Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ವೈರಲ್ : ನವವಿವಾಹಿತೆ ಮಗಳಿಗೆ ಕಳುಹಿಸಿದ ಆಷಾಢ ಉಡುಗೊರೆ ನೋಡಿ ಊರೇ ದಂಗಾಯ್ತು!
ಕೆಲವು ಪೋಷಕರಿಗೆ ಮಗಳನ್ನು ಮದುವೆ ಮಾಡಿ ಕೊಡುವಾಗ ಮಗಳಿಗೆ ಎಷ್ಟು ಕೊಟ್ಟರೂ ಸಮಧಾನ ಇರಲ್ಲ... ಮದುವೆ ಅಡುಗೆ ಬೊಂಬಾಟ್ ಆಗಿರಬೇಕು, ಇನ್ನು ಅಳಿಯನ ಮನೆಗೆ ತಿಂಡಿ-ತಿನಿಸುಗಳನ್ನು ಕಳುಹಿಸುವಾಗ ಅಂತೂ ತರವಾರಿ ತಿಂಡಿ-ತಿನಿಸುಗಳನ್ನು ಕಳುಹಿಸುತ್ತಾರೆ. ಯಾವ ವಿಷಯದಲ್ಲೂ ಕಂಜೂಸು ಮಾಡಲ್ಲ... ಸಂಬಂಧಿಕರು ನಮ್ಮ ಬಗ್ಗೆ ಒಳ್ಳೆಯದು ಅಂದುಕೊಳ್ಳಬೇಕೆಂದು ಬಗೆ-ಬಗೆಯ ತಿನಿಸುಗಳು ಉಡುಗೊರೆಗಳನ್ನು ಕಳುಹಿಸುವುದು ಸಹಜ.

ಆದರೆ ಇಲ್ಲೊಂದು ಪೋಷಕರು ತಮ್ಮ ಅಳಿಯನ ಮನೆಗೆ ಕಳುಹಿಸಿದ ಉಡುಗೊರೆ ನೋಡಿ ಅಳಿಯನ ಮನೆಯವರು ಮಾತ್ರವಲ್ಲ ಇಡೀ ಊರಿನವರೇ ದಂಗಾಗಿ ಹೋಗಿದ್ದಾರೆ... ಇದನ್ನು ನೋಡಿದವರು, ಕೇಳಿದವರು ಈ ರೀತಿ ಗಿಫ್ಟ್ ಕೊಟ್ಟಿರುವುದನ್ನು ನಾವೆಂದೂ ನೋಡಿರಲಿಲ್ಲ ಅಂತಿದ್ದಾರೆ, ಅಲ್ಲದೆ ಈ ಭರ್ಜರಿ ಉಡುಗೊರೆಯ ಸುದ್ದಿ ಸಕತ್ ವೈರಲ್ ಆಗಿದೆ.
ಆಷಾಢ ಮಾಸದಲ್ಲಿ ನವವಿವಾಹಿತೆ ಮಗಳ ಮನೆಗೆ ಪೋಷಕರು ತಿಂಡಿ-ತಿನಿಸುಗಳನ್ನು ತರುವ ಪದ್ಧತಿ ಆಂಧ್ರದಲ್ಲಿದೆ. ಈ ಪೋಷಕರು ಬರೋಬರಿ 1000 ಕೆಜಿ ಮೀನು, 1000 ಕೆಜಿ ತರಕಾರಿ, 250 ಕೆಜಿ ಅಡುಗೆ ಸಾಮಗ್ರಿ, 250 ಡಬ್ಬ ಉಪ್ಪಿನಕಾಯಿ, 250 ಕೆಜಿ ಸೀಗಡಿ, 250 ಕೆಜಿ ಸಿಹಿ ತಿನಿಸು, 10 ಮೇಕೆ, 50 ಕೋಳಿಗಳನ್ನು ಅಳಿಯನ ಮನೆಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಮನೆಗೆ ತಂದೆ ಉಡುಗೊರೆ ಕಳುಹಿಸುತ್ತಿದ್ದಾರೆ ಎಂಬುವುದು ಗೊತ್ತಿತ್ತು... ಆದರೆ ಇಷ್ಟೊಂದು ಉಡುಗೊರೆ ನೋಡಿ ಮಗಳು-ಅಳಿಯ ಒಂದು ಕ್ಷಣ ದಂಗಾಗಿ ಹೋದರು.
ಈ ಉಡುಗೊರೆಯನ್ನು ನೀಡಿದ್ದು ಉದ್ಯಮಿ ಬಟುಲಾ ಬಲರಾಮ ಕೃಷ್ಣ, ಇವರು ತಮ್ಮ ಮಗಳು ಪ್ರತ್ಯೂಷರನ್ನು ಯಾನಂನಲ್ಲಿರುವ ಉದ್ಯಮಿಯ ಪುತ್ರ ಪವನ್ ಕುಮಾರ್ಗೆ ಕೊಟ್ಟು ಮದುವೆ ಮಾಡಿದ್ದರು. ಮಗಳಿಗೆ ಈ ಆಷಾಢದಲ್ಲಿ ಕಳುಹಿಸುವ ಉಡುಗೊರೆ ತುಂಬಾ ವಿಶೇಷವಾಗಿರಬೇಕೆಂದು ಬಯಸಿದ ತಂದೆ ಇಷ್ಟೆಲ್ಲಾ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ಆಷಾಢ ಉಡುಗೊರೆಯನ್ನು ಮಗಳು ಮತ್ತು ಅಳಿಯ ಮಾತ್ರವಲ್ಲ ಊರಿನವರು ಖಂಡಿತ ಮರೆಯಲ್ಲ ಅಲ್ವಾ?



Click it and Unblock the Notifications
