Just In
Don't Miss
- News ಡಿಕೆ ಸುರೇಶ್ ನಿದ್ದೆಗೆಡಿಸಿದ ಡಾಕ್ಟರ್; ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಈ ಬಾರಿಯೂ ಗೆಲ್ತಾರೆ: ಭವಿಷ್ಯ ನುಡಿದ ಸಿದ್ದರಾಮ
- Movies 'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Viral: ರಶ್ಮಿಕಾ ವಿಚ್ಛೇದನ ಪಡೆಯಬಹುದು ಎಂದ ಜ್ಯೋತಿಷಿ, ಸಮಂತಗೆ ಇವರು ಹೇಳಿದ ಭವಿಷ್ಯ ನಿಜವಾಯ್ತು
ಸ್ಯಾಂಡಲ್ವುಡ್ಗೆ ಕಿರಿಕ್ ಪಾರ್ಟಿ ಮೂಲಕ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ವರೆಗೂ ಬಹ ಬೇಡಿಕೆಯ ನಟಿ. ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್. ಯಶಸ್ವಿನ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣ ಅವರ ಮದುವೆ ಜೀವನದ ಬಗ್ಗೆ ಖ್ಯಾತ ಸೆಲೆಬ್ರಿಟಿ ಜ್ಯೋತಿಷ್ಯಿ ಗುರೂಜಿ ವೇಣು ಸ್ವಾಮಿ ಹೇಳಿರುವ ಭವಿಷ್ಯ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ರಶ್ಮಿಕಾ ಮಂದಣ್ಣ ವೈಯಕ್ತಿಕ ಕಾರಣಗಳಿಂದಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ
ಅವರ ವೃತ್ತಿ ಜೀವನ ಮಾತ್ರವಲ್ಲ ಆಗಾಗ ವೈಯಕ್ತಿಕ ಜೀವನದ ಬಗ್ಗೆ ಸಕತ್ ಸುದ್ದಿಯಲ್ಲಿ ಇರುತ್ತಾರೆ. ಕಿರಿಕ್ ಪಾರ್ಟಿ ಕೋ ಸ್ಟಾರ್ ಕನ್ನಡ ಪ್ರತಿಭಾನ್ವಿತ ನಟ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿ-ಪ್ರೇಮ ಸುದ್ದಿ ಮಾಡಿತ್ತು. ನಂತರ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಕ್ಯೂಟ್ ಕಪಲ್ ಜೋಡಿಯನ್ನು ಕರ್ನಾಟಕವೇ ಮೆಚ್ಚಿಕೊಂಡಿತ್ತು. ಆದರೆ ಏನಾಯ್ತೋ ಏನೋ ಆ ಮದುವೆ ಮುರಿದು ಬಿತ್ತು. ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬೇರೆ-ಬೇರೆಯಾದರು.
ವೃತ್ತಿ ಜೀವನದಲ್ಲಿ ಬೆಳೆಯಲಾರಂಭಿಸಿದರು, ಅದರ ಜೊತೆ ಗಾಸಿಪ್ಗಳು ಬೆಳೆಯಿತು
ಸ್ಯಾಂಡಲ್ವುಡ್ನಿಂದ ಟಾಲಿವುಡ್ಗೆ ಹೋದರೂ ಅಲ್ಲಿಯೂ ಅವರ ಚಿತ್ರಗಳು ಸೂಪರ್ ಡೂಪರ್ ಹಿಟ್ಗಳಾದೆವು. ಇದೀಗ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎಂಬ ಗಾಸಿಪ್ಗಳು ಹರಿದಾಡುತ್ತಲೇ ಇವೆ, ಆದರೆ ಇವರಿಬ್ಬರು ಅದಕ್ಕೇನು ತಲೆಕೆಡಿಸಿಕೊಂಡಿಲ್ಲ. ರಶ್ಮಿಕಾ ಮದುವೆ ವಿಷಯ ಸಕತ್ ಸದ್ದು ಮಾಡುತ್ತಿದೆ.
ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಕುರಿತು ಜ್ಯೋತಿಷಿ ಭವಿಷ್ಯ
ಆಂಧ್ರ ಪ್ರದೇಶದ ಪ್ರಸಿದ್ಧ ಸೆಲೆಬ್ರಿಟಿ ಜ್ಯೋತಿಷಿಯಾಗಿರುವ ಗುರೂಜಿ ವೇಣು ಸ್ವಾಮಿ ರಶ್ಮಿಕಾ ಮಂದಣ್ಣರ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ಹೇಳಿದ್ದಾರೆ. ಅವರ ಪ್ರಕಾರ ರಶ್ಮಿಕಾ ಮಂದಣ್ಣರವರ ವೈವಾಹಿಕ ಜೀವನ ಸುಖಕರವಾಗಿರುವುದಿಲ್ಲ, ಅವರು ವಿಚ್ಛೇದನ ಪಡೆಯಬಹುದು ಎಂದು ಹೇಳಿರುವುದು ಭಾರೀ ಚರ್ಚೆಯನ್ನು ಉಂಟು ಮಾಡಿದೆ. ಅದಕ್ಕೆ ಕಾರಣವೂ ಇದೆ, ಈ ಜ್ಯೋತಿಷಿ ಸಮಂತಾ ವೈವಾಹಿಕ ಜೀವನದ ಬಗೆಯೂ ಹೇಳಿದ್ದರು.
ಜ್ಯೋತಿಷಿ ನುಡಿದ ಭವಿಷ್ಯ ಸಮಂತಾ ವಿಷಯದಲ್ಲೂ ನಿಜವಾಗಿತ್ತು
ಈ ಜ್ಯೋತಿಷಿ ಸಮಂತಾ-ನಾಗ ಚೈತನ್ಯರವರ ವೈವಾಹಿಕ ಜೀವನ ತುಂಬಾ ಕಾಲ ಬಾಳಲ್ಲ ಎಂದು ಮೊದಲೇ ನುಡಿದಿದ್ದರು. ಅದರಂತೆ ಆ ಜೋಡಿ 10 ವರ್ಷ ಪ್ರೀತಿಸಿ ಮದುವೆಯಾಗಿ ಮೂರೇ ವರ್ಷದಲ್ಲಿ ಬೇರ್ಪಟ್ಟರು. ಈ ಕಾರಣಕ್ಕೆ ಈಗ ರಶ್ಮಿಕಾ ಕುರಿತು ಹೇಳಿರುವ ಭವಿಷ್ಯ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.