಗೆ ಪೆಟ್ ಬೀಳುತ್ತಿತ್ತು, ಅವರು ಅದನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈ ವೀಡಿಯೋ ನೋಡಿದವರು ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ನಾನಾದರೆ ಆ ನಾಯಿಗೆ ರಪ್ ಅಂತ ಕೊಡ್ತಾ ಇದ್ದೆ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಕಷ್ಟಪಟ್ಟವರಿಗೆ ಮಾತ್ರ ಆ ಶ್ರಮ ಗೊತ್ತಿರುತ್ತದೆ ಎಂದೆಲ್ಲಾ ಕಮೆಂಟ್ ಮಾಡ್ತಾ ಇದ್ದಾರೆ.
ಏನೇ ಆಗಲಿ ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಿಸ್ತಾ ಇದ್ದೇವೆ ಹಾಗಾಗಿ ನಾಯಿಯನ್ನು ಕಟ್ಟಿ ಹಾಕಬೇಕು ಎಂಬ ಅರಿವು ಸಾಕಿದವರಿಗೆ ಇರಬೇಕಾಗಿತ್ತು, ಪಾಪಾ ಆ ವ್ಯಕ್ತಿಯ ಪಜೀತಿ ನೋಡುವಾಗ ಅಯ್ಯೋ ಅನಿಸದೆ ಇರಲ್ಲ.
ಈ ವೀಡಿಯೋ ನೋಡಿ ನಿಮಗೆ ಏನನಿಸಿತ್ತು ಅಂತ ಕಮೆಂಟ್ ಮಾಡಿ.



Click it and Unblock the Notifications