Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಸೂರ್ಯ, ಶನಿ, ರಾಹುವಿಂದಾಗಿ ಸಂಸಪ್ತಾಕ ಯೋಗ: 3 ರಾಶಿಯವರು ಸೆಪ್ಟೆಂಬರ್ನಲ್ಲಿ ಜಾಗ್ರತೆ
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿ ಗ್ರಹವು ರಾಶಿ ಬದಲಾವಣೆ ಮಾಡುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ, ಸೂರ್ಯನು ಕನ್ಯಾರಾಶಿಗೆ ಸಾಗುತ್ತಾನೆ. ಸೆಪ್ಟೆಂಬರ್ 17 ಕ್ಕೆ ಸೂರ್ಯ ಸಂಕ್ರಾಂತಿ. ಅಲ್ಲಿಯವರೆಗೆ ಸೂರ್ಯನು ತನ್ನದೇ ಆದ ಸಿಂಹ ರಾಶಿಯಲ್ಲಿಯೇ ಇರುತ್ತಾನೆ. ಶನಿಯು ಕುಂಭ ರಾಶಿಯಲ್ಲಿದೆ, ರಾಹು ಮೇಷ ರಾಶಿಯಲ್ಲಿದೆ.

ಈ ಅವಧಿಯಲ್ಲಿ ಈ ಮೂರು ಗ್ರಹಗಳು ಒಟ್ಟಿಗೆ ಸೇರಲಿದೆ. ಅಲ್ಲದೆ ಮೇಷದಲ್ಲಿ ರಾಹು ಮತ್ತು ಗುರುಗಳ ಸಂಯೋಗದಿಂದ ಗುರು ಚಂಡಾಲ ಯೋಗ ಕೂಡ ಇದೆ. ಇದಲ್ಲದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸಪ್ತಕ ಯೋಗವೂ ಇರುತ್ತದೆ. ಈ ರೀತಿಯಾಗಿ, ಈ ಎಲ್ಲಾ ಯೋಗಗಳು 12 ರಾಶಿಯವರಿಗೆ ಪರಿಣಾಮ ಬೀರುತ್ತವೆ ಆದರೆ ಈ ಮೂರು ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ.
ಕರ್ಕ ರಾಶಿ: ಶನಿ, ರಾಹು ಮತ್ತು ಸೂರ್ಯನ ಅಶುಭ ಪ್ರಭಾವು ಕರ್ಕ ರಾಶಿಯವವರ ಮೇಲಿರುವುದರಿಂದ ಈ ಅವಧಿಯಲ್ಲಿ ಜಾಗ್ರತಿವಹಿಸಿ. ಗುರು ಚಂಡಾಲ ಯೋಗ ಇರುವುದರಿಂದ ಈ ಅವಧಿಯಲ್ಲಿ ನೀವು ಜಾಗ್ರತೆವಹಿಸಿ. ಈ ಅವಧಿಯಲ್ಲಿ ವೃತ್ತಿಜೀವನದಲ್ಲಿ ಏರಿಳಿತದ ಸಾಧ್ಯತೆಗಳಿರುತ್ತದೆ. ಈ ಅವಧಿಯಲ್ಲಿ ಹಣ ಬರುತ್ತದೆ, ಆದರೆ ಖರ್ಚು ಅಧಿಕವಿರಲಿದೆ. ಆಸ್ಪತ್ರೆ, ಔಷಧಿಗಳಿಗೆ ಅಧಿಕ ಖರ್ಚು ಬರಬಹುದು. ಈ ತಿಂಗಳು ಹೂಡಿಕೆ ಮತ್ತು ಉದ್ಯೋಗ ಬದಲಾವಣೆಯಿಂದ ಇಂಥದ್ದೆಲ್ಲಾ ಮಾಡದಿರುವುದು ಒಳ್ಳೆಯದು.
ಕನ್ಯಾ ರಾಶಿ: ಶನಿ, ರಾಹು ಮತ್ತು ಸೂರ್ಯನ ದುಷ್ಪರಿಣಾಮಗಳು ಕನ್ಯಾ ರಾಶಿಯವರ ಮೇಲಿರುವುದರಿಂದ ಈ ಅವಧಿಯಲ್ಲಿ ನಕಾರಾತ್ಮಕವಾಗಿರಲಿದೆ. ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗುವುದು ಕಷ್ಟವಾಗುವುದು. ನೀವು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ನೀವು ಬಯಸಿದರೆ, ಸ್ವಲ್ಪ ಸಮಯದ ನಂತರ ಮಾಡುವುದು ಒಳ್ಳೆಯದು. ವ್ಯಾಪಾರವನ್ನು ವಿಸ್ತರಿಸಲು ಈ ಅವಧಿ ಸರಿಯಲ್ಲ. ಹೊರಗಡೆಯ ಆಹಾರ ತಿನ್ನದಿದ್ದರೆ ಒಳ್ಳೆಯದು.
ವೃಶ್ಚಿಕ: ಶನಿ, ರಾಹು ಮತ್ತು ಸೂರ್ಯನ ದುಷ್ಟ ಅಂಶವು ವೃಶ್ಚಿಕ ರಾಶಿಯವರ ಮೇಲಿರುವುದರಿಂದ ಈ ಅವಧಿಯಲ್ಲಿ ಎಚ್ಚರವಹಿಸಿ. ಉದ್ಯೋಗ-ವ್ಯವಹಾರದಲ್ಲಿ ಏರಿಳಿತಗಳಿರಬಹುದು. ಈ ಸಮಯದಲ್ಲಿ ತಾಳ್ಮೆಯಿಂದ ಪರಿಸ್ಥಿತಿ ತೂಗಿಸಿಕೊಂಡು ಹೋಗಲು ಪ್ರಯತ್ನಿಸಿ, ಹೆಚ್ಚಿನ ಬದಲಾವಣೆಯನ್ನು ತರಲು ಪ್ರಯತ್ನಿಸಬೇಡಿ. ಯಾರಿಗಾದರೂ ಸಾಲ ನೀಡಿದರೆ ಆ ಹಣ ಮರಳಿ ಪಡೆಯುವುದು ಕಷ್ಟವಾಗುವುದು. ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಸೆಪ್ಟೆಂಬರ್ ತಿಂಗಳ ನಂತರ ನಿಮ್ಮ ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ.



Click it and Unblock the Notifications











