Latest Updates
-
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು!
ಶನಿ, ರಾಹು, ಕೇತು ವಕ್ರೀಯ ಚಲನೆ: ಈ ಮೂರು ಗ್ರಹಗಳ ಋಣಾತ್ಮಕ ಪರಿಣಾಮ ತಡೆಗಟ್ಟಲು ಲಾಲ್ ಕಿತಾಬ್ ಪರಿಹಾರ
ವೈದಿಕ ಜ್ಯೋತಿಷ್ಯದ ಪ್ರಕಾರ ಯಾವ ವ್ಯಕ್ತಿಯಲ್ಲಿ ಶನಿ, ರಾಹು, ಕೇತು ದೋಷವಿರುತ್ತದೋ ಆ ವ್ಯಕ್ತಿ ತುಂಬಾನೇ ಕಷ್ಟಪಡಬೇಕಾಗುವುದು. ಕೆಲವರಿಗೆ ಆರೋಗ್ಯ ಸಮಸ್ಯೆ, ಇನ್ನು ಕೆಲವರಿಗೆ ಕುಟುಂಬದಲ್ಲಿ ಸಮಸ್ಯೆ, ಬ್ಯುಸ್ನೆಸ್ನಲ್ಲಿ ಲಾಸ್ ಹೀಗೆ ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಈ ತ್ರಿಗ್ರಹಗಳ ದೋಷವಿದ್ದರೆ ತುಂಬಾನೇ ಕಷ್ಟ ಅನುಭವಿಸಬೇಕಾಗುವುದು.
ಶನಿಯು ಜೂನ್ 17ಕ್ಕೆ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುವುದು, ಅದರ ಜೊತೆ ರಾಹು ಮತ್ತು ಕೇತು ಕೂಡ ಹಿಮ್ಮುಖ ಚಲನೆ ಮಾಡಲಿದೆ. ಈ ಅವಧಿ ಕೆಲವೊಂದು ರಾಶಿಗಳ ಮೇಲೆ ಋಣಾತ್ಮಕ ಪ್ರಭಾವ ಬೀರಲಿದೆ. ಈ ಸಮಯದಲ್ಲಿ ಕರ್ಕ ರಾಶಿಯವರು, ಸಿಂಹ ರಾಶಿಯವರು, ವೃಶ್ಚಿಕರಾಶಿ ಹಾಗೂ ಮೀನ ರಾಶಿಯವರು ತಮ್ಮ ಬದುಕಿನಲ್ಲಿ ಈ ಮೂರು ಗ್ರಹಗಳ ದೋಷದಿಂದಾಗಿ ಅಧಿಕ ಸಮಸ್ಯೆ ಎದುರಿಸಬೇಕಾಗುವುದು. ಲಾಲ್ ಕಿತಾಬ್ನಲ್ಲಿ ಈ ಮೂರು ಗ್ರಹಗಳ ಋಣಾತ್ಮಕ ಪ್ರಭಾವ ತೆಗೆದುಹಾಕಲು ಪರಿಹಾರ ಹೇಳಲಾಗಿದೆ ನೋಡಿ:

ರಾಹುವಿನ ಋಣಾತ್ಮಕ ಪ್ರಭಾವವಿದ್ದಾಗ:
ಈ ಅವಧಿಯಲ್ಲಿ ಅಪಘಾತದ ಸಾಧ್ಯತೆ ಹೆಚ್ಚು, ಅಲ್ಲದೆ ಒಂದು ರಿತಿಯ ಭಯ, ತಪ್ಪು ತಿಳುವಳಿಕೆ ಇರುವುದು. ಅಲ್ಲದೆ ರಾಹು ದೋಷದಿಂದಾಗಿ ಮೋಸಗಾರರು, ವಂಚಕರು ಆಗುವ ಸಾಧ್ಯತೆ ಇದೆ. ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು.
ಕೇತುವಿನ ಋಣಾತ್ಮಕ ಪ್ರಭಾವವಿದ್ದಾಗ
ಕೇತುವಿನ ಋಣಾತ್ಮಕ ಪ್ರಭಾವ ವ್ಯಕ್ತಿ ಮೇಲೆ ಇದ್ದಾಗ ನಾಲಗೆ ಮತ್ತು ಮನಸ್ಸು ಎರಡೂ ಶುದ್ಧವಾಗಿರಲ್ಲ. ವ್ಯಕ್ತಿಯ ಉದ್ಯೋಗದ ಮೇಲೆ ಋಣಾತ್ಮಕ ಪ್ರಭಾವ ಬೀರುವುದು, ವ್ಯವಹಾರ, ಉದ್ಯಮದಲ್ಲಿ ನಷ್ಟ ಉಂಟಾಗುವುದು. ಇದರ ಜೊತೆಗೆ ಮೂತ್ರ ಸೋಂಕು, ಮೈಕೈ ನೋವು, ಮಕ್ಕಳಿಲ್ಲದಿರುವ ಸಮಸ್ಯೆ ಈ ಬಗೆಯ ತೊಂದರೆಗಳು ಕಂಡು ಬರುವುದು.
ಶನಿಯ ಋಣಾತ್ಮಕ ಪ್ರಭಾವವಿದ್ಧಾಗ
ಅನೈತಿಕ ಸಬಂಧದ ಕಡೆಗೆ ಆಸಕ್ತಿ ಬೆಳೆಸಬಹುದು, ವ್ಯವಹಾರದಲ್ಲಿ ಆಸಕ್ತಿ ಕಡಿಮೆಯಾಗುವುದು, ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇರಲ್ಲ, ಮನೆಯಲ್ಲಿ ಸದಾ ಜಗಳ, ಸಾಲದ ಬಾಧೆ, ಮೋಸ, ವಂಚನೆ ಈ ರೀತಿಯೆಲ್ಲಾ ಉಂಟಾಗುವುದು.
ಶನಿ, ರಾಹು, ಕೇತು ದೋಷಕ್ಕೆ ಲಾಲ್ ಕಿತಾಬ್ ಪರಿಹಾರವೇನು?
- ಶನಿ, ರಾಹು, ಕೇತು ಮಂತ್ರ ಪಠಿಸಿ
- ಶನಿವಾರ ಶನಿ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ
- ಕಾಗೆ, ಕಪ್ಪು ನಾಯಿ, ಕಪ್ಪು ಹಸು ಇವುಗಳಿಗೆ ಶನಿವಾರ ಆಹಾರ ನೀಡಿ
- ಪ್ರತಿದಿನ ಹನುಮಾನ್ ಚಾಲಿಸ ಪಠಿಸಿ.
- ಮನೆಯಲ್ಲಿ ಬೆಳ್ಳಿಯ ಆನೆಮೂರ್ತಿ ತಂದಿಡಿ.
- ಮಲಗುವಾಗ ತಲೆ ಬಳಿಯಲ್ಲಿ ಮೂಲಂಗಿ ಇಡಿ.
- ಮಕ್ಕಳಿಗೆ ಶನಿವಾರ ಉಡುಗೊರೆ ನೀಡಿ
- ಅಗ್ಯತವಿರುವ ಮಕ್ಕಳಿಗೆ ಕಲಿಕೆಗೆ ಅಗ್ಯತವಿರುವ ವಸ್ತುಗಳನ್ನು ದಾನ ಮಾಡಿ.
ಇತರ ಪರಿಹಾರ
- ಮೀನುಗಳಿಗೆ ಮಂಗಳವಾರ ಕಪ್ಪು ಎಳ್ಳು ಹಾಗೂ ಉದ್ದಿನ ಬೇಳೆ ಮಿಶ್ರ ಮಾಡಿ (150ಗ್ರಾಂ) ಆಹಾರವನ್ನಾಗಿ ನೀಡಿ.
- ರಾತ್ರಿ ಮಲಗುವಾಗ ಉದ್ದು ಹಾಗೂ ಕಪ್ಪು ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ಮಲಗಬೇಕು.
- ಬೆಳಗ್ಗೆ ಎದ್ದ ಮೇಲೆ ಮೀನಿನ ಕೊಳಕ್ಕೆ ಹೋಗಿ ಆ ಉದ್ದು ಹಾಗೂ ಎಳ್ಳು ಮಿಶ್ರಣವನ್ನು ಹಾಕಬೇಕು. ಮೀನು ಆಹಾರವನ್ನು ತಿನ್ನಲಾರಂಭಿಸಿದಾಗ ಹಿಂತಿರುಗಿ. ಇದನ್ನು ಮಂಗಳವಾರದಂದೇ ಮಾಡಬೇಕು.
ಹೀಗೆ ಮಾಡುವು ಶನಿ, ರಾಹು, ಕೇತು ದೋಷವನ್ನು ಕಡಿಮೆ ಮಾಡಬಹುದು.



Click it and Unblock the Notifications