Just In
- 1 hr ago ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- 2 hrs ago ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 14 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 14 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
Don't Miss
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಯಿಯ ಆಟ ಗಾರೆಯವನಿಗೆ ತಂದಿಟ್ಟ ಪಜೀತಿ ನೋಡಿ: ವೀಡಿಯೋ ವೈರಲ್
ಫೇಸ್ಬುಕ್ ನಾಯಿಯ ತುಂಟಾದ ವೀಡಿಯೋವೊಂದು ತುಂಬಾನೇ ವೈರಲ್ ಆಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಇದೆಯೆಲ್ಲಾ ಈ ವೀಡಿಯೋದಲ್ಲಿರುವ ಸಿಚುವೇಷನ್ಗೆ ತುಂಬಾ ಸೂಟ್ ಆಗುತ್ತೆ.
ಪಾಪ ಗಾರೆಯವರೊಬ್ಬರು ತಮ್ಮ ಕೆಲಸ ಮಾಡ್ತಾ ಇರುತ್ತಾರೆ, ಫ್ಲೋರ್ ರೆಡಿ ಮಾಡುವಾಗ ಅದು ಸೆಟ್ ಆಗುವವರೆಗೆ ಯಾರೂ ಮೆಟ್ಟಬೇಡಿ ಎಂದು ಹೇಳುತ್ತಾರೆ, ಏಕೆಂದರೆ ಸಿಮೆಂಟ್ ಸೆಟ್ ಆಗಲು ನಿಷ್ಠ 24 ಗಂಟೆ ಸಮಯಬೇಕು, ಇಲ್ಲದಿದ್ದರೆ ನಾವು ನಡೆದಾಡುವ ಕಾಲಿನ ಮಾರ್ಕ್ಸ್ ಅಚ್ಚೊತ್ತಿದಂತೆ ಹಾಗೇ ಉಳಿದುಕೊಳ್ಳುವುದು. ಆ ಕಾರಣಕ್ಕೆ ಮನೆಯ ನಾಯಿ-ಬೆಕ್ಕು ಕೂಡ ಆ ಕಡೆ ಸುಳಿಯದಂತೆ ಎಚ್ಚರವಹಿಸಲಾಗುವುದು.
ಈ ವೀಡಿಯೋದಲ್ಲಿ ನೋಡಬಹುದು, ಆ ವ್ಯಕ್ತಿ ಮನೆಯ ವರಾಂಡವನ್ನು ತೆಳಿ ಹಾಕಿ ಸರಿ ತಮಾಸ್ (ಸಮತಟ್ಟಾಗಿ ಮಾಡುವುದು) ಮಾಡ್ತಾ ಇರ್ತಾನೆ, ಆದರೆ ಆ ಮನೆಯವರು ಸಾಕಿದ ನಾಯಿಮರಿ ಓಡಿಕೊಂಡು ಬಂದು ತನ್ನ ಹೆಜ್ಜೆ ಗುರುತು ಮೂಡಿಸುತ್ತದೆ, ಆತ ಅದನ್ನು ಓಡಿಸಿ ಮತ್ತೆ ಸರಿ ಮಾಡುತ್ತಾನೆ, ನೋಡಿದರೆ ನಾಯಿ ಮತ್ತೆ ಓಡಿ ಬಂದು ಅಲ್ಲಿಲ್ಲಾ ತನ್ನ ಹೆಜ್ಜೆ ಗುರುತು ಮೂಡಿಸಿ ಓಡುತ್ತದೆ.
ಪಾಪ ಅಷ್ಟು ಕಷ್ಟಪಟ್ಟು ಮಾಡಿದ ಕೆಲಸ ಕ್ಷಣಾರ್ಧದಲ್ಲಿ ನಾಶವಾಗುತ್ತೆ, ಆದರೆ ಆ ಗಾರೆಯವರ ತಾಳ್ಮೆಗೆ ಮೆಚ್ಚಲೇಬೇಕು, ಬೇರೆಯವರು ಆದರೆ ನಾಯಿಗೆ ಪೆಟ್ ಬೀಳುತ್ತಿತ್ತು, ಅವರು ಅದನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈ ವೀಡಿಯೋ ನೋಡಿದವರು ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ನಾನಾದರೆ ಆ ನಾಯಿಗೆ ರಪ್ ಅಂತ ಕೊಡ್ತಾ ಇದ್ದೆ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಕಷ್ಟಪಟ್ಟವರಿಗೆ ಮಾತ್ರ ಆ ಶ್ರಮ ಗೊತ್ತಿರುತ್ತದೆ ಎಂದೆಲ್ಲಾ ಕಮೆಂಟ್ ಮಾಡ್ತಾ ಇದ್ದಾರೆ.
ಏನೇ ಆಗಲಿ ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಿಸ್ತಾ ಇದ್ದೇವೆ ಹಾಗಾಗಿ ನಾಯಿಯನ್ನು ಕಟ್ಟಿ ಹಾಕಬೇಕು ಎಂಬ ಅರಿವು ಸಾಕಿದವರಿಗೆ ಇರಬೇಕಾಗಿತ್ತು, ಪಾಪಾ ಆ ವ್ಯಕ್ತಿಯ ಪಜೀತಿ ನೋಡುವಾಗ ಅಯ್ಯೋ ಅನಿಸದೆ ಇರಲ್ಲ.
ಈ ವೀಡಿಯೋ ನೋಡಿ ನಿಮಗೆ ಏನನಿಸಿತ್ತು ಅಂತ ಕಮೆಂಟ್ ಮಾಡಿ.