Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ವರ್ಷ ಸುಬ್ರಹ್ಮಣ್ಯ ಷಷ್ಠಿ ಯಾವಾಗ? ಕುಕ್ಕೆಯಲ್ಲಿ ಸುಬ್ರಹ್ಮಣ್ಯ ನೆಲೆನಿಂತ ಪೌರಾಣಿಕ ಕತೆಯೇನು?
ಪ್ರತಿವರ್ಷ ಮಾರ್ಗಶಿರ ಮಾಸದಲ್ಲಿ ಬರುವ ಸ್ಕಂದ ಷಷ್ಠಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು, ಕುಕ್ಕೆ ಸುಬ್ರ ಹ್ಮಣ್ಯ ಸೇರಿದಂತೆ ಹಲವು ಕಡೆ ಷಷ್ಠಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ದಿನ ರಥೋತ್ಸವ ನಡೆಯಲಿದೆ. ಕುಮಾರನದಿಯಲ್ಲಿ ಸ್ನಾನ ಮಾಡಿ ಭಕ್ತರು ದೇವಾಲಯಕ್ಕೆ ಬರುತ್ತಾರೆ. ರಥ ಎಳೆಯುವವರು ಗರುಡ ರಥಕ್ಕೆ ಮೂರು ಸುತ್ತು ಪ್ರದಕ್ಷಣೆ ಹಾಕಿ ರಥ ಎಳೆಯಲಾಗುವುದು. ಈ ವರ್ಷ ಷಷ್ಠಿ ಯಾವಾಗ? ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಕುರಿತ ಪೌರಾಣಿಕ ಕತೆಯೇನು ಎಂದು ನೋಡೋಣ ಬನ್ನಿ?

2024ರಲ್ಲಿ ಸುಬ್ರಹ್ಮಣ್ಯ ಷಷ್ಠಿ ಯಾವಾಗ?
ಈ ವರ್ಷ ಸ್ಕಂದ ಷಷ್ಠಿಯನ್ನು ಡಿಸೆಂಬರ್ 6ರಂದು ಆಚರಿಸಲಾಗುವುದು. ಇದು ನಾಲ್ಕು ದಿನದ ಆಚರಣೆಯಾಗಿದೆ.
ಸುಬ್ರಹ್ಮಣ್ಯ ಷಷ್ಠಿಯ ಆಚರಣೆ
ಈ ದಿನ ಬೇಗ ಎದ್ದು ನದಿ ಸ್ನಾನ ಮಾಡಬೇಕು
ಈ ದಿನ ಕಾರ್ತಿಕೇಯನ ಮಂತ್ರಗಳನ್ನು ಪಠಿಸಬೇಕು.
ಈ ದಿನ ಸುಬ್ರಹ್ಮಣ್ಯನ ಆರಾಧನೆ ಮಾಡುತ್ತಾರೆ,ಈ ದಿನ ಸುಬ್ರಹ್ಮಣ್ಯನಿಗೆ ಹಾಲನ್ನು ಅರ್ಪಿಸಿ ಪೂಜಿಸುವುದರಿಂದ ಸರ್ಪದೋಷವವಿದ್ದರೆ ನಿವಾರಣೆಯಾಗುವುದು.
ಕುಕ್ಕೆ ಶ್ರೀ ಕ್ಷೇತ್ರದಲ್ಲಿ ಈ ದಿನ ವಿಶೇಷ ಪೂಜೆ ಇರುತ್ತದೆ
ಈ ದಿನ ದಾನ ಮಾಡಲಾಗುವುವುದು. ಅಕ್ಕಿ,ಆಹಾರ, ವಸ್ತ್ರ ಇವುಗಳನ್ನು ದಾನ ಮಾಡಲಾಗುವುದು.
ಸ್ಕಂದ ಷಷ್ಠಿಯ ಪೌರಾಣಿಕ ಕತೆಯೇನು?
ಕಶ್ಯಪ ಎಂಬ ಋಷಿಗೆ 13 ಜನ ಪತ್ನಿಯರು. ಇವರೆಲ್ಲರೂ ದಕ್ಷನ ಮಕ್ಕಳಾಗಿರುತ್ತಾರೆ, ಅವರಲ್ಲಿ ಕದ್ರ ಮತ್ತು ವಿನುತಾ ಕೂಡ ಇಬ್ಬರು. ಕದ್ರು ವಿನೂತಳನ್ನು ಆಟದಲ್ಲಿ ಮೋಸದಿಂದ ಸೋಲಿಸಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ, ವಿನೂತಳ ಮಗ ಗರುಡ, ಕದ್ರ ಮಕ್ಕಳುಸರ್ಪಗಳು. ಗರುಡನಿಗೆ ತನ್ನ ತಾಯಿಗಾದ ಮೋಸ ತಿಳಿದು ತುಂಬಾನೇ ಕೋಪ ಬರುತ್ತದೆ, ಸರ್ಪಗಳನ್ನು ಕುಕ್ಕಿ ತನ್ನ ದ್ವೇಷ ತೀರಿಸುತ್ತಾನೆ.
ಗರುಡನಿಂದ ಪಾರಾಗಲು ಶೇಷ ವೈಕುಂಠದಲ್ಲಿ ಹರಿಗೆ ತಲ್ಪವಗುತ್ತಾನೆ, ಹಾವುಗಳು ಶಿವನ ಕೊರಳು ಸೇರಿಕೊಳ್ಳುತ್ತದೆ. ವಾಸುಕಿ ಸರ್ಪವು ಕುಮಾರಧಾರಾ ನದಿಯ ಪಕ್ಕದಲ್ಲಿರುವ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದನ್ನು ತಿಳಿದು ಗರುಡ ಅಲ್ಲಿಗೂ ಬರುತ್ತಾನೆ, ಕಶ್ಪ ಮುನಿ ಬಂದು ಮಕ್ಕಳಿಗೆ ಯುದ್ಧವನ್ನು ನಿಲ್ಲಿಸುವಂತೆ ಕೋರುತ್ತಾನೆ. ವಾಸುಕಿಯು ಪ್ರಾಣ ಭಯದಿಂದ ಶಿವನ ಮೊರೆ ಹೋಗುತ್ತಾನೆ, ಆವಾಗ ಶಿವನು ಹೆದರಡಬೇಡ, ಸರ್ಪ ಕುಲದ ರಕ್ಷಣೆಗೆ ನನ್ನ ಮಗ ಸುಬ್ರಹ್ಮಣ್ಯ ಬರುತ್ತಾನೆ ಎಂದು ಹೇಳುತ್ತಾನೆ.
ಹೀಗಿರಲು ಸುಬ್ರಹ್ಮಣ್ಯ ರಾಕ್ಷಸ ತಾರಕಾಸುರನನ್ನು ಕೊಂದು ಆಯುಧ ತೊಳೆಯಲು ಧಾರಾ ನದಿಗೆ ಬರುತ್ತಾನೆ, ಅಲ್ಲಿಂದ ಆ ನದಿಗೆ ಕುಮಾರಧಾರ ಎಂಬ ಹೆಸರು ಬರುತ್ತದೆ. ಇಂದ್ರನು ತ್ನ ಮಗಳಾದ ದೇವಸೇನೆಯನ್ನು ಸುಬ್ರಹ್ಮಣ್ಯನಿಗೆ ಮದುವೆ ಮಾಡಿ ಕೊಡುತ್ತಾನೆ. ಸುಬ್ರಹ್ಮಣ್ಯ ಪತ್ನಿ ದೇವಸೇನೆ ಹಾಗೂ ವಾಸುಕಿ ಜೊತೆಯಲ್ಲಿ ಕುಕ್ಕೆಯಲ್ಲಿ ನೆಲೆ ನಿಲ್ಲುತ್ತಾನೆ.
ಸುಬ್ರಹ್ಮಣ್ಯ ಸರ್ಪಗಳ ರಕ್ಷಣೆಗೆ ಬಂದು ಕುಕ್ಕೆಯಲ್ಲಿ ನೆಲೆಸಿದನು, ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಸರ್ಪದೋಷ ನಿವಾರಣೆಯಾಗಲಿದೆ.



Click it and Unblock the Notifications
