Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಜು. 20 ಪ್ರಥಮ ಏಕಾದಶಿ: ಪೂಜಾವಿಧಿ ಹಾಗೂ ಈ ದಿನದ ಮಹತ್ವವೇನು?
ಜುಲೈ 20 ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ, ಈ ಏಕಾದಶಿಯನ್ನು ದೇವಾಶ್ಯಯನಿ ಏಕಾದಶಿ ಅಥವಾ ಪ್ರಥಮ ಏಕಾದಶಿ ಕರೆಯಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಅದರಂತೆ ಆಷಾಢ ಮಾಸದಲ್ಲಿ ಬರುವ ಏಕಾದಶಿಯಂದು ಕೂಡ ಹಲವಾರು ಆಚರಣೆಗಳಿವೆ. ಈ ದಿನ ಉಪವಾಸವಿದ್ದು ಏಕಾದಶಿಯನ್ನು ಆಚರಿಸಲಾಗುವುದು, ಕೆಲವರು ಹಣ್ಣುಗಳನ್ನು ಸೇವಿಸುತ್ತಾರೆ.

ದೇವಾಶ್ಯಯನಿ ಏಕಾದಶಿಯ ಮಹತ್ವ
ಈ ದಿನ ಯಾರು ಉಪವಾಸವಿದ್ದು ಏಕಾದಶಿ ವ್ರತ ಆಚರಿಸುತ್ತಾರೋ ಅವರ ಪಾಪಗಳನ್ನು ಸುಟ್ಟು ಬಿಡುತ್ತೇನೆ ಹಾಗೂ ಅವರ ಹೃದಯದಲ್ಲಿ ನಾನು ವಾಸಿಸುತ್ತೇನೆ ಎಂದು ಶ್ರೀಕೃಷ್ಣನೇ ಹೇಳಿರುವುದಾಗಿ ಪೌರಾಣಿಕ ಕತೆಯಿದೆ. ಇಂದಿನಿಂದ ಚಾತುರ್ಮಾಸ ಪ್ರಾರಂಭ. ಈ ನಾಲ್ಕು ತಿಂಗಳು ಭಗವಂತ ಯೋಗ ನಿದ್ದೆಯಲ್ಲಿರುತ್ತಾನೆ.

ದೇವಾಶ್ಯಯನಿ ಏಕಾದಶಿ 2021: ತಿಥಿ ಮತ್ತು ಸಮಯ
ದೇವಾಶ್ಯಯನಿ ಏಕಾದಶಿ : ಜುಲೈ 20, ಮಂಗಳವಾರ
ತಿಥಿ ಪ್ರಾರಂಭ: ಸಂಜೆ 04:29, ಜುಲೈ 19, 2021
ಏಕಾದಶಿ ತಿಥಿ ಮುಕ್ತಾಯ: ಮಧ್ಯಾಹ್ನ 01:47, ಜುಲೈ 20, 2021
ಪಾರಣ : ಜುಲೈ 21 ಬೆಳಗ್ಗೆ 05:44ರಿಂದ 08:15ರವರೆಗೆ

ಶಯನಿ ಏಕಾದಶಿ ಬಳಿಕ ನಿದ್ದೆ ಹೋಗುವ ವಿಷ್ಣು
ಆಷಾಢ ಮಾಸದ ಶುಕ್ಲ ಪಕ್ಷದ ಶಯನಿ ಏಕಾದಶಿ ಬಳಿಕ ಚಾತುರ್ಮಾಸ ಪ್ರಾರಂಭ, ಈ ನಾಲ್ಕು ತಿಂಗಳು ವಿಷ್ಣು ನಿದ್ದೆಯಲ್ಲಿರುತ್ತಾನೆ. ಆಗ ಶಿವನು ಈ ಲೋಕವನ್ನು ಕಾಯುತ್ತಾನೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚಾತುರ್ಮಾಸ ಎಂಬುವುದು ಪವಿತ್ರವಾದ ಮಾಸವಾಗಿದ್ದು ಇಂದಿನಿಂದ ಆರಂಭ.

ಶಯನಿ ಏಕಾದಶಿ ಪೂಜಾ ವಿಧಿ
* ಈ ದಿನ ಉಪವಾಸವಿರಬೇಕು.
* ಕೆಲವರು ಸಾತ್ವಿಕ ಆಹಾರ ಸೇವಿಸುತ್ತಾರೆ, ಆದರೆ ಆ ಆಹಾರದಲ್ಲಿ ಧಾನ್ಯಗಳು, ಕಾಳುಗಳು, ತರಕಾರಿಗಳಾದ ಈರುಳ್ಳಿ ಹಾಗೂ ಇತರ ಮಸಾಲೆ ಪದಾರ್ಥಗಳು ಇರಬಾರದು.
* ವಿಷ್ಣುವಿನ ಪೂರ್ತಿಯನ್ನು ಹಳದಿ ಹೂಗಳಿಂದ ಅಲಂಕರಿಸಬೇಕು. ನಂತರ ತುಳಸಿಯನ್ನು ಅರ್ಪಿಸಬೇಕು.
* ನಂತರ ವಿಷ್ಣು ಸಹಸ್ರನಾಮ ಹೇಳಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಬೇಕು.
* ಭಕ್ತರು ಇಡೀ ರಾತ್ರಿ ಎಚ್ಚರವಾಗಿದ್ದು ಈ ವ್ರತ ಮಾಡುತ್ತಾರೆ.



Click it and Unblock the Notifications