Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಜು. 20 ಪ್ರಥಮ ಏಕಾದಶಿ: ಪೂಜಾವಿಧಿ ಹಾಗೂ ಈ ದಿನದ ಮಹತ್ವವೇನು?
ಜುಲೈ 20 ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ, ಈ ಏಕಾದಶಿಯನ್ನು ದೇವಾಶ್ಯಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿ ಕರೆಯಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಅದರಂತೆ ಆಷಾಢ ಮಾಸದಲ್ಲಿ ಬರುವ ಏಕಾದಶಿಯಂದು ಕೂಡ ಹಲವಾರು ಆಚರಣೆಗಳಿವೆ. ಈ ದಿನ ಉಪವಾಸವಿದ್ದು ಏಕಾದಶಿಯನ್ನು ಆಚರಿಸಲಾಗುವುದು, ಕೆಲವರು ಹಣ್ಣುಗಳನ್ನು ಸೇವಿಸುತ್ತಾರೆ.

ದೇವಾಶ್ಯಯನಿ ಏಕಾದಶಿಯ ಮಹತ್ವ
ಈ ದಿನ ಯಾರು ಉಪವಾಸವಿದ್ದು ಏಕಾದಶಿ ವ್ರತ ಆಚರಿಸುತ್ತಾರೋ ಅವರ ಪಾಪಗಳನ್ನು ಸುಟ್ಟು ಬಿಡುತ್ತೇನೆ ಹಾಗೂ ಅವರ ಹೃದಯದಲ್ಲಿ ನಾನು ವಾಸಿಸುತ್ತೇನೆ ಎಂದು ಶ್ರೀಕೃಷ್ಣನೇ ಹೇಳಿರುವುದಾಗಿ ಪೌರಾಣಿಕ ಕತೆಯಿದೆ. ಇಂದಿನಿಂದ ಚಾತುರ್ಮಾಸ ಪ್ರಾರಂಭ. ಈ ನಾಲ್ಕು ತಿಂಗಳು ಭಗವಂತ ಯೋಗ ನಿದ್ದೆಯಲ್ಲಿರುತ್ತಾನೆ.

ದೇವಾಶ್ಯಯನಿ ಏಕಾದಶಿ 2021: ತಿಥಿ ಮತ್ತು ಸಮಯ
ದೇವಾಶ್ಯಯನಿ ಏಕಾದಶಿ : ಜುಲೈ 20, ಮಂಗಳವಾರ
ತಿಥಿ ಪ್ರಾರಂಭ: ಸಂಜೆ 04:29, ಜುಲೈ 19, 2021
ಏಕಾದಶಿ ತಿಥಿ ಮುಕ್ತಾಯ: ಮಧ್ಯಾಹ್ನ 01:47, ಜುಲೈ 20, 2021
ಪಾರಣ : ಜುಲೈ 21 ಬೆಳಗ್ಗೆ 05:44ರಿಂದ 08:15ರವರೆಗೆ

ಶಯನಿ ಏಕಾದಶಿ ಬಳಿಕ ನಿದ್ದೆ ಹೋಗುವ ವಿಷ್ಣು
ಆಷಾಢ ಮಾಸದ ಶುಕ್ಲ ಪಕ್ಷದ ಶಯನಿ ಏಕಾದಶಿ ಬಳಿಕ ಚಾತುರ್ಮಾಸ ಪ್ರಾರಂಭ, ಈ ನಾಲ್ಕು ತಿಂಗಳು ವಿಷ್ಣು ನಿದ್ದೆಯಲ್ಲಿರುತ್ತಾನೆ. ಆಗ ಶಿವನು ಈ ಲೋಕವನ್ನು ಕಾಯುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚಾತುರ್ಮಾಸ ಎಂಬುವುದು ಪವಿತ್ರವಾದ ಮಾಸವಾಗಿದ್ದು ಇಂದಿನಿಂದ ಆರಂಭ.

ಶಯನಿ ಏಕಾದಶಿ ಪೂಜಾ ವಿಧಿ
* ಈ ದಿನ ಉಪವಾಸವಿರಬೇಕು.
* ಕೆಲವರು ಸಾತ್ವಿಕ ಆಹಾರ ಸೇವಿಸುತ್ತಾರೆ, ಆದರೆ ಆ ಆಹಾರದಲ್ಲಿ ಧಾನ್ಯಗಳು, ಕಾಳುಗಳು, ತರಕಾರಿಗಳಾದ ಈರುಳ್ಳಿ ಹಾಗೂ ಇತರ ಮಸಾಲೆ ಪದಾರ್ಥಗಳು ಇರಬಾರದು.
* ವಿಷ್ಣುವಿನ ಪೂರ್ತಿಯನ್ನು ಹಳದಿ ಹೂಗಳಿಂದ ಅಲಂಕರಿಸಬೇಕು. ನಂತರ ತುಳಸಿಯನ್ನು ಅರ್ಪಿಸಬೇಕು.
* ನಂತರ ವಿಷ್ಣು ಸಹಸ್ರನಾಮ ಹೇಳಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಬೇಕು.
* ಭಕ್ತರು ಇಡೀ ರಾತ್ರಿ ಎಚ್ಚರವಾಗಿದ್ದು ಈ ವ್ರತ ಮಾಡುತ್ತಾರೆ.



Click it and Unblock the Notifications
