Latest Updates
-
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು!
ಹಾವಿನ ದ್ವೇಷವಲ್ಲ ಕಾಗೆಗಳ ಸೇಡು..! 17 ವರ್ಷ ನೆನಪಿಡುತ್ತವೆ ಕಾಗೆಗಳು..! ಅಧ್ಯಯನದಲ್ಲಿ ಬಹಿರಂಗ!
ಹಿಂದೂ ಸಂಪ್ರದಾಯದಲ್ಲಿ ಕಾಗೆಗಳಿಗೆ ಒಂದು ಸ್ಥಾನವಿದೆ. ಕಾಗೆಗಳು ಪೂರ್ವಜರು ಎಂದು ನಂಬಲಾಗುತ್ತದೆ. ಕಾಗೆಗಳಿಗೆ ಪಿಂಡ ಇಡುವುದು ಕೂಡ ನಾವು ನೋಡಿದ್ದೇವೆ. ಹಾಗೆ ಕಾಗೆಗಳು ಯಾವಾಗಲು ಕೂಗುತ್ತಿದ್ದರೆ ಕೆಟ್ಟ ಸುದ್ದಿ ಕೇಳುತ್ತೀರಿ ಎಂದು ಹೇಳಲಾಗುತ್ತದೆ. ಇನ್ನು ಕಾಗೆಗಳಿಗೂ ಒಂದಿಷ್ಟು ಜಾಗ ಪುರಾಣಗಳಲ್ಲಿರುವುದು ನೋಡಬಹುದು. ಈಗ ಕಾಗೆಗಳ ಕುರಿತಾದ ಒಂದು ಅಧ್ಯಯನ ಕುತೂಹಲ ಮೂಡಿಸಿದೆ.
ಕಾಗೆಗಳು ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಹೌದು ಮನುಷ್ಯರು ಸೇಡು ತೀರಿಸಿಕೊಳ್ಳುವುದು ಸಾಮಾನ್ಯ ವಿಷಯ, ಮನುಷ್ಯರು ತಮಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದು ನಾವು ನೋಡಿದ್ದೇವೆ. ಇನ್ನು ಹಾವು ಕೂಡ 12 ವರ್ಷ ದ್ವೇಷ ಇಟ್ಟುಕೊಳ್ಳುತ್ತೆ ಅನ್ನೋದನ್ನು ಕೂಡ ನಾವು ಕೇಳಿದ್ದೇವೆ. ಆದ್ರೆ ಕಾಗೆಗಳು ಸೇಡು ತೀರಿಸಿಕೊಳ್ಳುವುದು ಕೇಳಿದ್ದೀರಾ?

ಒಂದು ಅಧ್ಯಯನದ ಪ್ರಕಾರ, ಕಾಗೆಗಳು ಮನುಷ್ಯರ ಮೇಲೆ ದ್ವೇಷ ಇಟ್ಟುಕೊಂಡರೆ ಬರೋಬ್ಬರಿ 17 ವರ್ಷಗಳ ವರೆಗೂ ನೆನಪಿಟ್ಟುಕೊಳ್ಳುತ್ತವೆ ಹಾಗೆ ಸೇಡು ತೀರಿಸಿಕೊಳ್ಳಲು ಪ್ರಯುತ್ನಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಪ್ರೊಫೆಸರ್ ಜಾನ್ ಮಾರ್ಜ್ಲಫ್ ಎಂಬುವರು ಈ ಸಂಶೋಧನೆ ನಡೆಸಿದ್ದಾರೆ.
2006ರಲ್ಲಿ ಇಂತಹದೊಂದು ಸಂಶೋಧನೆ ನಡೆಸಿದ ತಂಡ ಈ ರೀತಿಯ ವಿಚಾರ ಬಯಲಿಗೆಳೆದಿದೆ. ಆದ್ರೆ ಕಾಗೆಗಳು ಸೇಡು ಹೇಗೆ ತೀರಿಸಿಕೊಳ್ಳುತ್ತವೆ ಎಂಬುದನ್ನು ಪತ್ತೆ ಮಾಡಲು ಅವರು ಮಾಡಿದ್ದ ಪ್ರಯೋಗ ಅಚ್ಚರಿ ಮೂಡಿಸುತ್ತದೆ.
ಕಾಗೆಗಳ ಹಿಡಿದ ರಾಕ್ಷಸ ಮುಖವಾಡದ ಮಂದಿ
ಕಾಗೆಗಳು ಮುಖ ನೆನೆಪು ಹಿಡಿದುಕೊಳ್ಳಲೆಂದು ರಾಕ್ಷಸ ಮುಖವಾಡ ಧರಿಸಿದ್ದ ಮಂದಿ 7 ಕಾಗೆಗಳನ್ನು ಬಲೆಯಲ್ಲಿ ಹಾಕಿ ಹಿಡಿದಿದ್ದರು. ನಂತರ ಅವುಗಳನ್ನು ಗುರುತು ಹಿಡಿಯಲೆಂದು ಅವುಗಳ ರೆಕ್ಕೆಗಳಿಗೆ ಗುರುತು ಮಾಡಲಾಗಿತ್ತು. ನಂತರ ಅವುಗಳಿಗೆ ಯಾವುದೇ ಹಾನಿ ಮಾಡದೆ ಬಿಡುಗಡೆ ಮಾಡಲಾಗಿತ್ತು. ನಂತರ ರಾಕ್ಷಸ ಮುಖವಾಡ ಧರಿಸಿದ್ದ ಜನರನ್ನು ಅವು ಹಿಂಬಾಲಿಸುವುದು ಕಾಣಿಸುತ್ತಿತ್ತು.
ಅದೇ ವ್ಯಕ್ತಿ ಮುಖವಾಡ ಇಲ್ಲದೆ ಕಾಲೇಜು ಕ್ಯಾಂಪಸ್ನಲ್ಲಿ ಓಡಾಡಿದಾಗ ಅವು ಸುಮ್ಮನೆ ಇರುತ್ತಿದ್ದವು. ಆದ್ರೆ ಆ ರಾಕ್ಷಸ ಮುಖವಾಡ ಧರಿಸಿದ್ದರೆ ಮಾತ್ರ ಹಿಂಬಾಲಿಸಿ ಕೂಗಾಟ ಮಾಡುತ್ತಿದ್ದವು. ಇನ್ನೂ ಅಚ್ಚರಿ ಎಂದರೆ ಗುರುತು ಇಲ್ಲದೆ ಹೊಸ ಕಾಗೆಗಳು ಕೂಡ ಈ ಗುಂಪು ಸೇರಿಕೊಂಡವು. ಅವುಗಳು ಕೂಡ ಮುಖವಾಡ ಧರಿಸಿದ್ದವರ ಬೆನ್ನುಬಿದ್ದವು. ಈ ದಾಳಿ ಬರೋಬ್ಬರಿ 7 ವರ್ಷಗಳ ಕಾಲ ಮುಂದುವರೆದಿತ್ತು.
2013 ರ ನಂತರ ಕಾಗೆಗಳ ಆಕ್ರಮಣವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿತು. ನಂತರ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಪ್ರಯೋಗದ 17 ವರ್ಷಗಳ ನಂತರ ಮಾರ್ಜ್ಲಫ್ ಮುಖವಾಡ ಧರಿಸಿ ಹೊರಗೆ ಹೋದಾಗ ಕಾಗೆಗಳು ಆತನ ಮೇಲೆ ದಾಳಿ ಮಾಡಲು ಮುಂದಾಗದೆ, ಕೂಗದೆ ಅವು ಕುಳತಲ್ಲೇ ಕುಳಿತಿದ್ದವು. ಹೀಗಾಗಿ ಈ ಸಂಶೋಧನೆ ಫಲಿತಾಂಶ ಬರಲು ಬರೋಬ್ಬರಿ 17 ವರ್ಷ ತೆಗೆದುಕೊಂಡಿತು.
ಕಾಗೆಗಳು ಸಸ್ತನಿಗಳಲ್ಲಿನ ಅಮಿಗ್ಡಾಲಾವನ್ನು ಹೋಲುವ ಮೆದುಳಿನ ಪ್ರದೇಶವನ್ನು ಹೊಂದಿವೆ ಎಂದು ಮಾರ್ಜ್ಲಫ್ ಕಂಡುಕೊಂಡರು, ಇದು ತಮ್ಮ ಭಾವನೆಯನ್ನು ಹಿಡಿದಿಡುವ ಮೆದುಳಿನ ಭಾಗವಾಗಿದೆ. ಹೀಗಾಗಿ ಕಾಗೆಗಳು ಮಾನವನ ಮುಖಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎಂದು ಈ ಸಂಶೋಧನೆಯಿಂದ ಆತ ತಿಳಿದುಕೊಂಡನು.



Click it and Unblock the Notifications