Latest Updates
-
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ
ಜು. 20 ಪ್ರಥಮ ಏಕಾದಶಿ: ಪೂಜಾವಿಧಿ ಹಾಗೂ ಈ ದಿನದ ಮಹತ್ವವೇನು?
ಜುಲೈ 20 ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ, ಈ ಏಕಾದಶಿಯನ್ನು ದೇವಾಶ್ಯಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿ ಕರೆಯಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಅದರಂತೆ ಆಷಾಢ ಮಾಸದಲ್ಲಿ ಬರುವ ಏಕಾದಶಿಯಂದು ಕೂಡ ಹಲವಾರು ಆಚರಣೆಗಳಿವೆ. ಈ ದಿನ ಉಪವಾಸವಿದ್ದು ಏಕಾದಶಿಯನ್ನು ಆಚರಿಸಲಾಗುವುದು, ಕೆಲವರು ಹಣ್ಣುಗಳನ್ನು ಸೇವಿಸುತ್ತಾರೆ.

ದೇವಾಶ್ಯಯನಿ ಏಕಾದಶಿಯ ಮಹತ್ವ
ಈ ದಿನ ಯಾರು ಉಪವಾಸವಿದ್ದು ಏಕಾದಶಿ ವ್ರತ ಆಚರಿಸುತ್ತಾರೋ ಅವರ ಪಾಪಗಳನ್ನು ಸುಟ್ಟು ಬಿಡುತ್ತೇನೆ ಹಾಗೂ ಅವರ ಹೃದಯದಲ್ಲಿ ನಾನು ವಾಸಿಸುತ್ತೇನೆ ಎಂದು ಶ್ರೀಕೃಷ್ಣನೇ ಹೇಳಿರುವುದಾಗಿ ಪೌರಾಣಿಕ ಕತೆಯಿದೆ. ಇಂದಿನಿಂದ ಚಾತುರ್ಮಾಸ ಪ್ರಾರಂಭ. ಈ ನಾಲ್ಕು ತಿಂಗಳು ಭಗವಂತ ಯೋಗ ನಿದ್ದೆಯಲ್ಲಿರುತ್ತಾನೆ.

ದೇವಾಶ್ಯಯನಿ ಏಕಾದಶಿ 2021: ತಿಥಿ ಮತ್ತು ಸಮಯ
ದೇವಾಶ್ಯಯನಿ ಏಕಾದಶಿ : ಜುಲೈ 20, ಮಂಗಳವಾರ
ತಿಥಿ ಪ್ರಾರಂಭ: ಸಂಜೆ 04:29, ಜುಲೈ 19, 2021
ಏಕಾದಶಿ ತಿಥಿ ಮುಕ್ತಾಯ: ಮಧ್ಯಾಹ್ನ 01:47, ಜುಲೈ 20, 2021
ಪಾರಣ : ಜುಲೈ 21 ಬೆಳಗ್ಗೆ 05:44ರಿಂದ 08:15ರವರೆಗೆ

ಶಯನಿ ಏಕಾದಶಿ ಬಳಿಕ ನಿದ್ದೆ ಹೋಗುವ ವಿಷ್ಣು
ಆಷಾಢ ಮಾಸದ ಶುಕ್ಲ ಪಕ್ಷದ ಶಯನಿ ಏಕಾದಶಿ ಬಳಿಕ ಚಾತುರ್ಮಾಸ ಪ್ರಾರಂಭ, ಈ ನಾಲ್ಕು ತಿಂಗಳು ವಿಷ್ಣು ನಿದ್ದೆಯಲ್ಲಿರುತ್ತಾನೆ. ಆಗ ಶಿವನು ಈ ಲೋಕವನ್ನು ಕಾಯುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚಾತುರ್ಮಾಸ ಎಂಬುವುದು ಪವಿತ್ರವಾದ ಮಾಸವಾಗಿದ್ದು ಇಂದಿನಿಂದ ಆರಂಭ.

ಶಯನಿ ಏಕಾದಶಿ ಪೂಜಾ ವಿಧಿ
* ಈ ದಿನ ಉಪವಾಸವಿರಬೇಕು.
* ಕೆಲವರು ಸಾತ್ವಿಕ ಆಹಾರ ಸೇವಿಸುತ್ತಾರೆ, ಆದರೆ ಆ ಆಹಾರದಲ್ಲಿ ಧಾನ್ಯಗಳು, ಕಾಳುಗಳು, ತರಕಾರಿಗಳಾದ ಈರುಳ್ಳಿ ಹಾಗೂ ಇತರ ಮಸಾಲೆ ಪದಾರ್ಥಗಳು ಇರಬಾರದು.
* ವಿಷ್ಣುವಿನ ಪೂರ್ತಿಯನ್ನು ಹಳದಿ ಹೂಗಳಿಂದ ಅಲಂಕರಿಸಬೇಕು. ನಂತರ ತುಳಸಿಯನ್ನು ಅರ್ಪಿಸಬೇಕು.
* ನಂತರ ವಿಷ್ಣು ಸಹಸ್ರನಾಮ ಹೇಳಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಬೇಕು.
* ಭಕ್ತರು ಇಡೀ ರಾತ್ರಿ ಎಚ್ಚರವಾಗಿದ್ದು ಈ ವ್ರತ ಮಾಡುತ್ತಾರೆ.



Click it and Unblock the Notifications











