Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಹಾವಿನ ದ್ವೇಷವಲ್ಲ ಕಾಗೆಗಳ ಸೇಡು..! 17 ವರ್ಷ ನೆನಪಿಡುತ್ತವೆ ಕಾಗೆಗಳು..! ಅಧ್ಯಯನದಲ್ಲಿ ಬಹಿರಂಗ!
ಹಿಂದೂ ಸಂಪ್ರದಾಯದಲ್ಲಿ ಕಾಗೆಗಳಿಗೆ ಒಂದು ಸ್ಥಾನವಿದೆ. ಕಾಗೆಗಳು ಪೂರ್ವಜರು ಎಂದು ನಂಬಲಾಗುತ್ತದೆ. ಕಾಗೆಗಳಿಗೆ ಪಿಂಡ ಇಡುವುದು ಕೂಡ ನಾವು ನೋಡಿದ್ದೇವೆ. ಹಾಗೆ ಕಾಗೆಗಳು ಯಾವಾಗಲು ಕೂಗುತ್ತಿದ್ದರೆ ಕೆಟ್ಟ ಸುದ್ದಿ ಕೇಳುತ್ತೀರಿ ಎಂದು ಹೇಳಲಾಗುತ್ತದೆ. ಇನ್ನು ಕಾಗೆಗಳಿಗೂ ಒಂದಿಷ್ಟು ಜಾಗ ಪುರಾಣಗಳಲ್ಲಿರುವುದು ನೋಡಬಹುದು. ಈಗ ಕಾಗೆಗಳ ಕುರಿತಾದ ಒಂದು ಅಧ್ಯಯನ ಕುತೂಹಲ ಮೂಡಿಸಿದೆ.
ಕಾಗೆಗಳು ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಹೌದು ಮನುಷ್ಯರು ಸೇಡು ತೀರಿಸಿಕೊಳ್ಳುವುದು ಸಾಮಾನ್ಯ ವಿಷಯ, ಮನುಷ್ಯರು ತಮಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದು ನಾವು ನೋಡಿದ್ದೇವೆ. ಇನ್ನು ಹಾವು ಕೂಡ 12 ವರ್ಷ ದ್ವೇಷ ಇಟ್ಟುಕೊಳ್ಳುತ್ತೆ ಅನ್ನೋದನ್ನು ಕೂಡ ನಾವು ಕೇಳಿದ್ದೇವೆ. ಆದ್ರೆ ಕಾಗೆಗಳು ಸೇಡು ತೀರಿಸಿಕೊಳ್ಳುವುದು ಕೇಳಿದ್ದೀರಾ?

ಒಂದು ಅಧ್ಯಯನದ ಪ್ರಕಾರ, ಕಾಗೆಗಳು ಮನುಷ್ಯರ ಮೇಲೆ ದ್ವೇಷ ಇಟ್ಟುಕೊಂಡರೆ ಬರೋಬ್ಬರಿ 17 ವರ್ಷಗಳ ವರೆಗೂ ನೆನಪಿಟ್ಟುಕೊಳ್ಳುತ್ತವೆ ಹಾಗೆ ಸೇಡು ತೀರಿಸಿಕೊಳ್ಳಲು ಪ್ರಯುತ್ನಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಪ್ರೊಫೆಸರ್ ಜಾನ್ ಮಾರ್ಜ್ಲಫ್ ಎಂಬುವರು ಈ ಸಂಶೋಧನೆ ನಡೆಸಿದ್ದಾರೆ.
2006ರಲ್ಲಿ ಇಂತಹದೊಂದು ಸಂಶೋಧನೆ ನಡೆಸಿದ ತಂಡ ಈ ರೀತಿಯ ವಿಚಾರ ಬಯಲಿಗೆಳೆದಿದೆ. ಆದ್ರೆ ಕಾಗೆಗಳು ಸೇಡು ಹೇಗೆ ತೀರಿಸಿಕೊಳ್ಳುತ್ತವೆ ಎಂಬುದನ್ನು ಪತ್ತೆ ಮಾಡಲು ಅವರು ಮಾಡಿದ್ದ ಪ್ರಯೋಗ ಅಚ್ಚರಿ ಮೂಡಿಸುತ್ತದೆ.
ಕಾಗೆಗಳ ಹಿಡಿದ ರಾಕ್ಷಸ ಮುಖವಾಡದ ಮಂದಿ
ಕಾಗೆಗಳು ಮುಖ ನೆನೆಪು ಹಿಡಿದುಕೊಳ್ಳಲೆಂದು ರಾಕ್ಷಸ ಮುಖವಾಡ ಧರಿಸಿದ್ದ ಮಂದಿ 7 ಕಾಗೆಗಳನ್ನು ಬಲೆಯಲ್ಲಿ ಹಾಕಿ ಹಿಡಿದಿದ್ದರು. ನಂತರ ಅವುಗಳನ್ನು ಗುರುತು ಹಿಡಿಯಲೆಂದು ಅವುಗಳ ರೆಕ್ಕೆಗಳಿಗೆ ಗುರುತು ಮಾಡಲಾಗಿತ್ತು. ನಂತರ ಅವುಗಳಿಗೆ ಯಾವುದೇ ಹಾನಿ ಮಾಡದೆ ಬಿಡುಗಡೆ ಮಾಡಲಾಗಿತ್ತು. ನಂತರ ರಾಕ್ಷಸ ಮುಖವಾಡ ಧರಿಸಿದ್ದ ಜನರನ್ನು ಅವು ಹಿಂಬಾಲಿಸುವುದು ಕಾಣಿಸುತ್ತಿತ್ತು.
ಅದೇ ವ್ಯಕ್ತಿ ಮುಖವಾಡ ಇಲ್ಲದೆ ಕಾಲೇಜು ಕ್ಯಾಂಪಸ್ನಲ್ಲಿ ಓಡಾಡಿದಾಗ ಅವು ಸುಮ್ಮನೆ ಇರುತ್ತಿದ್ದವು. ಆದ್ರೆ ಆ ರಾಕ್ಷಸ ಮುಖವಾಡ ಧರಿಸಿದ್ದರೆ ಮಾತ್ರ ಹಿಂಬಾಲಿಸಿ ಕೂಗಾಟ ಮಾಡುತ್ತಿದ್ದವು. ಇನ್ನೂ ಅಚ್ಚರಿ ಎಂದರೆ ಗುರುತು ಇಲ್ಲದೆ ಹೊಸ ಕಾಗೆಗಳು ಕೂಡ ಈ ಗುಂಪು ಸೇರಿಕೊಂಡವು. ಅವುಗಳು ಕೂಡ ಮುಖವಾಡ ಧರಿಸಿದ್ದವರ ಬೆನ್ನುಬಿದ್ದವು. ಈ ದಾಳಿ ಬರೋಬ್ಬರಿ 7 ವರ್ಷಗಳ ಕಾಲ ಮುಂದುವರೆದಿತ್ತು.
2013 ರ ನಂತರ ಕಾಗೆಗಳ ಆಕ್ರಮಣವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿತು. ನಂತರ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಪ್ರಯೋಗದ 17 ವರ್ಷಗಳ ನಂತರ ಮಾರ್ಜ್ಲಫ್ ಮುಖವಾಡ ಧರಿಸಿ ಹೊರಗೆ ಹೋದಾಗ ಕಾಗೆಗಳು ಆತನ ಮೇಲೆ ದಾಳಿ ಮಾಡಲು ಮುಂದಾಗದೆ, ಕೂಗದೆ ಅವು ಕುಳತಲ್ಲೇ ಕುಳಿತಿದ್ದವು. ಹೀಗಾಗಿ ಈ ಸಂಶೋಧನೆ ಫಲಿತಾಂಶ ಬರಲು ಬರೋಬ್ಬರಿ 17 ವರ್ಷ ತೆಗೆದುಕೊಂಡಿತು.
ಕಾಗೆಗಳು ಸಸ್ತನಿಗಳಲ್ಲಿನ ಅಮಿಗ್ಡಾಲಾವನ್ನು ಹೋಲುವ ಮೆದುಳಿನ ಪ್ರದೇಶವನ್ನು ಹೊಂದಿವೆ ಎಂದು ಮಾರ್ಜ್ಲಫ್ ಕಂಡುಕೊಂಡರು, ಇದು ತಮ್ಮ ಭಾವನೆಯನ್ನು ಹಿಡಿದಿಡುವ ಮೆದುಳಿನ ಭಾಗವಾಗಿದೆ. ಹೀಗಾಗಿ ಕಾಗೆಗಳು ಮಾನವನ ಮುಖಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎಂದು ಈ ಸಂಶೋಧನೆಯಿಂದ ಆತ ತಿಳಿದುಕೊಂಡನು.



Click it and Unblock the Notifications