Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ದೀಪಾವಳಿ ಮಾರನೇಯ ದಿನವೇ ಸೋಮಾವತಿ ಅಮವಾಸ್ಯೆ: ಸಂಜೆ ಈ ಪರಿಹಾರ ಮಾಡಿದರೆ ಕಷ್ಟಗಳು ದೂರಾಗುವುದು
ದೀಪಾವಳಿಯ ಮಾರನೆಯ ದಿನ ಸೋಮಾವತಿ ಅಮವಾಸ್ಯೆ ಬಂದಿದೆ. ಸೋಮಾವತಿ ಅಮವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಸೋಮಾವತಿ ಅಮವಾಸ್ಯೆಯಂದು ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ. ಈ ಅಮವಾಸ್ಯೆಯಂದು ದಾನ ಮಾಡುವುದರಿಂದ ಕಷ್ಟಗಳು, ಅನಾರೋಗ್ಯಗಳಿಂದ ಪಾರಾಗಬಹುದು ಎಂದು ಹೇಳಲಾಗುವುದು. ಈ ಸೋಮಾವತಿ ಅಮವಾಸ್ಯೆಯಂದು ಸಂಜೆ ಈ ಪರಿಹಾರ ಮಾಡಿ:

* ಸಂಜೆ ಹೊತ್ತು ತುಳಸಿಗೆ ಪೂಜೆ ಸಲ್ಲಿಸಿ 108 ಬಾರಿ ಪ್ರದಕ್ಷಣೆ ಹಾಕಿ. ಲಕ್ಷ್ಮಿ, ವಿಷ್ಣು ಮಂತ್ರಗಳನ್ನು ಹೇಳುತ್ತಾ ತುಳಸಿಯ ಸುತ್ತ ಪ್ರದಕ್ಷಣೆ ಹಾಕಿ, ಹೀಗೆ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ದೂರಾಗುವುದು.
* ಈ ದಿನ ಆಲದ ಮರದ ಕೆಳಗಡೆ ಹಣತೆ ದೀಪವನ್ನು ಹಚ್ಚಿ, 108 ಬಗೆಯ ಹಣ್ಣುಗಳನ್ನು ಇರಿಸಿ, ಆಲದ ಮರದ ಸುತ್ತ 108 ಬಾರಿ ಸುತ್ತು ಬನ್ನಿ. ಹೀಗೆ ಸುತ್ತು ಬರುವಾಗ 8 ಬಾರಿ ಹಸಿ ನೂಲನ್ನು ಮರಕ್ಕೆ ಸುತ್ತಬೇಕು. ಪೂಜೆಯ ಬಳಿಹ ಹಣ್ಣುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ.
ಉದ್ಯೋಗ ತೊಂದರೆಗಳು ನೀಗಲು
ಸೋಮಾವತಿ ಅಮಾವಾಸ್ಯೆಯಂದು ನಿಂಬೆ ಹಣ್ಣನ್ನು 7 ಸುತ್ತು ನಿಮ್ಮ ತಲೆಗೆ ಸುತ್ತಿ ನಂತರ ಅದನ್ನು ನಾಲ್ಕು ಭಾಗಗಳನ್ನಾಗಿ ಕತ್ತರಿಸಿ, ನಾಲ್ಕು ದಿಕ್ಕಿಗೆ ಹಾಕಿ, ಹೀಗೆ ಮಾಡುವುದರಿಂದ ಉದ್ಯೋಗ ಅವಕಾಶಗಳು ಹುಡುಕಿ ಬರುವುದು.
ಮನೆಯ ಸಮೃದ್ಧಿ ಹೆಚ್ಚಾಗಲು
ಸೋಮಾವತಿ ಅಮಾವಾಸ್ಯೆಯ ಸಂಜೆ ಮನೆಯ ಈಶಾನ್ಯ ಮೂಲೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಆ ದೀಪದಲ್ಲಿ ಕೆಂಪು ಬಣ್ಣದ ದಾರದ ಬತ್ತಿಯನ್ನು ಹಾಕಿ ಅದರಲ್ಲಿ ಸ್ವಲ್ಪ ಕುಂಕುಮವನ್ನು ಹಾಕಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಹೀಗೆ ಮಾಡುವುದರಿಂದ ಮನೆಯ ಸಂಪತ್ತು ಹೆಚ್ಚಾಗುವುದು.
ದುಃಖ ದೂರಾಗಲು
ಸೋಮಾವತಿ ಅಮಾವಾಸ್ಯೆಯ ದಿನ ಗೋಧಿ ಹಿಟ್ಟಿನಲ್ಲಿ ಸ್ವಲ್ಪ ಸಕ್ಕರೆ ಬೆರೆಸಿ. ಅದನ್ನು ಕಪ್ಪು ಇರುವೆಗಳಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ, ಹೀಗೆ ಮಾಡುವುದರಿಂದ ದುಃಖ, ಸಂಕಟ ಇವೆಲ್ಲಾ ದೂರಾಗುವುದು.



Click it and Unblock the Notifications
