Latest Updates
-
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ!
ನಾಯಿಯ ಆಟ ಗಾರೆಯವನಿಗೆ ತಂದಿಟ್ಟ ಪಜೀತಿ ನೋಡಿ: ವೀಡಿಯೋ ವೈರಲ್
ಫೇಸ್ಬುಕ್ ನಾಯಿಯ ತುಂಟಾದ ವೀಡಿಯೋವೊಂದು ತುಂಬಾನೇ ವೈರಲ್ ಆಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಇದೆಯೆಲ್ಲಾ ಈ ವೀಡಿಯೋದಲ್ಲಿರುವ ಸಿಚುವೇಷನ್ಗೆ ತುಂಬಾ ಸೂಟ್ ಆಗುತ್ತೆ.

ಪಾಪ ಗಾರೆಯವರೊಬ್ಬರು ತಮ್ಮ ಕೆಲಸ ಮಾಡ್ತಾ ಇರುತ್ತಾರೆ, ಫ್ಲೋರ್ ರೆಡಿ ಮಾಡುವಾಗ ಅದು ಸೆಟ್ ಆಗುವವರೆಗೆ ಯಾರೂ ಮೆಟ್ಟಬೇಡಿ ಎಂದು ಹೇಳುತ್ತಾರೆ, ಏಕೆಂದರೆ ಸಿಮೆಂಟ್ ಸೆಟ್ ಆಗಲು ನಿಷ್ಠ 24 ಗಂಟೆ ಸಮಯಬೇಕು, ಇಲ್ಲದಿದ್ದರೆ ನಾವು ನಡೆದಾಡುವ ಕಾಲಿನ ಮಾರ್ಕ್ಸ್ ಅಚ್ಚೊತ್ತಿದಂತೆ ಹಾಗೇ ಉಳಿದುಕೊಳ್ಳುವುದು. ಆ ಕಾರಣಕ್ಕೆ ಮನೆಯ ನಾಯಿ-ಬೆಕ್ಕು ಕೂಡ ಆ ಕಡೆ ಸುಳಿಯದಂತೆ ಎಚ್ಚರವಹಿಸಲಾಗುವುದು.
ಈ ವೀಡಿಯೋದಲ್ಲಿ ನೋಡಬಹುದು, ಆ ವ್ಯಕ್ತಿ ಮನೆಯ ವರಾಂಡವನ್ನು ತೆಳಿ ಹಾಕಿ ಸರಿ ತಮಾಸ್ (ಸಮತಟ್ಟಾಗಿ ಮಾಡುವುದು) ಮಾಡ್ತಾ ಇರ್ತಾನೆ, ಆದರೆ ಆ ಮನೆಯವರು ಸಾಕಿದ ನಾಯಿಮರಿ ಓಡಿಕೊಂಡು ಬಂದು ತನ್ನ ಹೆಜ್ಜೆ ಗುರುತು ಮೂಡಿಸುತ್ತದೆ, ಆತ ಅದನ್ನು ಓಡಿಸಿ ಮತ್ತೆ ಸರಿ ಮಾಡುತ್ತಾನೆ, ನೋಡಿದರೆ ನಾಯಿ ಮತ್ತೆ ಓಡಿ ಬಂದು ಅಲ್ಲಿಲ್ಲಾ ತನ್ನ ಹೆಜ್ಜೆ ಗುರುತು ಮೂಡಿಸಿ ಓಡುತ್ತದೆ.
ಪಾಪ ಅಷ್ಟು ಕಷ್ಟಪಟ್ಟು ಮಾಡಿದ ಕೆಲಸ ಕ್ಷಣಾರ್ಧದಲ್ಲಿ ನಾಶವಾಗುತ್ತೆ, ಆದರೆ ಆ ಗಾರೆಯವರ ತಾಳ್ಮೆಗೆ ಮೆಚ್ಚಲೇಬೇಕು, ಬೇರೆಯವರು ಆದರೆ ನಾಯಿಗೆ ಪೆಟ್ ಬೀಳುತ್ತಿತ್ತು, ಅವರು ಅದನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈ ವೀಡಿಯೋ ನೋಡಿದವರು ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ನಾನಾದರೆ ಆ ನಾಯಿಗೆ ರಪ್ ಅಂತ ಕೊಡ್ತಾ ಇದ್ದೆ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಕಷ್ಟಪಟ್ಟವರಿಗೆ ಮಾತ್ರ ಆ ಶ್ರಮ ಗೊತ್ತಿರುತ್ತದೆ ಎಂದೆಲ್ಲಾ ಕಮೆಂಟ್ ಮಾಡ್ತಾ ಇದ್ದಾರೆ.
ಏನೇ ಆಗಲಿ ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಿಸ್ತಾ ಇದ್ದೇವೆ ಹಾಗಾಗಿ ನಾಯಿಯನ್ನು ಕಟ್ಟಿ ಹಾಕಬೇಕು ಎಂಬ ಅರಿವು ಸಾಕಿದವರಿಗೆ ಇರಬೇಕಾಗಿತ್ತು, ಪಾಪಾ ಆ ವ್ಯಕ್ತಿಯ ಪಜೀತಿ ನೋಡುವಾಗ ಅಯ್ಯೋ ಅನಿಸದೆ ಇರಲ್ಲ.
ಈ ವೀಡಿಯೋ ನೋಡಿ ನಿಮಗೆ ಏನನಿಸಿತ್ತು ಅಂತ ಕಮೆಂಟ್ ಮಾಡಿ.



Click it and Unblock the Notifications