Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಫ್ಲೈಟ್ನಲ್ಲಿ ಹುಬ್ಬಳ್ಳಿ ಕನ್ನಡದಲ್ಲಿಯೇ ಸೂಚನೆ ನೀಡಿದ ಪೈಲೆಟ್: ವೀಡಿಯೋ ವೈರಲ್
ವಿಮಾನದ ಹತ್ತಿದಾಗ ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸೂಚನೆಗಳನ್ನು ಕೇಳುವುದು ಸಹಜ, ಆದರೆ ಹುಬ್ಬಳ್ಳಿ-ದೆಹಲಿ ನಡುವೆ ಸಂಚಾರ ಆರಂಭಿಸಿದ ವಿಮಾನದಲ್ಲಿ ಕನ್ನಡದಲ್ಲಿ ಸೂಚನೆಗಳು ಕೇಳಿ ಬಂದಾಗ ಅದರಲ್ಲಿದ್ದ ಕನ್ನಡಿಗರಿಗೆ ಅದೆಷ್ಟು ಅಚ್ಚರಿ ಹಾಗೂ ಖುಷಿಯಾಗಿರಬೇಡ.

ಇಂಡಿಗೋ ವಿಮಾನದಲ್ಲಿರುವ ಅಕ್ಷಯ ಪಾಟೀಲ ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ವಾಗತ ಕೋರಿ ವಿವರಣೆ ನೀಡಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ.

ಫ್ಲೈಟ್ನಲ್ಲಿ ಕನ್ನಡದಲ್ಲಿ ಸೂಚನೆ ನೀಡಿದ ಪೈಲೆಟ್
ಪೈಲೆಟ್ ಸೂಚನೆಯನ್ನು ನೀಡುವಾಗ ಸ್ವಚ್ಛ ಹುಬ್ಬಳಿ ಕನ್ನಡ ಭಾಷೆಯಲ್ಲಿ ಹುಬ್ಬಳ್ಳಿಯಿಂದ ನಾವು ಡೆಲ್ಲಿಗೆ ಹೊಂಟೀವಿ, ಡೆಲ್ಲಿಗೆ 17, 000ಕಿಮೀ ಐತ್ರಿ, 2 ಗಂಟೆಯಾಗೆ ಕವರ್ ಮಾಡ್ತೀವ್ರಿ ಎಂದು ಹೇಳಲಾರಂಭಿಸಿದಾಗ ಅದರಲ್ಲಿದ್ದ ಕನ್ನಡಿಗರಿಗೆ ತುಂಬಾನೇ ಖುಷಿಯಾಯ್ತು, ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರೂ ಇದೇ ವಿಮಾನದಲ್ಲಿದ್ದರು.

ಮೆಚ್ಚುಗೆ ವ್ಯಕ್ತ ಪಡಿಸಿದ ಕೇಂದ್ರ ಸಚಿವ ಹ್ಲಾದ ಜೋಷಿ
ಕೇಂದ್ರ ಸಚಿವ( ಕೇಂದ್ರದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ) ಪ್ರಹ್ಲಾದ ಜೋಷಿ ಕೂಡ ಈ ವೀಡಿಯೋ ಹಂಚಿಕೊಂಡು 'ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್ ಅನೌನ್ಸ್ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದು ವಿಶೇಷ.
ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್ ಆಗಿದ್ರಿಂದ ಸ್ವಚ್ಛ ಉತ್ತರ ಕರ್ನಾಟಕ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು. ಇದರಕಿಂತ ಹೆಚ್ಚಿನ ಖುಷಿ ಏನ ಬೇಕ ಹೇಳ್ರಿ...ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ' ಎಂಬುವುದಾಗಿ ಹೇಳಿದ್ದಾರೆ.

ಕನ್ನಡ ಉಳಿಸಲು, ಬೆಳೆಸಲು ಈ ರೀತಿಯ ಪ್ರಯತ್ನ ಅಗತ್ಯ
ಇದು ತುಂಬಾ ನೂತನ ಪ್ರಯತ್ನ, ಪೈಲೆಟ್ ಹುಬ್ಬಳ್ಳಿ ಕನ್ನಡ ಭಾಷೆಯಲ್ಲಿ ಮಾತನಾಡಿ ಭಾಷೆ ಪ್ರೇಮ ಮರೆದಿರುವ ಈ ವೀಡಿಯೋ ತುಂಬಾನೇ ವೈರಲ್ ಆಗಿದೆ. ನಾವು ವೃತ್ತಿ ಅಂತ ಬಂದಾಗ ನಾವೆಲ್ಲಾ ವ್ಯವಹಾರಿಕ ಭಾಷೆಯನ್ನಾಗಿ ಇಂಗ್ಲಿಷ್ ಹೆಚ್ಚಾಗಿ ಬಳಸುತ್ತೇವೆ. ಆದರೆ ನಮ್ಮ ಕನ್ನಡಿಗರೇ ಸಿಕ್ಕಾಗ ಅವರಿಗೆ ನಮ್ಮ ಭಾಷೆ ಅರ್ಥವಾಗುವಾಗ ಬೇರೆ ಭಾಷೆಯ ಸಹಾಯ ನಿಜವಾಗಲೂ ಬೇಕೆ? ನಮ್ಮ ಭಾಷೆಯನ್ನು ನಾವು ಮಾತನಾಡಿದರೆ ಮಾತ್ರ ಬೆಳೆಸಲು ಸಾಧ್ಯ ಅಲ್ಲವೇ? ನಮ್ಮ ಭಾಷೆಯನ್ನು ಮತ್ತಷ್ಟು ಹೇಗೆ ಶ್ರೀಮಂತಗೊಳಿಸಬೇಕು, ಅದಕ್ಕೆ ನಾವು ಮಾಡಬೇಕಾದ ಚಿಕ್ಕ ಕಾರ್ಯವೇನು ಎಂಬುವುದಕ್ಕೆ ಇದೊಂದು ಅತ್ಯುತ್ತಮವಾದ ಉದಾಹರಣೆ ಎಂದರೆ ತಪ್ಪಾಗಲಾರದು, ಏನಂತೀರಿ?



Click it and Unblock the Notifications