Just In
- 55 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈರಲ್ : ನವವಿವಾಹಿತೆ ಮಗಳಿಗೆ ಕಳುಹಿಸಿದ ಆಷಾಢ ಉಡುಗೊರೆ ನೋಡಿ ಊರೇ ದಂಗಾಯ್ತು!
ಕೆಲವು ಪೋಷಕರಿಗೆ ಮಗಳನ್ನು ಮದುವೆ ಮಾಡಿ ಕೊಡುವಾಗ ಮಗಳಿಗೆ ಎಷ್ಟು ಕೊಟ್ಟರೂ ಸಮಧಾನ ಇರಲ್ಲ... ಮದುವೆ ಅಡುಗೆ ಬೊಂಬಾಟ್ ಆಗಿರಬೇಕು, ಇನ್ನು ಅಳಿಯನ ಮನೆಗೆ ತಿಂಡಿ-ತಿನಿಸುಗಳನ್ನು ಕಳುಹಿಸುವಾಗ ಅಂತೂ ತರವಾರಿ ತಿಂಡಿ-ತಿನಿಸುಗಳನ್ನು ಕಳುಹಿಸುತ್ತಾರೆ. ಯಾವ ವಿಷಯದಲ್ಲೂ ಕಂಜೂಸು ಮಾಡಲ್ಲ... ಸಂಬಂಧಿಕರು ನಮ್ಮ ಬಗ್ಗೆ ಒಳ್ಳೆಯದು ಅಂದುಕೊಳ್ಳಬೇಕೆಂದು ಬಗೆ-ಬಗೆಯ ತಿನಿಸುಗಳು ಉಡುಗೊರೆಗಳನ್ನು ಕಳುಹಿಸುವುದು ಸಹಜ.
ಆದರೆ ಇಲ್ಲೊಂದು ಪೋಷಕರು ತಮ್ಮ ಅಳಿಯನ ಮನೆಗೆ ಕಳುಹಿಸಿದ ಉಡುಗೊರೆ ನೋಡಿ ಅಳಿಯನ ಮನೆಯವರು ಮಾತ್ರವಲ್ಲ ಇಡೀ ಊರಿನವರೇ ದಂಗಾಗಿ ಹೋಗಿದ್ದಾರೆ... ಇದನ್ನು ನೋಡಿದವರು, ಕೇಳಿದವರು ಈ ರೀತಿ ಗಿಫ್ಟ್ ಕೊಟ್ಟಿರುವುದನ್ನು ನಾವೆಂದೂ ನೋಡಿರಲಿಲ್ಲ ಅಂತಿದ್ದಾರೆ, ಅಲ್ಲದೆ ಈ ಭರ್ಜರಿ ಉಡುಗೊರೆಯ ಸುದ್ದಿ ಸಕತ್ ವೈರಲ್ ಆಗಿದೆ.
ಆಷಾಢ ಮಾಸದಲ್ಲಿ ನವವಿವಾಹಿತೆ ಮಗಳ ಮನೆಗೆ ಪೋಷಕರು ತಿಂಡಿ-ತಿನಿಸುಗಳನ್ನು ತರುವ ಪದ್ಧತಿ ಆಂಧ್ರದಲ್ಲಿದೆ. ಈ ಪೋಷಕರು ಬರೋಬರಿ 1000 ಕೆಜಿ ಮೀನು, 1000 ಕೆಜಿ ತರಕಾರಿ, 250 ಕೆಜಿ ಅಡುಗೆ ಸಾಮಗ್ರಿ, 250 ಡಬ್ಬ ಉಪ್ಪಿನಕಾಯಿ, 250 ಕೆಜಿ ಸೀಗಡಿ, 250 ಕೆಜಿ ಸಿಹಿ ತಿನಿಸು, 10 ಮೇಕೆ, 50 ಕೋಳಿಗಳನ್ನು ಅಳಿಯನ ಮನೆಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಮನೆಗೆ ತಂದೆ ಉಡುಗೊರೆ ಕಳುಹಿಸುತ್ತಿದ್ದಾರೆ ಎಂಬುವುದು ಗೊತ್ತಿತ್ತು... ಆದರೆ ಇಷ್ಟೊಂದು ಉಡುಗೊರೆ ನೋಡಿ ಮಗಳು-ಅಳಿಯ ಒಂದು ಕ್ಷಣ ದಂಗಾಗಿ ಹೋದರು.
ಈ ಉಡುಗೊರೆಯನ್ನು ನೀಡಿದ್ದು ಉದ್ಯಮಿ ಬಟುಲಾ ಬಲರಾಮ ಕೃಷ್ಣ, ಇವರು ತಮ್ಮ ಮಗಳು ಪ್ರತ್ಯೂಷರನ್ನು ಯಾನಂನಲ್ಲಿರುವ ಉದ್ಯಮಿಯ ಪುತ್ರ ಪವನ್ ಕುಮಾರ್ಗೆ ಕೊಟ್ಟು ಮದುವೆ ಮಾಡಿದ್ದರು. ಮಗಳಿಗೆ ಈ ಆಷಾಢದಲ್ಲಿ ಕಳುಹಿಸುವ ಉಡುಗೊರೆ ತುಂಬಾ ವಿಶೇಷವಾಗಿರಬೇಕೆಂದು ಬಯಸಿದ ತಂದೆ ಇಷ್ಟೆಲ್ಲಾ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ಆಷಾಢ ಉಡುಗೊರೆಯನ್ನು ಮಗಳು ಮತ್ತು ಅಳಿಯ ಮಾತ್ರವಲ್ಲ ಊರಿನವರು ಖಂಡಿತ ಮರೆಯಲ್ಲ ಅಲ್ವಾ?