Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ನಾಯಿಯ ಆಟ ಗಾರೆಯವನಿಗೆ ತಂದಿಟ್ಟ ಪಜೀತಿ ನೋಡಿ: ವೀಡಿಯೋ ವೈರಲ್
ಫೇಸ್ಬುಕ್ ನಾಯಿಯ ತುಂಟಾದ ವೀಡಿಯೋವೊಂದು ತುಂಬಾನೇ ವೈರಲ್ ಆಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಇದೆಯೆಲ್ಲಾ ಈ ವೀಡಿಯೋದಲ್ಲಿರುವ ಸಿಚುವೇಷನ್ಗೆ ತುಂಬಾ ಸೂಟ್ ಆಗುತ್ತೆ.

ಪಾಪ ಗಾರೆಯವರೊಬ್ಬರು ತಮ್ಮ ಕೆಲಸ ಮಾಡ್ತಾ ಇರುತ್ತಾರೆ, ಫ್ಲೋರ್ ರೆಡಿ ಮಾಡುವಾಗ ಅದು ಸೆಟ್ ಆಗುವವರೆಗೆ ಯಾರೂ ಮೆಟ್ಟಬೇಡಿ ಎಂದು ಹೇಳುತ್ತಾರೆ, ಏಕೆಂದರೆ ಸಿಮೆಂಟ್ ಸೆಟ್ ಆಗಲು ನಿಷ್ಠ 24 ಗಂಟೆ ಸಮಯಬೇಕು, ಇಲ್ಲದಿದ್ದರೆ ನಾವು ನಡೆದಾಡುವ ಕಾಲಿನ ಮಾರ್ಕ್ಸ್ ಅಚ್ಚೊತ್ತಿದಂತೆ ಹಾಗೇ ಉಳಿದುಕೊಳ್ಳುವುದು. ಆ ಕಾರಣಕ್ಕೆ ಮನೆಯ ನಾಯಿ-ಬೆಕ್ಕು ಕೂಡ ಆ ಕಡೆ ಸುಳಿಯದಂತೆ ಎಚ್ಚರವಹಿಸಲಾಗುವುದು.
ಈ ವೀಡಿಯೋದಲ್ಲಿ ನೋಡಬಹುದು, ಆ ವ್ಯಕ್ತಿ ಮನೆಯ ವರಾಂಡವನ್ನು ತೆಳಿ ಹಾಕಿ ಸರಿ ತಮಾಸ್ (ಸಮತಟ್ಟಾಗಿ ಮಾಡುವುದು) ಮಾಡ್ತಾ ಇರ್ತಾನೆ, ಆದರೆ ಆ ಮನೆಯವರು ಸಾಕಿದ ನಾಯಿಮರಿ ಓಡಿಕೊಂಡು ಬಂದು ತನ್ನ ಹೆಜ್ಜೆ ಗುರುತು ಮೂಡಿಸುತ್ತದೆ, ಆತ ಅದನ್ನು ಓಡಿಸಿ ಮತ್ತೆ ಸರಿ ಮಾಡುತ್ತಾನೆ, ನೋಡಿದರೆ ನಾಯಿ ಮತ್ತೆ ಓಡಿ ಬಂದು ಅಲ್ಲಿಲ್ಲಾ ತನ್ನ ಹೆಜ್ಜೆ ಗುರುತು ಮೂಡಿಸಿ ಓಡುತ್ತದೆ.
ಪಾಪ ಅಷ್ಟು ಕಷ್ಟಪಟ್ಟು ಮಾಡಿದ ಕೆಲಸ ಕ್ಷಣಾರ್ಧದಲ್ಲಿ ನಾಶವಾಗುತ್ತೆ, ಆದರೆ ಆ ಗಾರೆಯವರ ತಾಳ್ಮೆಗೆ ಮೆಚ್ಚಲೇಬೇಕು, ಬೇರೆಯವರು ಆದರೆ ನಾಯಿಗೆ ಪೆಟ್ ಬೀಳುತ್ತಿತ್ತು, ಅವರು ಅದನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈ ವೀಡಿಯೋ ನೋಡಿದವರು ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ನಾನಾದರೆ ಆ ನಾಯಿಗೆ ರಪ್ ಅಂತ ಕೊಡ್ತಾ ಇದ್ದೆ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಕಷ್ಟಪಟ್ಟವರಿಗೆ ಮಾತ್ರ ಆ ಶ್ರಮ ಗೊತ್ತಿರುತ್ತದೆ ಎಂದೆಲ್ಲಾ ಕಮೆಂಟ್ ಮಾಡ್ತಾ ಇದ್ದಾರೆ.
ಏನೇ ಆಗಲಿ ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಿಸ್ತಾ ಇದ್ದೇವೆ ಹಾಗಾಗಿ ನಾಯಿಯನ್ನು ಕಟ್ಟಿ ಹಾಕಬೇಕು ಎಂಬ ಅರಿವು ಸಾಕಿದವರಿಗೆ ಇರಬೇಕಾಗಿತ್ತು, ಪಾಪಾ ಆ ವ್ಯಕ್ತಿಯ ಪಜೀತಿ ನೋಡುವಾಗ ಅಯ್ಯೋ ಅನಿಸದೆ ಇರಲ್ಲ.
ಈ ವೀಡಿಯೋ ನೋಡಿ ನಿಮಗೆ ಏನನಿಸಿತ್ತು ಅಂತ ಕಮೆಂಟ್ ಮಾಡಿ.



Click it and Unblock the Notifications