Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
Viral: ರಶ್ಮಿಕಾ ವಿಚ್ಛೇದನ ಪಡೆಯಬಹುದು ಎಂದ ಜ್ಯೋತಿಷಿ, ಸಮಂತಗೆ ಇವರು ಹೇಳಿದ ಭವಿಷ್ಯ ನಿಜವಾಯ್ತು
ಸ್ಯಾಂಡಲ್ವುಡ್ಗೆ ಕಿರಿಕ್ ಪಾರ್ಟಿ ಮೂಲಕ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ವರೆಗೂ ಬಹ ಬೇಡಿಕೆಯ ನಟಿ. ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್. ಯಶಸ್ವಿನ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣ ಅವರ ಮದುವೆ ಜೀವನದ ಬಗ್ಗೆ ಖ್ಯಾತ ಸೆಲೆಬ್ರಿಟಿ ಜ್ಯೋತಿಷ್ಯಿ ಗುರೂಜಿ ವೇಣು ಸ್ವಾಮಿ ಹೇಳಿರುವ ಭವಿಷ್ಯ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ವೈಯಕ್ತಿಕ ಕಾರಣಗಳಿಂದಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ
ಅವರ ವೃತ್ತಿ ಜೀವನ ಮಾತ್ರವಲ್ಲ ಆಗಾಗ ವೈಯಕ್ತಿಕ ಜೀವನದ ಬಗ್ಗೆ ಸಕತ್ ಸುದ್ದಿಯಲ್ಲಿ ಇರುತ್ತಾರೆ. ಕಿರಿಕ್ ಪಾರ್ಟಿ ಕೋ ಸ್ಟಾರ್ ಕನ್ನಡ ಪ್ರತಿಭಾನ್ವಿತ ನಟ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿ-ಪ್ರೇಮ ಸುದ್ದಿ ಮಾಡಿತ್ತು. ನಂತರ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಕ್ಯೂಟ್ ಕಪಲ್ ಜೋಡಿಯನ್ನು ಕರ್ನಾಟಕವೇ ಮೆಚ್ಚಿಕೊಂಡಿತ್ತು. ಆದರೆ ಏನಾಯ್ತೋ ಏನೋ ಆ ಮದುವೆ ಮುರಿದು ಬಿತ್ತು. ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬೇರೆ-ಬೇರೆಯಾದರು.

ವೃತ್ತಿ ಜೀವನದಲ್ಲಿ ಬೆಳೆಯಲಾರಂಭಿಸಿದರು, ಅದರ ಜೊತೆ ಗಾಸಿಪ್ಗಳು ಬೆಳೆಯಿತು
ಸ್ಯಾಂಡಲ್ವುಡ್ನಿಂದ ಟಾಲಿವುಡ್ಗೆ ಹೋದರೂ ಅಲ್ಲಿಯೂ ಅವರ ಚಿತ್ರಗಳು ಸೂಪರ್ ಡೂಪರ್ ಹಿಟ್ಗಳಾದೆವು. ಇದೀಗ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎಂಬ ಗಾಸಿಪ್ಗಳು ಹರಿದಾಡುತ್ತಲೇ ಇವೆ, ಆದರೆ ಇವರಿಬ್ಬರು ಅದಕ್ಕೇನು ತಲೆಕೆಡಿಸಿಕೊಂಡಿಲ್ಲ. ರಶ್ಮಿಕಾ ಮದುವೆ ವಿಷಯ ಸಕತ್ ಸದ್ದು ಮಾಡುತ್ತಿದೆ.

ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಕುರಿತು ಜ್ಯೋತಿಷಿ ಭವಿಷ್ಯ
ಆಂಧ್ರ ಪ್ರದೇಶದ ಪ್ರಸಿದ್ಧ ಸೆಲೆಬ್ರಿಟಿ ಜ್ಯೋತಿಷಿಯಾಗಿರುವ ಗುರೂಜಿ ವೇಣು ಸ್ವಾಮಿ ರಶ್ಮಿಕಾ ಮಂದಣ್ಣರ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ಹೇಳಿದ್ದಾರೆ. ಅವರ ಪ್ರಕಾರ ರಶ್ಮಿಕಾ ಮಂದಣ್ಣರವರ ವೈವಾಹಿಕ ಜೀವನ ಸುಖಕರವಾಗಿರುವುದಿಲ್ಲ, ಅವರು ವಿಚ್ಛೇದನ ಪಡೆಯಬಹುದು ಎಂದು ಹೇಳಿರುವುದು ಭಾರೀ ಚರ್ಚೆಯನ್ನು ಉಂಟು ಮಾಡಿದೆ. ಅದಕ್ಕೆ ಕಾರಣವೂ ಇದೆ, ಈ ಜ್ಯೋತಿಷಿ ಸಮಂತಾ ವೈವಾಹಿಕ ಜೀವನದ ಬಗೆಯೂ ಹೇಳಿದ್ದರು.

ಜ್ಯೋತಿಷಿ ನುಡಿದ ಭವಿಷ್ಯ ಸಮಂತಾ ವಿಷಯದಲ್ಲೂ ನಿಜವಾಗಿತ್ತು
ಈ ಜ್ಯೋತಿಷಿ ಸಮಂತಾ-ನಾಗ ಚೈತನ್ಯರವರ ವೈವಾಹಿಕ ಜೀವನ ತುಂಬಾ ಕಾಲ ಬಾಳಲ್ಲ ಎಂದು ಮೊದಲೇ ನುಡಿದಿದ್ದರು. ಅದರಂತೆ ಆ ಜೋಡಿ 10 ವರ್ಷ ಪ್ರೀತಿಸಿ ಮದುವೆಯಾಗಿ ಮೂರೇ ವರ್ಷದಲ್ಲಿ ಬೇರ್ಪಟ್ಟರು. ಈ ಕಾರಣಕ್ಕೆ ಈಗ ರಶ್ಮಿಕಾ ಕುರಿತು ಹೇಳಿರುವ ಭವಿಷ್ಯ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.



Click it and Unblock the Notifications