Just In
- 1 hr ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 2 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 3 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 4 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫ್ಲೈಟ್ನಲ್ಲಿ ಹುಬ್ಬಳ್ಳಿ ಕನ್ನಡದಲ್ಲಿಯೇ ಸೂಚನೆ ನೀಡಿದ ಪೈಲೆಟ್: ವೀಡಿಯೋ ವೈರಲ್
ವಿಮಾನದ ಹತ್ತಿದಾಗ ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸೂಚನೆಗಳನ್ನು ಕೇಳುವುದು ಸಹಜ, ಆದರೆ ಹುಬ್ಬಳ್ಳಿ-ದೆಹಲಿ ನಡುವೆ ಸಂಚಾರ ಆರಂಭಿಸಿದ ವಿಮಾನದಲ್ಲಿ ಕನ್ನಡದಲ್ಲಿ ಸೂಚನೆಗಳು ಕೇಳಿ ಬಂದಾಗ ಅದರಲ್ಲಿದ್ದ ಕನ್ನಡಿಗರಿಗೆ ಅದೆಷ್ಟು ಅಚ್ಚರಿ ಹಾಗೂ ಖುಷಿಯಾಗಿರಬೇಡ.
ಇಂಡಿಗೋ ವಿಮಾನದಲ್ಲಿರುವ ಅಕ್ಷಯ ಪಾಟೀಲ ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ವಾಗತ ಕೋರಿ ವಿವರಣೆ ನೀಡಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ.
ಫ್ಲೈಟ್ನಲ್ಲಿ ಕನ್ನಡದಲ್ಲಿ ಸೂಚನೆ ನೀಡಿದ ಪೈಲೆಟ್
ಪೈಲೆಟ್ ಸೂಚನೆಯನ್ನು ನೀಡುವಾಗ ಸ್ವಚ್ಛ ಹುಬ್ಬಳಿ ಕನ್ನಡ ಭಾಷೆಯಲ್ಲಿ ಹುಬ್ಬಳ್ಳಿಯಿಂದ ನಾವು ಡೆಲ್ಲಿಗೆ ಹೊಂಟೀವಿ, ಡೆಲ್ಲಿಗೆ 17, 000ಕಿಮೀ ಐತ್ರಿ, 2 ಗಂಟೆಯಾಗೆ ಕವರ್ ಮಾಡ್ತೀವ್ರಿ ಎಂದು ಹೇಳಲಾರಂಭಿಸಿದಾಗ ಅದರಲ್ಲಿದ್ದ ಕನ್ನಡಿಗರಿಗೆ ತುಂಬಾನೇ ಖುಷಿಯಾಯ್ತು, ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರೂ ಇದೇ ವಿಮಾನದಲ್ಲಿದ್ದರು.
ಮೆಚ್ಚುಗೆ ವ್ಯಕ್ತ ಪಡಿಸಿದ ಕೇಂದ್ರ ಸಚಿವ ಹ್ಲಾದ ಜೋಷಿ
ಕೇಂದ್ರ ಸಚಿವ( ಕೇಂದ್ರದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ) ಪ್ರಹ್ಲಾದ ಜೋಷಿ ಕೂಡ ಈ ವೀಡಿಯೋ ಹಂಚಿಕೊಂಡು 'ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್ ಅನೌನ್ಸ್ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದು ವಿಶೇಷ.
ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್ ಆಗಿದ್ರಿಂದ ಸ್ವಚ್ಛ ಉತ್ತರ ಕರ್ನಾಟಕ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು. ಇದರಕಿಂತ ಹೆಚ್ಚಿನ ಖುಷಿ ಏನ ಬೇಕ ಹೇಳ್ರಿ...ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ' ಎಂಬುವುದಾಗಿ ಹೇಳಿದ್ದಾರೆ.
ಕನ್ನಡ ಉಳಿಸಲು, ಬೆಳೆಸಲು ಈ ರೀತಿಯ ಪ್ರಯತ್ನ ಅಗತ್ಯ
ಇದು ತುಂಬಾ ನೂತನ ಪ್ರಯತ್ನ, ಪೈಲೆಟ್ ಹುಬ್ಬಳ್ಳಿ ಕನ್ನಡ ಭಾಷೆಯಲ್ಲಿ ಮಾತನಾಡಿ ಭಾಷೆ ಪ್ರೇಮ ಮರೆದಿರುವ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ. ನಾವು ವೃತ್ತಿ ಅಂತ ಬಂದಾಗ ನಾವೆಲ್ಲಾ ವ್ಯವಹಾರಿಕ ಭಾಷೆಯನ್ನಾಗಿ ಇಂಗ್ಲಿಷ್ ಹೆಚ್ಚಾಗಿ ಬಳಸುತ್ತೇವೆ. ಆದರೆ ನಮ್ಮ ಕನ್ನಡಿಗರೇ ಸಿಕ್ಕಾಗ ಅವರಿಗೆ ನಮ್ಮ ಭಾಷೆ ಅರ್ಥವಾಗುವಾಗ ಬೇರೆ ಭಾಷೆಯ ಸಹಾಯ ನಿಜವಾಗಲೂ ಬೇಕೆ? ನಮ್ಮ ಭಾಷೆಯನ್ನು ನಾವು ಮಾತನಾಡಿದರೆ ಮಾತ್ರ ಬೆಳೆಸಲು ಸಾಧ್ಯ ಅಲ್ಲವೇ? ನಮ್ಮ ಭಾಷೆಯನ್ನು ಮತ್ತಷ್ಟು ಹೇಗೆ ಶ್ರೀಮಂತಗೊಳಿಸಬೇಕು, ಅದಕ್ಕೆ ನಾವು ಮಾಡಬೇಕಾದ ಚಿಕ್ಕ ಕಾರ್ಯವೇನು ಎಂಬುವುದಕ್ಕೆ ಇದೊಂದು ಅತ್ಯುತ್ತಮವಾದ ಉದಾಹರಣೆ ಎಂದರೆ ತಪ್ಪಾಗಲಾರದು, ಏನಂತೀರಿ?