Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಈ ವರ್ಷ ಸುಬ್ರಹ್ಮಣ್ಯ ಷಷ್ಠಿ ಯಾವಾಗ? ಕುಕ್ಕೆಯಲ್ಲಿ ಸುಬ್ರಹ್ಮಣ್ಯ ನೆಲೆನಿಂತ ಪೌರಾಣಿಕ ಕತೆಯೇನು?
ಪ್ರತಿವರ್ಷ ಮಾರ್ಗಶಿರ ಮಾಸದಲ್ಲಿ ಬರುವ ಸ್ಕಂದ ಷಷ್ಠಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು, ಕುಕ್ಕೆ ಸುಬ್ರ ಹ್ಮಣ್ಯ ಸೇರಿದಂತೆ ಹಲವು ಕಡೆ ಷಷ್ಠಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ದಿನ ರಥೋತ್ಸವ ನಡೆಯಲಿದೆ. ಕುಮಾರನದಿಯಲ್ಲಿ ಸ್ನಾನ ಮಾಡಿ ಭಕ್ತರು ದೇವಾಲಯಕ್ಕೆ ಬರುತ್ತಾರೆ. ರಥ ಎಳೆಯುವವರು ಗರುಡ ರಥಕ್ಕೆ ಮೂರು ಸುತ್ತು ಪ್ರದಕ್ಷಣೆ ಹಾಕಿ ರಥ ಎಳೆಯಲಾಗುವುದು. ಈ ವರ್ಷ ಷಷ್ಠಿ ಯಾವಾಗ? ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಕುರಿತ ಪೌರಾಣಿಕ ಕತೆಯೇನು ಎಂದು ನೋಡೋಣ ಬನ್ನಿ?

2024ರಲ್ಲಿ ಸುಬ್ರಹ್ಮಣ್ಯ ಷಷ್ಠಿ ಯಾವಾಗ?
ಈ ವರ್ಷ ಸ್ಕಂದ ಷಷ್ಠಿಯನ್ನು ಡಿಸೆಂಬರ್ 6ರಂದು ಆಚರಿಸಲಾಗುವುದು. ಇದು ನಾಲ್ಕು ದಿನದ ಆಚರಣೆಯಾಗಿದೆ.
ಸುಬ್ರಹ್ಮಣ್ಯ ಷಷ್ಠಿಯ ಆಚರಣೆ
ಈ ದಿನ ಬೇಗ ಎದ್ದು ನದಿ ಸ್ನಾನ ಮಾಡಬೇಕು
ಈ ದಿನ ಕಾರ್ತಿಕೇಯನ ಮಂತ್ರಗಳನ್ನು ಪಠಿಸಬೇಕು.
ಈ ದಿನ ಸುಬ್ರಹ್ಮಣ್ಯನ ಆರಾಧನೆ ಮಾಡುತ್ತಾರೆ,ಈ ದಿನ ಸುಬ್ರಹ್ಮಣ್ಯನಿಗೆ ಹಾಲನ್ನು ಅರ್ಪಿಸಿ ಪೂಜಿಸುವುದರಿಂದ ಸರ್ಪದೋಷವವಿದ್ದರೆ ನಿವಾರಣೆಯಾಗುವುದು.
ಕುಕ್ಕೆ ಶ್ರೀ ಕ್ಷೇತ್ರದಲ್ಲಿ ಈ ದಿನ ವಿಶೇಷ ಪೂಜೆ ಇರುತ್ತದೆ
ಈ ದಿನ ದಾನ ಮಾಡಲಾಗುವುವುದು. ಅಕ್ಕಿ,ಆಹಾರ, ವಸ್ತ್ರ ಇವುಗಳನ್ನು ದಾನ ಮಾಡಲಾಗುವುದು.
ಸ್ಕಂದ ಷಷ್ಠಿಯ ಪೌರಾಣಿಕ ಕತೆಯೇನು?
ಕಶ್ಯಪ ಎಂಬ ಋಷಿಗೆ 13 ಜನ ಪತ್ನಿಯರು. ಇವರೆಲ್ಲರೂ ದಕ್ಷನ ಮಕ್ಕಳಾಗಿರುತ್ತಾರೆ, ಅವರಲ್ಲಿ ಕದ್ರ ಮತ್ತು ವಿನುತಾ ಕೂಡ ಇಬ್ಬರು. ಕದ್ರು ವಿನೂತಳನ್ನು ಆಟದಲ್ಲಿ ಮೋಸದಿಂದ ಸೋಲಿಸಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ, ವಿನೂತಳ ಮಗ ಗರುಡ, ಕದ್ರ ಮಕ್ಕಳುಸರ್ಪಗಳು. ಗರುಡನಿಗೆ ತನ್ನ ತಾಯಿಗಾದ ಮೋಸ ತಿಳಿದು ತುಂಬಾನೇ ಕೋಪ ಬರುತ್ತದೆ, ಸರ್ಪಗಳನ್ನು ಕುಕ್ಕಿ ತನ್ನ ದ್ವೇಷ ತೀರಿಸುತ್ತಾನೆ.
ಗರುಡನಿಂದ ಪಾರಾಗಲು ಶೇಷ ವೈಕುಂಠದಲ್ಲಿ ಹರಿಗೆ ತಲ್ಪವಗುತ್ತಾನೆ, ಹಾವುಗಳು ಶಿವನ ಕೊರಳು ಸೇರಿಕೊಳ್ಳುತ್ತದೆ. ವಾಸುಕಿ ಸರ್ಪವು ಕುಮಾರಧಾರಾ ನದಿಯ ಪಕ್ಕದಲ್ಲಿರುವ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದನ್ನು ತಿಳಿದು ಗರುಡ ಅಲ್ಲಿಗೂ ಬರುತ್ತಾನೆ, ಕಶ್ಪ ಮುನಿ ಬಂದು ಮಕ್ಕಳಿಗೆ ಯುದ್ಧವನ್ನು ನಿಲ್ಲಿಸುವಂತೆ ಕೋರುತ್ತಾನೆ. ವಾಸುಕಿಯು ಪ್ರಾಣ ಭಯದಿಂದ ಶಿವನ ಮೊರೆ ಹೋಗುತ್ತಾನೆ, ಆವಾಗ ಶಿವನು ಹೆದರಡಬೇಡ, ಸರ್ಪ ಕುಲದ ರಕ್ಷಣೆಗೆ ನನ್ನ ಮಗ ಸುಬ್ರಹ್ಮಣ್ಯ ಬರುತ್ತಾನೆ ಎಂದು ಹೇಳುತ್ತಾನೆ.
ಹೀಗಿರಲು ಸುಬ್ರಹ್ಮಣ್ಯ ರಾಕ್ಷಸ ತಾರಕಾಸುರನನ್ನು ಕೊಂದು ಆಯುಧ ತೊಳೆಯಲು ಧಾರಾ ನದಿಗೆ ಬರುತ್ತಾನೆ, ಅಲ್ಲಿಂದ ಆ ನದಿಗೆ ಕುಮಾರಧಾರ ಎಂಬ ಹೆಸರು ಬರುತ್ತದೆ. ಇಂದ್ರನು ತ್ನ ಮಗಳಾದ ದೇವಸೇನೆಯನ್ನು ಸುಬ್ರಹ್ಮಣ್ಯನಿಗೆ ಮದುವೆ ಮಾಡಿ ಕೊಡುತ್ತಾನೆ. ಸುಬ್ರಹ್ಮಣ್ಯ ಪತ್ನಿ ದೇವಸೇನೆ ಹಾಗೂ ವಾಸುಕಿ ಜೊತೆಯಲ್ಲಿ ಕುಕ್ಕೆಯಲ್ಲಿ ನೆಲೆ ನಿಲ್ಲುತ್ತಾನೆ.
ಸುಬ್ರಹ್ಮಣ್ಯ ಸರ್ಪಗಳ ರಕ್ಷಣೆಗೆ ಬಂದು ಕುಕ್ಕೆಯಲ್ಲಿ ನೆಲೆಸಿದನು, ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಸರ್ಪದೋಷ ನಿವಾರಣೆಯಾಗಲಿದೆ.



Click it and Unblock the Notifications