Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಜು. 20 ಪ್ರಥಮ ಏಕಾದಶಿ: ಪೂಜಾವಿಧಿ ಹಾಗೂ ಈ ದಿನದ ಮಹತ್ವವೇನು?
ಜುಲೈ 20 ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ, ಈ ಏಕಾದಶಿಯನ್ನು ದೇವಾಶ್ಯಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿ ಕರೆಯಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಅದರಂತೆ ಆಷಾಢ ಮಾಸದಲ್ಲಿ ಬರುವ ಏಕಾದಶಿಯಂದು ಕೂಡ ಹಲವಾರು ಆಚರಣೆಗಳಿವೆ. ಈ ದಿನ ಉಪವಾಸವಿದ್ದು ಏಕಾದಶಿಯನ್ನು ಆಚರಿಸಲಾಗುವುದು, ಕೆಲವರು ಹಣ್ಣುಗಳನ್ನು ಸೇವಿಸುತ್ತಾರೆ.

ದೇವಾಶ್ಯಯನಿ ಏಕಾದಶಿಯ ಮಹತ್ವ
ಈ ದಿನ ಯಾರು ಉಪವಾಸವಿದ್ದು ಏಕಾದಶಿ ವ್ರತ ಆಚರಿಸುತ್ತಾರೋ ಅವರ ಪಾಪಗಳನ್ನು ಸುಟ್ಟು ಬಿಡುತ್ತೇನೆ ಹಾಗೂ ಅವರ ಹೃದಯದಲ್ಲಿ ನಾನು ವಾಸಿಸುತ್ತೇನೆ ಎಂದು ಶ್ರೀಕೃಷ್ಣನೇ ಹೇಳಿರುವುದಾಗಿ ಪೌರಾಣಿಕ ಕತೆಯಿದೆ. ಇಂದಿನಿಂದ ಚಾತುರ್ಮಾಸ ಪ್ರಾರಂಭ. ಈ ನಾಲ್ಕು ತಿಂಗಳು ಭಗವಂತ ಯೋಗ ನಿದ್ದೆಯಲ್ಲಿರುತ್ತಾನೆ.

ದೇವಾಶ್ಯಯನಿ ಏಕಾದಶಿ 2021: ತಿಥಿ ಮತ್ತು ಸಮಯ
ದೇವಾಶ್ಯಯನಿ ಏಕಾದಶಿ : ಜುಲೈ 20, ಮಂಗಳವಾರ
ತಿಥಿ ಪ್ರಾರಂಭ: ಸಂಜೆ 04:29, ಜುಲೈ 19, 2021
ಏಕಾದಶಿ ತಿಥಿ ಮುಕ್ತಾಯ: ಮಧ್ಯಾಹ್ನ 01:47, ಜುಲೈ 20, 2021
ಪಾರಣ : ಜುಲೈ 21 ಬೆಳಗ್ಗೆ 05:44ರಿಂದ 08:15ರವರೆಗೆ

ಶಯನಿ ಏಕಾದಶಿ ಬಳಿಕ ನಿದ್ದೆ ಹೋಗುವ ವಿಷ್ಣು
ಆಷಾಢ ಮಾಸದ ಶುಕ್ಲ ಪಕ್ಷದ ಶಯನಿ ಏಕಾದಶಿ ಬಳಿಕ ಚಾತುರ್ಮಾಸ ಪ್ರಾರಂಭ, ಈ ನಾಲ್ಕು ತಿಂಗಳು ವಿಷ್ಣು ನಿದ್ದೆಯಲ್ಲಿರುತ್ತಾನೆ. ಆಗ ಶಿವನು ಈ ಲೋಕವನ್ನು ಕಾಯುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚಾತುರ್ಮಾಸ ಎಂಬುವುದು ಪವಿತ್ರವಾದ ಮಾಸವಾಗಿದ್ದು ಇಂದಿನಿಂದ ಆರಂಭ.

ಶಯನಿ ಏಕಾದಶಿ ಪೂಜಾ ವಿಧಿ
* ಈ ದಿನ ಉಪವಾಸವಿರಬೇಕು.
* ಕೆಲವರು ಸಾತ್ವಿಕ ಆಹಾರ ಸೇವಿಸುತ್ತಾರೆ, ಆದರೆ ಆ ಆಹಾರದಲ್ಲಿ ಧಾನ್ಯಗಳು, ಕಾಳುಗಳು, ತರಕಾರಿಗಳಾದ ಈರುಳ್ಳಿ ಹಾಗೂ ಇತರ ಮಸಾಲೆ ಪದಾರ್ಥಗಳು ಇರಬಾರದು.
* ವಿಷ್ಣುವಿನ ಪೂರ್ತಿಯನ್ನು ಹಳದಿ ಹೂಗಳಿಂದ ಅಲಂಕರಿಸಬೇಕು. ನಂತರ ತುಳಸಿಯನ್ನು ಅರ್ಪಿಸಬೇಕು.
* ನಂತರ ವಿಷ್ಣು ಸಹಸ್ರನಾಮ ಹೇಳಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಬೇಕು.
* ಭಕ್ತರು ಇಡೀ ರಾತ್ರಿ ಎಚ್ಚರವಾಗಿದ್ದು ಈ ವ್ರತ ಮಾಡುತ್ತಾರೆ.



Click it and Unblock the Notifications