Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
Shravan : ಶ್ರಾವಣ ಮಾಸದಲ್ಲಿ ಈ 5 ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟವೋ ಅದೃಷ್ಟ!
ಶ್ರಾವಣ ಮಾಸ ಹಿಂದೂಗಳಿಗೆ ವಿಶೇಷ ಮಾಸ. ಈ ತಿಂಗಳನ್ನು ಶಿವನಿಗೆ ಅರ್ಪಣೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ಭಕ್ತಾದಿಗಳು ಶಿವನಿಗಾಗಿ ವಿಶೇಷ ಪೂಜೆಯನ್ನು ಅರ್ಪಣೆ ಮಾಡೋದಲ್ಲದೇ, ಮಹಾದೇವನನ್ನು ಒಲಿಸಿಕೊಳ್ಳೋದಕ್ಕೆ ನಾನಾ ರೀತಿಯ ಉಪವಾಸ ವ್ರತಗಳನ್ನೂ ಕೂಡ ಮಾಡಲಾಗುತ್ತದೆ. ನಂಬಿಕೆಗಳ ಪ್ರಕಾರ ಯಾರು ಶಿವನನ್ನು ಭಕ್ತಿಯಿಂದ ಪೂಜಿಸ್ತಾರೋ ಅವರ ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಸಮೃದ್ಧಿ ಪ್ರಾಪ್ತಿಯಾಗುತ್ತಂತೆ.
ಇನ್ನೂ ಮನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿದ್ರೆ ಈ ಸಮಯದಲ್ಲಿ ಶಿವನ ಜೊತೆಗೆ ಪಾರ್ವತಿಯನ್ನು ಪೂಜಿಸಿದ್ರೆ ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಂತೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸ ಪವಿತ್ರವಾದ ತಿಂಗಳಾಗಿದ್ದು, ಈ ತಿಂಗಳಿನಲ್ಲಿ ಕೆಲ ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಸಮೃದ್ಧಿ ಹೆಚ್ಚಾಗುತ್ತಂತೆ. ಹಾಗಾದ್ರೆ ಆ ವಸ್ತುಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಢಮರುಗ
ಮಹಾದೇವ ತನ್ನ ಪ್ರಿಯ ವಾದ್ಯವಾದ ಢಮರುಗವನ್ನು ಯಾವಾಗಲೂ ಕೈಯಲ್ಲಿಯೇ ಹಿಡಿದಿರುತ್ತಾನೆ. ಇದರ ಶಬ್ಧದಿಂದ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತಂತೆ. ಅಷ್ಟೇ ಅಲ್ಲ, ಇದರ ಶಬ್ಧದಿಂದ ಮಾನಸಿಕ ಒತ್ತಡವನ್ನು ನಿವಾರಿಸೋದು ಮಾತ್ರವಲ್ಲದೇ ನಮ್ಮ ಮನಸ್ಸು ಶಾಂತಗೊಳ್ಳುತ್ತಂತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದ ಸೋಮವಾರದಂದು ಡಮರುವನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ವೃದ್ಧಿಯಾಗುತ್ತಂತೆ.
2. ಬಿಲ್ವಪತ್ರೆ
ಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಇದರ ಹೊರತಾಗಿ ಶಿವನ ಪೂಜೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಶಿವನಿಗೆ ಇದನ್ನು ಅರ್ಪಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತಂತೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಜೀವನದಲ್ಲಿ ಇನ್ಯಾವುದೇ ಸಮಸ್ಯೆಗಳು ಇದ್ದರೆ ಶಿವನಿಗೆ ಬಿಲ್ವಪತ್ರೆ ಅರ್ಪಿಸೋದ್ರಿಂದ ಸಮಸ್ಯೆಗಳು ನೆರವೇರುತ್ತಂತೆ.
3. ಬೆಳ್ಳಿಯ ತ್ರಿಶೂಲ
ಹಿಂದೂ ಧರ್ಮದಲ್ಲಿ ತ್ರಿಶೂಲವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬೆಳ್ಳಿ ತ್ರಿಶೂಲವನ್ನು ಸೋಮವಾರದಂದು ಮನೆಗೆ ತಂದರೆ ಮನೆಯ ಎಲ್ಲಾ ಋಣಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ. ಒಂದು ವೇಳೆ ಬೆಳ್ಳಿಯ ತ್ರಿಶೂಲವನ್ನು ಖರೀದಿಸಲು ಸಾಧ್ಯವಾಗದಿದ್ದರೆ ತಾಮ್ರದ ತ್ರಿಶೂಲವನ್ನು ಕೂಡ ಖರೀದಿಸಬಹುದು. ಬೆಳ್ಳಿಯ ತ್ರಿಶೂಲ ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ. ಜೊತೆಗೆ ಯಾವುದೇ ಹಣಕಾಸಿನ ತೊಂದರೆಗಳು ಎದುರಾಗೋದಿಲ್ಲ.
4. ರುದ್ರಾಕ್ಷಿ
ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ದೇವರನ್ನು ಕುರಿತು ಪೂಜೆ ಮಾಡುವಾಗ ರುದ್ರಾಕ್ಷಿ ಮಣಿಯನ್ನು ಹಿಡಿದು ಜಪ ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿಯನ್ನು ಮನೆಗೆ ತಂದರೆ ತುಂಬಾನೇ ಒಳ್ಳೆಯದು. ಆ ವ್ಯಕ್ತಿಯ ಅದೃಷ್ವೇ ಬದಲಾಗುತ್ತಂತೆ. ಆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ.
ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೆಯೋ ಅವರ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕೌಟುಂಬಿಕ ಕಲಹಗಳಿದ್ದರೆ ಅವುಗಳೆಲ್ಲಾ ನಿವಾರಣೆಯಾಗುತ್ತಂತೆ. ಅಷ್ಟೇ ಅಲ್ಲ, ರುದ್ರಾಕ್ಷಿ ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ.
5. ಭಸ್ಮ
ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಭಸ್ಮ ಕೂಡ ಒಂದು ಅಂತ ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಭಸ್ಮವನ್ನು ದೇವಸ್ಥಾನದಲ್ಲಿ ಇಡುವುದರಿಂದ ಶ್ರೇಯಸ್ಸು ಹೆಚ್ಚಾಗುತ್ತಂತೆ. ನೀವು ಶಿವನ ವಿಗ್ರಹದ ಜೊತೆಗೆ ಭಸ್ಮವನ್ನು ಇಟ್ಟರೆ ಶಿವನು ಪ್ರಸನ್ನನಾಗುತ್ತಾನಂತೆ. ಹಾಗೂ ನಮ್ಮ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೇ, ಸಂಪತ್ತು ಮತ್ತು ಸಮೃದ್ಧಿ ಕೂಡ ಹೆಚ್ಚಾಗುತ್ತದೆ.
ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳನ್ನು ಮನೆಗೆ ತರುವುದು ಶುಭಕರ ಎಂದು ಪರಿಗಣಿಸಲಾಗಿದೆ. ನಿಮಗೆ ಆರ್ಥಿಕ ಸಮಸ್ಯೆಯಿಂದ ಹಿಡಿದು ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ.



Click it and Unblock the Notifications